ಬುಧವಾರ, ಮೇ 27, 2009

ಮಾದರಿ-ಪಾದರಿ-ವಿಷಯ


ನಿರೇನ್, ಅಶೋಕವರ್ಧನರ ಜೊತೆ ಬಿಸಿಲೆಯ ಕಾಡಿನಲ್ಲಿ ನಡೆಯುತ್ತಿದ್ದೆ. ಕಾಡಿನಲ್ಲಿ ನಡೆಯುವಾಗ ಮೌನವಾಗಿರುವುದು ನಿರೇನ್ ಕ್ರಮ. ಅವರು ಸ್ವಲ್ಪ ಮುಂದಿದ್ದರು.
''ಅಶೋಕರೆ, ಸ್ಯಾಂಪಲ್ ಪದಕ್ಕೆ ಕನ್ನಡದಲ್ಲಿ ಏನು ಹೇಳಬೇಕು?'' ನನ್ನ ಪ್ರಶ್ನೆ.
''ಮಾದರಿ''-ಅಶೋಕರ ಉತ್ತರ.
ನಾನು - ನೀವೂ ಅದೇ ಹೇಳುತ್ತೀರ? ಗಟ್ಟಿಯವರೂ ಅದೇ ಹೇಳಿದರು. ನನಗೆ ಯಾಕೋ ಆ ಪದ ಸಮಾಧಾನವಿಲ್ಲ
ಅಶೋಕ್-ಪದನಿಧಿ ನೋಡಿ.
ಪ್ರಶಾಂತ್ ಮಾಡ್ತರ ಪದನಿಧಿ ಆಗಷ್ಟೆ ಬಿಡುಗಡೆ ಆಗಿತ್ತು. ಅಶೋಕರು (ಎಷ್ಟೆಂದರೂ) ಪುಸ್ತಕ ವ್ಯಾಪಾರಿ.
ನಾನು-ಅದರಲ್ಲಿ ಕೊಡುತ್ತಾರೆ ಅನ್ನುತ್ತೀರ?
ಅಶೋಕ್ - ಕೊಡಬಹುದು
(ಕೆಲವು ಕ್ಷಣ ಮೌನವಾಗಿ ನಡೆದೆವು. ನಂತರ ಮುಂದೆ ನಡೆಯುತ್ತಿದ್ದ ಅಶೋಕ್ ಸಟ್ಟ ತಿರುಗಿ)

''ಏ ಇಲ್ಲ ಇಲ್ಲ ಮಾಡ್ತರು ಆ ಪದ (ಮಾದರಿ) ಮುಟ್ಟುವುದಿಲ್ಲ''
ನಾನು (ಆಶ್ಚರ್ಯದಿಂದ) - ಯಾಕೆ?
ಅಶೋಕ್ - ಯಾಕೆಂದರೆ ಅವರು ಪಾದರಿ!
*********
ಈ ಕತೆಯನ್ನು ದೀರ್ಘಕಾಲದಿಂದ ಕ್ರೈಸ್ತ ಕಾಲೇಜೊಂದರಲ್ಲಿ ಉದ್ಯೋಗಿಯಾಗಿರುವ ನನ್ನೊಬ್ಬ ಮಿತ್ರರಿಗೆ ಹೇಳಿದೆ. ಎಲ್ಲ ಕೇಳಿದ ಮೇಲೆ ಅವರು ನಿರ್ಭಾವುಕರೆಂಬಂತೆ ಮುಖ ಮಾಡಿಕೊಂಡು ಮೆಲ್ಲ ಹೇಳಿದರು:
ಅಶೋಕರಿಗೆ ವಿಷಯ ಗೊತ್ತಿಲ್ಲ!

ಇ-ಮೇಲ್ ನಲ್ಲಿ ಬಂದ ಪ್ರತಿಕ್ರಿಯೆ ೨೮-೦೫-09

ರಾಯರೇ ಭಳಿರೇ.
ಹಾಸ್ಯದೊಳಗೊಂದು ಗಂಭೀರ ಸುಳಿ! ನನಗೆ ಹೇಳುವಂತದ್ದೇನೂ ಇಲ್ಲ, ಅವರವರ ದರುಶನಕೆ ಗುರು ನೀನೊಬ್ಬನೇ ಎಂಬ ಕವಿವಾಣಿಗೆ ಶರಣು, ಶರಣಾರ್ಥಿ.

ಅಶೋಕವರ್ಧನ