ಮಂಗಳವಾರ, ನವೆಂಬರ್ 13, 2012


ವೇದಿಕೆಯ ಪತ್ರಕ್ಕೆ ಸರ್ಕಾರದ ಸ್ಪಂದನ

ಈ ದಿನ ಅಂದರೆ ೧೩-೧೧-೨೦೧೨ರಂದು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರು ನೇತ್ರಾವತಿ ನದಿ ಸಂರಕ್ಷಣಾ ವೇದಿಕೆಗೆ ಕಳಿಸಿರುವ ಪತ್ರ ಹೀಗಿದೆ:

ಇಂದ: 
ಸರ್ಕಾರದ ಕಾರ್ಯದರ್ಶಿಗಳು
ಜಲಸಂಪನ್ಮೂಲ ಇಲಾಖೆ
ಕರ್ನಾಟಕ ಸರ್ಕಾರ,
ಬೆಂಗಳೂರು-೫೬೦೦೦೧

ಇವರಿಗೆ:

೧. ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ವಿಶೇಷ ಆರ್ಥಿಕ ವಲಯ ಸಂಸ್ಥೆ, ನಂ. ೧೬, ಪ್ರಣವಾ ಪಾರ್ಕ್, ೩ನೇ ಮಹಡಿ, ಇನ್ ಫೆಂಟ್ರಿ ರೋಡ್, ಬೆಂಗಳೂರು-೫೬೦೦೦೧
೨. ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಆನಂದರಾವ್ ವೃತ್ತ, ಬೆಂಗಳೂರು-೫೬೦೦೦೯

ಮಾನ್ಯರೆ
ವಿಷಯ: ಮಂಗಳೂರು ಎಸ್. ಇ. ಜಡ್. ಕಂಪೆನಿಗೆ ನೇತ್ರಾವತಿ ನದಿಯಿಂದ ನೀರೆತ್ತಲು ನೀಡಿರುವ ಅನುಮತಿಯನ್ನು ಹಿಂಪಡೆಯುವ ಬಗ್ಗೆ
ಉಲ್ಲೇಖ: ಶ್ರೀ ಹೆಚ್. ಸುಂದರ ರಾವ್, ಸಂಚಾಲಕ, ನೇತ್ರಾವತಿ ನದಿ ಸಂರಕ್ಷಣಾ ವೇದಿಕೆ, ದಕ್ಷಿಣಕನ್ನಡ ರವರ ಪತ್ರ ದಿನಾಂಕ: ೨೩-೧೦-೨೦೧೨

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದ ಪ್ರತಿಯನ್ನು ಅಡಕದೊಂದಿಗೆ ಲಗತ್ತಿಸಲಾಗಿದೆ. ಸದರಿ ಪತ್ರದಲ್ಲಿನ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ, ತಮ್ಮ ಅಭಿಪ್ರಾಯ/ವರದಿಯನ್ನು ಸರ್ಕಾರಕ್ಕೆ ಎರಡು ದಿನಗಳಲ್ಲಿ ಒದಗಿಸುವಂತೆ ತಮ್ಮನ್ನು ಕೋರಲು ನಿರ್ದೇಶಿತನಾಗಿದ್ದೇನೆ.
ತಮ್ಮ ವಿಶ್ವಾಸಿ

--ಸಹಿ--

(ಕೆ.ಎಸ್. ನಾಗರಾಜ)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-೪)
ಜಲ ಸಂಪನ್ಮೂಲ ಇಲಾಖೆ

ಪ್ರತಿಯನ್ನು:
ಶ್ರೀ ಹೆಚ್. ಸುಂದರ ರಾವ್, ನೇಸರ, ಕೆರೆಕೋಡಿ, ಅಂ: ಮೊಡಂಕಾಪು-೫೭೪೨೧೯, ಜೋಡುಮಾರ್ಗ, ದ.ಕ.ಜಿಲ್ಲೆ ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.