ಬುಧವಾರ, ನವೆಂಬರ್ 3, 2010

ಮಂಗಳೂರು ಎಸ್ ಇ ಝಡ್ ಕಂಪೆನಿ ಆರ್ ಟಿ ಐ ವ್ಯಾಪ್ತಿಗೆ


ನೇತ್ರಾವತಿ ನದಿನೀರಿಗೆ ಸಂಬಂಧಪಟ್ಟಂತೆ ಮಂಗಳೂರು ಎಸ್ ಇ ಝಡ್ ಕಂಪೆನಿ ಎ ಎಂ ಆರ್ ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರತಿಯನ್ನು ಮಾಹಿತಿ ಹಕ್ಕಿನಡಿ ನಾನು ಕೇಳಿದಾಗ, ಕಂಪೆನಿ ನನಗೆ ಮಾಹಿತಿ ನೀಡಲು ತಿರಸ್ಕರಿಸಿತ್ತು. ಪ್ರಕರಣ ಮಾಹಿತಿ ಹಕ್ಕು ಆಯೋಗದ ಎದುರಿಗೆ ವಿಚಾರಣೆಗೆ ಬಂದಾಗ ಕಂಪೆನಿ ತನ್ನನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಮನವಿ ಸಲ್ಲಿಸಿತ್ತು. ಇದಕ್ಕೆ ಬೆಂಬಲವಾಗಿ ಅದು ಮಂಗಳೂರಿನ ಖ್ಯಾತ ವಕೀಲ ಶ್ರೀ ಎಂ. ಶಂಕರ ಭಟ್ಟರ ಕಾನೂನು ಅಭಿಪ್ರಾಯವನ್ನೂ ಲಗತ್ತಿಸಿತ್ತು.
ಮೊದಲು ಮಡಿಕೇರಿಯಲ್ಲಿ, ನಂತರ ಬೆಂಗಳೂರಿನಲ್ಲಿ ಹೀಗೆ ಎರಡು ಸಲ ವಿಚಾರಣೆ ನಡೆದು ಈಗ ಆಯೋಗದ ತೀರ್ಪು ಹೊರಬಿದ್ದಿದೆ. ಅದನ್ನು ಯಥಾವತ್ತಾಗಿ ಮುಂದೆ ಕೊಟ್ಟಿದ್ದೇನೆ.
14-10-2010
1. Petitioner is present.
2. Complaint was last heard on 05-06-2010, when the Commission directed the Respondent to file the copies of balance sheets of Mangalore SEZ for last 3 years to enable the Commission to decide whether the Company is substantially financed by the Government and whether it is a public authority under the provision of Right to Information Act 2005 or not.
3. In his letter dated 22nd July 2010 to Commission, Sri A.G.Pai, ED&COO, Mangalore SEZ Ltd., has furnished the copies of the balance sheets.
4. In his letter dated 12th October 2010 to the Commission, Sri Ramachandra Bhandarkar, PIO & PRO, Mangalore SEZ has requested the Commission to adjourn the case by two weeks and he also states that in the meanwhile he is seeking legal opinion.
5. Commission noted that request for information was received on 19-12-2009, case was posted for hearing on 05-06-2010, Respondent was allowed time to file copies of Balance Sheets, Respondent filed copies of Balance Sheets on 22nd July 2010. Since no information is provided till today i.e., till 14-12-2010 for nearly twelve months, Commission considers the delay is considerable and it didn't agree with the request of the Respondent to adjourn the case for another two weeks. Hence Commission decides to proceed with the case treating Respondent ex-parte.
6. In his letter dated 06-10-2010 to the Commission, Petitioner has produced documents such as Annual report of M/s ONGC for the year 2008-09 and 2009-10 wherein ONGC has recorded that it has got a share holding of Rs. 13 crores in M/s Mangalore SEZ Ltd. He has also produced documents to show that KIADB has got Rs. 11.27 crore share capital in M/s Mangalore SEZ Ltd.
7. Commission noted that ONGC had entered into a Memorandum of Understanding with the Governemt of Karnataka to jointly develop the Special Economic Zone (SEZ) near Mangalore through Special Purpose Vehicle(SPV) consequently with the appproval of the cabinet, the SPV known as M/s Mangalore SEZ Ltd. has been incorporated during February 2006 with a authoized share capital of Rs. One crore the equity pattern M/s Mangalore SEZ Ltd. is stated as follows
a) ONGC - 26%
b) KIADB - 23%
c) IL & FS - 51%
8. Government of Karnataka in his order number CI 400 SPI 2006 dated 3rd March 2007, has accorded permission to KIADB to subscribe to the additional equity share capital to the extent of Rs. 11.27 crores in M/s Mangalore SEZ Ltd. and permission was given to KIADB to sign the share holders agreement in connection with M/s Mangalore SEZ Ltd.
9. In the statement of accounts produced along with the Balance Sheet by M/s Mangalore SEZ Ltd., in Schedule 7 under the head "Significant Accounting Policies" under sub-heading at Sl. No. 6 it is mentioned as follows:-
"6. Advance against Share Capital as at 31/3/2008 represents, the amount received from the following parties in terms of clause 3.3 of share holder's agreement dated 29-03-2007"
Name of the Share holder As on 31-03-2008(in Rs.)
Oil and Natural Gas corporation Limited 127,412,000
Karnataka Industrial Area Development Board 112,700,000
Infrastructure leasing and Financial Services Limited 245,100,000
Total 485,212,000
The above documents produced by the Petitioner and Respondents clearly show that M/s Mangalore SEZ Ltd., has received substantial Financial Aid both from Central and State Governments. Hence there is no substance in the argument that M/s Mangalore SEZ Ltd., is not a Public Authority. Commission comes to the conclusion that M/s Mangalore SEZ Ltd., is a 'Public Authority' under section 2(h) of the Right to Information Act. 2005.
10. Commission therefore directs Sri A.G.Pai, ED & COO, Mangalore SEZ Ltd., 3rd Floor, MUDA Building, Ashokanagar, Urwa Stores, Mangalore-575006 to provide the information sought by the Petitioner within 30 days free of cost, through RPAD, under intimation to the Commission.
11. The complaint is adjourned to 18-01-2011at 3-30 p.m.
ದಿನಾಂಕ 6-10-2010 ರಂದು ನಾನು ಕಳಿಸಿಕೊಟ್ಟ ದಾಖಲೆಗಳನ್ನು ಆಯೋಗ ವಿವರವಾಗಿ ಪರಿಶೀಲಿಸಿ, ಹೆಚ್ಚು ಕಡಿಮೆ ಅದರ ಆಧಾರದ ಮೇಲೆಯೇ ತೀರ್ಪು ಕೊಟ್ಟಿರುವುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಕರ್ನಾಟಕ ಸರಕಾರವು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ದಿನಕ್ಕೆ 6.75 ಕೋಟಿ ಲೀ. ನೀರೆತ್ತಲು ಅನುಮತಿ ನೀಡಿರುವುದರ ದಾಖಲೆಯನ್ನೂ ನಾನು ಆಯೋಗಕ್ಕೆ ನೀಡಿದ್ದೆ. ಆದರೆ ಮಾನ್ಯ ಆಯೋಗ ಆ ದಾಖಲೆಯನ್ನು ಪರಿಗಣಿಸಿಲ್ಲ.
ಅನುಮಾನವೇ ಇಲ್ಲದಂತೆ "ಮಂಗಳೂರು ಎಸ್ ಇ ಝಡ್ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ " ಎಂದು ತೀರ್ಪು ನೀಡಿದ ಮೇಲೂ, ವಿಚಾರಣೆಯನ್ನು ಪುನಃ 18-01-2011ಕ್ಕೆ ಯಾಕೆ ಇಡಲಾಗಿದೆ ಎಂಬುದು ಮಾತ್ರ ನನಗೆ ಅರ್ಥವಾಗಿಲ್ಲ. ತಿಳಿದವರು ಯಾರಾದರೂ ಇದು ಹೀಗೆ ಯಾಕೆ ಎಂದು ತಿಳಿಸಿ ಹೇಳಿದರೆ ಕೃತಜ್ಞ.

ಕೆಂಪುಕಲ್ಲೆಂಬ ಮೈಸೂರುಪಾಕು!


ಕಂಚಿನಡ್ಕಪದವು ಇರುವುದು ಸಜಿಪನಡು ಸಜಿಪಪಡುಗಳ ನಡುವೆ. ಈ ಎರಡೂ ಸಣ್ಣ ಊರುಗಳಿರುವುದು ಬಂಟ್ವಾಳ ತಾಲೂಕಿನಲ್ಲಿ; ಬಿ.ಸಿ.ರೋಡಿನಿಂದ ಮೆಲ್ಕಾರಿಗಾಗಿ ಕೊಣಾಜೆಗೆ ಹೋಗುವ ದಾರಿಯಲ್ಲಿ. ಬಂಟ್ವಾಳ ಪುರಸಭೆಯ ತ್ಯಾಜ್ಯ ಘಟಕ ಕಂಚಿನಡ್ಕಪದವಿನಲ್ಲಿ ನಿರ್ಮಾಣವಾಗುತ್ತಿದೆ. ಗಲೀಜು ಅಲ್ಲಿ ಸಂಗ್ರಹವಾದಮೇಲೆ ಗಬ್ಬು ವಾಸನೆ ಹೊಡೆಯುವುದು ಇದ್ದೇ ಇದೆಯಷ್ಟೆ. ಆದರೆ ಈ ತ್ಯಾಜ್ಯಘಟಕದ ವ್ಯವಹಾರ ಕಸ ತಂದು ಇಲ್ಲಿ ಸುರಿಯುವ ಮೊದಲೇ, ಘಟಕದ ನಿರ್ಮಾಣ ಹಂತದಲ್ಲಿಯೇ, ಗಬ್ಬು ವಾಸನೆ ಹೊರಡಿಸುತ್ತಿದೆ ಎಂದು ನಮ್ಮ ಬಿ.ಸಿ.ರೋಡಿನ ವಂಶ ಪತ್ರಿಕೆ ವರದಿ ಮಾಡಿತ್ತು. ಹಾಗಾಗಿ ಈ ಪವಾಡವನ್ನು ಕಣ್ಣಾರೆ ಕಂಡುಬಿಡೋಣ ಎಂದು ಮೊನ್ನೆ ಭಾನುವಾರ (31-10-2010) ನಾನು ವಂಶದ ಪತ್ರಕರ್ತರೊಂದಿಗೆ ಅಲ್ಲಿಗೆ ಹೋದೆ. ಗೆಳೆಯ ಕೃಷ್ಣಗಟ್ಟಿಯವರೂ ಜೊತೆಗಿದ್ದರು.
ಬಂಟ್ವಾಳ ತಾಲೂಕಿನಲ್ಲಿ ಇಂತಹ ಹಲವು ಪದವುಗಳಿವೆ. ವಿಸ್ತಾರವಾದ ಖಾಲಿ ಬಯಲು ಪ್ರದೇಶ. ಸ್ವಲ್ಪಮಟ್ಟಿಗೆ ಹುಲ್ಲು, ಸಣ್ಣ ಸಣ್ಣ ಸಸ್ಯಗಳು ಮಾತ್ರ ಬೆಳೆಯುವ ಜಮ್ಮಿಟಿಗೆ ಅಥವಾ ಕೆಂಪುಕಲ್ಲಿನ ರಚನೆಗಳು. ಬೆಂಜನಪದವು ಇಂತಹದೇ ಇನ್ನೊಂದು ಪ್ರದೇಶ. ಸಜಿಪನಡುವಿನಲ್ಲಿ ಎಡಕ್ಕೆ ತಿರುಗಿ ಕೆಂಪುಕಲ್ಲು ಸಾಗಿಸುವ ಲಾರಿಗಳು ಓಡಿಯಾಡಿ ಎರಡು-ಮೂರು ಅಡಿ ಆಳದ ಗುಂಡಿಗಳಾಗಿರುವ ರಸ್ತೆಯಲ್ಲಿ ಅಂದಾಜು ಮೂರು ಕಿ.ಮೀ. ಹೋದರೆ ಕಂಚಿನಡ್ಕಪದವು. ಅಲ್ಲಲ್ಲಿ ಒನ್ನೊಂದು ಮನೆಗಳು. ಜನವಸತಿ ಕಡಿಮೆ. ಕೆಂಪುಕಲ್ಲಿನ ಹಲವು ಕೋರೆಗಳು. ನಾವು ಹೋದದ್ದು ಭಾನುವಾರವಾದ್ದರಿಂದ ಕೆಲಸ ನಡೆಯುತ್ತಿರಲಿಲ್ಲ. ಘಟಕದ ದಾರಿಯಲ್ಲಿ ಒಂದು ಜಲ್ಲಿ ಕ್ರಷರ್ ಸಹ ಇದೆ.ಅಡ್ಡಾದಿಡ್ಡಿಯಾಗಿ ಹರಡಿಕೊಂಡಿರುವ ಕೆಂಪುಮಣ್ಣಿನ ರಾಶಿ ತುಂಬಿದ ಕೋರೆಗಳನ್ನು ಬಿಟ್ಟರೆ ಉಳಿದಂತೆ ಧಾರಾಳ ಶುದ್ಧಗಾಳಿ ಬೀಸುವ, ಪೃಕೃತಿಸಹಜವಾಗಿ ನಿರ್ಮಲವಾಗಿರುವ, ಮನೋಹರ ಭೂಪ್ರದೇಶ.
ಜನ ಇಲ್ಲವೇ ಇಲ್ಲ ಎಂದಲ್ಲ. ನಾವು ಐದು ಜನ ಅಲ್ಲಿಗೆ ಹೋದಮೇಲೆ ಸಹಜ ಕುತೂಹಲದಿಂದ ಜನ ಸೇರಿದರು. ಪತ್ರಕರ್ತ ಮಿತ್ರರು ಅವರೊಂದಿಗೆ ಮಾತನಾಡಿ ವಿಷಯ ಸಂಗ್ರಹಿಸುತ್ತಿದ್ದರು. ಅಲ್ಲಿಗೆ ಬಂದ ಒಂದಿಬ್ಬರು ಸ್ಥಳೀಯ ಲೀಡರುಗಳು "ನೀವು ಯಾರನ್ನು ಕೇಳಿ ಇಲ್ಲಿ ಬಂದಿರಿ? ಯಾರನ್ನು ಕೇಳಿ ಫೋಟೋ ತೆಗೆದಿರಿ? ಅಬ್ಬಾಸರನ್ನು ಕರೆದುಕೊಂಡು ಬರಬೇಕಿತ್ತು. ರೈಗಳನ್ನು (ಎಂದರೆ ಬಂಟ್ವಾಳ ಶಾಸಕ ರಮಾನಾಥ ರೈ) ಕರೆದುಕೊಂಡು ಬರಬೇಕಿತ್ತು" ಎಂದೆಲ್ಲ ತಕರಾರು ತೆಗೆದರು. ಪತ್ರಕರ್ತರೂ ಬುದ್ಧಿವಂತರೇ. ಬ್ಯಾರಿ ಭಾಷೆ, ತುಳು ಎರಡನ್ನೂ ಸರಾಗ ಮಾತಾಡಬಲ್ಲವರು. ಕ್ರಮೇಣ ವಾತಾವರಣ ತಿಳಿಯಾಯಿತು.
ಘಟಕದ ಕೆಲಸ ಶುರುವಾಗಿದೆ. ಸುತ್ತ ಪಾಗಾರ ಹಾಕುವ ಕೆಲಸ ನಡೆಯುತ್ತಿದೆ. ಹಾಗಾಗಿ ಎಂಟೂವರೆ ಎಕ್ರೆ ವಿಸ್ತಾರದ ಘಟಕ ಕಣ್ಣಳತೆಗೆ ಸಿಗುತ್ತದೆ. ನಾನು ಹೋದ ಮೂಲ ಉದ್ದೇಶ ತ್ಯಾಜ್ಯ ತುಂಬುವ ಮೊದಲೇ ಗಬ್ಬುವಾಸನೆ ಹೊರಡುತ್ತಿರುವ ಆರೋಪ ನಿಜವೇ ಸುಳ್ಳೇ ಎಂದು ತಿಳಿಯಲು. ನಮ್ಮಲ್ಲಿ ಬಗೆಬಗೆಯದನ್ನು ತಿಂದು ಜೀರ್ಣಿಸಿಕೊಳ್ಳುವ ಜನ ಇದ್ದಾರಷ್ಟೆ. ಮೇವು ತಿನ್ನುವವರು, ಮಣ್ಣು(ಭೂಮಿ) ತಿನ್ನುವವರು, ಸಿಮೆಂಟ್, ಹೊಯ್ಗೆ, ಕಬ್ಬಿಣ ಇತ್ಯಾದಿ ತಿನ್ನುವವರು, ಮರ ತಿನ್ನುವವರು, ಪುಸ್ತಕ ತಿನ್ನುವವರು ಹೀಗೆ ವೈವಿಧ್ಯಮಯ ಆಹಾರಪದ್ಧತಿ ಇರುವ ಪುಣ್ಯಭೂಮಿ ನಮ್ಮದು. ನಾವೊಂದು ಕಡಿಮೆಯಾಗುವುದು ಯಾಕೆ ಅಂತ ನಮ್ಮೂರ ಕೆಲವರು ಕಲ್ಲು (ಕೆಂಪುಕಲ್ಲು) ತಿನ್ನುತ್ತಿದ್ದಾರೆ ಎಂಬುದು ನಮ್ಮಲ್ಲಿ ಕೆಲವರ ಅನುಮಾನ. ಅಂಥದನ್ನೆಲ್ಲ ತಿನ್ನುವವರಿಗೆ ಇಂದಲ್ಲ ನಾಳೆ ಹೊಟ್ಟೆ ನೋವು ಬರಲಾರದೆ? ಯಾಕೆ ಅನ್ನ ತಿನ್ನಬಾರದು? ಕಲ್ಲು, ಮಣ್ಣು ಯಾಕೆ ತಿನ್ನಬೇಕು? ನನಗೆ ಅರ್ಥವಾಗುವುದಿಲ್ಲ.
ನೋಡಿದರೆ ಪೂರ್ತಿ ಎಂಟೂವರೆ ಎಕ್ರೆ ಜಾಗ ಹರಪ್ಪ ಮೊಹೆಂಜೋದಾರೋದ ಹಾಗೆ ಕಾಣುತ್ತದೆ. ಎಲ್ಲ ಕಡೆ ಅಗೆದ ಕೆಂಪು ಮಣ್ಣಿನ ರಾಶಿ. ಕೆಂಪು ಕಲ್ಲು ಕಡಿದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ, ಉಳಿದಿರುವ ಭಾಗದಲ್ಲಿ ಕೆಂಪುಕಲ್ಲಿನ ಚೌಕಾಕಾರದ ಅಚ್ಚುಗಳು. ಎಡೆ ಎಡೆಯಲ್ಲಿ ವಾಹನಗಳು ಓಡಾಡಬಹುದಾದ ದಾರಿಗಳು. ಯಾರೋ ಈ ಜಾಗದಲ್ಲಿ ಕೆಂಪುಕಲ್ಲು ಕಡಿದಿದ್ದಾರೆ, ಸಾಗಿಸಿದ್ದಾರೆ ಎನ್ನುವುದು ಎಂಥ ದಡ್ಡನಿಗೂ ಸ್ಪಷ್ಟವಾಗುವ ಸನ್ನಿವೇಶ, ದೃಶ್ಯ. ಪತ್ರಕರ್ತ ಮಿತ್ರರು ಸುಮಾರು ಫೋಟೋ ತೆಗೆದರು. ಆ ಪೈಕಿ ಒಂದೆರಡನ್ನು ಇಲ್ಲಿಯೂ ಕೊಟ್ಟಿದ್ದೇನೆ.
ಈ ಘಟಕದ ನಿರ್ಮಾಣಕ್ಕೆ ಸರಕಾರ 62 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದೆಯಂತೆ. ಈ ಯೋಜನೆಯನ್ನು ಯಾರು ತಯಾರಿಸಿದರು, ಸ್ಥಳ ಪರಿಶೀಲನೆ ಯಾರು ಮಾಡಿದರು, ಹಾಗೆ ಪರಿಶೀಲನೆ ಮಾಡಿದವರು ಇಲ್ಲಿ ಕೆಂಪುಕಲ್ಲಿನ ನಿಕ್ಷೇಪವಿದೆ ಎಂದು ತಮ್ಮ ವರದಿಯಲ್ಲಿ ಕಾಣಿಸಿದ್ದಾರೆಯೆ? ಯಾರಾದರೂ ಈ ಕೆಂಪುಕಲ್ಲಿನ ಮೌಲ್ಯನಿರ್ಣಯ ಮಾಡಿದ್ದಾರೆಯೆ? ಇಲ್ಲಿ ಕೋರೆ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆಯೆ? ಕೆಂಪುಕಲ್ಲುಗಳನ್ನು ಈ ಜಾಗದಿಂದ ಈಗ ತೆಗೆದು ಸಾಗಿಸುತ್ತಿರುವವರು ಯಾರು? ಅದರ ಹಣ ಯಾರಿಗೆ ಹೋಗುತ್ತಿದೆ? ಈ ವಿದ್ಯಮಾನಗಳು ಬಂಟ್ವಾಳ ಪುರಸಭೆಯ ಗಮನಕ್ಕೆ ಬಂದಿದೆಯೆ? ಮುಂತಾದ ಅನೇಕ ಪ್ರಶ್ನೆಗಳು ಇಲ್ಲಿ ಹುಟ್ಟುತ್ತವೆ.ಅಲ್ಲಿ ಬೀಸುತ್ತಿರುವ ಶುದ್ಧ ಗಾಳಿಯನ್ನು ಮಲಿನಗೊಳಿಸುತ್ತಿವೆ.
ನನಗೆ ಇಲ್ಲಿ ಇದ್ದ, ಇರುವ, ಕೆಂಪುಕಲ್ಲಿನ ಮೌಲ್ಯ ನಿರ್ಣಯ ಮಾಡುವಷ್ಟು ಪರಿಣತಿ ಇಲ್ಲ. ಆದರೆ, ಅದು ಯೋಜನೆಯ ಮೊತ್ತವಾದ 62 ಲಕ್ಷವನ್ನು ಮೀರಿಸಬಹುದು ಎಂಬ ಅನುಮಾನವಿದೆ. ವಂಶ ಪತ್ರಿಕೆ ಪ್ರಕರಣವನ್ನು ಎರಡು ಸಂಚಿಕೆಗಳಲ್ಲಿ ವರದಿ ಮಾಡಿದೆ. ನೋಡೋಣ ಏನಾಗುತ್ತದೆಂದು.
[ಈ ಮೊದಲು ನೇತ್ರಾವತಿ ನದಿಯಲ್ಲಿ (ನದಿಯಲ್ಲಿ ಎಂದರೆ ನದಿಯ ದಂಡೆಯಲ್ಲಿ ಅಲ್ಲ. ನದಿಯ ಪಾತ್ರದಲ್ಲಿ, ನದಿ ಹರಿಯುವ ದಾರಿಯಲ್ಲಿ) ಜಲವಿದ್ಯುತ್ ಯೋಜನೆ ಕಾರ್ಯಗತಗೊಳಿಸುವಾಗಲೂ ಡೈನಮೈಟ್ ಬಳಸಿ ಒಡೆದು ತೆಗೆದ ಕಲ್ಲನ್ನು ಕಂಪೆನಿ ಮಾರಿ ಹಣ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅದು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ ಯೋಜನೆಗಳಿಗೆ ಅನುಮತಿ ನೀಡುವಾಗ ಅಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳ ಲೆಕ್ಕವನ್ನು ನಮ್ಮ ಅಧಿಕಾರಿಗಳೂ, ಎಂಜಿನಿಯರುಗಳೂ ಬುದ್ಧಿವಂತಿಕೆಯಿಂದ ಮರೆತುಬಿಡುತ್ತಿದ್ದಾರೆ ಎಂಬ ಅನುಮಾನ ನನಗಿದೆ. ಪಶ್ಚಿಮ ಘಟ್ಟಗಳ ಉದ್ದಕ್ಕೂ ಹತ್ತು ಮೂವತ್ತು ಕಿರು ಜಲವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರಕಾರ ಅನುಮತಿ ನೀಡಿದೆ. ಈ ಎಲ್ಲ ಕಡೆಯಲ್ಲೂ ಗ್ರಾನೈಟ್ ಶಿಲೆ ಸಾಕಷ್ಟು ಪ್ರಮಾಣದಲ್ಲಿ ದೊರೆಯಲೇಬೇಕು. ಅನುಮತಿ ನೀಡುವಾಗ ಅಧಿಕಾರಿಗಳು ಈ ಅಂಶವನ್ನು ಲೆಕ್ಕ ಹಿಡಿದಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಲು ನಿಶ್ಚಯಿಸಿದ್ದೇನೆ.]
********************
ತ್ಯಾಜ್ಯವಸ್ತುಗಳನ್ನು ಹೀಗೆ ಒಂದುಕಡೆ ತಂದು ಸುರಿಯುವುದರಿಂದ ಅಲ್ಲೊಂದು ನರಕ ಸೃಷ್ಟಿಯಾಗುತ್ತದೆ. ಸುತ್ತಮುತ್ತ ಮನುಷ್ಯರು ಬದುಕಲು ಸಾಧ್ಯವೇ ಇಲ್ಲದಂಥ ವಾತಾವರಣ ನಿರ್ಮಾಣವಾಗುತ್ತದೆ. ಈ ಜನರ ಕೂಗು ಕೇಳುವವರಾರು? ಹಾಗೆಂದು ಅಂಥವರ ಕೂಗನ್ನು ಮನ್ನಿಸಿದರೆ ಕಸ ಸುರಿಯುವುದೆಲ್ಲಿ? ಈ ಕಗ್ಗಂಟನ್ನು ಬಿಡಿಸಲು ನಾನು ಹೊರಡುವುದಿಲ್ಲ. ನನ್ನ ಬುದ್ಧಿಗೆ ಕಾಣುವ ಒಂದೇ ಪರಿಹಾರವೆಂದರೆ, ಅವರವರ ಮನೆಯ, ಅಂಗಡಿಯ, ಕಾರ್ಖಾನೆಯ ಕಸದ ವಿಲೇವಾರಿ ಅವರವರದೇ ಜವಾಬ್ದಾರಿಯಾಗಬೇಕು. ಯಾರೂ ತಾವು ಸೃಷ್ಟಿಸಿದ ಕಸವನ್ನು ಸಾರ್ವಜನಿಕ ಸ್ಥಳಕ್ಕೆ ತಂದು ಹಾಕಲು ಅವಕಾಶ ಇರಬಾರದು. ಕಸ ಸೃಷ್ಟಿಯಾಗದಂತೆ ಮಾಡುವುದೇ ಕಸ ವಿಲೇವಾರಿಯ ಅತ್ಯುತ್ತಮ ವಿಧಾನ. ಆದರೆ ಕಸ ಸೃಷ್ಟಿ ಮಾಡದಿದ್ದರೆ ಆಧುನಿಕ ನಾಗರಿಕತೆ ಉಸಿರು ಕಟ್ಟಿ ಸತ್ತೇ ಹೋಗುತ್ತದೆ. ಕಸ ಹೀಗೆ ಸೃಷ್ಟಿ ಮಾಡುತ್ತ ಹೋದರೂ ಮುಂದೊಂದು ದಿನ ಅದೇ ಪರಿಣಾಮ ಆದೀತು. ಆದರೆ ಅದು ಮುಂದೊಂದು ದಿನವಷ್ಟೆ? ಇವತ್ತಲ್ಲವಲ್ಲ? ಆಗ ನೋಡಿಕೊಂಡರಾಯಿತು!

ಅಂಗೈಯಲ್ಲಿ ಬೆಣ್ಣೆ ಇರಿಸಿಕೊಂಡು, ತುಪ್ಪಕ್ಕಾಗಿ ಅಲೆದಂತೆ!

(ಪುತ್ತೂರಿನ ಡಾ ನಿತ್ಯಾನಂದ ಪೈಯವರು ವೈದ್ಯವೃತ್ತಿಯ ಜೊತೆಗೆ ಬಳಕೆದಾರರ ಚಳುವಳಿಯಲ್ಲೂ ತೀವ್ರವಾಗಿ ತೊಡಗಿಕೊಂಡಿರುವವರು. ಅವರ ಲೇಖನಗಳು ಉದಯವಾಣಿಯಲ್ಲಿ ಆಗಾಗ ಪ್ರಕಟವಾಗುತ್ತಿವೆ. ಪೈಗಳು ಮಹಾ ಛಲವಾದಿ. ಒಂದು ಸಮಸ್ಯೆಯ ಬೆನ್ನು ಹಿಡಿದರೆ ಫಕ್ಕನೆ ಬಿಡುವ ಪೈಕಿ ಅಲ್ಲ. ಪುತ್ತೂರಿನ ಕುಡ್ಸೆಂಪ್ ಕಾಮಗಾರಿಗಳ ಅನರ್ಥಗಳ ಕುರಿತು ಮತ್ತೆ ಮತ್ತೆ ಲೇಖನಗಳನ್ನು ಬರೆದು, ವ್ಯವಸ್ಥೆಗೆ ಮೂಗುದಾರ ಹಾಕಿದವರು ಅವರು. ಇಂಥವರೇ ಪ್ರಜಾಪ್ರಭುತ್ವದ ನಿಜವಾದ ರಕ್ಷಕರು.
31-10-2010ರ ಉದಯವಾಣಿಯ ಪುರವಣಿಯಲ್ಲಿ ಈ ಲೇಖನ ಪ್ರಕಟವಾಗಿದೆ. ವಿದ್ಯುತ್ತಿನ ಸಮಸ್ಯೆ ಪರಿಹರಿಸಲೆಂದು ಪಶ್ಚಿಮ ಘಟ್ಟಗಳ ಅಮೂಲ್ಯ ಕಾಡುಗಳನ್ನು ನಾಶ ಮಾಡಲು ಕರ್ನಾಟಕ ಸರ್ಕಾರ ಹೊಂಚುಹಾಕುತ್ತಿದೆ. ಕಂಟ್ರಾಕ್ಟರುಗಳು ಜೆಸಿಬಿಗಳನ್ನು ತಯಾರಿಟ್ಟುಕೊಂಡು ತೆರೆಮರೆಯಲ್ಲಿ ಕಾಯುತ್ತಿದ್ದಾರೆ. ಅಧಿಕಾರಿಗಳಲ್ಲಿ ಕೆಲವರು ಲೋಕಾಯುಕ್ತರಿಗೆ ಸಿಕ್ಕದ ಹಾಗೆ ದುಡ್ಡು ಮುಚ್ಚಿಡಲು ಹೊಸ ಉಪಾಯಗಳನ್ನು ಹುಡುಕಿಟ್ಟುಕೊಂಡು ತಯಾರಾಗಿದ್ದಾರೆ. ಇಂಥ ಸನ್ನಿವೇಶದಲ್ಲಿ ಸಮಸ್ಯೆಗೆ ಬೇರೊಂದು ಪರಿಹಾರ ಇರುವುದನ್ನು ಎತ್ತಿ ತೋರಿಸಿರುವುದಕ್ಕಾಗಿ ಈ ಲೇಖನ ನನಗೆ ಮಹತ್ವದ್ದಾಗಿ ಕಂಡಿದೆ. ಹಾಗಾಗಿ ಅದನ್ನು ನನ್ನ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ. ಲೇಖನವನ್ನು ಈಗಿನ ಇಂಧನ ಮಂತ್ರಿ ಶೋಭಾ ಕರಂದ್ಲಾಜೆಯವರಿಗೂ ಕಳಿಸಿ, ಅವರ ಅಭಿಪ್ರಾಯ ಕೇಳಿದ್ದೇನೆ. ನಿಮ್ಮಲ್ಲೂ ಯಾರಿಗಾದರೂ ಹಾಗೆ ಮಾಡಬೇಕೆಂದು ಕಂಡರೆ, ಮಾಡಬಹುದು).
-ಎಚ್. ಸುಂದರ ರಾವ್)

ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಬೇಸಗೆಯ ದಿನಗಳಲ್ಲಿ ಮಾತ್ರ ತಲೆದೋರುತ್ತಿದ್ದ ವಿದ್ಯುತ್ ಕ್ಷಾಮವು ಇತ್ತೀಚೆಗೆ ಮಳೆಗಾಲದ ದಿನಗಳಲ್ಲೂ ಉದ್ಭವಿಸಲಾರಂಭಿಸಿದೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯದಲ್ಲಿನ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಅಲ್ಪ ಬೆಲೆಗೆ ಖರೀದಿಸದ ರಾಜ್ಯ ಸರಕಾರವು, ನೆರೆಯ ರಾಜ್ಯಗಳಿಂದ ದುಬಾರಿ ಬೆಲೆ ತೆತ್ತು ವಿದ್ಯುತ್ತನ್ನು ಖರೀದಿಸುತ್ತಿದೆ!
ಕಳೆದ ಕೆಲ ವರ್ಷಗಳಿಂದ ಕರ್ನಾಟಕ ರಾಜ್ಯವು ವಿದ್ಯುತ್ ಕ್ಷಾಮದ ಸಮಸ್ಯೆಯಿಂದ ತತ್ತರಿಸುತ್ತಿದೆ. ಏಕೆಂದರೆ ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಬೇಡಿಕೆಯ ಪ್ರಮಾಣವು ಉತ್ಪಾದನೆಯ ಪ್ರಮಾಣಕ್ಕಿಂತಲೂ ಸಾಕಷ್ಟು ಹೆಚ್ಚಾಗಿದೆ. ಇದಲ್ಲದೆ ರಾಜ್ಯದಲ್ಲಿರುವ ಹಳೆಯ ವಿದ್ಯುತ್ ಉತ್ಪಾದನಾ ಸ್ಥಾವರಗಳು ಪದೇ ಪದೇ ಕೆಟ್ಟು ಹೋಗುತ್ತಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣವು ಇನ್ನಷ್ಟು ಕಡಿಮೆಯಾಗುತ್ತಿದೆ. ಇಷ್ಟೆಲ್ಲಾ ಸಾಲದೆಂಬಂತೆ ವಿದ್ಯುತ್ತಿನ ಕೊರತೆ ಅತಿಯಾದ ಸಂದರ್ಭಗಳಲ್ಲಿ ಕೇಂದ್ರದ ವಿದ್ಯುತ್ ಗ್ರಿಡ್ ನಿಂದ ರಾಜ್ಯಕ್ಕೆ ನ್ಯಾಯಸಮ್ಮತವಾಗಿ ಲಭಿಸಬೇಕಿದ್ದ ವಿದ್ಯುಚ್ಛಕ್ತಿಯಲ್ಲಿ ಗಣನೀಯ ಪ್ರಮಾಣದ ವಿದ್ಯುತ್ತನ್ನು ನೆರೆಯ ರಾಜ್ಯಗಳು ಕಬಳಿಸುತ್ತಿರುವುದರಿಂದ ರಾಜ್ಯದ ವಿದ್ಯುತ್ ಕ್ಷಾಮದ ಸಮಸ್ಯೆಯು ಇನ್ನಷ್ಟು ಬಿಗಡಾಯಿಸುತ್ತಿದೆ.
ರಾಜ್ಯದ ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆಗಳ ನಡುವಿನ ಕೊರತೆಯನ್ನು ತುಂಬಿಸಲು ಸರಕಾರವು ನೆರೆಯ ರಾಜ್ಯಗಳಿಂದ ಆವಶ್ಯಕ ಪ್ರಮಾಣದ ವಿದ್ಯುಚ್ಛಕ್ತಿಯನ್ನು ಖರೀದಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿರುವ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಖರೀದಿಸಲು ಮೀನ ಮೇಷ ಎಣಿಸುತ್ತಿದೆ. ನಿಜ ಹೇಳಬೇಕಿದ್ದಲ್ಲಿ ರಾಜ್ಯ ಸರಕಾರವು ಇದೀಗ ಪ್ರತಿನಿತ್ಯ 1000 ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ನೆರೆಯ ರಾಜ್ಯಗಳಿಂದ ಖರೀದಿಸುತ್ತಿದೆ. ವಿಶೇಷವೆಂದರೆ ನೆರೆಯ ರಾಜ್ಯಗಳು ನಮ್ಮ ರಾಜ್ಯದ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಅಲ್ಪಬೆಲೆಗೆ ಖರೀದಿಸುತ್ತಿವೆ!
ಇದೇ ವರ್ಷದ ಬೇಸಗೆಯ ದಿನಗಳಲ್ಲಿ ವಿದ್ಯುತ್ ಕ್ಷಾಮದ ಬಾಧೆ ಮಿತಿ ಮೀರಿದಾಗ ರಾಜ್ಯದಲ್ಲಿ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಕಡ್ಡಾಯವಾಗಿ ತನಗೆ ನೀಡಬೇಕೆಂದು ಸರಕಾರ ಆದೇಶಿಸಿತ್ತು. ಸರಕಾರದ ಈ ನಿಲುವು ಖಾಸಗಿ ಘಟಕಗಳ ಅಸಮಾಧಾನಕ್ಕೆ ಕಾರಣವೆನಿಸಿತ್ತು. ಏಕೆಂದರೆ ಈ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ವರ್ಷವಿಡೀ ಅಲ್ಪಬೆಲೆಗೆ ಪೂರೈಸುವ ಪ್ರಸ್ತಾವವನ್ನು ನಿರಾಕರಿಸಿರುವ ಸರಕಾರವು, ವಿದ್ಯುತ್ ಕ್ಷಾಮದ ದಿನಗಳಲ್ಲಿ ಮಾತ್ರ ತಮಗೆ ಬೇಕಾದಷ್ಟು ವಿದ್ಯುಚ್ಛಕ್ತಿಯನ್ನು ಪೂರೈಸಲೇ ಬೇಕು ಎನ್ನುವುದೇ ಅಸಮಾಧಾನಕ್ಕೆ ಕಾರಣವೆನಿಸಿದೆ. ಸರಕಾರವು ಈ ಘಟಕಗಳಿಂದ ನಿರಂತರವಾಗಿ ವಿದ್ಯುಚ್ಛಕ್ತಿಯನ್ನು ಖರೀದಿಸಿದಲ್ಲಿ "ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡುವುದು" ತಪ್ಪುತ್ತದೆ.
ಉದಾಹರಣೆಗೆ ಬಳ್ಳಾರಿಯ ತೋರಣಗಲ್ಲಿನಲ್ಲಿರುವ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯು ಪ್ರತಿನಿತ್ಯ 1100 ಮೆ.ವ್ಯಾ. ವಿದ್ಯುತ್ತನ್ನು ಉತ್ಪಾದಿಸುತ್ತಿದೆ. ಉಕ್ಕಿನ ಕಾರ್ಖಾನೆಗೆ ಬೇಕಾಗುವ 400 ಮೆ.ವ್ಯಾ. ವಿದ್ಯುತ್ತನ್ನು ಬಳಸಿದ ಬಳಿಕ ಉಳಿದ 700 ಮೆ.ವ್ಯಾ. ವಿದ್ಯುತ್ತನ್ನು ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳಿಗೆ ಕರ್ನಾಟಕದ ಗ್ರಿಡ್ ಮೂಲಕವೇ ಪೂರೈಕೆ ಮಾಡುತ್ತದೆ.
ಇದೀಗ ರಾಜ್ಯಸರಕಾರವು ನೆರೆಯ ರಾಜ್ಯಗಳಿಂದ ಪ್ರತಿ ಯೂನಿಟ್ ವಿದ್ಯುತ್ತಿಗೆ 10 ರೂ.ನಂತೆ ಪಾವತಿಸುತ್ತಿದ್ದು ನಮ್ಮದೇ ರಾಜ್ಯದಲ್ಲಿರುವ ಜಿಂದಾಲ್ ಉಕ್ಕು ತಯಾರಿಕಾ ಘಟಕದೊಂದಿಗೆ ದೀರ್ಘಕಾಲೀನ ಒಪ್ಪಂದವನ್ನು ಮಾಡಿಕೊಂಡಲ್ಲಿ ಈ ಸಂಸ್ಥೆಯು ಪ್ರತಿ ಯೂನಿಟ್ಟಿಗೆ ಕೇವಲ 4 ರೂ.ನಂತೆ ವಿದ್ಯುತ್ ಪೂರೈಸಲು ಸಿದ್ಧವಿದೆ. ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯ ನಿರ್ದೇಶಕರು ಹೇಳುವಂತೆ ರಾಜ್ಯ ಸರಕಾರವು ಬೇಸಗೆ ದಿನಗಳಲ್ಲಿ ಮಾತ್ರ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸದೇ, ವರ್ಷವಿಡೀ ವಿದ್ಯುತ್ತನ್ನು ಖರೀದಿಸಲು ಸಿದ್ಧವಿದ್ದಲ್ಲಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳು ಉಳಿತಾಯವಾಗಲಿದೆ. ಇಷ್ಟು ಮಾತ್ರವಲ್ಲ ಈ ಸಂಸ್ಥೆಯು ತನ್ನ ವಿದ್ಯುತ್ ಉತ್ಪಾದನೆಯನ್ನು ಇನ್ನೂ 600 ಮೆ.ವ್ಯಾ.ಗಳಷ್ಟು ಹೆಚ್ಚಿಸಲಿದ್ದು ಇದನ್ನು ರಾಜ್ಯ ಸರಕಾರಕ್ಕೆ ಪೂರೈಸಲು ಸಿದ್ಧವಿದೆ. ಪ್ರಸ್ತುತ ಈ ಸಂಸ್ಥೆಯು ನೆರೆಯ ರಾಜ್ಯಗಳಿಗೆ ಸಾಕಷ್ಟು ವಿದ್ಯುಚ್ಛಕ್ತಿಯನ್ನು ಪೂರೈಸುತ್ತಿದ್ದರೂ ವಿದ್ಯುತ್ ರವಾನೆಯ ಸಂದರ್ಭದಲ್ಲಿ ಸುಮಾರು 200 ಮೆ.ವ್ಯಾ.ನಷ್ಟು ವಿದ್ಯುಚ್ಛಕ್ತಿಯು ನಷ್ಟವಾಗುತ್ತಿದೆ. ಆದರೆ ಈ ಹೆಚ್ಚುವರಿ ವಿದ್ಯುತ್ತನ್ನು ರಾಜ್ಯ ಸರಕಾರವೇ ಖರೀದಿಸಲು ಸಿದ್ಧವಿದ್ದಲ್ಲಿ, ರಾಜ್ಯ ಸರಕಾರಕ್ಕೆ 10 ರೂ.ಗಳಿಗೆ 2.5 ಯೂನಿಟ್ ವಿದ್ಯುಚ್ಛಕ್ತಿ ಲಭಿಸುವುದರೊಂದಿಗೆ ಸಂಸ್ಥೆಗೆ ಸಂಭವಿಸುತ್ತಿರುವ ನಷ್ಟವನ್ನೂ ತಡೆಗಟ್ಟಬಹುದಾಗಿದೆ.
ಉಕ್ಕು ತಯಾರಿಸುವ ಸಂದರ್ಭದಲ್ಲಿ ಕಲ್ಲಿದ್ದಲನ್ನು ಉರಿಸುವ ಕಾರ್ಖಾನೆಗಳು ಇದರಿಂದ ಉತ್ಪನ್ನವಾಗುವ ಉಷ್ಣತೆಯನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸುತ್ತವೆ. ರಾಜ್ಯದಲ್ಲಿ ಇರುವ ಇತರ ಕಬ್ಬಿಣದ ಕಾರ್ಖಾನೆಗಳು ಮತ್ತು ಜಾಗತಿಕ ಹೂಡಿಕೆದಾರರ ಸಮಾವೇಶದ ಫಲವಾಗಿ ರಾಜ್ಯದಲ್ಲಿ ಹೊಸತಾಗಿ ನಿರ್ಮಿತವಾಗಲಿರುವ ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಮುಂದೆ ಉತ್ಪಾದಿಸಲಿರುವ ಹೆಚ್ಚುವರಿ ವಿದ್ಯುತ್ತನ್ನು ಸರಕಾರವು ನಿರಂತರವಾಗಿ ಖರೀದಿಸಿದಲ್ಲಿ, ರಾಜ್ಯದ ವಿದ್ಯುತ್ ಕ್ಷಾಮದ ಸಮಸ್ಯೆಯು ನಿಶ್ಚಿತವಾಗಿ ಅಂತ್ಯಗೊಳ್ಳಲಿದೆ. ಜೊತೆಗೆ ನೂತನ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕಾಗಿ ರಾಜ್ಯ ಸರಕಾರಗಳು ವ್ಯಯಿಸಲೇಬೇಕಾದ ಸಹಸ್ರಾರು ಕೋಟಿ ರೂ.ಗಳು ಉಳಿತಾಯವಾಗಲಿದೆ. ರಾಜ್ಯ ಸರಕಾರವು ಇದೀಗ ನೆರೆಯ ರಾಜ್ಯಗಳಿಂದ 1000 ಮೆ.ವ್ಯಾ. ವಿದ್ಯುತ್ತನ್ನು ಖರೀದಿಸಲು ಬಳಸುತ್ತಿರುವ 350 ಕೋಟಿ ರೂ.ಗಳಲ್ಲೇ ಇದರ ಎರಡೂವರೆ ಪಟ್ಟು ಅಧಿಕ ವಿದ್ಯುಚ್ಛಕ್ತಿಯನ್ನು ರಾಜ್ಯದ ಉಕ್ಕಿನ ಕಾರ್ಖಾನೆಗಳಿಂದಲೇ ಖರೀದಿಸಬಹುದಾಗಿದೆ.
-ಡಾ. ಸಿ. ನಿತ್ಯಾನಂದ ಪೈ