<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-1105138094084974837</id><updated>2011-11-26T12:57:48.271-08:00</updated><title type='text'>sundararao.blogspot.com</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://sundararao.blogspot.com/feeds/posts/default'/><link rel='self' type='application/atom+xml' href='http://www.blogger.com/feeds/1105138094084974837/posts/default?max-results=100'/><link rel='alternate' type='text/html' href='http://sundararao.blogspot.com/'/><link rel='hub' href='http://pubsubhubbub.appspot.com/'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><generator version='7.00' uri='http://www.blogger.com'>Blogger</generator><openSearch:totalResults>30</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-1105138094084974837.post-7708114251339016391</id><published>2011-08-05T04:42:00.000-07:00</published><updated>2011-08-05T05:32:30.156-07:00</updated><title type='text'>ನೇತ್ರಾವತಿಯ ಶ್ರೀಮುಡಿಗೆ ಕೈಯಿಕ್ಕಿರುವ ಎಂ ಎಸ್ ಇ ಜಡ್:ರಕ್ಷಿಸುವ ಪ್ರವೀಣರೆಲ್ಲಿದ್ದಾರೆ?</title><content type='html'>ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ "ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ" ಎಂಬ ಸುದ್ದಿಗಳು ಪ್ರಕಟವಾದವು. "ವಂಶ" ಪತ್ರಿಕೆಯ ಮಿತ್ರರನ್ನು "ನಮ ಒರ ಪೋದು ತೂದು ಬರ್ಕನ?" (ನಾವು ಹೋಗಿ ನೋಡಿ ಬರೋಣವೆ?) ಎಂದು ಕೇಳಿದೆ. &lt;br /&gt;ಮಳೆಗಾಲವಾದರೂ ನಾವು ಹೋದಾಗ ಬಿಸಿಲಿತ್ತು. ಸರಪಾಡಿಯಲ್ಲಿ ಎಂ ಆರ್ ಪಿ ಎಲ್ ನ ಪಂಪ್ ಹೌಸೋ ಏನೋ ಒಂದಿದೆ. ಅದಕ್ಕಿಂತ ಮೊದಲೇ ಬಲಕ್ಕೆ ಹೊಸರಸ್ತೆ ಕಡಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.&lt;a href="http://4.bp.blogspot.com/-HhqR3b-xzBA/TjvaLg14iYI/AAAAAAAAAEI/wNFD_CYDfFo/s1600/IMG_0146.JPG"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 240px;" src="http://4.bp.blogspot.com/-HhqR3b-xzBA/TjvaLg14iYI/AAAAAAAAAEI/wNFD_CYDfFo/s320/IMG_0146.JPG" border="0" alt=""id="BLOGGER_PHOTO_ID_5637339249913661826" /&gt;&lt;/a&gt;&lt;br /&gt;ಹಸಿ ಹಸಿ ಮಣ್ಣಿನ ರಸ್ತೆ. ಜೆಸಿಬಿ ಉಪಯೋಗಿಸಿ ರಸ್ತೆ ಮಾಡಿದ್ದರೆಂಬುದು ಯಾರಿಗೂ ಗೊತ್ತಾಗುವಂತಿತ್ತು. ಅದರಲ್ಲಿ ಸ್ವಲ್ಪ ದೂರ ನಡೆದ ಮೇಲೆ ತೆರೆದುಕೊಂಡಿದ್ದು ವಿಶಾಲವಾದ ಪ್ರದೇಶದಲ್ಲಿ ಶೇಖರಗೊಂಡಿದ್ದ ನೀರಿನ ದೃಶ್ಯ. &lt;br /&gt;ಮುಂದೆ ಎ ಎಂ ಆರ್ ಕಂಪೆನಿಯ ಅಣೆಕಟ್ಟು ಕಾಣುತ್ತಿತ್ತು. ನಮ್ಮೆದುರಿಗೆ ಕಾಣುತ್ತಿದ್ದುದು ಅದೇ ಅಣೆಕಟ್ಟಿನಲ್ಲಿ ಸಂಗ್ರಹಿಸಿದ್ದ ನೀರಿನ ರಾಶಿ. ನಾವು ಮುಟ್ಟಿದ್ದು ಒಂದು ಜೆಸಿಬಿ ನಿಂತಿದ್ದ ಸ್ಥಳವನ್ನು. ಸುತ್ತ ಅನೇಕ ಮರಗಳು ಬೇರು ಮೇಲಾಗಿ ಸೊಪ್ಪು ಒಣಗಿ ಉದುರಿ ಕಳಚಿಕೊಂಡು ಬೆತ್ತಲೆ ಅಸ್ತಿಪಂಜರಗಳಂತೆ ವಿಕಾರವಾಗಿ ಆಚೀಚೆ ಉರುಳಿಕೊಂಡಿದ್ದವು. ಕಪ್ಪು ಕಲ್ಲುಗಳನ್ನು ಒಡೆದು ತೆಗೆದಿರುವುದು (ಬಹುಶಃ ಡೈನಮೈಟ್ ಬಳಸಿ) ಸ್ಪಷ್ಟವಾಗಿಯೇ ಕಾಣುತ್ತಿತ್ತು. ಸ್ವಲ್ಪ ದೂರಕ್ಕೆ ಆಳವಾದ ಹೊಂಡದಲ್ಲಿ ಭೂಮಿಯ ಹೊಟ್ಟೆ ಬಗೆದು ಏನೋ ಕಾಮಗಾರಿ ನಡೆಸಿರುವುದೂ ಕಾಣುತ್ತಿತ್ತು. ಒಟ್ಟಿನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಯಾವುದೋ ದೊಡ್ಡ ಕಾಮಗಾರಿಯ ಮುನ್ಸೂಚನೆಯಾಗಿ ಕಂಡವು. ಸಾಧ್ಯವಿದ್ದಷ್ಟು ಫೋಟೋಗಳನ್ನು ತೆಗೆದುಕೊಂಡು ನಾವು ಹಿಂದೆ ಬಂದೆವು.&lt;br /&gt;&lt;strong&gt;ಹಿನ್ನೆಲೆ:&lt;/strong&gt;&lt;br /&gt;2007 ರಲ್ಲಿಯೇ ಕರ್ನಾಟಕ ಸರ್ಕಾರ ಎಮ್ ಎಸ್ ಇ ಜಡ್ ಕಂಪೆನಿಗೆ "ನೇತ್ರಾವತಿ ಹಾಗೂ ಗುರುಪುರ ನದಿಗಳ ಮೇಲೆ ಗುರುತಿಸಲಾಗಿರುವ ಸ್ಥಳಗಳಲ್ಲಿ 4 ಬ್ಯಾರೇಜ್ ಗಳನ್ನು ನಿರ್ಮಿಸುವ ಮೂಲಕ ಸೂಕ್ತವಾಗಿ ನೀರನ್ನು ಸಂಗ್ರಹಿಸಿ ದಿನಂಪ್ರತಿ 15 ಎಂಜಿಡಿ ನೀರನ್ನು ಬಳಸಲು" 19 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಸರಕಾರ ನೀಡಿರುವ ಈ ಅನುಮತಿಯ ಆಧಾರದಲ್ಲಿಯೇ ಈಗ ಕಂಪೆನಿಯು ಕಾಮಗಾರಿಯನ್ನು ಪ್ರಾರಂಭಿಸಿದೆ ಎಂಬುದು ಸ್ಪಷ್ಟ. ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ, ಕಾಮಗಾರಿ ಪ್ರಾರಂಭಿಸುವ ಮುನ್ನ ಸರಕಾರ ವಿಧಿಸಿರುವ ಷರತ್ತುಗಳನ್ನು ಕಂಪೆನಿ ಪಾಲಿಸಿದೆಯೇ ಇಲ್ಲವೇ, ಒಂದು ವೇಳೆ ಇಲ್ಲದಿದ್ದರೆ, ಈ ಷರತ್ತುಗಳು ಅನುಷ್ಠಾನವಾಗುವಂತೆ ಮಾಡಬೇಕಾದ ಜವಾಬ್ದಾರಿ ಯಾರದ್ದು, ಅವರು ಏನು ಮಾಡುತ್ತಿದ್ದಾರೆ ಎನ್ನುವುದು. &lt;br /&gt;&lt;strong&gt;ಅನುಷ್ಠಾನದ ದುರಂತ ಕತೆ&lt;/strong&gt;&lt;br /&gt;ಸರಕಾರ ಷರತ್ತುಗಳನ್ನೇನೋ ವಿಧಿಸಿದೆ. ಅದನ್ನು ಕಂಪೆನಿ ಪಾಲಿಸಬೇಕು, ಪಾಲಿಸುತ್ತದೆ ಎನ್ನುವುದು ಸಾಮಾನ್ಯ ತಿಳುವಳಿಕೆ. ಒಂದು ವೇಳೆ ಪಾಲಿಸದಿದ್ದರೆ? ಪಾಲಿಸದಿದ್ದರೆ, ಅಂತಿಮವಾಗಿ ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರಜೆಗಳದ್ದೇ. ಏಕೆಂದರೆ ಅಂತಿಮವಾಗಿ ಪೆಟ್ಟು ತಿನ್ನುವವರು ಅವರೇ. ಆದರೂ, ಸರಕಾರ ಎಂಬ ಒಂದು ವ್ಯವಸ್ಥೆ ಇದೆ, ಅಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಅಧಿಕಾರಿಗಳನ್ನು ಸಂಬಳ ಕೊಟ್ಟು ನೇಮಿಸಲಾಗಿದೆ ಎಂಬುದರಿಂದ ಈ ಅಧಿಕಾರಿಗಳು ಹೇಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಲೇಬೇಕು.&lt;br /&gt;2010 ರ ಸೆಪ್ಟೆಂಬರಿನಲ್ಲಿಯೋ ಏನೋ ಪತ್ರಿಕೆಗಳಲ್ಲಿ ಎಮ್ ಎಸ್ ಇ ಜಡ್ ನೇತ್ರಾವತಿಯಿಂದ ಕಂಪೆನಿಗೆ ನೀರು ಸಾಗಿಸಲು ಪೈಪ್ ಲೈನ್ ಅಳವಡಿಸುವ ಕಾಮಗಾರಿಗಾಗಿ ಟೆಂಡರು ಕರೆದಿತ್ತು. ಟೆಂಡರು ಕರೆಯುವುದೆಂದರೆ ಪೂರ್ವಭಾವಿ ತಯಾರಿಗಳು ಮುಗಿದಿವೆ ಎಂದೇ ಅರ್ಥ. ಸರಕಾರ ವಿಧಿಸಿದ 19 ಷರತ್ತುಗಳಲ್ಲಿ ಮುಖ್ಯವಾಗಿ ಮೂರು ಷರತ್ತುಗಳನ್ನು ನೋಡೋಣ:&lt;br /&gt;1. ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು&lt;br /&gt;2. ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೇಲೆ ಸಂಗ್ರಹಿಸಿ ಕೊಂಡೊಯ್ಯುವ ನೀರಿನಿಂದ ಸಂಸ್ಥೆಯು ಹಾದಿಗುಂಟ ಬರುವ ಪಟ್ಟಣಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ವ್ಯವಸ್ಥೆ ಮಾಡತಕ್ಕದ್ದು. (ಇಲ್ಲಿ ಕುಮಾರಧಾರಾ ಅಲ್ಲ, ಗುರುಪುರ ನದಿ ಎಂದಾಗಬೇಕು)&lt;br /&gt;3. ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು.&lt;br /&gt;&lt;strong&gt;ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ: ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು&lt;/strong&gt;&lt;br /&gt;ಮಂಗಳೂರು ವಿ. ಆ. ವ. ಕಂಪೆನಿ ತನ್ನನ್ನು ಮಾಹಿತಿ ಹಕ್ಕು ವ್ಯಾಪ್ತಿಯಿಂದ ಹೊರಗಿಡಬೇಕೆಂದು ಹೈಕೋರ್ಟಿನಲ್ಲಿ ರಿಟ್ ಸಲ್ಲಿಸಿ ತತ್ಕಾಲಕ್ಕೆ ತನ್ನ ವ್ಯವಹಾರಗಳನ್ನು ನಿಗೂಢವಾಗಿ ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಇದರಿಂದಾಗಿ ಮಾಹಿತಿಯನ್ನು ಅರಣ್ಯ ಇಲಾಖೆಯಿಂದ ಪಡೆಯುವುದು ನನಗೆ ಅನಿವಾರ್ಯವಾಯಿತು.ನಾನು ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಪ್ರಾರಂಭಿಸಿದೆ. ಏನು ಬರೆದರೂ, ಹೇಗೆ ಬರೆದರೂ ಅವರದ್ದು ಒಂದೇ ಹಟ: "ಕಂಪೆನಿ ಇಲ್ಲಿಯವರೆಗೂ ನಮ್ಮಿಂದ ಅನುಮತಿ ಕೇಳಿಲ್ಲ. ಅದು ಕೇಳಲಿ, ಆಗ ಅದನ್ನು ನಾವು ಪರಿಶೀಲಿಸುತ್ತೇವೆ". ಇಂಥ ಹೋರಾಟಗಳಲ್ಲಿ ನನಗಿಂತಲೂ ಆಳವಾಗಿ ತೊಡಗಿಕೊಂಡಿರುವ ಮಿತ್ರರೊಬ್ಬರ ಹತ್ತಿರ ಏನು ಮಾಡಬಹುದೆಂದು ಚರ್ಚಿಸಿದೆ. ಅವರೆಂದರು: "ಇಲಾಖೆಯಲ್ಲಿ ನಾನಿದ್ದರೆ ನಾನೂ ನಿಮಗೆ ಹಾಗೇ ಉತ್ತರಿಸುತ್ತಿದ್ದೆ". (ಸುಬ್ರಹ್ಮಣ್ಯದ ಪ್ರಕರಣದಲ್ಲಿ ನಾನು ಹೋರಾಟವನ್ನು ಅರ್ಧಕ್ಕೆ ಬಿಟ್ಟೆನೆಂದು ಅವರಿಗೆ ಅನ್ನಿಸಿರಬೇಕು. ಕೋರ್ಟಿಗೆ ಹೋಗಿ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಯಾಗುವವರೆಗೂ ಬಿಡಬಾರದು ಎಂಬುದು ಅವರ ದೃಷ್ಟಿಕೋನ. ನನಗೆ ಕೋರ್ಟಿನ ವ್ಯವಹಾರದ ಬಗ್ಗೆ ಭಯಂಕರ ಜಿಗುಪ್ಸೆ; ಅಷ್ಟೇ ಅಲ್ಲ, ವಕೀಲರಿಗೆ ಸುರಿಯಲು ನನ್ನ ಹತ್ತಿರ ಹಣವೂ ಇಲ್ಲ. ಇತ್ತ ಮರಗಳೇ ನಾಶವಾದ ಮೇಲೆ ಯಾರಿಗೆ ಶಿಕ್ಷೆಯಾಗಿ ಏನು ಪ್ರಯೋಜನ?) ನನಗೆ ಆ ಕ್ಷಣಕ್ಕೆ ಹೋರಾಟದ ಉತ್ಸಾಹ ಉಡುಗಿತು. ಕ್ರಮೇಣ, "ನನ್ನ ದಾರಿ ನನಗೆ" ಎಂದು ಮನಸ್ಸು ಗಟ್ಟಿ ಮಾಡಿಕೊಂಡೆ. ನನ್ನ ಪರಿಚಯದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಹತ್ತಿರ ಸಮಸ್ಯೆಯನ್ನು ಹೇಳಿ ಪ್ರಶ್ನೆ ಇಟ್ಟೆ: "ಇಂಥ ಪ್ರಕರಣಗಳಲ್ಲಿ ನಾನು ಕೊಟ್ಟ ಮಾಹಿತಿಯ ಆಧಾರದಲ್ಲಿ ಇಲಾಖೆ ಸ್ವಯಂಪ್ರೇರಿತವಾಗಿ ಮುಂದುವರಿಯುವುದು ಸಾಧ್ಯವಿಲ್ಲವೆ?" "ಸಾಧ್ಯ" ಎಂದರು ಅವರು. ಮನಸ್ಸಿಗೆ ಧೈರ್ಯವಾಯಿತು.&lt;br /&gt;&lt;strong&gt;ಆರಣ್ಯ ಇಲಾಖೆಗೆ ಕೊಟ್ಟ ದೂರಿನ ಪರಿಣಾಮ: ಎತ್ತಿನ ಜ್ವರಕ್ಕೆ ಎಮ್ಮೆಗೆ ಬರೆ!&lt;/strong&gt;&lt;br /&gt;ಇಲಾಖೆಯೊಂದಿಗೆ ನನ್ನ ತಕರಾರು ಮುಂದುವರಿಯುತ್ತಿದ್ದಂತೆ, ಪತ್ರಿಕೆಗಳಲ್ಲಿ "ಎಂ ಎಸ್ ಇ ಜಡ್ ಕಂಪೆನಿಯ ಪೈಪ್ ಲೈನ್ ಕಾಮಗಾರಿ ಪ್ರಾರಂಭವಾಗಿದೆ" ಎಂಬ ಸುದ್ದಿ ಪ್ರಕಟವಾಯಿತು. ಮೊದಲೇ ವಿವರಿಸಿದಂತೆ ಸ್ಥಳಕ್ಕೆ ಹೋಗಿ ನೋಡಿಬಂದು ಬಂಟ್ವಾಳದ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದೆ. ಜೊತೆಗೆ ಪತ್ರಿಕಾವರದಿಯನ್ನೂ ಇಟ್ಟಿದ್ದೆ. ಅವರಿಂದ ಉತ್ತರ ಬಂತು:".... ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಸರಕಾರಿ ಜಾಗದಿಂದ ಅನುಮತಿ ಇಲ್ಲದೆ ಸಣ್ಣಪುಟ್ಟ ಗಿಡಮರಗಳನ್ನು ಕಡಿದಿರುವ ಬಗ್ಗೆ ಶ್ರೀ ಸೀತಾರಾಮ ಶೆಟ್ಟಿ..... ಇವರ ವಿರುದ್ಧ..... ತಕ್ಷೀರು ದಾಖಲಿಸಲಾಗಿದೆ"&lt;br /&gt;ಕಾಮಗಾರಿ ನಡೆಸುತ್ತಿರುವುದು ಮಂ ವಿ ಆ ವ ಕಂಪೆನಿ ಎಂಬುದಕ್ಕೆ ನಾನು ಸಾಕ್ಷಿ ಒದಗಿಸಿದ್ದರೂ, ತಕ್ಷೀರು ಬಿದ್ದದ್ದು ಸೀತಾರಾಮ ಶೆಟ್ಟರ ಮೇಲೆ. ಇರಲಿ. ಅದನ್ನು ಮುಂದೆ ನೋಡೋಣ.&lt;br /&gt;ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು "ಸಣ್ಣ ಪುಟ್ಟ ಗಿಡಮರಗಳ್ನ್ನು ಕಡಿಯಲಾಗಿದೆ" ಎಂದು ಸ್ವತಃ ಅರಣ್ಯಾಧಿಕಾರಿಯೇ ಹೇಳುತ್ತಿರುವುದು! ಯಾವ ಆಧಾರದಲ್ಲಿ ಅವರಿದನ್ನು ಹೇಳುತ್ತಿದ್ದಾರೆ? ಆ ಸ್ಥಳದಲ್ಲಿ ದೊಡ್ದ ಮರಗಳಿದ್ದು ಅವುಗಳನ್ನು ಯಾರಾದರೂ ಅಲ್ಲಿಂದ ಸಾಗಿಸಿರಬಾರದು ಯಾಕೆ? ಈ ಬಗ್ಗೆ ತನಿಖೆಯನ್ನು ಯಾರು ಮಾಡಿದ್ದಾರೆ? ಯಾರ ಮೇಲೆ ತಕ್ಷೀರು ದಾಖಲಿಸಿದ್ದಾರೋ ಅವರು "ಸಣ್ಣ ಪುಟ್ಟ ಗಿಡಮರಗಳನ್ನು ಕಡಿದಿದ್ದಾರೆ" ಎಂದು ಹೇಳುವ ಮೂಲಕ ಅವರು ಅಂಥಾ ದೊಡ್ಡ ಅಪರಾಧವನ್ನೇನೂ ಮಾಡಿಲ್ಲ ಎಂದು ಸೂಚಿಸಿ, ತಮ್ಮನ್ನೂ, ಯಾರಮೇಲೆ ತಕ್ಷೀರು ದಾಖಲಾಗಿದೆಯೋ ಅವರನ್ನೂ ಏಕಕಾಲದಲ್ಲಿ ರಕ್ಷಿಸಿಕೊಳ್ಳುವ ಉಪಾಯವಾಗಿ ಇದು ಕಾಣುವುದಿಲ್ಲವೆ?.&lt;a href="http://4.bp.blogspot.com/-Xut0L6SQlmg/Tjvb0PmGQaI/AAAAAAAAAEQ/jh4WjHG-UJk/s1600/IMG_0151.JPG"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 240px;" src="http://4.bp.blogspot.com/-Xut0L6SQlmg/Tjvb0PmGQaI/AAAAAAAAAEQ/jh4WjHG-UJk/s320/IMG_0151.JPG" border="0" alt=""id="BLOGGER_PHOTO_ID_5637341049170313634" /&gt;&lt;/a&gt;&lt;br /&gt;ಇನ್ನು "ಕಡಿಯಲಾಗಿದೆ" ಎಂದರೇನರ್ಥ? ನಾವು ತೆಗೆದ ಫೋಟೋಗಳು ಸ್ಪಷ್ಟವಾಗಿ ತೋರಿಸುತ್ತಿವೆ ಅಲ್ಲಿ ಜೆಸಿಬಿ ಬಳಸಿ ಮರಗಳನ್ನು ಬೇರು ಸಮೇತ ಮಗುಚಲಾಗಿದೆ ಎಂಬುದನ್ನು. ಅಲ್ಲಿ ಜೆಸಿಬಿ ಕಾರ್ಯಾಚರಿಸುತ್ತಿರುವುದನ್ನು ಮುಚ್ಚಿ ಹಾಕಲು "ಕಡಿಯಲಾಗಿದೆ" ಎಂಬ ಶಬ್ದವನ್ನು ಅಧಿಕಾರಿ ಬಳಸುತ್ತಿದ್ದಾರೆಯೆ? ಏಕೆಂದರೆ ಕಡಿಯಲಾಗಿದೆ ಎಂದರೆ ಯಾವ ರಗಳೆಯೂ ಇಲ್ಲ. ಜೆಸಿಬಿ ಬಳಸಿ ಉರುಳಿಸಲಾಗಿದೆ ಎಂದರೆ ಜೆಸಿಬಿ ಯಾರದ್ದು, ಅದು ಸ್ಥಳದಲ್ಲಿ ಇತ್ತೆ, ಅದನ್ನು ಯಾಕೆ ಜಪ್ತು ಮಾಡಲಿಲ್ಲ ಇತ್ಯಾದಿ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡಬೇಕಾಗುತ್ತದೆ. ಕಡಿಯಲಾಗಿದೆ ಎಂದು ಬಿಟ್ಟರೆ ಆ ರಗಳೆಯೇ ಇಲ್ಲ ತಾನೆ?&lt;br /&gt;&lt;br /&gt;ಇನ್ನು "ತಕ್ಷೀರಿ"ನ ಕತೆ ಏನು? ತಕ್ಷೀರು ಹಾಕಿಸಿಕೊಂಡ ಶ್ರೀ ಸೀತಾರಾಮ ಶೆಟ್ಟರನ್ನು ನಾನು ಮಾತಾಡಿಸಿದೆ. ಅವರು ಕೃಷಿಕರು, ಜೊತೆಗೆ ಕಾಂಗ್ರೆಸ್ ಪಕ್ಷದವರು. ರಾಜಕೀಯದಲ್ಲಿ ನುರಿತವರು. ಅವರ ಮನೆ ಅಲ್ಲೇ ಹತ್ತಿರ ಇದೆಯಂತೆ. "ತಕ್ಷೀರಿ"ಗೆ ಅವರ ವಿವರಣೆ ಹೀಗೆ: "ಅಲ್ಲಿ ಮರಗಳನ್ನು ಕಡಿದಿದ್ದೇನೆ ಎಂದು ನನಗೆ ದಂಡ ಹಾಕುತ್ತಾರೆ. (ನಾನು ಒಂದು ಮರವನ್ನೂ ಕಡಿಯಲಿಲ್ಲ.) ಅಷ್ಟನ್ನು ನಾನು ಕಟ್ಟಬೇಕು. ನಂತರ ಫೈಲು ಮೇಲೆ ಡಿ ಎಫ್ ಓಗೆ ಹೋಗುತ್ತದೆ. ಅಲ್ಲಿ ಅವರು "ದಂಡ ಹಾಕಿದ್ದು ಕಡಿಮೆಯಾಯಿತು" ಅಂತ ಹೇಳಿ ಸ್ವಲ್ಪ ಜಾಸ್ತಿ ದಂಡ ಹಾಕುತ್ತಾರೆ. ಅಷ್ಟು ದಂಡ ಕಟ್ಟಿದರಾಯಿತು". ಇಷ್ಟಾದರೆ ತಕ್ಷೀರಿನ ಕತೆ ಮುಗಿಯಿತು! ಉರುಳಿದ ಮರಗಳ ಕತೆ ಏನು? ಬದಲಿಗೆ ಬೇರೆ ಸಸಿಗಳನ್ನು ಎಲ್ಲಿಯಾದರೂ ನೆಡುತ್ತಾರೆಯೆ? ಯಾರು ಕೇಳುವವರು? ( ಈ ಪ್ರಕರಣದಲ್ಲಿ ನಾನು ಕೇಳಿದ್ದೇನೆ. ನೋಡೋಣ ಏನು ಉತ್ತರ ಬರುತ್ತದೋ ಅಂತ)&lt;br /&gt;&lt;strong&gt;ಕಾಣದ ಕೈಯ ಕಾರುಭಾರು?&lt;/strong&gt;&lt;br /&gt;ಪತ್ರಿಕಾವರದಿ ಅಲ್ಲಿ ಕಾಮಗಾರಿ ನಡೆಸುತ್ತಿರುವುದು ಎಂ ಎಸ್ ಇ ಜಡ್ ಕಂಪೆನಿ ಎಂದು ಸ್ಪಷ್ಟವಾಗಿಯೇ ಹೇಳಿತ್ತು.&lt;br /&gt;&lt;a href="http://1.bp.blogspot.com/-IpY--G3ERxw/TjvhwYx20PI/AAAAAAAAAEo/Bu_TlqbYxgg/s1600/IMG_0155.JPG"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 240px;" src="http://1.bp.blogspot.com/-IpY--G3ERxw/TjvhwYx20PI/AAAAAAAAAEo/Bu_TlqbYxgg/s320/IMG_0155.JPG" border="0" alt=""id="BLOGGER_PHOTO_ID_5637347579985842418" /&gt;&lt;/a&gt; ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿ ಸ್ವಲ್ಪ ಸ್ಥಳ ಪರಿಶೀಲನೆ ಮಾಡಿದ್ದರೆ, ಮರ ಉರುಳಿಸಿರುವುದಲ್ಲದೆ, ಬಂಡೆಗಳನ್ನು (ಬಹುಶಃ ಡೈನಮೈಟ್ ಬಳಸಿ) ಒಡೆದಿರುವುದು, ಯಂತ್ರಗಳ ಮೂಲಕ ಹೊಳೆಯ ಬದಿಯಲ್ಲಿ ಗುಂಡಿ ತೆಗೆಯುತ್ತಿರುವುದು ಇದೆಲ್ಲ ಕಂಡೇ ಕಾಣುತ್ತಿತ್ತು.&lt;a href="http://2.bp.blogspot.com/-nshe5Vgy3lI/TjvgnRsjBJI/AAAAAAAAAEg/vrxIvteUDjA/s1600/IMG_0164.JPG"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 240px;" src="http://2.bp.blogspot.com/-nshe5Vgy3lI/TjvgnRsjBJI/AAAAAAAAAEg/vrxIvteUDjA/s320/IMG_0164.JPG" border="0" alt=""id="BLOGGER_PHOTO_ID_5637346323954074770" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;ಸೀತಾರಾಮ ಶೆಟ್ಟರಂಥ ರೈತರೊಬ್ಬರು ನಡೆಸಿರುವ ಕಾರುಭಾರು ಇದಲ್ಲ ಎಂದು ಯಾರಿಗೂ ಅರ್ಥವಾಗುವಂತಿತ್ತು. ನಮ್ಮ ಅರಣ್ಯ ಅಧಿಕಾರಿಗಳಿಗೆ, ಪಾಪ, ಇದ್ಯಾವುದೂ ಕಾಣಲೇ ಇಲ್ಲ! ಯಾವ ಶಕ್ತಿ ಇದೆಲ್ಲ ಕಾಣದಂತೆ ಅವರ ಕಣ್ಣು ಕಟ್ಟಿತೋ? ಇದನ್ನೆಲ್ಲ ನೋಡದಂತೆ ಅವರನ್ನು ತಡೆಹಿಡಿಯಿತೋ? ಸೀತಾರಾಮ ಶೆಟ್ಟರ ಮೇಲೆ ತಕ್ಷೀರು ಬಿತ್ತೇ ಬಿತ್ತು.&lt;br /&gt;&lt;strong&gt;ವೃಕ್ಷವನು ಕಡಿದವನು ಭಿಕ್ಷೆಯನು ಬೇಡುವನು&lt;/strong&gt;&lt;br /&gt;ಇದೊಂದು ಅರಣ್ಯ ಇಲಾಖೆಯ ನುಡಿಮುತ್ತು. ಎಂ ಎಸ್ ಇ ಜಡ್ ಕಂಪೆನಿ ತನ್ನ ಪೈಪ್ ಲೈನ್ ಕಾಮಗಾರಿಗಾಗಿ ಮರಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದೂ, ಮರಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದೂ ನಾನು ಸಾಕಷ್ಟು ಮೊದಲೇ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ದೆ. ಸಾಕಷ್ಟು ಪತ್ರಗಳನ್ನು ಬರೆದಿದ್ದೆ. ಕಂಪೆನಿ ಕರೆದಿದ್ದ ಟೆಂಡರಿನ ಪ್ರತಿ, ಅದು ಪೈಪುಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿರುವುದರ ದಾಖಲೆ ಇದೆಲ್ಲವನ್ನೂ ಅವರ ಗಮನಕ್ಕೆ ತಂದಿದ್ದೆ. ಇಷ್ಟು ಮಾಡಿದ್ದಕ್ಕೆ ಇಲಾಖೆ ನನ್ನನ್ನು ಅಭಿನಂದಿಸಲು ಮರೆಯಲಿಲ್ಲ. ಆದರೆ ಮಾಡಬೇಕಾದ ಕೆಲಸ ಮಾತ್ರ ಮಾಡಲಿಲ್ಲ. ದೇಶದ ದುರದೃಷ್ಟ, ಅಧಿಕಾರಿಗಳಿಗೆ ಮರಗಳ ರಕ್ಷಣೆಗಿಂತ ಇಲಾಖೆಯ ಪ್ರತಿಷ್ಠೆಯ ರಕ್ಷಣೆ ಹೆಚ್ಚು ಮುಖ್ಯವಾಯಿತು. ಹೀಗಾಗಿ ಬೊಳ್ಳಾಜೆಯ ಹಲವು ಮರಗಳು ಅಕಾಲ ಮರಣಕ್ಕೀಡಾದವು. ಅರಣ್ಯ ಅಧಿಕಾರಿಗಳ ಪ್ರತಿಷ್ಠಾಪೂಜಕ ನಿಲುವೇ ಈ ಮರಗಳ ಸಾವಿಗೆ ನೇರ ಕಾರಣ ಹೊರತು ಬೇರೇನೂ ಅಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಭಿಕ್ಷೆ ಬೇಡಬೇಕಾದವರು ಯಾರು ಎಂದು ಅವರೇ ತೀರ್ಮಾನಿಸಲಿ.ಇನ್ನು ಮುಂದೆ ಕಂಪೆನಿ ನಾಶ ಮಾಡಲಿರುವ ಮರಗಳನ್ನಾದರೂ ಉಳಿಸಲು ಕ್ರಮ ಕೈಗೊಂಡು ತಮ್ಮ ನುಡಿಮುತ್ತಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲಿ&lt;br /&gt;&lt;strong&gt;ಸಣ್ಣ ನೀರಾವರಿ ವಿಭಾಗ ಎಂಬ ಚಂಡಿ ಕಂಬಳಿ&lt;/strong&gt;&lt;br /&gt;ಅರಣ್ಯ ಇಲಾಖೆಯ ಕತೆ ಹೀಗಾದರೆ ಸಣ್ಣ ನೀರಾವರಿಯದು ಇನ್ನೊಂದೇ ಕತೆ. ಪೈಪ್ ಲೈನ್ ಕಾಮಗಾರಿಯ ಕುರಿತಂತೆ ಬಹು ಮುಖ್ಯ ಜವಾಬ್ದಾರಿ ಇರುವುದು ಇದೇ ಇಲಾಖೆಗೆ. ಏಕೆಂದರೆ ಸರಕಾರಿ ಆದೇಶ ಸ್ಪಷ್ಟವಾಗಿ ಹೇಳುತ್ತದೆ: "ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು"&lt;br /&gt;ನಾನು ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಅಭಿಯಂತರರಿಗೆ ("ಅಭಿಯಂತರ" ಎಂದು ಬರೆಯುವಾಗೆಲ್ಲ ನನಗೆ "ಬೆಂತರ" ಶಬ್ದ ನೆನಪಾಗುತ್ತದೆ. ಬೆಂತರ ಎಂದರೆ ಭೂತ. ನಿಜವಾಗಿ ಅಭಿಯಂತ ಎಂದಿರಬೇಕಾದ್ದನ್ನು ನಮ್ಮ ಅಧಿಕಾರಿಗಳು ಅಭಿಯಂತರ ಮಾಡಿಕೊಂಡಿದ್ದಾರೆ! ನನ್ನ ಅಭ್ಯಂತರ ಇಲ್ಲ ಅನ್ನಿ.) ಮಾಹಿತಿ ಹಕ್ಕಿನಲ್ಲಿ ಅರ್ಜಿ ಕೊಟ್ಟೆ: "ಸರಕಾರಿ ಆದೇಶ ಹೀಗೆ ಹೇಳುತ್ತಿದೆ; ನೀವು ಎಂ ಎಸ್ ಇ ಜಡ್ ನೊಂದಿಗೆ ಏನಾದರೂ ಒಪ್ಪಂದ ಮಾಡಿಕೊಂಡಿದ್ದೀರಾ? ಮುಚ್ಚಳಿಕೆ ಬರೆಸಿಕೊಂಡಿದ್ದೀರಾ? ಏಕೆಂದರೆ ಕಾಮಗಾರಿ ಪ್ರಾರಂಭವಾಗಿಬಿಟ್ಟಿದೆ" ಅಲ್ಲಿಂದ ಉತ್ತರ ಬಂತು: "... ಮಂಗಳೂರು ಎಸ್ ಇ ಜಡ್ ಕಂಪೆನಿಯೊಂದಿಗೆ ಈ ವಿಭಾಗದಿಂದ ಯಾವುದೇ ಕರಾರನ್ನು ಕೈಗೊಂಡಿರುವುದಿಲ್ಲ. ಹಾಗೂ ಇದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬಾರದಿರುವ ಕಾರಣ ಈ ವಿಷಯದಲ್ಲಿ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ"&lt;br /&gt;ನಿಮ್ಮ ಹೆಚ್ಚಿನ ಪತ್ರಗಳಿಗೆ ಇಲಾಖೆಯಿಂದ ಇಂಥ ಉತ್ತರ ಬರದಿದ್ದರೆ ಅದು ಸರಕಾರಿ ಇಲಾಖೆಯೇ ಅಲ್ಲ! "ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನೀವು ಅಲ್ಲಿ ಹೋಗಿ, ಇಲ್ಲಿ ಕೇಳಿ" ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿಗಳೇ ನಮ್ಮ ಎಲ್ಲ ಸರಕಾರಿ ಕಚೇರಿಗಳಲ್ಲಿ ತುಂಬಿ ಹೋಗಿದ್ದಾರೆ. ಇದನ್ನು ತಿಳಿದೇ ಮಾಹಿತಿ ಹಕ್ಕು 2005 ಕಾನೂನು "ಅರ್ಜಿಯು ನಿಮಗೆ ಸಂಬಂಧಪಡದೆ ಇದ್ದಲ್ಲಿ ಅದು ಯಾರಿಗೆ ಸಂಬಂಧಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ" ಎಂದು ವಿಧಿಸಿ ಇಂಥ ಅಧಿಕಾರಿಗಳ ಹೆಡೆಮುರಿ ಕಟ್ಟಿದೆ. ಆದರೆ ಹೆಚ್ಚಿನ ಅಧಿಕಾರಿಗಳಿಗೆ, ಅವರು ಯಾವ ಮಟ್ಟದ ಅಧಿಕಾರಿಯೇ ಆಗಿರಲಿ, ಈ ನಿಯಮದ ಅರಿವೇ ಇಲ್ಲ. &lt;br /&gt;ಸಣ್ಣ ನೀರಾವರಿ ವಿಭಾಗಕ್ಕೆ ಸರಕಾರದ ಅದೇಶವನ್ನು ಉದ್ಧರಿಸಿ ಪುನಃ ಬರೆದೆ: "ನಿಮಗೆ ಸಂಬಂಧಪಡದಿದ್ದರೆ ಯಾರಿಗೆ ಸಂಬಂಧ ಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ. ನೀವು ಹಾಗೆ ಮಾಡದಿದ್ದಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಕೊಡುವುದು ನನಗೆ ಅನಿವಾರ್ಯವಾಗುತ್ತದೆ. ನಿಮ್ಮ ಉತ್ತರಕ್ಕಾಗಿ ಇನ್ನೂ ಹತ್ತು ದಿನಗಳು ಕಾಯುತ್ತೇನೆ" ಎಂದು.&lt;br /&gt;ಈ ಲೇಖನ ಬರೆಯುತ್ತಿದ್ದಂತೆ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಎಂಜಿನಿಯರರ ಉತ್ತರ ಬಂದಿದೆ. ಅವರು ನನ್ನ ಅರ್ಜಿಯನ್ನು ಹಾಸನದ ಜಲಮಾಪನ ವಿಭಾಗದ ಕಾರ್ಯಕಾರಿ ಎಂಜಿನಿಯರರಿಗೆ ಕಳಿಸಿಕೊಟ್ಟಿದ್ದಾರೆ. ಜೊತೆಗೆ ನನಗೆ ಹೀಗೆ ಸಲಹೆ ನೀಡಿದ್ದಾರೆ: "... ಈ ಕಛೇರಿಗೆ ವಿಷಯವು ಯಾವ ಕಛೇರಿಗೆ ಸಂಬಂಧಿಸಿದ್ದಾಗಿದೆ ಎಂಬುದು ನಿಖರವಾಗಿ ತಿಳಿದಿರದ ಕಾರಣ ಜಲಸಂಪನ್ಮೂಲ ಇಲಾಖೆಯೊಡನೆ ಸಂಪರ್ಕಿಸುವಂತೆ ಕೋರಿದೆ".&lt;br /&gt;"ನಮಗೆ ಗೊತ್ತಿಲ್ಲ, ನಮ್ಮನ್ನು ಕೇಳಬೇಡಿ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಓ ಅಗೋ ಅವರನ್ನು ಕೇಳಿನೋಡಿ" ಇಂಥ ಉತ್ತರಗಳು ನಮ್ಮ ಅಧಿಕಾರಿಗಳಿಗೆ ರಕ್ತಗತವಾಗಿ ಹೋಗಿರುವುದಕ್ಕೆ ಮತ್ತೊಂದು ಉದಾಹರಣೆ ಇದು. ಗೊತ್ತಿಲ್ಲ ಸರಿ. ತಿಳಿದುಕೊಳ್ಳಲು ಸಾಧ್ಯವಿಲ್ಲವೆ? ಮಂಗಳೂರಿನ ಕಾರ್ಯಕಾರಿ ಎಂಜಿನಿಯರರ ಕಛೇರಿಯಲ್ಲಿ ಫೋನ್ ಸೌಲಭ್ಯ ಇಲ್ಲವೆ? (ಈಗಂತೂ ಸರಕಾರವೇ ತನ್ನ ಹಲವು ಅಧಿಕಾರಿಗಳಿಗೆ ಮೊಬೈಲ್ ಫೋನ್ ಸೌಲಭ್ಯ ಒದಗಿಸಿರುವುದಾಗಿ ಕೇಳಿದ್ದೇನೆ). ತಮ್ಮದೇ ಇಲಾಖೆಯಲ್ಲಿ ಯಾರನ್ನು ವಿಚಾರಿಸಿದರೆ ಈ ವಿಷಯ ತಿಳಿಯಬಹುದು ಎಂಬುದೂ ಅವರಿಗೆ ಗೊತ್ತಿಲ್ಲವೆ? ಕೆಲಸ ಮಾಡದೆ ಇರುವುದಕ್ಕೆ ಕಾರಣ ಹುಡುಕುವ ವಿಷಯದಲ್ಲಿ ಗೌರವ ಡಾಕ್ಟರೇಟ್ ಇದ್ದರೆ ಅದನ್ನು ಮೊದಾಲು ಇಂಥವರಿಗೆ ಕೊಡಬಹುದೆಂದು ಕಾಣುತ್ತದೆ.&lt;br /&gt;ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ನನಗೆ ಸಲಹೆ ಕೊಡುತ್ತಿದ್ದಾರಷ್ಟೆ? ಯಾವ ಜಲಸಂಪನ್ಮೂಲ ಇಲಾಖೆ? ಅದರ ವಿಳಾಸ ಏನು? ಸಂಪರ್ಕಿಸಬೇಕಾದ ಅಧಿಕಾರಿ ಯಾರು? "ಜಲ ಸಂಪನ್ಮೂಲ ಇಲಾಖೆ" ಎಂದು ವಿಳಾಸ ಬರೆದು ಅಂಚೆಗೆ ಹಾಕಿದರೆ ಅಂಚೆಯವರು ಅದನ್ನು ಯಾರಿಗೆ ತಲುಪಿಸಬೇಕು? ಇಷ್ಟಕ್ಕೂ ಅವರು ಹೇಳುತ್ತಿರುವ ಜಲಸಂಪನ್ಮೂಲ ಇಲಾಖೆಯನ್ನು ಅವರೇ ಸಂಪರ್ಕಿಸಿ ನನಗೆ ಮಾಹಿತಿ ಯಾಕೆ ಕೊಡಬಾರದು?&lt;br /&gt;ಅದಿರಲಿ. ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸಬೇಕೆಂಬ ವಿಷಯ ನನಗೆ ಮೊದಲೇ ಗೊತ್ತಿತ್ತು. ಕಳೆದ ಜೂನ್ ತಿಂಗಳಿನಲ್ಲಿಯೇ, ಈ ವಿಷಯದಲ್ಲಿ ಮಾಹಿತಿ ಕೋರಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಿಗೆ ಅರ್ಜಿ ಹಾಕಿದ್ದೆ. ಅವರ ಪರವಾಗಿ ಬೇರೊಬ್ಬರು ಅಧಿಕಾರಿ ಹೀಗೆ ಉತ್ತರ ಬರೆದರು: ".......ತಾವು ಅಪೇಕ್ಷಿಸಿರುವ.... ಮಾಹಿತಿಯನ್ನು ಮಂಗಳೂರು ವಿಶೇಷ ಅರ್ಥಿಕ ವಲಯ ಸಂಸ್ಥೆಯಿಂದಲೇ ನೇರವಾಗಿ ಪಡೆದುಕೊಳ್ಳಬಹುದೆಂದು ಈ ಮೂಲಕ ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ". ಇವರು ಕರ್ನಾಟಕ ಸರಕಾರದ ಇಲಾಖಾ ಕಾರ್ಯದರ್ಶಿ. ಬಹುಶಃ ಐ.ಎ.ಎಸ್. ಮಾಡಿರುವವರು. ಇವರಿಗೆ ಮಾಹಿತಿ ಹಕ್ಕಿನ ಪಾಠ ನನ್ನಂಥವರು ಮಾಡಬೇಕಾಗಿದೆ. ಏನು ಮಾಡುವುದು?&lt;br /&gt;"ಸಾರ್ವಜನಿಕ ಸೇವಕ"ರಾದ ಈ ಆಧುನಿಕ ಮಹಾರಾಜರುಗಳೊಂದಿಗೆ ವ್ಯವಹರಿಸುವುದು ಕಷ್ಟ, ಕಡುಕಷ್ಟ.&lt;br /&gt;&lt;strong&gt;ಸೆರೆ ಬಿಟ್ಟಲ್ಲಿ ಉಳಿ ಇಳಿಸುವ ಚಾಣಕ್ಯ: ಎಂ ಎಸ್ ಇ ಜಡ್ ಕಂಪೆನಿ&lt;/strong&gt;&lt;br /&gt;ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ ನೀರೆತ್ತಲು ಸರ್ಕಾರ ಕಂಪೆನಿಗೆ ಅನುಮತಿ ನೀಡಿದ್ದು 2007ರಲ್ಲಿ. &lt;strong&gt;ಆಗ ಕಂಪೆನಿ ನಾಲ್ಕು ಸಾವಿರ ಎಕ್ರೆ ಜಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಯೋಜನೆ ಇತ್ತು. &lt;/strong&gt;ಇದೀಗ ಪರಿಸ್ಥಿತಿ ಬದಲಾಗಿದೆ. ಸರಕಾರ 1998 ಎಕ್ರೆ ಜಮೀನನ್ನು ಡಿನೋಟಿಫೈ ಮಾಡಿದೆ. ಹೀಗಾಗಿ &lt;strong&gt;ಈಗ ಎರಡುಸಾವಿರ ಚಿಲ್ಲರೆ ಎಕ್ರೆಯಲ್ಲಿ ಮಾತ್ರ ಕಂಪೆನಿಯ ಉದ್ಯಮಗಳು ಸ್ಥಾಪನೆಗೊಳ್ಳಬೇಕು&lt;/strong&gt;. ಜಮೀನು ನಾಲ್ಕು ಸಾವಿರ ಎಕ್ರೆ ಎಂದಿದ್ದ ಕಾಲದಲ್ಲಿ ಕಂಪೆನಿ ತನ್ನ ನೀರಿನ ವ್ಯವಸ್ಥೆಯ ಚಿತ್ರಣವನ್ನು ಹೀಗೆ ನೀಡಿತ್ತು: &lt;br /&gt;ಒಟ್ಟು ಅಗತ್ಯ: 45 ಎಂಜಿಡಿ; &lt;br /&gt;ಪೂರೈಕೆ: &lt;br /&gt;ಮಂಗಳೂರು ಕೊಳಚೆ ನೀರು ಶುದ್ಧೀಕರಣದಿಂದ 18 ಎಂಜಿಡಿ, &lt;br /&gt;ಮಳೆನೀರು ಸಂಗ್ರಹದಿಂದ 12 ಎಂಜಿಡಿ &lt;br /&gt;ನೇತ್ರಾವತಿ, ಗುರುಪುರ ನದಿಗಳಿಂದ 15 ಎಂಜಿಡಿ. &lt;br /&gt;ಬದಲಾದ ಸನ್ನಿವೇಶದಲ್ಲಿ ಇದರ ಅರ್ಧ ನೀರು ಹೇಗೂ ಸಾಕಷ್ಟೆ. ಎಂದರೆ 22.5 ಎಂಜಿಡಿ. ಇಷ್ಟು ನೀರನ್ನು ಕೊಳಚೆನೀರು ಶುದ್ಧೀಕರಣದಿಂದ ಮತ್ತು ಮಳೆನೀರು ಸಂಗ್ರಹದಿಂದ ಧಾರಾಳವಾಗಿ ಒದಗಿಸಿಕೊಳ್ಳಬಹುದು. ಹಾಗಾಗಿ ನಿಜವಾಗಿ ನೇತ್ರಾವತಿಯಿಂದ ನೀರೆತ್ತುವ ಅಗತ್ಯವೇ ಕಂಪೆನಿಗೆ ಇಲ್ಲ. ಹೀಗಿದ್ದರೂ ಕಂಪೆನಿ ತನ್ನ ಕೈಗಾರಿಕಾ ನೆಲೆಯಿಂದ ಸುಮಾರು 35 ಕಿ.ಮೀ. ದೂರಕ್ಕೆ 1400 ಮಿ.ಮೀ. ವ್ಯಾಸದ ಪೈಪ್ ಲೈನ್ ಅಳವಡಿಸುವ ಕೋಟಿಗಟ್ಟಲೆ ರೂಪಾಯಿ ಕಾಮಗಾರಿಯನ್ನು ಪ್ರಾರಂಭಿಸಿಬಿಟ್ಟಿದೆ. ಈ ವೃಥಾ ಖರ್ಚಿನ ಕೆಲಸವನ್ನು ಕಂಪೆನಿ ಯಾಕಾದರೂ ಕೈಗೊಂಡಿರಬಹುದು?&lt;br /&gt;ಕಾರಣಗಳನ್ನು ಊಹಿಸಲು ಸಾಧ್ಯವಿದೆ. ನಮ್ಮ ನೇತ್ರಾವತಿ ನದಿಯ ನೀರು - ಗಾದೆಯೇ ಇದೆಯಲ್ಲ, ಹೊಳೆನೀರಿಗೆ ದೊಣೆ ನಾಯಕನ ಅಪ್ಪಣೆಯೆ? ಅಂತ - ಅಕ್ಷರಶಃ ಹೇಳುವವರು ಕೇಳುವವರೇ ಇಲ್ಲದ ವಸ್ತುವಾಗಿಬಿಟ್ಟಿದೆ. ಸಾಪೇಕ್ಷವಾಗಿ ಉತ್ತಮ ಗುಣಮಟ್ಟದ್ದು ಎಂದೇ ಹೇಳಬಹುದಾದ ನೇತ್ರಾವತಿ ನೀರಿನ ವಿಷಯದಲ್ಲಿ ಸರಕಾರ "ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ" ಎಂಬಂತೆ ನಡೆದುಕೊಳ್ಳುತ್ತಿರುವುದು ಕಂಪೆನಿಯ ಪಾಲಿಗೆ ದೊಡ್ಡ ವರದಾನವಾಗಿದೆ. ಒಂದು ಸಲ ಹೇಗಾದರೂ ಮಾಡಿ ನದಿಯಿಂದ ಪೈಪ್ ಲೈನಿಗೆ ನೀರು ಹತ್ತಿಸಿದರಾಯಿತು; ನಂತರ ನೇತ್ರಾವತಿಯನ್ನು ಮುಡಿ ಹಿಡಿದು ತನ್ನ ಅರಮನೆಗೆ ಎಳೆದುಕೊಂಡು ಹೋಗಬಹುದು, ರಕ್ಷಣೆಗೆ ಬರುವವರು ಯಾರೂ ಇಲ್ಲ ಎಂದು ಕಂಪೆನಿಗೆ ಗೊತ್ತಿದೆ. ನಿರಂತರವಾಗಿ ಧಂಡಿಯಾಗಿ ಉತ್ತಮ ಗುಣಮಟ್ಟದ ನೀರು ಅತ್ಯಂತ ಕಡಿಮೆ ದರಕ್ಕೆ ಸಿಗುವುದಾದರೆ ಯಾರಿಗೆ ಬೇಡ? ಆಫೀಸರುಗಳ ಮನೆಯಲ್ಲಿ ನಾಲ್ಕು ನಾಲ್ಕು ಬಚ್ಚಲು ಮನೆಗಳನ್ನು ಕಟ್ಟಿಸಬಹುದು, ಒಂದೊಂದರಲ್ಲೂ ಟಬ್ ಅಳವಡಿಸಬಹುದು, ಕ್ಯಾಂಪಸ್ಸಿಗೆ ಬಂದವರ ಕಣ್ಣು ತಂಪಾಗುವಂತೆ ಅಲ್ಲಲ್ಲಿ ಸರೋವರಗಳನ್ನೇ ನಿರ್ಮಿಸಬಹುದು, ನಿರಂತರ ನೀರು ಚಿಮ್ಮುವ ಕಾರಂಜಿಗಳನ್ನು ನಿರ್ಮಿಸಿ, ರಾತ್ರಿವೇಳೆ ಅವುಗಳಿಗೆ ದೀಪಾಲಂಕಾರ ಮಾಡಬಹುದು - ಅಲ್ಲವೆ?&lt;br /&gt;ಯಾಕೆ ಹೇಳುತ್ತಿದ್ದೇನೆಂದರೆ, ಒಮ್ಮೆ ನೀರು ಹೋಗಲು ಶುರುವಾಯಿತೆಂದರೆ ಕತ್ತಿ, ಕುಂಬಳಕಾಯಿ ಎರಡನ್ನೂ ಕಂಪೆನಿಯ ಕೈಯಲ್ಲೇ ಕೊಟ್ಟುಬಿಡುತ್ತದೆ ಸರಕಾರ. ಕಂಪೆನಿ ಎತ್ತುವ ನೀರಿಗೆ ಮೀಟರ್ ಹಾಕುವುದು ಸರಕಾರವಲ್ಲ, ಕಂಪೆನಿಯೇ! ಎಲ್ಲಾದರೂ ಕೇಳಿದ್ದೀರಾ ಇಂಥ ಅವಿವೇಕವನ್ನು? ಅಂಗಡಿಗೆ ಹೋದರೆ ತಕ್ಕಡಿ ವ್ಯಾಪಾರಸ್ಥನದು; ಕರೆಂಟಿನ ಮೀಟರ್ ಮೆಸ್ಕಾಮಿನದು; ದೂರವಾಣಿ ಮೀಟರ್ ಇಲಾಖೆಯದು. ಕರ್ನಾಟಕ ಸರ್ಕಾರ ಮಾತ್ರ ನೀರಿನ ಮೀಟರನ್ನು ಹಾಕಲು, ನೋಡಿಕೊಳ್ಳಲು ಕಂಪೆನಿಗೇ ವಹಿಸಿಬಿಡುತ್ತದೆ. ನಂತರ ಕಂಪೆನಿ ಕೊಟ್ಟದ್ದೇ ಲೆಕ್ಕ, ಕಟ್ಟಿದ್ದೇ ದುಡ್ಡು!&lt;br /&gt;"ಸರಕಾರ ಇಂತಿಷ್ಟೇ ನೀರು ಎತ್ತಬೇಕೆಂದು ವಿಧಿಸಿದೆ, ಅದಕ್ಕಿಂತ ಜಾಸ್ತಿ ನೀರು ನಾವು ಎತ್ತುವಂತೆಯೇ ಇಲ್ಲ, ನೀರಿನ ಮೀಟರನ್ನು ಸರಕಾರಿ ಅಧಿಕಾರಿಗಳು ಆಗಿಂದಾಗ್ಗೆ ತನಿಖೆ ಮಾಡುತ್ತಾರೆ, ನೀವು ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ" ಎಂದು ಕಂಪೆನಿ ನನ್ನ ಮಾತನ್ನು ತಳ್ಳಿಹಾಕಬಹುದು. ಹಾಗಿದ್ದರೆ ಎಷ್ಟು ನೀರೆತ್ತಲು ಸರಕಾರ ಅನುಮತಿ ಕೊಟ್ಟಿದೆಯೋ ಅಷ್ಟೇ ಸಾಮರ್ಥ್ಯದ ಪೈಪ್ ಲೈನ್ ಹಾಕಬಹುದಲ್ಲ? ನೇತ್ರಾವತಿಯಿಂದ ಅನುಮತಿ ಇರುವುದು ನಿಜವಾಗಿ 12.5 ಎಂಜಿಡಿ ಮಾತ್ರ. ಹಾಗಿರುವಾಗ ಪೈಪ್ ಲೈನ್ ಸಹ ಅಷ್ಟೇ ಸಾಮರ್ಥ್ಯದ್ದಿರಬೇಕಲ್ಲವೆ? ಕಂಪೆನಿ ಹಾಕುತ್ತಿರುವ ಪೈಪ್ ಲೈನ್ ಸಾಮರ್ಥ್ಯ ಎಷ್ಟು?&lt;br /&gt;ಈ ಪ್ರಶ್ನೆ ನಿಜವಾಗಿ ನನ್ನ ತಲೆಗೆ ಹೋಗಿರಲಿಲ್ಲ. ಬೇರೆ ಯಾವುದೋ ಒಂದು ದಾಖಲೆಗಾಗಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದೆ. ಅವರು ಆ ದಾಖಲೆಯನ್ನು ಕೊಡುವಾಗ ಜೊತೆಗೆ ಇನ್ನೊಂದು ದಾಖಲೆಯನ್ನು ಲಗತ್ತಿಸಿದ್ದರು. ಆ ಇನ್ನೊಂದು ದಾಖಲೆ ಇಲಾಖೆ ಕಂಪೆನಿಗೆ ಮೂಲರಪಟ್ನದಲ್ಲಿ ಪೈಪ್ ಲೈನನ್ನು ಗುರುಪುರ ನದಿ ದಾಟಿಸಲು ಕೊಟ್ಟ ಅನುಮತಿಯಾಗಿತ್ತು. ಅದರಲ್ಲಿ ಸ್ಪಷ್ಟವಾಗಿ ಹೇಳಿತ್ತು: ಕಂಪೆನಿಗೆ 30 ಎಂಜಿಡಿ ಸಾಮರ್ಥ್ಯದ ಪೈಪ್ ಲೈನ್ ಅಳವಡಿಸಲು ಅನುಮತಿ ನೀಡಲಾಗಿದೆ ಎಂದು!&lt;br /&gt;ನಾನು ಕೂಡಲೇ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕೇಳಿದೆ: ಇದು ಹೇಗೆ ಸಾಧ್ಯ? ಎಂದು. ಅವರ ಉತ್ತರ ಎಂದಿನ ಸರಕಾರಿ ಶೈಲಿಯಲ್ಲಿ: ತಾಂತ್ರಿಕ ಇಲಾಖೆಯ ಶಿಫಾರಸಿನಂತೆ ನಾವು ಮಾಡಿದ್ದೇವೆ (ಎಂದರೆ "ನಾವು ಜವಾಬ್ದಾರರಲ್ಲ"). ತಾಂತ್ರಿಕ ಇಲಾಖೆಗೆ ಬರೆದೆ. ಸುಮಾರು ಒಂದು ತಿಂಗಳಾದರೂ ಉತ್ತರ ಕೊಡಲಿಲ್ಲ. ಮೊನ್ನೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದ್ದೇನೆ. ಏನು ಹೇಳುತ್ತಾರೋ ನೋಡೋಣ.&lt;br /&gt;ಅದಿರಲಿ, ಕಂಪೆನಿ ಎಷ್ಟು ಪ್ರಮಾಣದ ನೀರಿಗೆ ಹೊಂಚು ಹಾಕುತ್ತಿದೆ ಎಂಬುದಂತೂ ಇದರಿಂದ ಸ್ಪಷ್ಟ ತಾನೆ? ಮಂಗಳೂರಿನ ಜನರಿಗೆ ಕುಡಿಯುವ ನೀರು ಕೊಡುವ ಮಹಾ ನಗರ ಪಾಲಿಕೆ ಈ ವಿಷಯದಲ್ಲಿ ಮೊದಲು ಆಸಕ್ತಿ ತೆಗೆದುಕೊಳ್ಳಬೇಕಿತ್ತು. ಎಂ ಎಸ್ ಇ ಜಡ್ ಕಂಪೆನಿಯ ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಆದರೆ, ಅದು ಹೊಸದೊಂದು ಅಣೆಕಟ್ಟು ನಿರ್ಮಿಸಿ ಮಂಗಳೂರಿಗರಿಗೆ ನೀರು ಕೊಡುವ ಉತ್ಸಾಹದಲ್ಲಿ, ತನ್ನ ನೀರಿನ ಮೂಲಕ್ಕೇ ಕನ್ನ ಬೀಳುತ್ತಿರುವುದನ್ನು ಕಾಣುತ್ತಿಲ್ಲ. ಈಗಲಾದರೂ ಏನಾದರೋ ಮಾಡುತ್ತದೋ ನೋಡೋಣ.&lt;br /&gt;ಮಂಗಳೂರಿನ, ನೇತ್ರಾವತಿ ನೀರು ಕುಡಿಯುತ್ತಿರವ ಜನ ಈ ವಿದ್ಯಮಾನಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆಂದು ಆಶಿಸುತ್ತೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-7708114251339016391?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/7708114251339016391/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=7708114251339016391&amp;isPopup=true' title='18 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/7708114251339016391'/><link rel='self' type='application/atom+xml' href='http://www.blogger.com/feeds/1105138094084974837/posts/default/7708114251339016391'/><link rel='alternate' type='text/html' href='http://sundararao.blogspot.com/2011/08/blog-post.html' title='ನೇತ್ರಾವತಿಯ ಶ್ರೀಮುಡಿಗೆ ಕೈಯಿಕ್ಕಿರುವ ಎಂ ಎಸ್ ಇ ಜಡ್:ರಕ್ಷಿಸುವ ಪ್ರವೀಣರೆಲ್ಲಿದ್ದಾರೆ?'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-HhqR3b-xzBA/TjvaLg14iYI/AAAAAAAAAEI/wNFD_CYDfFo/s72-c/IMG_0146.JPG' height='72' width='72'/><thr:total>18</thr:total></entry><entry><id>tag:blogger.com,1999:blog-1105138094084974837.post-5647184679224444710</id><published>2011-06-11T20:34:00.000-07:00</published><updated>2011-06-12T04:13:41.363-07:00</updated><title type='text'>ನೇತ್ರಾವತಿ ತಿರುವು ಯೋಜನೆ: ಎತ್ತಿನಹೊಳೆಯಿಂದ ಪ್ರಾರಂಭ?</title><content type='html'>ಕಳೆದ ವರ್ಷದ (2010) ಕರ್ನಾಟಕ ಸರ್ಕಾರದ ಬಜೆಟ್ಟಿನಲ್ಲಿ ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರನ್ನು ತಿರುಗಿಸುವ ಯೋಜನೆಯ ಪ್ರಸ್ತಾವವಿತ್ತು. ಈವರೆಗೂ ನೇತ್ರಾವತಿಯನ್ನು ತಿರುಗಿಸುವ ಮಾತಾಡುತ್ತಿದ್ದವರು ಈಗ ಎತ್ತಿನಹೊಳೆ ತಿರುಗಿಸುವ ಬಗ್ಗೆ ಮಾತಾಡಲು ಶುರು ಮಾಡಿದ್ದರು. ಬಜೆಟ್ಟಿನಲ್ಲಿ ಹುಡುಕಿ ನೋಡಿದಾಗ ಅಲ್ಲಿ ಹೀಗಿತ್ತು:&lt;br /&gt;"107) ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. ಎ. ಮೂಲಕ ಈಗಾಗಲೇ ಪೂರ್ಣಗೊಂಡಿದೆ. ಪರಿಸರಕ್ಕೆ ಹಾನಿಯಾಗದಂತೆ ಹಂತ ಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಇದಕ್ಕಾಗಿ ಎತ್ತಿನಹೊಳೆ ನಾಲೆಯಿಂದ ನೀರನ್ನು ಪಡೆಯಲಾಗುವುದು. ಈ ಯೋಜನೆಯನ್ನು ಪರಿಣಿತ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡಲು ಈ ವರ್ಷದಲ್ಲಿ ಪ್ರಾರಂಭಿಕವಾಗಿ ಇನ್ನೂರು ಕೋಟಿ ರೂ.ಗಳನ್ನು ನೀಡಲಾಗಿದೆ."&lt;br /&gt;&lt;br /&gt;ಈ ಯೋಜನೆಯ ಮಾಹಿತಿ ಕೇಳಿ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮಕ್ಕೆ ಅರ್ಜಿ ಹಾಕಿದೆ.   ಬೆಂಗಳೂರಿನವರು ಅದನ್ನು ಚಿತ್ರದುರ್ಗದ ಕನೀನಿನಿಗೆ ಕಳಿಸಿದರು. ಅಂತೂ ನನಗೆ ಶಿರಾದ ಕನೀನಿನಿಯವರಿಂದ ಮಾಹಿತಿ ಶುಲ್ಕ ಕಳಿಸಲು ಪತ್ರ ಬಂತು. ಅಲ್ಲಿಂದ ಬಂದ ಮಾಹಿತಿಯಲ್ಲಿ ವಿವರಣೆಯೊಂದಿಗೆ ಕೋಷ್ಟಕಗಳು, ನಕ್ಷೆಗಳು ಎಲ್ಲವೂ ಇವೆ. ಈ ಸಾಧ್ಯತಾ ವರದಿಯನ್ನು ತಯಾರಿಸಿದವರು ಬೆಂಗಳೂರಿನ ಇ ಐ ಟೆಕ್ನಾಲಜೀಸ್ ಪ್ರೈವೇಟ್ ಲಿ. ಎಂಬ ಸಂಸ್ಥೆ. ಮುಂದೆ ವರದಿಯ ಪ್ರಸ್ತುತವಾದ ಭಾಗವನ್ನು ಮಾತ್ರ ಅನುವಾದಿಸಿ  ಕೊಟ್ಟಿದ್ದೇನೆ: &lt;br /&gt;&lt;br /&gt;&lt;em&gt;&lt;strong&gt;ಪಶ್ಚಿಮದ ಸಕಲೇಶಪುರದಿಂದ ಪೂರ್ವದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೆರೆನೀರನ್ನು ತಿರುಗಿಸುವ ಯೋಜನೆ&lt;/strong&gt;&lt;/em&gt;&lt;br /&gt;&lt;br /&gt;&lt;em&gt;ಕರ್ನಾಟಕವು ವಿಸ್ತಾರದಲ್ಲಿ ದೇಶದ ಎಂಟನೇ ರಾಜ್ಯ. ಅದರ ವಿಸ್ತಾರ 1,91,976 ಚ.ಕಿ.ಮೀ.ಗಳು. (ಒಂದು ಚದರ ಕಿಲೋ ಮೀಟರ್ ಎಂದರೆ ಸುಮಾರು 247 ಎಕ್ರೆ-ಅನು.) 2001ರ ಜನಗಣತಿಯಂತೆ ರಾಜ್ಯದ ಜನಸಂಖ್ಯೆ ಐದು ಕೋಟಿ ಇಪ್ಪತ್ತೆಂಟು ಲಕ್ಷ. (2011ರ ಜನಗಣತಿಯಂತೆ ಇದು ಆರು ಕೋಟಿ ಹನ್ನೊಂದು ಲಕ್ಷ-ಅನು.) ರಾಜ್ಯದ ಮುಖ್ಯ ನದಿಗಳು ವರ್ಷಪೂರ್ತಿ ಹರಿಯುವ ಕೃಷ್ಣಾ, ತುಂಗಾ, ಭದ್ರಾ, ಕಾವೇರಿ ಹಾಗೂ ಹದಿಮೂರು ಪಶ್ಚಿಮ ವಾಹಿನಿ ನದಿಗಳು. (ಪಶ್ಚಿಮವಾಹಿನಿಗಳೆಂದರೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಇಳಿದು, ಅರಬೀ ಸಮುದ್ರ ಸೇರುವ ನದಿಗಳು. ಉದಾ: ನೇತ್ರಾವತಿ, ಶರಾವತಿ, ಅಘನಾಶಿನಿ ಮುಂತಾದವು-ಅನು.) ರಾಜ್ಯದ ಪೂರ್ವ ಹಾಗೂ ಮಧ್ಯಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ  ಅತಿ ಕಡಿಮೆ ಎಂದರೆ ವರ್ಷಕ್ಕೆ  400 ಮಿ.ಮೀ.ಗಳಾದರೆ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇದು ವರ್ಷಕ್ಕೆ 6500 ಮಿ.ಮೀ.ವರೆಗೂ ಇದೆ. ಈ ಮಳೆಯ ಪ್ರಮಾಣ ಸಹ ನಂಬಿಕೆಗೆ ಅರ್ಹವಾದದ್ದಲ್ಲ. ಅನೇಕ ಜಿಲ್ಲೆಗಳು, ತಾಲೂಕುಗಳು ಕೇವಲ ಮಳೆನೆರಳಿನ ಪ್ರದೇಶಗಳಾಗಿವೆ. ಇಂಥ ಕಡೆ ನೀರಿನ ತೀವ್ರ ಅಭಾವವಿದೆ. ಈ ಭಾಗಗಳಿಗೆ, ಕೃಷಿಗೆ ಬಿಡಿ, ಕುಡಿಯಲು ನೀರಿನ ವ್ಯವಸ್ಥೆ ಮಾಡುವುದೂ ಒಂದು ದೊಡ್ಡ ಸವಾಲೇ ಸರಿ.&lt;br /&gt;&lt;br /&gt;ಕೈಗಾರಿಕೀಕರಣ ಮತ್ತು ನಗರೀಕರಣಗಳು ನೀರಿನ ಬೇಡಿಕೆಯ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಮಾಡುತ್ತವೆ. ಇದರಿಂದಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಕೇವಲ ನದಿಗಳ ನೀರನ್ನು ಅವಲಂಬಿಸಿಕೊಂಡು ಬದುಕುವುದು ಈ ಭಾಗದ ಜನರಿಗೆ ಕ್ರಮೇಣ ಅಸಾಧ್ಯವಾಯಿತು, ಅವರು ಅನಿವಾರ್ಯವಾಗಿ ಅಂತರ್ಜಲದ ಬಳಕೆಯ ಕಡೆಗೆ  ತಿರುಗಿದರು. ಅಗಾಧಪ್ರಮಾಣದಲ್ಲಿ ಅಂತರ್ಜಲಕ್ಕೆ ಕನ್ನ ಹಾಕಿದ್ದರಿಂದಾಗಿ ಹೆಚ್ಚಿನ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯಿತು. ನೀರಿನ ಗುಣಮಟ್ಟವೂ ಸಹ ಕಡಿಮೆಯಾಯಿತು.&lt;br /&gt;ಈ ದೃಷ್ಟಿಯಿಂದ, ದಕ್ಷಿಣ ಕರ್ನಾಟಕದಲ್ಲಿ ಅತ್ಯಂತ ಹಾನಿಗೊಳಗಾದ ಪ್ರದೇಶಗಳೆಂದರೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು. ಕರ್ನಾಟಕ ಸರ್ಕಾರವು ಈ ಎರಡು ಜಿಲ್ಲೆಗಳ ನೀರಿನ ಅಗತ್ಯವನ್ನು ಪೂರೈಸಲು ಸೂಕ್ತವೂ, ಸುಸ್ಥಿರವೂ ಆದ ನೀರಿನ ಮೂಲವನ್ನು ಗುರುತಿಸುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ನಿರ್ದೇಶನ ನೀಡಿತು.&lt;br /&gt;&lt;br /&gt;ಕರ್ನಾಟಕ ನೀರಾವರಿ ನಿಗಮವು ಇ ಐ ಟೆಕ್ನಾಲಜೀಸ್ ಲಿ., ಬೆಂಗಳೂರು ಇವರಿಗೆ, ಈ ಬಗ್ಗೆ ಒಂದು ಸಾಧ್ಯತಾ ಅಧ್ಯಯನ ಮಾಡಿ, ನೀರಿನ ಮೂಲವನ್ನು ಗುರುತಿಸುವ,  ಯೋಜನೆಗೆ ಒಂದು ಪೂರ್ವಭಾವಿ ಚೌಕಟ್ಟನ್ನು ಒದಗಿಸುವ, ಹೆಚ್ಚಿನ ಅಧ್ಯಯನದ ಖರ್ಚನ್ನು ಅಂದಾಜು ಮಾಡುವ ಮುಂತಾದ ಕೆಲಸಗಳನ್ನು ವಹಿಸಿಕೊಟ್ಟಿತು.&lt;br /&gt;&lt;br /&gt;&lt;strong&gt;1. ಸ್ಥಳ:&lt;/strong&gt;ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಕರ್ನಾಟಕದ ದಕ್ಷಿಣಪೂರ್ವ ಭಾಗದಲ್ಲಿವೆ. ಇವು ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಗಡಿಗಳನ್ನು ಹಂಚಿಕೊಂಡಿವೆ. ಈ ಎರಡೂ ಜಿಲ್ಲೆಗಳು ಕಾವೇರಿ, ಪಾಲಾರ್ ಹಾಗೂ ಪೆನ್ನಾರ್ ನದಿಗಳ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿವೆ. ಈ ಜಿಲ್ಲೆಗಳಿಗೆ ಕಾವೇರಿ ನದಿಯಿಂದ ನೀರು ಪೂರೈಸುವ ಯಾವ ಯೋಜನೆಯೂ ಇಲ್ಲ. ಏಕೆಂದರೆ ಕಾವೇರಿಯ  ನೀರು ನೀರಾವರಿ ಹಾಗೂ ದಿನದಿನವೂ ಬೆಳೆಯುತ್ತಿರುವ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಮೀಸಲಾಗಿದೆ.&lt;br /&gt;ಸಮಸ್ಯೆಯ ಪರಿಹಾರಕ್ಕೆ ಅನೇಕ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿಯೇ ಇರುವ, ನಂಬಲರ್ಹವೂ, ಸುಸ್ಥಿರವೂ ಆದ ನೀರಿನ ಮೂಲವೆಂದರೆ ಪಶ್ಚಿಮ ವಾಹಿನಿ ನದಿಗಳು. ಆದ್ದರಿಂದ ಅಲ್ಲಿಂದ ನೀರನ್ನು ಸಾಗಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ.&lt;br /&gt;&lt;br /&gt;&lt;strong&gt;2. ಪಶ್ಚಿಮ ವಾಹಿನಿ ನದಿಗಳು:&lt;/strong&gt;ಕರ್ನಾಟಕದ ಎಲ್ಲ ನದಿಗಳಿಂದ ದೊರೆಯುವ ವಾರ್ಷಿಕ ನೀರಿನ ಪ್ರಮಾಣ 3440 ಟಿಎಂಸಿ (ಟಿಎಂಸಿ ಎನ್ನುವುದನ್ನು ಯಾವಾಗಲೂ ಟಿಎಂಸಿ ಅಡಿ ಅಥವಾ ಟಿಎಂಸಿ ಮೀಟರುಗಳಲ್ಲಿ ಹೇಳಬೇಕು. ಒಂದು ಟಿಎಂಸಿ ಅಡಿ ಎಂದರೆ ಸಾವಿರ ದಶಲಕ್ಷ ಘನ ಅಡಿ ನೀರು ಎಂದರ್ಥ. ಒಂದು ಘನ ಅಡಿ ಎಂದರೆ 28 ಲೀಟರ್ ನೀರು. ಇಲ್ಲಿ ಟಿಎಂಸಿ ಅಡಿ ಎಂದು ಇಟ್ಟುಕೊಳ್ಳಲಾಗಿದೆ.-ಅನು.) ಈ ಪೈಕಿ ಪಶ್ಚಿಮವಾಹಿನಿ ನದಿಗಳದೇ ಸಿಂಹಪಾಲು: 2000 ಟಿಎಂಸಿ ಅಡಿ. ಕಿರಿದಾದ ಸಮುದ್ರತೀರದಲ್ಲಿ ಈ ನದಿಗಳು ಹರಿಯುವುದರಿಂದ, ಇದರ ಹೆಚ್ಚಿನ ಭಾಗ ಯಾವುದೇ ಉಪಯೋಗವಿಲ್ಲದೆ ಸಮುದ್ರವನ್ನು ಸೇರುತ್ತಿದೆ.&lt;br /&gt;ಪಶ್ಚಿಮ ಘಟ್ಟಗಳ ಎತ್ತರವು ಒಡ್ಡುವ ಸವಾಲಿನಿಂದಾಗಿ, ಈ ನೀರನ್ನು ಉಪಯುಕ್ತವಾಗುವಂತೆ ಬಳಸಿಕೊಳ್ಳುವುದು ತಾಂತ್ರಿಕವಾಗಿಯಾಗಲಿ, ಆರ್ಥಿಕವಾಗಿಯಾಗಲಿ ಸಾಧ್ಯವಲ್ಲ. ಹೀಗಾಗಿ ಇಲ್ಲಿ ಪಶ್ಚಿಮ ಘಟ್ಟಗಳ ಎತ್ತರ ಪ್ರದೇಶದಿಂದ ಕೇವಲ ಶೇ. 0.54 ಭಾಗ ನೀರನ್ನು ಮಾತ್ರ ಪೂರ್ವಕ್ಕೆ ತಿರುಗಿಸಲು ಯೋಜಿಸಲಾಗಿದೆ.&lt;br /&gt;&lt;br /&gt;ಪಶ್ಚಿಮದಿಂದ ಪೂರ್ವಕ್ಕೆ ನೀರನ್ನು ಸಾಗಿಸುವ ಈ ಯೋಜನೆಯು ಅತ್ಯಂತ ವಿಶಿಷ್ವವಾದುದು. ಏಕೆಂದರೆ, ಅತ್ಯಂತ ಕಡಿಮೆ ಅವಧಿಯಲ್ಲಿ, ಬಹು ದೊಡ್ದ ಪ್ರಮಾಣದ ನೀರನ್ನು ಅತಿ ಎತ್ತರಕ್ಕೆ ಪಂಪ್ ಮಾಡುವ ಮೂಲಕ ಅಥವಾ ದೀರ್ಘ ಸುರಂಗಗಳ ಮೂಲಕ ಸಾಗಿಸಲು ಇಲ್ಲಿ ಉದ್ದೇಶಿಸಿದೆ.&lt;br /&gt;&lt;br /&gt;ಈ ಯೋಜನೆಯಿಂದ ನೀರು ಪಡೆಯಲಿರುವ ಪ್ರದೇಶಗಳು ಅತ್ಯಂತ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಕೂಡಲೇ ನೀರಿನ ಸರಬರಾಜಿಗೆ ವ್ಯವಸ್ಥೆ ಮಾಡದಿದ್ದರೆ, ಈ ಪ್ರದೇಶಗಳು ಬರದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇತ್ತ ಪಶ್ಚಿಮ ಘಟ್ಟಗಳು ಅತ್ಯಂತ ಮುಖ್ಯವೂ, ಪರಿಸರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವೂ ಆದ ಪ್ರದೇಶಗಳಾಗಿವೆ. ಅಲ್ಲಿಂದ ಸಂಪೂರ್ಣ ನೀರನ್ನು ತಿರುಗಿಸಿದಲ್ಲಿ ಪರಿಸರದ ಸಮತೋಲನ ತಪ್ಪಬಹುದಾಗಿದೆ. ಪ್ರಸಕ್ತ ಯೋಜನೆಯನ್ನು ಪಶ್ಚಿಮ ಘಟ್ಟಗಳಲ್ಲಿ ದೊರೆಯುವ ನೀರಿನ ಪ್ರಮಾಣದ  ಕೇವಲ ಶೇ.0.54 ರಷ್ಟನ್ನು ಮಾತ್ರ, ಯಾವ ನೆಚ್ಚಬಹುದಾದ ನೀರಿನ ಮೂಲವೂ ಇಲ್ಲದ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಬಳಸಿಕೊಳ್ಳಲು ಅತ್ಯಂತ ಎಚ್ಚರಿಕೆಯಿಂದ ರೂಪಿಸಲಾಗಿದೆ. ಟ್ರಿಬ್ಯುನಲ್ ಹಾಗೂ ಇತರ ಅಡ್ಡಿಗಳಿರುವುದರಿಂದ, ಈ ಪ್ರದೇಶಕ್ಕೆ ಹತ್ತಿರದ ಇತರ ಯಾವುದೇ ನದಿಗಳ ನೀರನ್ನು ತರುವುದು ಸಾಧ್ಯವೇ ಇಲ್ಲ ಎಂಬುದನ್ನು ಗಮನಿಸಬೇಕು. ಇದೂ ಅಲ್ಲದೆ ಈ ಪ್ರದೇಶಗಳ ಅಂತರ್ಜಲ ಮಟ್ಟವು ಸಂಪೂರ್ಣವಾಗಿ ಪಾತಾಳಕ್ಕಿಳಿದಿದೆ.&lt;br /&gt;&lt;br /&gt;ಆದ್ದರಿಂದ ಪಶ್ಚಿಮ ಘಟ್ಟಗಳ ಒಟ್ಟು ಇಳುವರಿಯ ಶೇ.  0.54 ಭಾಗ ನೀರನ್ನು ಬಳಸಿಕೊಳ್ಳುವ ಈ ಯೋಜನೆ, ಕರ್ನಾಟಕ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿದ್ದು, ಇದಕ್ಕೆ ಯಾವುದೇ ಟ್ರಿಬ್ಯುನಲ್ ಇತ್ಯಾದಿ ಅಡ್ಡಿಗಳಿಲ್ಲದ್ದರಿಂದ, ಇದನ್ನು ತಾಂತ್ರಿಕವಾಗಿ ಸಾಧ್ಯವಿರುವ ಯೋಜನೆ ಎಂದು ಪರಿಗಣಿಸಲಾಗಿದೆ.&lt;/em&gt;&lt;br /&gt;&lt;br /&gt;&lt;strong&gt;ಯೋಜನೆಯ ವಿಶ್ಲೇಷಣೆ:&lt;/strong&gt;ಸಾಧ್ಯತಾವರದಿಯ ಕೆಲವು ಅಂಶಗಳನ್ನು ಹೀಗೆ ವಿಶ್ಲೇಷಿಸಬಹುದು:&lt;br /&gt;&lt;br /&gt;&lt;strong&gt;"ಹೀಗಾಗಿ ಕೇವಲ ನದಿಗಳ ನೀರನ್ನು ಅವಲಂಬಿಸಿಕೊಂಡು ಬದುಕುವುದು ಈ ಭಾಗದ ಜನರಿಗೆ ಕ್ರಮೇಣ ಅಸಾಧ್ಯವಾಯಿತು, ಅವರು ಅನಿವಾರ್ಯವಾಗಿ ಅಂತರ್ಜಲದ ಬಳಕೆಯ ಕಡೆಗೆ  ತಿರುಗಿದರು". &lt;/strong&gt;&lt;br /&gt;ಈ ಭಾಗದಲ್ಲಿ ನದಿಗಳೇ ಇಲ್ಲ ಎಂದು ಹೇಳುವಂತಿಲ್ಲ. ಚಿಕ್ಕಬಳ್ಳಾಪುರ ನಂದಿಬೆಟ್ಟಕ್ಕೆ ಹತ್ತಿರದಲ್ಲಿದೆ. ಅಲ್ಲಿ ಹುಟ್ಟುವ ಅರ್ಕಾವತಿ ಚಿಕ್ಕಬಳ್ಳಾಪುರದ  ಮೂಲಕವೇ ಹರಿಯುತ್ತದೆ. ಕೋಲಾರದಲ್ಲಿಯೂ ಪಾಲಾರ್, ಪೆನ್ನಾರ್ ಇತ್ಯಾದಿ ನದಿಗಳಿವೆ. ಆದರೆ, ಈ ಜಿಲ್ಲೆಗಳ ಜನರು ಹಿಂದಿನ ಕಾಲದಿಂದಲೂ ನೀರಿಗಾಗಿ ಮುಖ್ಯವಾಗಿ ಆಶ್ರಯಿಸಿದ್ದು ನದಿಗಳಿಗಿಂತ ಮುಖ್ಯವಾಗಿ ಕೆರೆಗಳನ್ನು. ಕೋಲಾರ ಜಿಲ್ಲೆಯಂತೂ ಕೆರೆಗಳಿಗೆ ಪ್ರಸಿದ್ಧವಾಗಿದೆ. ಹೀಗಿದ್ದೂ ಸಹ ಕೆರೆಗಳ ಸುದ್ದಿಯನ್ನೇ ತೆಗೆಯದೆ, ನೀರಿನ ಸಮಸ್ಯೆಯ ಮೂಲವನ್ನು ಗುರುತಿಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಈ ಜಿಲ್ಲೆಗಳ ಕೆರೆಗಳ ಕಥೆ ಏನಾಗಿದೆ? 1970 ರ ನಂತರದ ದಶಕಗಳಲ್ಲಿ ಬೋರ್ ವೆಲ್ ಗಳ ಸಂಖ್ಯೆ ಕೋಲಾರ ಜಿಲ್ಲೆಯಲ್ಲಂತೂ ಅಗಾಧವಾಗಿ ಹೆಚ್ಚಿದೆ. ಚಿಕ್ಕಬಳ್ಳಾಪುರದಲ್ಲಿಯೂ ಇದೇ ಸ್ಥಿತಿ ಎಂದುಕೊಂಡಿದ್ದೇನೆ. ಕೆರೆಗಳನ್ನೂ, ಅವುಗಳ ನಿರ್ವಹಣಾ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇ ಸಮಸ್ಯೆಗೆ ಕಾರಣವಿರಬಹುದೆ?  ಈ ನಿಟ್ಟಿನಲ್ಲಿ ಅಧ್ಯಯನ ಮಾಡಿದಲ್ಲಿ ಸಮಸ್ಯೆಗೆ ಬೇರೆಯೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು.&lt;br /&gt;&lt;strong&gt;"ಕೈಗಾರಿಕೀಕರಣ ಮತ್ತು ನಗರೀಕರಣಗಳು ನೀರಿನ ಬೇಡಿಕೆಯ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಮಾಡುತ್ತವೆ. ಇದರಿಂದಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ". &lt;/strong&gt;&lt;br /&gt;ವರದಿಯು ನೀರಿನ ಸಮಸ್ಯೆಯ ಮೂಲವನ್ನು ಅತ್ಯಂತ ನಿಖರವಾಗಿ ಗುರುತಿಸಿದೆ. ದುರದೃಷ್ಟವಶಾತ್ ಅದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಲು ಅದು ತಯಾರಿಲ್ಲ. ಕೈಗಾರಿಕೀಕರಣ ಹಾಗೂ ನಗರೀಕರಣಗಳೇ ನೀರಿನ ಸಮಸ್ಯೆಯ ಮೂಲ ಎನ್ನುವುದಾದರೆ, ಒಂದು ಕಡೆ ನೀರನ್ನೂ ಮತ್ತೊಂದು ಕಡೆ ಕೈಗಾರಿಕೀಕರಣ ಹಾಗೂ ನಗರೀಕರಣವನ್ನೂ ಇಟ್ಟು, ಈ ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ. ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗೆ ಸಕಲೇಶಪುರದಲ್ಲಿ ಪರಿಹಾರ ಹುಡುಕುವುದು, ಹುಲಿ ತನ್ನ ಗಾಯಕ್ಕೆ ಮದ್ದು ಮಾಡಿಕೊಂಡ ಹಾಗೆಯೇ.&lt;br /&gt;&lt;strong&gt;ಸಮಸ್ಯೆಯ ಪರಿಹಾರಕ್ಕೆ ಅನೇಕ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ:&lt;/strong&gt;&lt;br /&gt;ಯಾವ ಯಾವ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ ಎಂದು ತಿಳಿಸಲಾಗಿಲ್ಲ. ವರದಿ ತಯಾರಿಸುವಾಗ, ಅಧ್ಯಯನ ಮಾಡಿದ ಎಲ್ಲ  ಸಾಧ್ಯತೆಗಳನ್ನೂ ನಮೂದಿಸಿ ಅವುಗಳ ಪೈಕಿ ಯಾವುದಾದರೊಂದನ್ನು ಆರಿಸಿಕೊಂಡದ್ದಕ್ಕೆ ಮತ್ತು ಉಳಿದವನ್ನು ಕೈ ಬಿಟ್ಟಿದ್ದಕ್ಕೆ ಸಕಾರಣ ವಿವರಣೆ ನೀಡುವುದು ಅಗತ್ಯ. ಹಾಗೆ ಮಾಡದಿದ್ದರೆ ವರದಿ ಅಪೂರ್ಣವಾದಂತೆ.&lt;br /&gt;&lt;strong&gt;"ಅಲ್ಲಿಂದ ಸಂಪೂರ್ಣ ನೀರನ್ನು ತಿರುಗಿಸಿದಲ್ಲಿ ಪರಿಸರದ ಸಮತೋಲನ ತಪ್ಪಬಹುದಾಗಿದೆ."&lt;/strong&gt; &lt;br /&gt;ಸಾಧ್ಯತಾವರದಿ ತಯಾರಿಸಿದವರು ಪಶ್ಚಿಮ ಘಟ್ಟದ ಬಗ್ಗೆ ಆದಷ್ಟೂ ಎಚ್ಚರಿಕೆ ವಹಿಸಿದ್ದಾರೆ. ಆದರೆ ಕರ್ನಾಟಕ ಸರ್ಕಾರ ತನ್ನ ಬಜೆಟ್ಟಿನಲ್ಲಿ ಹೇಳಿರುವುದನ್ನು ನೋಡಿ: "ಪರಿಸರಕ್ಕೆ ಹಾನಿಯಾಗದಂತೆ ಹಂತ ಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು."  "ಮೊದಲ ಹಂತದಲ್ಲಿ ಇದಕ್ಕಾಗಿ ಎತ್ತಿನಹೊಳೆ ನಾಲೆಯಿಂದ ನೀರನ್ನು ಪಡೆಯಲಾಗುವುದು. ಈ ಯೋಜನೆಯನ್ನು ಪರಿಣಿತ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡಲು ಈ ವರ್ಷದಲ್ಲಿ ಪ್ರಾರಂಭಿಕವಾಗಿ ಇನ್ನೂರು ಕೋಟಿ ರೂ.ಗಳನ್ನು ನೀಡಲಾಗಿದೆ."&lt;br /&gt;*****************&lt;br /&gt;ಮೊನ್ನೆ - ಆಶೋಕವರ್ಧನ್, ನಿರೇನ್ ಜೈನ್, ನಾನು ಮುಂತಾಗಿ ಹತ್ತು ಜನ -  ಈ ಯೋಜನಾಸ್ಥಳಕ್ಕೆ ಹೋಗಿ ಬಂದೆವು.&lt;br /&gt;&lt;a href="http://3.bp.blogspot.com/-n0UaEwVXqfw/TfQ5ZF5AczI/AAAAAAAAAD4/pNyQwkETruM/s1600/IMG_0005.JPG"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 240px;" src="http://3.bp.blogspot.com/-n0UaEwVXqfw/TfQ5ZF5AczI/AAAAAAAAAD4/pNyQwkETruM/s320/IMG_0005.JPG" border="0" alt=""id="BLOGGER_PHOTO_ID_5617177738478646066" /&gt;&lt;/a&gt;ಸಕಲೇಶಪುರದಿಂದ ಗುಂಡ್ಯಕ್ಕೆ ಬರುವ ರಸ್ತೆಯಲ್ಲಿ ಮಾರೇನಹಳ್ಳಿ ಸಿಕ್ಕುತ್ತದೆ. ಇಲ್ಲಿ ಬಲಕ್ಕೆ ಒಂದು ರಸ್ತೆ ತಿರುಗುತ್ತದೆ. ಅದರಲ್ಲಿ ಹೋದರೆ, ಅಲ್ಸರ್ಮನೆ, ಗುಡಾಣಕೆರೆ, ಕಾಡಮನೆ ಎಸ್ಟೇಟ್ ಮುಂತಾದ ಪ್ರದೇಶಗಳಿಗೆ ಹೋಗಬಹುದು. ( ಈ ಪ್ರವಾಸದ ಬಗ್ಗೆ ಅಶೋಕವರ್ಧನರು ತಮ್ಮ ಎಂದಿನ "ನಾರೀಕೇಳ ಶೈಲಿ"ಯಲ್ಲಿ ಲೇಖನ ಬರೆಯುತ್ತಾರೆ ಎಂದು ಹಾರೈಸುತ್ತೇನೆ!). ಎತ್ತಿನ ಹೊಳೆಯೂ, ಅದರ ಎರಡು ಚಿಕ್ಕ ಉಪನದಿಗಳೂ ಸುಮಾರಿಗೆ ಇದೇ ಪ್ರದೇಶದಲ್ಲಿ ಹುಟ್ಟಿ ಹರಿಯುತ್ತವೆ.(ಇವೇ ಮುಂದೆ ಒಟ್ಟಾಗಿ ಕೆಂಪುಹೊಳೆ, ಗುಂಡ್ಯ ಹೊಳೆ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಇದು ಕುಮಾರಧಾರೆಯ ಉಪನದಿ. ಧರ್ಮಸ್ಥಳದ ಮೂಲಕ ಹರಿಯುವ ನೇತ್ರಾವತಿಯ ಉಪನದಿಯಲ್ಲ. ನೇತ್ರಾವತಿಗೆ ಇದು ಸೇರುವುದು ಉಪ್ಪಿನಂಗಡಿಯಲ್ಲಿ.) ಒಟ್ಟು ಮೂರು ಅಣೆಕಟ್ಟುಗಳನ್ನು ನಿರ್ಮಿಸಿ ಎತ್ತಿನಹೊಳೆಯಿಂದ ನೀರೆತ್ತುವ ಯೋಜನೆ ಕಾರ್ಯಗತ ಮಾಡುವ ಉದ್ದೇಶ ಇರುವುದು ಈ ಪ್ರದೇಶದಲ್ಲಿಯೇ.&lt;br /&gt;&lt;a href="http://4.bp.blogspot.com/-ZzpbtFtWyb4/TfQ6h7gqyzI/AAAAAAAAAEA/PP8dukrW1vI/s1600/IMG_0008.JPG"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 240px;" src="http://4.bp.blogspot.com/-ZzpbtFtWyb4/TfQ6h7gqyzI/AAAAAAAAAEA/PP8dukrW1vI/s320/IMG_0008.JPG" border="0" alt=""id="BLOGGER_PHOTO_ID_5617178989822659378" /&gt;&lt;/a&gt;&lt;br /&gt; ಅಲ್ಲೆಲ್ಲ ತಿರುಗಾಡಲು ನಮ್ಮ ಜೊತೆ ಬಂದಿದ್ದ ಸ್ಥಳೀಯರಾದ ಹೇಮಂತಕುಮಾರ್ ಹೇಳಿದರು: "ಆ ಕಡೆ ನಮ್ಮ ತೋಟ ಇದೆ. ನಾನು ಅಲ್ಲಿ ಹೋಗುವುದನ್ನೇ ಬಿಟ್ಟಿದ್ದೇನೆ. ಆನೆ ಬರ್ತಾವೆ ಮಾರಾಯ್ರೆ. ಹೆದ್ರಿಕೆ ಆಗ್ತದೆ."&lt;br /&gt;&lt;a href="http://3.bp.blogspot.com/-M2ZQnWN1zLg/TfQ3zcO7XnI/AAAAAAAAADw/SmVA_TBV7vM/s1600/DSC01674.JPG"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 240px;" src="http://3.bp.blogspot.com/-M2ZQnWN1zLg/TfQ3zcO7XnI/AAAAAAAAADw/SmVA_TBV7vM/s320/DSC01674.JPG" border="0" alt=""id="BLOGGER_PHOTO_ID_5617175992129511026" /&gt;&lt;/a&gt;&lt;br /&gt;(ಆನೆ ಮರಕ್ಕೆ ಬೆನ್ನು ತಿಕ್ಕಿದ್ದರ ಗುರುತು.-ಅಶೋಕವರ್ಧನರ ಫೋಟೋ.)&lt;br /&gt;ಅಂದರೆ ಈ ಪ್ರದೇಶದಲ್ಲಿ ಯೋಜನೆ ಕಾರ್ಯಗತವಾದರೆ ಅಲ್ಲಿರುವ ಆನೆಗಳು ಬೇರೆ ಜಾಗ ನೋಡಿಕೊಳ್ಳಬೇಕು. "ತೊಂದರೆ ಇಲ್ಲಪ್ಪ, ಹತ್ತಿರವೇ ಸಕಲೇಶಪುರ ಇದೆ, ಅಲ್ಲಿಗೆ ಬಂದು ಇರ್ತಾವೆ. ಮೊನ್ನೆ ಮೈಸೂರಿಗೆ ಬಂದಿದ್ದವಲ್ಲ ಹಾಗೇ" ಅಂದಾರು ನಮ್ಮ ಯೋಜನಾಕರ್ತರು. ಆದರೆ ಸಕಲೇಶಪುರದ ಜನ ಇದಕ್ಕೆ ಒಪ್ಪಿಗೆ ಕೊಡುತ್ತಾರೋ ಗೊತ್ತಿಲ್ಲ!&lt;br /&gt;&lt;br /&gt;******************&lt;br /&gt;"ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. ಎ. ಮೂಲಕ ಈಗಾಗಲೇ ಪೂರ್ಣಗೊಂಡಿದೆ" ಎಂದು ಬಜೆಟ್ಟಿನಲ್ಲಿ ಹೇಳಿದೆಯಷ್ಟೆ. ಈ ಮಾಹಿತಿಯನ್ನು ನೀಡುವಂತೆ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗೆ ಅರ್ಜಿ ಕೊಟ್ಟಿದ್ದೆ. ಅಲ್ಲಿಂದ ಬಂದ ಉತ್ತರ ಹೀಗಿದೆ:&lt;br /&gt;"ಮೆ. ಎನ್. ಆರ್.ಎಸ್.ಸಿ. (ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್) ಸಂಸ್ಥೆಗೆ ಸರ್ವೆ ಸಮೀಕ್ಷೆ ಮತ್ತು ವಿವರವಾದ ಯೋಜನಾ ವರದಿಯ ತಯಾರಿಕೆ ಕಾರ್ಯವನ್ನು ಕೈಗೊಳ್ಳಲು ವಹಿಸಿಕೊಡಲಾಗಿತ್ತು. ಆದರೆ ಮೆ. ಎನ್. ಆರ್. ಎಸ್. ಸಿ.ರವರು ALTM ಸರ್ವೆ ಮಾಡಿ ಅದರ ಕಚ್ಚಾ ಮಾಹಿತಿಯನ್ನು ಸಲ್ಲಿಸಿದ್ದು, ವಿವರವಾದ ಯೋಜನಾವರದಿಯನ್ನು (DPR) ತಯಾರು ಮಾಡಲು ಸಾಧ್ಯವಿಲ್ಲವೆಂದು ತಿಳಿಸಿರುವುದರಿಂದ DPR ನ್ನು ಬೇರೆ ಸಂಸ್ಥೆಯಿಂದ ತಯಾರಿಸಲು ಕ್ರಮ ಜರುಗಿಸಲಾಗುತ್ತಿದೆ.&lt;br /&gt;ಸದರಿ ಯೋಜನೆಯ ಮಾಲಾ ಕಾಲುವೆಗಳಿಗೆ ಸಂಬಂಧಿಸಿದಂತೆ ಮೆ: ಎನ್. ಆರ್. ಎಸ್. ಸಿ. ಸಂಸ್ಥೆ, ಹೈದ್ರಾಬಾದ್ ಇವರು ALTM ಸರ್ವೆ ಕೈಗೊಂಡು ಸರ್ವೆಯ ಕಚ್ಚಾ ಮಾಹಿತಿಯನ್ನು ಕೆಲವೊಂದು ಸಾಫ್ಟ್ ವೇರಿನಲ್ಲಿ ಮಾತ್ರ ವೀಕ್ಷಿಸಬಹುದಾದಂತಹ ರೂಪದ (Format ನಲ್ಲಿ) ತಾಂತ್ರಿಕ ಮಾಹಿತಿಯನ್ನು ನೀಡಿರುತ್ತಾರೆ. ಈ ಮಾಹಿತಿಯನ್ನು ಸಂಸ್ಕರಿಸಿ ಸದರಿ ಯೋಜನೆಯ ವಿವರವಾದ ಯೋಜನಾವರದಿಯನ್ನು ತಯಾರಿಸಲು ಹಾಗೂ ಸೇವಾ ಕಾಲುವೆಯ ಸರ್ವೆ ಕಾರ್ಯವನ್ನು ಕೈಗೊಳ್ಳಲು ಕ್ರಮ ಜರುಗಿಸಲಾಗುತ್ತಿದೆ. ಮೆ: ಎನ್. ಆರ್. ಎಸ್. ಸಿ. ಸಂಸ್ಥೆಯವರು ಯೋಜನೆಯ ಯಾವುದೇ ಸಂಪೂರ್ಣ ವರದಿಯನ್ನು ನೀಡಿರುವುದಿಲ್ಲ"&lt;br /&gt;ಇದರ ಅರ್ಥ ಸ್ಪಷ್ಟ: ಶ್ರೀ ಪರಮಶಿವಯ್ಯನವರ ವರದಿಯನ್ನು ಆಧರಿಸಿದ ಯೋಜನೆ ಸರಕಾರಿ ವೇಗದಲ್ಲಿಯೇ ಆದರೂ ಮುಂದುವರಿಯುತ್ತಿದೆ. ಒಂದಲ್ಲ ಒಂದು ದಿನ ಅದು ಪಶ್ಚಿಮ ಘಟ್ಟಗಳ ಮೇಲೆ ಎರಗುವುದು ನಿಶ್ಚಿತ.&lt;br /&gt;*****************&lt;br /&gt;ಬಯಲುಸೀಮೆಯ ನೀರಿನ ಸಮಸ್ಯೆಗೆ ಪರಿಹಾರ ಏನು? "ಕಣಜ" (www.kanaja.in)ದಲ್ಲಿ ಪ್ರಕಟವಾಗಿರುವ ಶ್ರಿ ಮಲ್ಲಿಕಾರ್ಜುನ ಹೊಸಪಾಳ್ಯ  ಇವರ  ಲೇಖನವನ್ನು ಯಥಾವತ್ತಾಗಿ ಇಲ್ಲಿ ಕೊಟ್ಟಿದ್ದೇನೆ. "ಕಣಜ" ಹಾಗೂ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ ಇವರಿಗೆ ನಾನು ಆಭಾರಿ.&lt;br /&gt;&lt;strong&gt;"ಜಲ ಜೀವನಿ" : ಸಾವಿರಾರು ಎಕರೆ ಒಣಭೂಮಿಗೆ ಆಸರೆಯಾದ ಕಿರು ಜಲಾನಯನ ಯೋಜನೆ:&lt;/strong&gt;&lt;br /&gt;ನಂದಿಹಳ್ಳಿಯ ರಂಗನಾಥ್ ತಮ್ಮ ಹೊಲದಲ್ಲಿದ್ದ ಸುಮಾರು 70 ಹುಣಸೆ ಮರಗಳನ್ನು ಕಡಿಸಿ ಹಾಕುವ ಯೋಚನೆ ಮಾಡುತ್ತಿದ್ದರು. ಎರಡು ವರ್ಷದ ಹಿಂದೆ ಇವರ ಹೊಲದಲ್ಲಿ 150 ಹುಣಸೆ ಮರಗಳಿದ್ದವು. ಎಲ್ಲಾ ಅವರ ತಂದೆಯ ಕಾಲದಲ್ಲಿ ನೆಟ್ಟವು. ಮುಂಚೆ ಉತ್ತಮ ಇಳುವರಿ ನೀಡುತ್ತಿದ್ದ ಅವು ಸ್ವಲ್ಪ ವರ್ಷಗಳಿಂದೀಚೆಗೆ ಮಂಕಾಗಿ ಎಲೆಗಳೆಲ್ಲಾ ಉದುರಿ ಬೋಳು-ಬೋಳಾಗಿ ನಿಂತಿದ್ದವು. ಫಸಲೇ ಬಿಡುತ್ತಿರಲಿಲ್ಲ, ಹಾಗಾಗಿ ರಂಗನಾಥ್ 2004 ರಲ್ಲಿ 70 ಗಿಡಗಳನ್ನು ಕಡಿಸಿ ಮಾರಿದ್ದರು. ಉಳಿದ ಗಿಡಗಳನ್ನು ಈ ವರ್ಷ ಮಾರಿ ಕೈತೊಳೆದುಕೊಳ್ಳಬೇಕೆಂಬುದು ಅವರ ಯೋಚನೆಯಾಗಿತ್ತು. ಅವರೊಬ್ಬರೇ ಅಲ್ಲದೆ ಅವರ ಗ್ರಾಮದ ಬಹುತೇಕ ರೈತರು ಇದೇ ಹಾದಿಯಲ್ಲಿದ್ದರು. ನಾಲ್ಕೈದು ವರ್ಷಗಳ ಹಿಂದೆ ಉತ್ತಮ ಇಳುವರಿ ನೀಡುತ್ತಿದ್ದ ಹುಣಸೆ ಮರಗಳು ಕ್ರಮೇಣ ಬರಲಾಗಿಹೋಗಿದ್ದವು. ಇದಕ್ಕೆ ಕಾರಣ ಮಳೆಯ ಪ್ರಮಾಣದ ಗಣನೀಯ ಕುಸಿತ. ಬತ್ತಿದ ಅಂತರ್ಜಲ, ಒಣಗಿದ ಕೊಳವೆ ಬಾವಿಗಳು, ಫಲವತ್ತಾದ ಮೇಲ್ಮಣ್ಣು ಸವಕಳಿಯಿಂದ ಬರಡಾದ ಭೂಮಿ. ಬರಕ್ಕೆ ತಡೆದುಕೊಳ್ಳುವ ಗುಣವುಳ್ಳ ಹುಣಸೆಯೇ ಒಣಗುವ ಹಂತಕ್ಕೆ ತಲುಪಿತೆಂದರೆ ಇನ್ನು ಅಡಿಕೆ, ತೆಂಗು ಮತ್ತು ಇತರ ಫಸಲುಗಳ ಸ್ಥಿತಿಯನ್ನು ಊಹಿಸಬಹುದು. &lt;br /&gt;ಇವೆಲ್ಲವುಗಳ ಒಟ್ಟಾರೆ ಪರಿಣಾಮವಾಗಿ ಕೃಷಿ ಉತ್ಪಾದಕತೆಯಲ್ಲಿಯೂ ಇಳಿತ, ಜೀವನ ನಿರ್ವಹಣೆಗೆ ಕಂಟಕ. ಈ ನಷ್ಟವನ್ನು ತುಂಬಿಕೊಳ್ಳಲು ರೈತರು ಹುಣಸೆ ಗಿಡಗಳನ್ನು ಮಾರಿ ಜೀವನ ನಿರ್ವಹಿಸುವ ಮಟ್ಟಕ್ಕೆ ಹೋಗಿದ್ದರು. ಇದು 2005ನೇ ಇಸವಿಯ ಮುಕ್ತಾಯ ಮತ್ತು 2006ನೇ ಇಸವಿಯ ಆರಂಭ ಕಾಲದಲ್ಲಿದ್ದ ಪರಿಸ್ತಿತಿ. ರಂಗನಾಥ್ ತಮ್ಮ ಹುಣಸೆ ಮರಗಳನ್ನು ಕಡಿಯುವ ಯೋಚನೆ ಮಾಡುತ್ತಿದ್ದುದು ಇದೇ ಅವಧಿಯಲ್ಲಿ. &lt;br /&gt;ಆದರೆ 2007ರ ಮುಕ್ತಾಯ ಮತ್ತು 2008 ರ ಆರಂಭ ಕಾಲಕ್ಕೆ ನಂದಿಹಳ್ಳಿಯ ಚಿತ್ರಣ ಸಂಪೂರ್ಣ ಬದಲು. ಈಗ ಅಲ್ಲಿ ಹುಣಸೆ ಮರಗಳು ಕೊಂಬೆ-ರೆಂಬೆಗಳಲ್ಲೆಲ್ಲಾ ಕಾಯಿ ತೂಗುತ್ತಾ ನಿಂತಿವೆ.  ಸಂಪೂರ್ಣ ನಿಂತೇ ಹೋಗಿದ್ದ ಎಷ್ಟೋ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ಅಂತರ್ಜಲ ಮೇಲೇರಿದೆ. ಆಹಾರ ಬೆಳೆ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿ ಮಟ್ಟ ಹೆಚ್ಚಾಗಿದೆ.&lt;br /&gt;ನಂದಿಹಳ್ಳಿಯ ರಂಗನಾಥ್ ಮತ್ತು ಅನೇಕ ರೈತರು  ಹುಣಸೆ ಮರಗಳನ್ನು ಕಡಿದು ಮಾರಾಟ ಮಾಡಿದ್ದಕ್ಕಾಗಿ  ಈಗ ಪೇಚಾಡುತ್ತಿದ್ದಾರೆ. &lt;br /&gt;ಈ ಬದಲಾವಣೆಗೆ ಕಾರಣವಾದದ್ದು ಬರ್ಡ್-ಕೆ ಸಂಸ್ಥೆಯ "ಜಲ ಜೀವನಿ" ಯೋಜನೆ. ಕೇವಲ ಎರಡೂವರೆ ವರ್ಷದಲ್ಲಿ 11 ಹಳ್ಳಿಗಳ ಸಾವಿರಾರು ಕುಟುಂಬಗಳಲ್ಲಿ ಆತ್ಮ ವಿಶಾಸವನ್ನು ಮರಳಿಸಿದ ವಿಶಿಷ್ಟ ಯೋಜನೆ ಇದು. ಯೋಜನೆ ಅಡಿಯಲ್ಲಿ ಇಂದು ಎರಡೂವರೆ ಸಾವಿರ ಹೆಕ್ಟೇರ್ ಗೂ  ಅಧಿಕ   ಭೂಮಿಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯಾಗಿದೆ.&lt;br /&gt;&lt;strong&gt;ಯೋಜನಾ ಪ್ರದೇಶ&lt;/strong&gt;&lt;br /&gt;ದಕ್ಷಿಣ ಕರ್ನಾಟಕ ವ್ಯಾಪ್ತಿಯ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹಾಲ್ದೊಡ್ಡೇರಿ ಕೆರೆ ಕಿರು ಜಲಾನಯನ ಪ್ರದೇಶವು ಬಹುತೇಕ ಒಣ ಭೂಮಿ. ಸದಾ ಬರಕ್ಕೆ ಎದೆಯೊಡ್ಡುವ ಪ್ರದೇಶ. ನಿಶ್ಚಿತ ಮಳೆ ಭರವಸೆ ಇಲ್ಲ. ವಾರ್ಷಿಕ ಸರಾಸರಿ ಮಳೆ ಕೇವಲ 443.8 ಮಿ.ಮೀ. ತುಮಕೂರು ಜಿಲ್ಲಾ ಕೇಂದ್ರದಿಂದ ಅಂದಾಜು 100 ಕಿ.ಮೀ. ದೂರದಲ್ಲಿದೆ. ಈ ಜಲಾನಯನ ಪ್ರದೇಶವು 2869.5 ಹೆಕ್ಟೇರ್ ವ್ಯಾಪ್ತಿಯಿದ್ದು 11 ಹಳ್ಳಿಗಳನ್ನೊಳಗೊಂಡಿದೆ. ಅವುಗಳೆಂದರೆ; ಗಿಡದಾಗಲಹಳ್ಳಿ, ಬೊರಾಗುಂಟೆ, ವೀರಣ್ಣನಹಳ್ಳಿ, ಕೆ.ಟಿ.ಹಳ್ಳಿ, ಸೀಬಿನಯನಪಾಳ್ಯ,(ಎಲ್ಲವೂ ಮಧುಗಿರಿ ತಾಲ್ಲೂಕು) ಕಬ್ಬಿಗೆರೆ, ಚಿಕ್ಕಣ್ಣನಹಳ್ಳಿ, ಅಜ್ಜೇನಹಳ್ಳಿ, ಮರಾಠಿಗರಪಾಳ್ಯ, (ಎಲ್ಲವೂ ಕೊರಟಗೆರೆ ತಾಲ್ಲೂಕು )ನಂದಿಹಳ್ಳಿ ಮತ್ತು ಬಿಸಾಡಿಹಳ್ಳಿ.(ತುಮಕೂರು ತಾಲ್ಲೂಕು.)&lt;br /&gt;ಯೋಜನಾ ಪ್ರದೇಶದ ಆಯ್ಕೆಗೆ ಕಾರಣಗಳು.&lt;br /&gt;ಬರ್ಡ್-ಕೆ ಸಂಸ್ಥೆಯು ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಇಲ್ಲಿದ್ದಂತಹ ಮಣ್ಣು ಮತ್ತು ನೀರಿನ ಸಮಸ್ಯೆಗಳು. ಅವುಗಳಲ್ಲಿ ಪ್ರಮುಖವಾದವುಗಳನ್ನು ನೋಡುವುದಾರೆ,&lt;br /&gt;&lt;strong&gt;1. ವಿಪರೀತ ಮಣ್ಣಿನ ಸವಕಳಿ: &lt;/strong&gt;ಈ ಪ್ರದೇಶದಲ್ಲಿ ವಿಪರೀತ ಮಣ್ಣು ಸವಕಳಿ ಸಮಸ್ಯೆಯಿಂದಾಗಿ ಮಣ್ಣಿನ ರಚನೆ ಹಾಳಾಗಿ ಅದರ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ ಕುಂಠಿತವಾಗಿತ್ತು. ಕೃಷಿಗೊಳಪಡುವ ಭೂಮಿಯು 60 ರಿಂದ 90 ಸೆಂಟಿಮೀಟರ್ ಆಳವಿದ್ದು ಮರಳು ಮಿಶ್ರಿತ ಕೆಂಪು ಮಣ್ಣಾಗಿದೆ. ಬಹುತೇಕ ಮಣ್ಣು ದ್ವಿತೀಯ ಮತ್ತು ತೃತೀಯ ದರ್ಜೆಯದಾಗಿರುವುದರಿಂದ ಇದರ ಸುಧಾರಣೆಗಾಗಿ ಹಲವಾರು ರೀತಿಯ ಉಪಚಾರಗಳ ಅವಶ್ಯಕತೆ ಇತ್ತು. ಮಣ್ಣು ಈ ರೀತಿ ಸಡಿಲವಾಗಿದ್ದುದರಿಂದ ಸಹಜವಾಗಿಯೇ ಸವಕಳಿಗೆ ತುತ್ತಾಗುತ್ತಿತ್ತು. ಜಲಾನಯನದ ಮೇಲ್ಬಾಗದಲ್ಲಿ ಮಣ್ಣು ಹಿಡಿದಿಡುವ ಗಿಡ-ಮರ, ಅಥವಾ ಹುಲ್ಲುಗಾವಲುಗಳು ಇಲ್ಲದಿರುವುದರಿಂದ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು.&lt;br /&gt;&lt;strong&gt;2. ಸಾರವಿಲ್ಲದ ಮಣ್ಣು:&lt;/strong&gt;  ಫಲವತ್ತಾದ ಮೇಲ್ಮಣ್ಣು ವರ್ಷಗಟ್ಟಲೆ ಸವೆದು ಹೋಗಿ ಉಳಿದಂತಹ ಮಣ್ಣು ಹೆಚ್ಚು-ಕಡಿಮೆ ನಿರ್ಜೀವ ಹಂತ ತಲುಪಿತ್ತು. ಈ ಮಣ್ಣಿನಲ್ಲಿ ಯಾವ ಬೆಳೆ ಇಟ್ಟರೂ ಸರಿಯಾದ ಇಳುವರಿ ಬರುತ್ತಿರಲಿಲ್ಲ. ಅಲ್ಲದೆ ವಿಪರೀತ ರಾಸಾಯನಿಕಗಳ ಬಳಕೆ, ನೀರಾವರಿ ಸೌಲಭ್ಯಗಳ ಕೊರತೆ, ಅಸಮರ್ಪಕ ಬೆಳೆ ಪದ್ಧತಿಗಳೂ ಸಹ ಮಣ್ಣಿನ ಉತ್ಪಾದಕತೆ ಕುಂಠಿತವಾಗಲು ಕಾರಣಗಳಾಗಿದ್ದವು.&lt;br /&gt;&lt;strong&gt;3. ನೀರಿನ ಕೊರತೆ:&lt;/strong&gt; ಮತ್ತೊಂದು ಮುಖ್ಯ ಸಮಸ್ಯೆ ನೀರಿನ ಅಲಭ್ಯತೆ. ಕೃಷಿಗೆ ಮತ್ತು ಕುಡಿಯುವ ನೀರಿಗಾಗಿ ಜನರ ಪರದಾಟ ಹೇಳತೀರದಾಗಿತ್ತು. ಎಷ್ಟೋ ಕೊಳವೆ ಬಾವಿಗಳು ಒಣಗಿಹೋಗಿದ್ದರೆ, ಉಳಿದವು ಅಲ್ಪ-ಸ್ವಲ್ಪ ನೀರು ಹರಿಸುತ್ತಾ ಕುಟುಕು ಜೀವ ಉಳಿಸಿಕೊಂಡಿದ್ದವು. ಸದಾ ರಿಪೇರಿಗೆ ಬರುತ್ತಿದ್ದ ಅವುಗಳನ್ನು ನಿರ್ವಹಿಸುವುದೇ ರೈತರಿಗೆ ಕಷ್ಟವಾಗಿತ್ತು. ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರಿಗೆ ಕೊಳವೆ ಬಾವಿ ನೀರೇ ಅಸರೆ, ಆದರೆ ಅವುಗಳ ಸೂಕ್ತ ನಿರ್ವಹಣೆ ಇಲ್ಲದೆ ಸುರಕ್ಷಿತತೆ ಮತ್ತು ನೈರ್ಮಲ್ಯತೆಯೇ ಇಲ್ಲವಾಗಿತ್ತು.&lt;br /&gt;&lt;strong&gt;4. ಕೃಷಿ ಕ್ಷೇತ್ರದ ಅವಗಣನೆ:&lt;/strong&gt; ಮಣ್ಣಿನ ಸವಕಳಿಯಿಂದ ಕೃಷಿ ಉತ್ಪಾದಕತೆ ಒಂದೆಡೆ ಕಡಿಮೆಯಾಗಿದ್ದರೆ ಮತ್ತೊಂದೆಡೆ ಏಕ ಬೆಳೆ ಪದ್ಧತಿ ಅನುಸರಣೆ, ಕೀಟ-ರೋಗಗಳ ಹಾವಳಿ, ನೂತನ ತಾಂತ್ರಿಕತೆಗಳ ಬಗ್ಗೆ ಅಜ್ಞಾನ. ಮುಂತಾದವುಗಳಿಂದ ಕೃಷಿ ದುಬಾರಿಯಾಗಿತ್ತು. ಲಾಭಕ್ಕಿಂತ ಖರ್ಚೇ ಹೆಚ್ಚಾಗಿ ರೈತರು ಬೇಸಾಯದಿಂದ ವಿಮುಖರಾಗುವ ಮನಸ್ತಿತಿಯಲ್ಲಿದ್ದರು.&lt;br /&gt;ಇವುಗಳಲ್ಲದೆ, ಬಡತನ, ಅಪೌಷ್ಠಿಕತೆ, ಜನರ ಸಾಮಾಜಿಕ-ಆರ್ಥಿಕ ಹಿನ್ನಡೆ, ನಿರುದ್ಯೋಗ, ಅರೆ ಉದ್ಯೋಗ ಮುಂತಾದ ಅನೇಕ ಸಮಸ್ಯೆಗಳು ಇಲ್ಲಿದ್ದುದರಿಂದ ಬರ್ಡ್-ಕೆ ಸಂಸ್ಥೆಯು "ಜಲ ಜೀವನಿ" ಯೋಜನೆಯನ್ನು ಹಮ್ಮಿಕೊಂಡಿತು.&lt;br /&gt;ಮೇಲ್ಕಂಡ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೊಪಿಸಿ ರೈತರಲ್ಲಿ ಆತ್ಮ ವಿಶ್ವಾಸ ವೃದ್ಧಿಸಲು ಸಂಸ್ಥೆಯು ಹಲವಾರು ಚಟುವಟಿಕೆಗಳ ಮೂಲಕ ಕಾರ್ಯೋನ್ಮುಖವಾಯಿತು. ಈ ಚಟುವಟಿಕೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು.&lt;br /&gt;&lt;strong&gt;1. ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ&lt;/strong&gt;&lt;strong&gt;&lt;br /&gt;2. ಸಮುದಾಯದ ಸಾಮಾಜಿಕ, ಆರ್ಥಿಕ ಮಟ್ಟದ ಅಭಿವೃದ್ಧಿ, ತರಬೇತಿ ಮತ್ತು ಸಂಘಟನೆ.&lt;/strong&gt;ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ಮುಖ್ಯವಾಗಿ ಜಲ ಸಂಪನ್ಮೂಲಗಳನ್ನು ವೃದ್ಧಿಸಲು ಆದ್ಯತೆ ನೀಡಲಾಗಿದೆ. ಸ್ಥಳೀಯ ಪರಿಸ್ಥಿತಿಗೆ ಹೊಂದಿಕೆಯಾಗುವ ವಿಧಾನಗಳ ಅಳವಡಿಕೆ ಗಮನಿಸಬೇಕಾದ ಅಂಶ. ಪ್ರತಿಯೊಂದು ವಿಧಾನವೂ ಏಕಕಾಲಕ್ಕೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುವಂತಹವು. ಕೆಲವು ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ.&lt;br /&gt;&lt;strong&gt;1. ಹರಿವ ನೀರನ್ನು ಕಟ್ಟಿಹಾಕುವ ಉದಿ-ಬದುಗಳು:&lt;/strong&gt; ಮೊದಲೇ ಹೇಳಿದಂತೆ ಹಾಲ್ದೊಡ್ಡೇರಿ ಜಲಾನಯನ ಪ್ರದೇಶವು ಏರು-ತಗ್ಗುಗಳಿಂದ ಕೂಡಿದ್ದು ಬಹುತೇಕ ಎರಡು ಮತ್ತು ಮೂರನೇ ದರ್ಜೆಯ ಮಣ್ಣುಳ್ಳದ್ದಾಗಿದೆ. ವಿಪರ್ಯಾಸವೆಂದರೆ, ಬೇಸಾಯಕ್ಕೊಳಪಡುವ   ಭೂಮಿಗೆ ಅತ್ಯಗತ್ಯವಾಗಿ ಬೇಕಾದ ಉದಿ-ಬದುಗಳೇ ಇಲ್ಲ. ಈ ಅಂಶವನ್ನು ಮನಗಂಡ ಸಂಸ್ಥೆ ಪ್ರತಿ ಹೆಕ್ಟೇರ್ ಗೆ 75 ಕ್ಯುಬಿಕ್ ಮೀಟರ್ ನಷ್ಟು  ಉದಿ-ಬದು ಹಾಕಲು ತೀರ್ಮಾನಿಸಿತು. ಇಷ್ಟು ಅಳತೆಯಲ್ಲಿ ಪ್ರತಿ ಸಲ 1500 ಲೀಟರ್ ನೀರು ಸಂಗ್ರಹ ಸಾಧ್ಯ. ಮಣ್ಣು ಸವಕಳಿ ತಡೆಗೆ ಇದಕ್ಕಿಂತ ಉತ್ತಮ ವಿಧಾನ ಬೇರೊಂದಿಲ್ಲ ಎಂಬುದು ಕಬ್ಬಿಗೆರೆಯ ಹನುಮಂತಪ್ಪನವರ ಅನುಭವ. ಬದುಗಳ ಮೇಲೆ ಹೆಮಟ ಹುಲ್ಲನ್ನು ಬೆಳೆಯಲು ಯೋಜನೆಯಿಂದ ಉತ್ತೇಜನ ನೀಡಿರುವುದಲ್ಲದೆ ಬೀಜಗಳನ್ನೂ ಸಹ ಪೂರೈಸಲಾಗಿದೆ, ಇದರಿಂದ ಬದುಗಳು ಭದ್ರಗೊಳ್ಳುವುದಲ್ಲದೆ ರೈತರಿಗೆ ಉತ್ತಮ ಮೇವು ಲಭ್ಯವಾಗುತ್ತದೆ.  ಅಲ್ಲದೆ ಈ ಬದುಗಳ ಮೇಲೆ ವಿವಿಧ ರೀತಿಯ ಕಾಡುಗಿಡಗಳನ್ನು ಬೆಳೆಸಲಾಗುತ್ತಿದೆ. ಯೋಜನೆಯು ಸಮುದಾಯ ಸಹಭಾಗಿತ್ವ ತತ್ವವನ್ನಾಧರಿಸಿದ್ದು ಈ ಉದಿ-ಬದು ಚಟುವಟಿಕೆಗೆ ಆಯಾ ಜಮೀನಿನ ಮಾಲೀಕರು  ಶೇ 50 ರಷ್ಟು ವಂತಿಕೆ ಭರಿಸಬೇಕು, ಈ ನಿಯಮಕ್ಕೆ ಎಲ್ಲಾ ಹಳ್ಳಿಗಳ ರೈತರೂ ಅಕ್ಷರಶಃ ಒಪ್ಪಿರುವುದಲ್ಲದೆ ತಾವೇ ಖುದ್ದಾಗಿ ನಿಂತು ತಮ್ಮ-ತಮ್ಮ ಹೊಲಗಳಿಗೆ ಉದಿ-ಬದು ಹಾಕಿಸಿಕೊಂಡಿದ್ದಾರೆ.&lt;br /&gt;&lt;strong&gt;2. ಇಂಗು ಹೊಂಡಗಳು:&lt;/strong&gt; ಜಲಾನಯನ ಪ್ರದೇಶದಲ್ಲಿ ಪ್ರತಿ 2-3 ಹೆಕ್ಟೇರ್ ಗೆ ಒಂದರಂತೆ ಸರಣಿಯೋಪಾದಿಯಲ್ಲಿ ಇಂಗು ಹೊಂಡಗಳನ್ನು ತೆಗೆಯಲಾಗಿದೆ. ಉದಿ-ಬದುಗಳ ಮೂಲಕ ಪ್ರತಿಯೊಂದು ಗುಂಡಿಗೂ ಸಂಪರ್ಕವೇರ್ಪಡುವಂತೆ ಮಾಡಲಾಗಿರುವುದು ವಿಶೇಷ. ಉದಿ-ಬದುಗಳನ್ನು ತುಂಬಿ ಹೆಚ್ಚಾದ ನೀರು ಸಾಗಿ ಬಂದು ಈ ಹೊಂಡಗಳಲ್ಲಿ ಶೇಖರಗೊಳ್ಳುತ್ತದೆ. "30 ಅಡಿ ಅಗಲ, 30 ಅಡಿ ಉದ್ದ ಮತ್ತು 10 ಅಡಿ ಆಳದ ಗುಂಡಿಯೊಂದು ಪ್ರತಿಬಾರಿ ತುಂಬಿದಾಗ ಒಂದೂವರೆ ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ" ಎನ್ನುತ್ತಾರೆ  ಯೋಜನೆಯ ಹಿರಿಯ ವಲಯ ಕಾರ್ಯಕ್ರಮ ಅಧಿಕಾರಿ ಧನಂಜಯ ಟಿ.ಎಸ್.&lt;br /&gt;ಪ್ರಸ್ತುತ ಯೋಜನಾ ಪ್ರದೇಶದಲ್ಲಿ 200 ಇಂಗು ಹೊಂಡಗಳಿದ್ದು ನೀರು ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ಸಲ್ಲಿಸಿವೆ. ಈ ಹೊಂಡಗಳಲ್ಲಿ ದೀರ್ಘಕಾಲ ನೀರು ಸಂಗ್ರಹವಾಗಿ ನಿಧಾನವಾಗಿ ನೆಲದಲ್ಲಿ ಇಂಗುತ್ತದೆ. ಈ ಸಂಗ್ರಹಿತ ನೀರನ್ನು ರೈತರು ತರಕಾರಿ, ಹೂವಿನ ತೋಟಗಳಿಗೆ ಕೈನೀರು ಹಾಕಲು ಬಳಸುತ್ತಿದ್ದಾರೆ.&lt;br /&gt;&lt;strong&gt;3. ಹೂಳು ತೆಗೆಯುವುದು:&lt;/strong&gt; ಈ ಜಲಾನಯನ ಪ್ರದೇಶದಲ್ಲಿ 17 ಚೆಕ್ ಡ್ಯಾಮ್ ಗಳು, 16 ಗೋಕಟ್ಟೆಗಳು ಮತ್ತು ಒಂದೆರಡು ಇತರ ನೀರಿನ ಕುಂಟೆಗಳಿರುವುದನ್ನು ಯೋಜನೆಯು ಗುರುತಿಸಿತು. ಇವು ಬಹಳ ವರ್ಷಗಳ ಹಿಂದೆ ಜನರ ಸಹಭಾಗಿತ್ವ ಮತ್ತು  ಸರ್ಕಾರದ ವಿವಿಧ ಇಲಾಖೆಗಳ ಮುಖಾಂತರ ನಿರ್ಮಾಣವಾಗಿದ್ದು, ಪ್ರಸ್ತುತ ಹೂಳು ತುಂಬಿ ಹಾಳಾಗಿದ್ದವು. ಅವುಗಳ ನೀರು ಹಿಡಿದಿಡುವ ಸಾಮರ್ಥ್ಯ ಕುಂಠಿತಗೊಂಡಿತ್ತು. ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ವೃದ್ಧಿಸಲು, ಆ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ರಚನೆಗಳ ಹೂಳೆತ್ತುವಿಕೆಗೆ ಜನರ ಮನವೊಲಿಸಲಾಯಿತು. ಬಹುತೇಕ ಸರ್ಕಾರೀ ಜಮೀನಿನಲ್ಲಿದ್ದ ಇವುಗಳಲ್ಲಿ ಬೃಹತ್ ಪ್ರಮಾಣದ ಹೂಳು ಶೇಖರವಾಗಿತ್ತು. ಅತ್ಯಂತ ಫಲವತ್ತಾಗಿದ್ದ ಈ ಮಣ್ಣನ್ನು ತಮ್ಮ ಹೊಲಗಳಿಗೆ ಸಾಗಿಸಲು ರೈತರು ಉತ್ಸಾಹದಿಂದಲೇ ಮುಂದೆ ಬಂದರು. ಹೂಳು ತೆಗೆದ ಪರಿಣಾಮ ಅಪಾರ ಪ್ರಮಾಣದ ನೀರು ಈ ರಚನೆಗಳಲ್ಲಿ ಶೇಖರಣೆಗೊಂಡು ಸುತ್ತ-ಮುತ್ತಲ ವಿಶಾಲ ಭೂಮಿಗೆ ತಂಪೆರೆಯುತ್ತಿವೆ ಹಾಗೂ ಕೊಳವೆಬಾವಿಗಳಿಗೆ ನೀರಿನ ಸೆಲೆಯಾಗಿವೆ.&lt;br /&gt;ಗೋಕಟ್ಟೆ ಮತ್ತು ಚೆಕ್ ಡ್ಯಾಮ್ ಗಳ ಆಸು-ಪಾಸಿನಲ್ಲಿದ್ದ ಮರವಳಿಗೆ- ಅದರಲ್ಲಿಯೂ ಹುಣಸೆ ಮರಗಳಿಗೆ ಇದರಿಂದ ಮರುಜನ್ಮ ಬಂದಂತಾಗಿದೆ ಎನ್ನುತ್ತಾರೆ ಇಲ್ಲಿನ ರೈತರು. ನಂದಿಹಳ್ಳಿಯ ರಂಗನಾಥ್ ತಮ್ಮ ಜಮೀನಿನಲ್ಲಿ ಫಲಭರಿತ ಹುಣಸೆಮರವನ್ನು ತೋರಿಸಿ ಅದರ ಪಕ್ಕದಲ್ಲಿದ್ದ ಚೆಕ್ ಡ್ಯಾಮ್ ನಲ್ಲಿ ಹೂಳು ತೆಗೆದದ್ದರಿಂದ ನೀರು ನಿಂತ ಪರಿಣಾಮ ಇದು ಎನ್ನುತ್ತಾರೆ.&lt;br /&gt;&lt;strong&gt;೪. ಸಮುದಾಯ ಕೊಳವೆ ಬಾವಿ ಮರುಪೂರಣ:&lt;/strong&gt; ಇದೊಂದು ವಿಶಿಷ್ಟ ಪ್ರಯತ್ನ. ಇದೇ ಯೋಜನಾ ವ್ಯಾಪ್ತಿಯಲ್ಲಿ ಹಿಂದೆ "ಬೆರಿ"(ಹಸಿರು ಶಕ್ತಿ ) ಯೋಜನೆಯಡಿಯಲ್ಲಿ ಸಮುದಾಯ ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. ಉದ್ದೇಶ 5-6 ಬಡ ರೈತರಿಗೆ ಒಂದೇ ಕೊಳವೆ ಬಾವಿಯ ನೀರನ್ನು ಸರದಿಯಂತೆ ಒದಗಿಸುವುದು. ಆ ಕೊಳವೆಬಾವಿಗಳಿಗೆ ಮರುಪೂರಣ ಮಾಡುವ ಮೂಲಕ ಅವುಗಳ ಕಾರ್ಯ ಕ್ಷಮತೆಯನ್ನು ನಿರಂತರವಾಗಿಸುವುದು ಈ ಚಟುವಟಿಕೆಯ ಉದ್ದೇಶ. ಅಂದಾಜು 18 ಸಮುದಾಯ ಕೊಳವೆಬಾವಿಗಳಿಗೆ ಮರುಪೂರಣ ಮಾಡುವ ವ್ಯವಸ್ತೆಯಾಗಿದೆ. ಪ್ರತಿಯೊಂದು ಸಮುದಾಯ ಕೊಳವೆ ಬಾವಿಯ ಕೇಸಿಂಗ್ ಪೈಪಿನ ಸುತ್ತ  11 ಅಡಿ ಉದ್ದ  11 ಅಡಿ ಅಗಲ ಮತ್ತು 10 ಅಡಿ ಆಳದ ಗುಂಡಿ ತೆಗೆದು, ಪದರ-ಪದರವಾಗಿ ದಪ್ಪ ಜಲ್ಲಿ ,ಸಣ್ಣ ಜಲ್ಲಿಯನ್ನು ಹಾಕುತ್ತಾ ಬಂದು ಕೊನೆಯಲ್ಲಿ ಜಾಲರಿಯನ್ನು ಹಾಸಿ ಅದರ ಮೇಲೆ ಒಂದು ಪದರ ಮರಳು ಹಾಕಲಾಗುತ್ತದೆ. ಸುತ್ತಲೂ ಸಿಮೆಂಟಿನ ಕಟ್ಟೆ ಮಾಡಿ ಮಳೆ ಬಂದಾಗ ಅಕ್ಕ-ಪಕ್ಕದ ನೀರು ಆ ಕಟ್ಟೆಗೆ ಹಾಯುವಂತೆ ದಾರಿ ಕಲ್ಪಿಸಲಾಗುತ್ತದೆ. ಮಳೆ ನೀರು ಈ ಮೂಲಕ ನೆಲದಲ್ಲಿ ಹಿಂಗಿ ಕೊಳವೆ ಬಾವಿಗೆ ನೀರಿನ ಮೂಲವಾಗುತ್ತದೆ. ಕಬ್ಬಿಗೆರೆ ಮರಾಠಿಪಾಳ್ಯದ ಸಮುದಾಯ ಕೊಳವೆಬಾವಿಗೆ 6 ಜನ ಫಲಾನುಭವಿಗಳಿದ್ದು ತಲಾ ಅರ್ಧ ಎಕರೆ ಜಮೀನಿಗೆ ನೀರು ಪಡೆಯುತ್ತಿದ್ದಾರೆ.&lt;br /&gt;ಈ ಚಟುವಟಿಕೆಗಳಿಗೆ ಪೂರಕವಾಗಿ ಇಳಿಜಾರುಗಳಲ್ಲಿ ಹೆಚ್ಚಿನ ಕೊರಕಲನ್ನು ತಡೆಯಲು ತಡೆಗೋಡೆಗಳ ನಿರ್ಮಾಣ, ಮಣ್ಣು ಹಿಡಿದಿಡಲು ಕತ್ತಾಳೆ ತಡೆಗಳ ನೆಡುವಿಕೆ, ಉದಿ-ಬದುಗಳಲ್ಲಿ ತುಂಬಿ ಹೆಚ್ಚಾದ ನೀರು ಸರಾಗವಾಗಿ ಹರಿಯಲು ಕಲ್ಲಿನ ಕೊಡಿಗಳ ನಿರ್ಮಾಣ, ತೆರೆದ ಬಾವಿಗಳಿಗೆ ಹಳ್ಳದ ನೀರಿನ ಸಂಪರ್ಕ ಕಲ್ಪಿಸಿ ಮರುಪೂರಣ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿತಗೊಳಿಸಲು ಸಾವಯವ ಪ್ರಾತ್ಯಕ್ಷಿಕೆಗಳು, ಇದಕ್ಕೆ ಪೂರಕವಾಗಿ ಎರೆಹುಳು ತೊಟ್ಟಿಗಳ ನಿರ್ಮಾಣಕ್ಕೆ ಉತ್ತೇಜನ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಗ್ರ ಮಣ್ಣು-ನೀರು ಸಂರಕ್ಷಣೆ ಮಾಡಲಾಗಿದೆ. ಪ್ರತಿಯೊಂದು ಚಟುವಟಿಕೆಯೂ ಸಹ ಪರಸ್ಪರ ಪೂರಕವಾಗಿವೆ. ಅದೇ ರೀತಿ ಅವುಗಳನ್ನು ಸಂಯೋಜಿಸಲಾಗಿದೆ.&lt;br /&gt;ಈ ಎಲ್ಲಾ ಚಟುವಟಿಕೆಗಳು ಸಕಾಲದಲ್ಲಿ ಅನುಷ್ಠಾನಗೊಂಡು ನಿರೀಕ್ಷಿತ ಫಲಿತಾಂಶ ಬರಲು ಸಮುದಾಯ ಸಹಕಾರ ಅತ್ಯಂತ ಮುಖ್ಯ. ಅವರ ಮನವೊಲಿಸಿ, ಸಂಘಟನೆ ಮಾಡಲು ಸಂಸ್ಥೆಯು ನಿರಂತರ ಸಂಪರ್ಕ, ಪ್ರತಿಯೊಬ್ಬ ರೈತರ ಜೊತೆ ವೈಯಕ್ತಿಕ ಸಂಬಂಧ, ಗುಂಪು ಸಭೆಗಳು, ಶೈಕ್ಷಣಿಕ ಪ್ರವಾಸ ಮುಂತಾದ ಅನೇಕ ಮಾರ್ಗಗಳನ್ನು ಅನುಸರಿಸಿದೆ.&lt;br /&gt;ಕಣ್ಣ ಮುಂದಿರುವ ಪರಿಣಾಮಗಳು: ಇಷ್ಟೆಲ್ಲಾ ಚಟುವಟಿಕೆಗಳ ಅನುಷ್ಠಾನ, ಸಮುದಾಯದ ಕೈಜೋಡಿಸುವಿಕೆಯಿಂದ ಉಂಟಾಗಿರುವ ಪರಿಣಾಮ ಅದ್ಭುತ. ಅದು ಯೋಜನಾ ಪ್ರದೇಶದಲ್ಲಿ ಕಾಣುವ ಹಸಿರು, ಫಲಭರಿತ ಹುಣಸೆ ಮರಗಳು, ಮೇಲೇರಿರುವ ನೀರಿನ ಮಟ್ಟ  ಮತ್ತು ರೈತಾಪಿಗಳ ವಿಶ್ವಾಸಭರಿತ ಮಾತಿನಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಕೆಲವು ಅಂಶಗಳನ್ನು ನೋಡುವುದಾದರೆ;&lt;br /&gt;&lt;strong&gt;1. ಕೊಳವೆಬಾವಿಗಳಿಗೆ ಮರುಜೀವ:&lt;/strong&gt; ಯೋಜನೆ ಆರಂಭಕ್ಕೆ ಮುನ್ನ ಇಲ್ಲಿ ಅಂತರ್ಜಲ ಮಟ್ಟ 350 ರಿಂದ 400 ಅಡಿಗಳಿಗಿಳಿದಿತ್ತು, ಈಗ 200 ಅಡಿ ಅಳದಲ್ಲಿಯೇ ನೀರು ಲಭ್ಯವಾಗುತ್ತಿದೆ. ಚಿಕ್ಕಣ್ಣನಹಳ್ಳಿಯಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ಕೊಳವೆ ಬಾವಿಯೊಂದು ಯೋಜನಾ ಅನುಷ್ಠಾನದ ನಂತರ ಮತ್ತೆ ನೀರು ಹರಿಸುತ್ತಿದೆ. ನಂದಿಹಳ್ಳಿಯ  ಯಂಜೇರಪ್ಪನವರು 1996ರಲ್ಲಿ ತೆಗೆಸಿದ ಕೊಳವೆ ಬಾವಿ ಆರಂಭದಲ್ಲಿ 2.5 ಇಂಚು ನೀರು ಕೊಡುತ್ತಿತ್ತು. ಕ್ರಮೇಣ ಕಡಿಮೆಯಾಗುತ್ತಾ ಬಂದು 2005 ರಲ್ಲಿ ಕೇವಲ ಅರ್ಧ ಇಂಚಿಗಿಳಿಯಿತು. ಜಲ ಜೀವನಿ ಯೋಜನೆಯಡಿಯಲ್ಲಿ ಇವರು ತಮ್ಮ 10 ಎಕರೆ ಭೂಮಿಯಲ್ಲಿ ಉದಿ-ಬದು ಹಾಕಿಸಿ, 2 ಇಂಗು ಹೊಂಡಗಳನ್ನು ತೆಗೆಸಿದ ಪರಿಣಾಮ ಈಗ ಮತ್ತೆ 2.5 ಇಂಚು ನೀರು ಲಭ್ಯವಾಗುತ್ತಿದೆ. ಇದರಿಂದ ಉತ್ತೇಜನಗೊಂಡ ಯಂಜೇರಪ್ಪ ಮತ್ತೆರಡು ಇಂಗು ಹೊಂಡ ನಿರ್ಮಾಣಕ್ಕೆ ಮುಂದಾಗಿದ್ದಾರೆ.&lt;br /&gt;ನಂದಿಹಳ್ಳಿ ಗ್ರಾಮದ ರಂಗನಾಥ್ ರವರದೂ ಸಹ ಇದೇ ರೀತಿಯ ಅನುಭವ. ಇವರ 2 ಕೊಳವೆಬಾವಿಗಳಲ್ಲಿ ನೀರು ಬಿಟ್ಟೂ-ಬಿಟ್ಟೂ ಬರುತ್ತಿದ್ದುದು ಜಲ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಂಡ ನಂತರ ಉತ್ತಮ ನೀರು ಕೊಡುತ್ತಿವೆ.&lt;br /&gt;"ನಮ್ಮೂರಿನ ಪ್ರತಿಯೊಬ್ಬರೂ ಉದಿ-ಬದು ಹಾಕಿ, ಇಂಗು ಹೊಂಡ ತೆಗೆದು, ಗೋಕಟ್ಟೆಗಳಲ್ಲಿ ಹೂಳು ತೆಗೆದದ್ದರಿಂದ ನಮ್ಮೂರ ಹೊಲಗಳಿಂದ ಒಂದು ಹನಿ ನೀರು  ಪಕ್ಕದ ಕೆರೆಗೆ ಹೋಗಿಲ್ಲ, ಹಾಗಾಗಿ ಆ ಕೆರೆ ಈ ಸಲ ತುಂಬಲೇ ಇಲ್ಲ" ಎಂದು ಬಾಯ್ತುಂಬಾ ನಗುತ್ತಾರೆ ಇದೇ ಗ್ರಾಮದ ಪುಟ್ಟರಂಗಯ್ಯ.&lt;br /&gt;&lt;strong&gt;2. ಫಸಲಿನ ಇಳುವರಿ ಹೆಚ್ಚಳ:&lt;/strong&gt; ಇದು ಮತ್ತೊಂದು ಗಮನಿಸಬೇಕಾದ ಪರಿಣಾಮ. ಆಹಾರ ಬೆಳೆಗಳಾದ ರಾಗಿ, ಭತ್ತ ಹಾಗೂ ಉಳಿದ ಬೆಳೆಗಳಲ್ಲಿ ಇಳುವರಿ ಹೆಚ್ಚಾಗಿದೆ. ಉದಾಹರಣೆಗೆ ರಾಗಿಯಲ್ಲಿ 7-8 ಚೀಲ ಇದ್ದ ಇಳುವರಿ ಸರಾಸರಿ 2 ಚೀಲಗಳಷ್ಟು ಹೆಚ್ಚಾಗಿದೆ. ಈಗಾಗಲೇ ಪ್ರಸ್ತಾಪಿಸಿರುವಂತೆ ಹುಣಸೆ ಮರಗಳ ಇಳುವರಿ ಸಹ ಹೆಚ್ಚಿದೆ. ಸಿದ್ದಮ್ಮ ಎಂಬುವರ 3 ಹುಣಸೆ ಮರಗಳು ಪೂರಾ ಒಣಗಿದಂತಾಗಿದ್ದವು ಯೋಜನೆ ನಂತರ ಯಥಾಸ್ತಿತಿ ಇಳುವರಿ ನೀಡುತ್ತಿವೆ. ನಂದಿಹಳ್ಳಿಯ ರಂಗನಾಥ್ ರವರು ಹೇಳುವಂತೆ "ಮುಂಚೆ 7-8 ಕ್ವಿಂಟಾಲ್ ಇಳುವರಿ ನೀಡುತ್ತಿದ್ದ ಮರಗಳಲ್ಲಿ ಕಳೆದ ವರ್ಷ (2007) 10-12 ಕ್ವಿಂಟಾಲ್ ಇಳುವರಿ ಬಂದಿತ್ತು, ಈ ವರ್ಷ (2008) 15-16 ಕ್ವಿಂಟಾಲ್ ಇಳುವರಿ ನಿರೀಕ್ಷಿಸುತ್ತಿದ್ದೇವೆ."&lt;br /&gt;&lt;strong&gt;3. ಕೈತುಂಬಾ ಕೆಲಸ:&lt;/strong&gt; ಯೋಜನೆಯಲ್ಲಿ ಬಹುತೇಕ ಚಟುವಟಿಕೆಗಳು ಮಾನವಶ್ರಮವನ್ನು ಆಧರಿಸಿರುವುದರಿಂದ ಸತತವಾಗಿ ಕೆಲಸದ ಅವಕಾಶ ಲಭಿಸಿದೆ. ಕೇವಲ ಆರು ತಿಂಗಳು ಕೃಷಿ ಕೆಲಸ ನಿರ್ವಹಿಸಿ ಆ ನಂತರ ಕೆಲಸವಿಲ್ಲದೆ ಇರುತ್ತಿದ್ದ ರೈತ ಕುಟುಂಬಗಳಿಗೆ ಆ ಅವಧಿಯಲ್ಲಿ ಕೆಲಸ ಲಭ್ಯವಾಗಿದೆ, ಜೊತೆಗೆ ಕೃಷಿ ಕಾರ್ಮಿಕರಿಗಂತೂ ವರ್ಷವಿಡೀ ಕೆಲಸ ಸಿಕ್ಕಿದೆ. ಇದು ಎಲ್ಲ ವರ್ಗದವರ ಆರ್ಥಿಕ ಪರಿಸ್ತಿತಿ ಉತ್ತಮಗೊಳ್ಳಲು ಸಹಾಯಕವಾಗಿದೆ. ಉದಿ-ಬದು ಹಾಕುವ ಚಟುವಟಿಕೆ ಎಲ್ಲರಿಗೂ ಹೆಚ್ಚು ಕಾಲ ಕೆಲಸ ಒದಗಿಸಿದ್ದು, ಕಲ್ಲುಕೋಡಿ, ಗಲ್ಲಿಪ್ಲಗ್, ಎರೆಹುಳು ತೊಟ್ಟಿ ನಿರ್ಮಾಣ, ಕೊಳವೆ ಬಾವಿ ಮರುಪೂರಣದಂತಹ ಚಟುವಟಿಕೆಗಳು ವಿಶೇಷವಾಗಿ ಬೋವಿಗಳಿಗೆ ಮತ್ತು ಗಾರೆ  ಕೆಲಸದವರಿಗೆ ಕೆಲಸ ಒದಗಿಸಿವೆ.&lt;br /&gt;&lt;strong&gt;4. ಶಾಲಾ ಮಕ್ಕಳಿಗೆ ನೀರ ಅರಿವು:&lt;/strong&gt; ಯೋಜನಾ ವ್ಯಾಪ್ತಿಯಲ್ಲಿ ಬರುವ ಕಬ್ಬಿಗೆರೆಯ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಈಗ ನೀರ ನೆಮ್ಮದಿ.  ವರ್ಷ ಪೂರ್ತಿ ಮಳೆ ನೀರು ಕುಡಿಯುವ ಅವಕಾಶವನ್ನು ಜಲ ಜೀವನಿ ಯೋಜನೆ ಕಲ್ಪಿಸಿದೆ. 135 ವಿದ್ಯಾರ್ಥಿಗಳು ಮತ್ತು 16 ಬೋಧಕ ಮತು ಬೋಧಕೇತರ ಸಿಬ್ಬಂದಿಗಳಿರುವ  ಶಾಲೆಗೆ 10 ಸಾವಿರ ಲೀಟರ್ ಸಾಮರ್ಥ್ಯದ ಎರಡು ಮಳೆ ನೀರು ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿದ್ದು, ಇದರ ಉಸ್ತುವಾರಿಯನ್ನು ಮಕ್ಕಳಿಗೇ ವಹಿಸಲಾಗಿದೆ. ಶಾಲೆಯ ಸುತ್ತ-ಮುತ್ತ ಉದಿ-ಬದು, ಗಲ್ಲಿ ಪ್ಲಗ್ ಮುಂತಾದ ನೀರು ಸಂರಕ್ಷಣಾ ರಚನೆಗಳನ್ನು ನಿರ್ಮಿಸಿ ಮಕ್ಕಳಿಗೆ ನೀರ ಪಾಠ ಹೇಳಿಕೊಡಲಾಗುತ್ತಿದೆ. ಅಲ್ಲದೆ ಶಾಲೆಯ ಆವರಣದಲ್ಲಿ ಔಷಧಿ ತೋಟ ಮತ್ತು ತರಕಾರಿ ತೋಟಗಳನ್ನೂ ಬೆಳೆಸಲಾಗುತ್ತಿದೆ. ಮಕ್ಕಳಿಗೆ ಕಂಪ್ಯೂಟರ್ ಜ್ಞಾನದ ಅವಶ್ಯಕತೆಯನ್ನು ಮನಗಂಡು ಅದರ ವ್ಯವಸ್ಥೆಯನ್ನೂ ಯೋಜನಾ ವತಿಯಿಂದ ಸಹ ಮಾಡಲಾಗಿದೆ. ಈಗ ಕಬ್ಬಿಗೆರೆ ಶಾಲೆ ಉಳಿದ ಶಾಲೆಗಳಿಗೆ ಮಾದರಿ. ಈ ಎಲ್ಲಾ ಚಟುವಟಿಕೆಗಳಿಗೆ ಶಾಲಾ ಸಿಬ್ಬಂದಿಗಳ ನೆರವು ಮತ್ತು ಒತ್ತಾಸೆಗಳೂ ಸಹ ಉತ್ತಮವಾಗಿವೆ ಎನ್ನುತ್ತಾರೆ ಯೋಜನೆಯ ಅಧಿಕಾರಿ ಫಕೀರ ಸ್ವಾಮಿ.&lt;br /&gt;ಒಟ್ಟಾರೆ ಹೇಳಬೇಕೆಂದರೆ "ಜಲಜೀವನಿಯು" ಕಿರು ಜಲಾನಯನ ಯೋಜನೆಗಳಿಗೊಂದು ಉತ್ತಮ ಮಾದರಿ. ಕಾರ್ಯಕ್ರಮಗಳ ಆಯ್ಕೆ, ಅವುಗಳ ವ್ಯವಸ್ತಿತ ಸಂಯೋಜನೆ ಹಾಗೂ ಸಕಾಲದಲ್ಲಿ ಅನುಷ್ಠಾನಗೊಳಿಸಿರುವ ರೀತಿ ಅನುಕರಣ ಯೋಗ್ಯ. ಬರ್ಡ್-ಕೆ ಸಂಸ್ಥೆಯ ಹಿಂದಿನ ಅನುಭವ ಮತು ಬದ್ಧತೆ ಕ್ಷಿಪ್ರ ಗತಿಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಅಪಾರ ನೆರವಾಗಿದೆ. ಹಾಲ್ದೋಡ್ಡೇರಿ ಜಲಾನಯನ ಪ್ರದೇಶದಲ್ಲಿ ಪೈಲಟ್ ಯೋಜನೆಯಾಗಿ ಜಾರಿಗೊಂಡು ಯಶಸ್ವಿಯಾದ ಇದನ್ನು ಈ ವರ್ಷದಿಂದ (2008) ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಲ್ಲಿ ಅಳವಡಿಸಲು ಸಿದ್ಧತೆಗಳು ನಡೆದಿವೆ.&lt;br /&gt;"ಜಲಜೀವನಿ"ಎಂಬ ಹೆಸರೂ ಸಹ ಅರ್ಥಪೂರ್ಣವಾದುದು. ಎಲ್ಲರ ಜೀವನಕ್ಕೆ ಜಲವೇ ಅತ್ಯಂತ ಮೂಲಭೂತ ಅಂಶವಾಗಿರುವುದರಿಂದ ಅದನ್ನು ಕಾಪಾಡುವುದು ಮತ್ತು ಅಭಿವೃದ್ಧಿಪಡಿಸುವ ಯೋಜನೆಯ ಆಶಯಗಳೆಲ್ಲವೂ ಹೆಸರಿನಲ್ಲೇ ಅಡಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-5647184679224444710?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/5647184679224444710/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=5647184679224444710&amp;isPopup=true' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/5647184679224444710'/><link rel='self' type='application/atom+xml' href='http://www.blogger.com/feeds/1105138094084974837/posts/default/5647184679224444710'/><link rel='alternate' type='text/html' href='http://sundararao.blogspot.com/2011/06/blog-post.html' title='ನೇತ್ರಾವತಿ ತಿರುವು ಯೋಜನೆ: ಎತ್ತಿನಹೊಳೆಯಿಂದ ಪ್ರಾರಂಭ?'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-n0UaEwVXqfw/TfQ5ZF5AczI/AAAAAAAAAD4/pNyQwkETruM/s72-c/IMG_0005.JPG' height='72' width='72'/><thr:total>1</thr:total></entry><entry><id>tag:blogger.com,1999:blog-1105138094084974837.post-7356333075752072749</id><published>2011-05-21T09:02:00.000-07:00</published><updated>2011-05-21T09:35:18.776-07:00</updated><title type='text'>3 ಕೋಟಿ ರೂ. ಖರ್ಚಿನಲ್ಲಿ ಸರಕಾರದ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ</title><content type='html'>ಒಂದೆರಡು ತಿಂಗಳ ಹಿಂದೆ ಉದಯವಾಣಿ ಓದುತ್ತಿದ್ದಾಗ ಕೊನೆಯ ಪುಟದಲ್ಲಿ ಅರ್ಧ ಪುಟದ ಒಂದು ದೊಡ್ಡ ಜಾಹೀರಾತು ನೋಡಿದೆ. ಅದು ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ "ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ" ಎಂಬ ಸರಕಾರಿ ಸಂಸ್ಥೆಯ ಉದ್ಘಾಟನೆಯ ಆಮಂತ್ರಣ. ಈ ಕೇಂದ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ ಸೇರಿದ್ದು.&lt;br /&gt;ಬೆಂಗಳೂರಿನಲ್ಲಿ ಆಗಾಗ ಮಳೆ ಬಂದು ರಸ್ತೆಗಳಲ್ಲಿ ನೀರು ತುಂಬಿ ಜನರೂ, ವಾಹನಗಳೂ,  ಪರದಾಡುವುದನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ಆಕಾಶದಿಂದ ಬೀಳುವ ಈ ಮಳೆನೀರನ್ನು ಉಪಯೋಗಿಸಿಕೊಳ್ಳಲಾರದ  ನಮ್ಮ ದಡ್ಡತನಕ್ಕಾಗಿ ನಾನು ಮರುಗಿದ್ದೇನೆ. ಹಾಗಾಗಿ ಈ ಕೇಂದ್ರದ ಬಗ್ಗೆ ನನಗೆ ಕುತೂಹಲ ಬಂತು. ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಿದೆ. ನಾನು ಕೇಳಿದ ಮಾಹಿತಿಗಳೂ, ಅದಕ್ಕೆ ಬಂದ ಉತ್ತರವೂ ಹೀಗಿದೆ:&lt;br /&gt;&lt;br /&gt;&lt;strong&gt;೧. ಈ ಕೇಂದ್ರ ಹಾಕಿಕೊಂಡಿರುವ ಕಾರ್ಯ ಯೋಜನೆಗಳೇನು?&lt;/strong&gt;&lt;br /&gt;&lt;br /&gt;ನಾಗರೀಕರಲ್ಲಿ ಮಳೆನೀರು ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣ ಬಗ್ಗೆ ಜಾಗೃತಿ ನೀಡುವುದು, ಮಳೆ ನೀರು ಕೊಯ್ಲು ಮಾದರಿಗಳನ್ನು ನಾಗರಿಕರ ವೀಕ್ಷಣೆಗೆ ನಿರ್ಮಿಸಲಾಗಿದೆ. ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾಹಿತಿ ಒದಗಿಸುವುದು.&lt;br /&gt;&lt;br /&gt;&lt;strong&gt;೨. ಕೇಂದ್ರವು ಪ್ರತಿತಿಂಗಳು ತನ್ನ ಕಾರ್ಯವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುತ್ತದೆಯೇ?&lt;/strong&gt;&lt;br /&gt;ಮೇಲಧಿಕಾರಿಗಳಿಗೆ ಸಲ್ಲಿಸುತ್ತಿದೆ&lt;br /&gt;&lt;br /&gt;&lt;strong&gt;೩. ಈ ಕೇಂದ್ರದ ಒಟ್ಟು ಸಿಬ್ಬಂದಿಗಳ ಸಂಖ್ಯೆ, ಅವರ ಹುದ್ದೆ ಮತ್ತು ವೇತನದ ವಿವರ&lt;/strong&gt;&lt;br /&gt;&lt;br /&gt;ಒಬ್ಬ ಕಿರಿಯ ಅಭಿಯಂತರರನ್ನು ನಿಯೋಜಿಸಲಾಗಿದೆ. ರೂ. ೧೧,೦೦೦/- ಮತ್ತು ಇತರೆ ಭತ್ಯೆಗಳು&lt;br /&gt;&lt;br /&gt;&lt;strong&gt;೪.ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚು&lt;/strong&gt;&lt;br /&gt;&lt;br /&gt;ಸುಮಾರು 3 ಕೋಟಿ ರೂಪಾಯಿಗಳು&lt;br /&gt;&lt;br /&gt;&lt;strong&gt;೫. ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚನ್ನು ಯಾವ ನಿಧಿಯಿಂದ ಭರಿಸಲಾಗಿದೆ?&lt;/strong&gt;&lt;br /&gt;ಮಂಡಳಿಯ ನಿಧಿಯಿಂದ ಭರಿಸಲಾಗಿದೆ.&lt;br /&gt;&lt;br /&gt;ಈ ಸಂಸ್ಥೆಯ ಬಗ್ಗೆ ಈಗ ನಾನು ಏನೂ ಬರೆಯಲಾರೆ. ಇದನ್ನು ಬೆಂಗಳೂರಿನ ಮತ್ತು ಇತರ ಊರುಗಳ ಜನ ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. &lt;br /&gt;ಈ ಮಾಹಿತಿಯನ್ನು ಓದಿದ ಯಾರಿಗಾದರೂ, ಏನಾದರೂ ಹೇಳಬೇಕೆನಿಸಿದರೆ, ಖಂಡಿತಾ ಹೇಳಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-7356333075752072749?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/7356333075752072749/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=7356333075752072749&amp;isPopup=true' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/7356333075752072749'/><link rel='self' type='application/atom+xml' href='http://www.blogger.com/feeds/1105138094084974837/posts/default/7356333075752072749'/><link rel='alternate' type='text/html' href='http://sundararao.blogspot.com/2011/05/3.html' title='3 ಕೋಟಿ ರೂ. ಖರ್ಚಿನಲ್ಲಿ ಸರಕಾರದ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>1</thr:total></entry><entry><id>tag:blogger.com,1999:blog-1105138094084974837.post-8163259354786337173</id><published>2011-05-21T08:51:00.000-07:00</published><updated>2011-05-21T08:56:31.182-07:00</updated><title type='text'>ಮೈಕಿನ ಸಮಸ್ಯೆ: ನಾನು ಹೀಗೆ ಮಾಡಿದ್ದೇನೆ</title><content type='html'>(ನೀನಾಸಂ ಉಡುಪಿಯಲ್ಲಿ ಆಡಿದ ನಾಟಕ "ನೀರ ನಿಲುತಾಣ"ದ ಕುರಿತ ಚರ್ಚೆಯಲ್ಲಿ ಶ್ರೀ ನರೇಂದ್ರ ಪೈಗಳು "ನಾವು ಇವತ್ತು ಎಂಥೆಂಥ ಶಬ್ದಮಾಲಿನ್ಯವನ್ನು, ಸಾಮಾಜಿಕ ಪ್ರಜ್ಞೆಯೇ ಇಲ್ಲದೆ ಜಗತ್ತಿನಲ್ಲಿ ತಾವೊಬ್ಬರೇ ಬದುಕುತ್ತಿದ್ದೇವೋ ಎಂಬಂತೆ ಬದುಕಿ ಇತರರಿಗೆ ಅನಗತ್ಯ ಕಿರಿಕಿರಿ ಕೊಡುತ್ತಿರುವವರನ್ನೆಲ್ಲ ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರು ಇಂಥ ಒಂದು ಪ್ರಯೋಗವನ್ನು ಯಾಕೆ ಸಹಿಸದವರಾಗುತ್ತೇವೊ ಎಂಬ ಹಿನ್ನೆಲೆಯಲ್ಲಷ್ಟೇ ನನ್ನ ಮಾತು."  ಎಂದು ಹೇಳಿದ್ದರು. ಇದು ಅದಕ್ಕೆ ಉತ್ತರವಾಗಿ ಬರೆದದ್ದು. "ಅವಧಿ"ಯಲ್ಲಿ ಪ್ರಕಟವಾಗದ್ದರಿಂದ ಇಲ್ಲಿ ಹಾಕುತ್ತಿದ್ದೇನೆ.)&lt;br /&gt;ನರೇಂದ್ರ ಪೈಗಳು ಹೇಳುವಂತೆ ನಮ್ಮಲ್ಲಿ ಹೆಚ್ಚಿನವರು ಏನೆಲ್ಲ ಕಿರಿಕಿರಿಯನ್ನು ತುಟಿಪಿಟಕ್ಕೆನ್ನದೆ ಸಹಿಸಿಕೊಂಡೇ ಬದುಕುತ್ತಿದ್ದೇವೆ. ಆದರೆ, ನಾನು ಮೈಕಿನ ಈ ಕಿರಿಕಿರಿಯಿಂದ ಸ್ವಲ್ಪ ಮಟ್ಟಿಗಾದರೂ ತಪ್ಪಿಸಿಕೊಳ್ಳಲು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಹಾಗಾಗಿ ನಾಟಕದ ಪ್ರಯೋಗವನ್ನು ಮಾತ್ರ ಅಲ್ಲ, ಮೈಕನ್ನು ಸಹ  "ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರ ಪೈಕಿ" ಅಲ್ಲ.&lt;br /&gt;ಮೈಕಿನ (ಇಂಥದೇ ಬೇರೆ ಬೇರೆ ಸಮಸ್ಯೆಗಳಿವೆ. ಇರಲಿ.) ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರು ಮೈಕ್ ಹಾಕುತ್ತಾರೋ ಅವರೊಂದಿಗೆ ಜಗಳಕ್ಕಿಳಿಯಬೇಕು. ಜಗಳ ಯಾರಿಗೆ ಬೇಕು? ನಾವೆಲ್ಲ ಸಭ್ಯರು, ಸಜ್ಜನರು. ನಮ್ಮಿಂದ  ಅದು ಸಾಧ್ಯವಿಲ್ಲ. ಅದೂ ಅಲ್ಲದೆ, ಹಾಗೆ ಮಾಡಿದರೆ ಮೈಕಿನ ಗಲಾಟೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವ ಸಂಭವವೇ ಜಾಸ್ತಿ. ಪೋಲಿಸ್ ಸ್ಟೇಷನ್ನಿಗೆ ಹೋಗಿ ದೂರು ಕೊಡಬೇಕು. ಇದು ಇನ್ನೂ ದೊಡ್ಡ ರಗಳೆ. ನಮ್ಮ ದೇಶದಲ್ಲಿ ಇದೂ ಸಾಧ್ಯವಿಲ್ಲ. ಮತ್ತೆ? ಫ್ಯಾನಿನ ವೇಗ ಹೆಚ್ಚಿಸಿ, ಸಾಧ್ಯವಾದಷ್ಟೂ ಜೋರಾಗಿ ಶಬ್ದ ಆಗುವಂತೆ ಮಾಡಿ, ಮೈಕ್ ಶಬ್ದ ಬರುವ ಕಡೆಯ ಕಿಟಿಕಿ ಬಾಗಿಲು ಹಾಕಿ, ಮೈಕ್ ಹಾಕಿದವರಿಗೆ ಸಹಸ್ರನಾಮ ಅರ್ಚನೆ ಮಾಡುತ್ತಾ ಮಲಗಿಬಿಡಿ! ಮತ್ತೆ? ಮತ್ತೆ ಬೇರೆ ಯಾರಾದರೂ ನಿಮ್ಮ ಕಷ್ಟ ಕೇಳುವವರು ಸಿಕ್ಕಿದರೆ ನಿಮ್ಮ ತಲೆನೋವು ಅವರಿಗೆ ದಾಟಿಸಿ. ಅಲ್ಲಿಗೆ ಸಮಸ್ಯೆ ಪರಿಹಾರವಾಯಿತು! ಮಗನೋ ಮಗಳೋ ಎರಡನೇ ಪಿಯುಸಿ ಪರೀಕ್ಷೆ ಕಟ್ಟಿದ್ದರೆ ಏನು ಮಾಡುತ್ತೀರಿ? ಕೂತಲ್ಲಿಯೇ ರಕ್ತದೊತ್ತಡ ಹೆಚ್ಚಿಸಿಕೊಳ್ಳಿ! &lt;br /&gt;ಏನು ಮಾಡುವುದು? ಏನು ಪರಿಹಾರ? ಕೆಲವು ವರ್ಷಗಳ ಕೆಳಗೆ ನಾನು ನಮ್ಮ ತಾಲೂಕಿನ ಹಳ್ಳಿಯೊಂದರಲ್ಲಿ ಅದೆಷ್ಟೋ ದಿನಗಳ ಅಖಂಡ ಭಜನೆ ಮಾಡಿಸುವ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯೊಬ್ಬರನ್ನು ಕೇಳಿದೆ:"ನೀವು ಭಜನೆಗೆ ಮೈಕ್ ಯಾಕೆ ಹಾಕುತ್ತೀರಿ?" (ಹೀಗೆ ಪ್ರಶ್ನೆ ಕೇಳುವುದು ತುಂಬ ಅಪಾಯಕಾರಿ. ನಾನು ಮೊದಲೇ ಬೇರೆ ಪೀಠಿಕೆ ಹಾಕಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ).  ಅವರು ನನಗೆ ಭಜನೆಯ ಮಹತ್ವವನ್ನೂ, "ಭಜನೆಯಿದ್ದಲ್ಲಿ ವಿಭಜನೆ ಇಲ್ಲ" ಎಂಬ ತತ್ವವನ್ನೂ ವಿವರಿಸಿ ಹೇಳಿದರು. ನಾನು ಎಲ್ಲವನ್ನೂ ಸಮಾಧಾನದಿಂದ ಕೇಳಿ, "ಅದೆಲ್ಲ ಸರಿಯೇ. ಆದರೆ ಮೈಕ್ ಯಾಕೆ? ಅದಿಲ್ಲದೇ ಭಜನೆ ಮಾಡಬಹುದಲ್ಲ?" ಎಂದೆ. ಆಗ ಅವರು " ಓ ಅದಾ? ಅದು ನೋಡಿ, ಮೈಕ್ ಇಲ್ಲದಿದ್ದರೆ ಭಜನೆ ಮಾಡುವವರಿಗೆ  ಉಮೇದೇ ಬರುವುದಿಲ್ಲ" ಎಂದರು. ನನಗೆ ಶಬ್ದಮಾಲಿನ್ಯದ ವಿಷಯದಲ್ಲಿ ಒಂದು ಭಾಷಣ ಮಾಡುವ ಜವಾಬ್ದಾರಿ ಇದ್ದುದರಿಂದ, ನಾನು ಇನ್ನೂ ಹಲವರನ್ನು ಈ ಪ್ರಶ್ನೆ ಕೇಳಿದೆ. ಯಾರೂ ಸಮರ್ಪಕ ಉತ್ತರ ಕೊಡುವುದಿಲ್ಲ. ಆದರೆ, ಈ ಪ್ರಶ್ನೆ ಕೇಳಿದರೆ ಎಲ್ಲರಿಗೂ ಸಿಟ್ಟು ಬರುತ್ತದೆ..&lt;br /&gt;ಹಲವು ವರ್ಷಗಳ ಕೆಳಗೆ, ಉಡುಪಿಯಲ್ಲಿ ಕ.ಸಾ.ಪ. ಒಂದು ಸಮ್ಮೇಳನ ನಡೆಸಿದಾಗ ಅದಕ್ಕೆ ಪ್ರತಿ ಎಂಬಂತೆ ಅಲ್ಲಿಯೇ  ಮತ್ತೊಂದು ಸಮ್ಮೇಳನವೂ ನಡೆಯಿತು. ನಾನು ಅದಕ್ಕೆ ಹೋಗಿದ್ದೆ. ಜಿ. ರಾಜಶೇಖರ ಈ ಪ್ರತಿ ಸಮ್ಮೇಳನದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮ್ಮೇಳನ ಮುಗಿಸಿ ಬಂದ ನಾನು ಅದರ ಕುರಿತಂತೆ ಅವರಿಗೊಂದು ಪತ್ರ ಬರೆದಿದ್ದೆ. ಅದರಲ್ಲಿ, ಊರಿಗೆಲ್ಲ ಕೇಳುವಂತೆ ಮೈಕ್ ಹಾಕಿದ ಕ್ರಮದ ಬಗ್ಗೆ ಆಕ್ಷೇಪಿಸಿದ್ದೆ. ಅವರು ನಾನು ಎತ್ತಿದ ಹಲವು ಸಂದೇಹಗಳಿಗೆ ಉತ್ತರ ಕೊಟ್ಟರು. ಮೈಕಿನ ಬಗ್ಗೆ ಮೌನ ವಹಿಸಿದರು. ಎಂಥೆಂಥ ಸೂಕ್ಷ್ಮವಾಗಿ ಆಲೋಚಿಸಬಲ್ಲವರೂ ಸಹ ಮೈಕ್ ಬಳಕೆಯ ಬಗ್ಗೆ ಹೇಗೆ ಒಂದು ನಿರ್ಲಿಪ್ತಿ ಬೆಳಸಿಕೊಂಡು ಬಿಟ್ಟಿರುತ್ತಾರೆ ಎಂಬುದಕ್ಕೆ ಇದನ್ನು ಹೇಳಿದೆ ಅಷ್ಟೆ.&lt;br /&gt;ಬಂಟ್ವಾಳದಲ್ಲಿ ವಂಶ ಎಂಬ ಪತ್ರಿಕೆ ಇದೆ. ಈ ಪತ್ರಿಕೆಯ ಸಂಪಾದಕ ವರ್ಗದವರೊಂದಿಗೆ ನಾನೂ ಸೇರಿಕೊಂಡು ನಮ್ಮೂರಿನ ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ಸಂದರ್ಶನಕ್ಕಾಗಿ ಹೋಗಿದ್ದೆವು. ಪೋಲೀಸಿನವರ ಪ್ರಕಾರ, ಮೈಕು ಒಂದು ಸಮಸ್ಯೆಯೇ ಅಲ್ಲ. ಅದನ್ನು ಬಳಸುವವರೆಲ್ಲ ಸರಿಯಾದ ಲೈಸೆನ್ಸ್ ಪಡೆದೇ ಬಳಸುತ್ತಿದ್ದಾರೆ! ಸಮಸ್ಯೆಯೇ ಅಲ್ಲದ ಮೇಲೆ  ಪರಿಹಾರದ ಮಾತೆಲ್ಲಿ ಬಂತು?&lt;br /&gt;ಮಾಹಿತಿ ಹಕ್ಕು ಬಂದನಂತರ ಅದರ ಮೂಲಕ ಈ ಸಮಸ್ಯೆಗೆ ಏನಾದರೂ ಮದ್ದರೆಯಲು ಸಾಧ್ಯವೇ ಎಂದು ಯೋಚಿಸಿದೆ. ದಾರಿ ಕಾಣಲಿಲ್ಲ. ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಯವರಿಗೆ ಹೀಗೊಂದು  ಪತ್ರ ಬರೆದೆ: &lt;br /&gt;&lt;br /&gt;&lt;em&gt;ವಿಷಯ: ಧ್ವನಿವರ್ಧಕ ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ಬಗ್ಗೆ&lt;br /&gt;ಧ್ವನಿವರ್ಧಕಗಳು ಉಂಟು ಮಾಡುವ ಶಬ್ದಮಾಲಿನ್ಯದಿಂದ ಅನೇಕ ನಾಗರಿಕರಿಗೆ ಕಿರಿಕಿರಿಯಾಗುತ್ತಿದ್ದರೂ ಸಹ ಸೂಕ್ತ ಮಾಹಿತಿಯ ಕೊರತೆಯಿಂದ ಅಂಥವರು ಅಸಹಾಯಕರಾಗಿದ್ದಾರೆ. ಆದ್ದರಿಂದ ಇನ್ನು ಮುಂದೆ ಧ್ವನಿವರ್ಧಕ ಬಳಸಲು ಅನುಮತಿ ನೀಡುವಾಗ, ಅನುಮತಿ ಪಡೆದವರು ಈ ಕೆಳಗಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ನೀಡುವಂತೆ ಅವರಿಗೆ ಸೂಚಿಸಬೇಕಾಗಿ ಕೋರುತ್ತೇನೆ.&lt;br /&gt;೧. ಧ್ವನಿವರ್ಧಕ ಬಳಸಲು ಅನುಮತಿ ಪಡೆದವರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ&lt;br /&gt;೨. ಬಳಸುವ ಧ್ವನಿವರ್ಧಕಗಳ ಸಂಖ್ಯೆ ಮತ್ತು ಅವುಗಳನ್ನು ಬಳಸುವ ಸ್ಥಳ&lt;br /&gt;೩. ಧ್ವನಿವರ್ಧಕಗಳನ್ನು ಬಳಸುವ ಅವಧಿ (ಯಾವ ತಾರೀಕಿನಿಂದ ಯಾವ ತಾರೀಕಿನವರೆಗೆ ಮತ್ತು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ)&lt;br /&gt;೪. ಅನುಮತಿಯ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ದೂರು ನೀಡಬಹುದಾದ ಅಧಿಕಾರಿಯ ಪದನಾಮ ಮತ್ತು ಮೊಬೈಲ್ ಸಂಖ್ಯೆ/ಸ್ಥಿರ ದೂರವಾಣಿ ಸಂಖ್ಯೆ&lt;br /&gt;(ಯಾವುದೇ ಕಾರ್ಯಕ್ರಮ ಮಾಡುವವರು ತಮ್ಮ ಕಾರ್ಯಕ್ರಮದ ಬಗ್ಗೆ ಕರಪತ್ರ ಅಥವಾ ಆಮಂತ್ರಣವನ್ನು ಮುದ್ರಿಸುತ್ತಾರೆ. ಅದರಲ್ಲಿಯೇ ಈ ಮಾಹಿತಿಗಳನ್ನು ಮುದ್ರಿಸತಕ್ಕದ್ದೆಂದು ಅವರಿಗೆ ಸೂಚಿಸಬಹುದು. ಜೊತೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಈ ಮಾಹಿತಿಯನ್ನು ಪ್ರದರ್ಶಿಸಲು ಸೂಚಿಸಬಹುದು.)&lt;br /&gt;ಮೇಲ್ಕಂಡ ಕ್ರಮವನ್ನು ಕೈಗೊಂಡಲ್ಲಿ ಸಾರ್ವಜನಿಕರು ತಮಗೆ ಧ್ವನಿವರ್ಧಕದ ಬಳಕೆಯಿಂದ ಕಿರಿಕಿರಿಯಾದರೆ ಕೂಡಲೇ ದೂರು ಸಲ್ಲಿಸಲು ಅನುಕೂಲವಾಗುತ್ತದೆ ಎಂದು ನನ್ನ ಅಭಿಪ್ರಾಯ.&lt;br /&gt;ಈ ಪತ್ರಕ್ಕೆ ತಮ್ಮಿಂದ ಸಕಾರಾತ್ಮಕ ಉತ್ತರವನ್ನು ನಿರೀಕ್ಷಿಸುತ್ತೇನೆ.&lt;/em&gt;&lt;br /&gt;ಜಿಲ್ಲಾಧಿಕಾರಿಗಳು &lt;strong&gt;"ಸೂಕ್ತ ಹಿಂಬರಹ ನೀಡುವುದು"&lt;/strong&gt; ಎಂದು ಟಿಪ್ಪಣಿ ಹಾಕಿ, ಪತ್ರವನ್ನು ಎಸ್ ಪಿಯವರ ಆಫೀಸಿಗೆ ಕಳಿಸಿದ್ದಾರೆ.ಅಲ್ಲಿಂದ ಉತ್ತರ ಬಂದಿಲ್ಲ. ಒಂದು ನೆನಪೋಲೆ ಬರೆದಿದ್ದೇನೆ. ಆದರೂ ಉತ್ತರ ಬಂದಿಲ್ಲ. ಇನ್ನೊಂದು ನೆನಪೋಲೆ ಬರೆಯುವ ಸಮಯ ಆಗಿದೆ. ಬರೆಯುತ್ತೇನೆ. ಈ ಹಂತದಲ್ಲಿ ಮಾಹಿತಿ ಹಕ್ಕನ್ನು ಬಳಸಿಕೊಳ್ಳುವುದನ್ನೂ ಪರಿಶೀಲಿಸಬಹುದು.&lt;br /&gt; ಓದುಗರಿಂದ ಕೂಡಲೇ ಬರುವ ಪ್ರತಿಕ್ರಿಯೆ "ಹೀಗೆ ಪತ್ರ ಬರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ" ಎಂಬುದು. ಅಂಥವರಿಗೆ ನನ್ನ ಪ್ರಶ್ನೆ: "ಬರೆದು ನೋಡಿದ್ದೀರಾ?" ಏನೂ ಮಾಡದಿರುವುದಕ್ಕಿಂತ ಹೀಗೆ ಮಾಡುವುದು ಉತ್ತಮ ಅಲ್ಲವೆ? ಇದು ಪ್ರಜಾಪ್ರಭುತ್ವ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಅಣ್ಣಾ ಹಜಾರೆಯಂಥವರಿಂದ ನಮಗೊಂದು ನೈತಿಕ ಬೆಂಬಲಕ್ಕಿಂತ ಹೆಚ್ಚೇನೂ ಸಿಗುವುದು ಸಾಧ್ಯವಿಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-8163259354786337173?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/8163259354786337173/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=8163259354786337173&amp;isPopup=true' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/8163259354786337173'/><link rel='self' type='application/atom+xml' href='http://www.blogger.com/feeds/1105138094084974837/posts/default/8163259354786337173'/><link rel='alternate' type='text/html' href='http://sundararao.blogspot.com/2011/05/blog-post_21.html' title='ಮೈಕಿನ ಸಮಸ್ಯೆ: ನಾನು ಹೀಗೆ ಮಾಡಿದ್ದೇನೆ'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>2</thr:total></entry><entry><id>tag:blogger.com,1999:blog-1105138094084974837.post-749960006989290923</id><published>2011-04-23T22:55:00.000-07:00</published><updated>2011-04-30T23:39:51.429-07:00</updated><title type='text'>ನೇತ್ರಾವತಿ ತಿರುವು: ಡಾ. ಮಧು ಸೀತಪ್ಪನವರೊಂದಿಗೆ ಸಂವಾದ</title><content type='html'>&lt;a href="http://2.bp.blogspot.com/-Jtb8Qtbsv1A/TbPCJC-ws_I/AAAAAAAAADE/k07hhDdCFx0/s1600/26012008778.jpg"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 240px;" src="http://2.bp.blogspot.com/-Jtb8Qtbsv1A/TbPCJC-ws_I/AAAAAAAAADE/k07hhDdCFx0/s320/26012008778.jpg" border="0" alt=""id="BLOGGER_PHOTO_ID_5599032222426379250" /&gt;&lt;/a&gt;&lt;br /&gt;ಪ್ರಿಯ ಮಧು ಸೀತಪ್ಪನವರಿಗೆ ನಮಸ್ಕಾರ. &lt;br /&gt;ದೂರದ ಬ್ರಿಟನ್ನಿನಲ್ಲಿದ್ದೂ ತಾಯಿನಾಡಿನ ಸಮಸ್ಯೆಗಳ ಬಗ್ಗೆ ನೀವು ತೋರಿಸುತ್ತಿರುವ ಆಸಕ್ತಿಗಾಗಿ ಅಭಿನಂದನೆಗಳು.&lt;br /&gt;ನಾನು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನಿಮ್ಮ ಲೇಖನವನ್ನು ಓದಿರಲಿಲ್ಲ. ಇತ್ತೀಚೆಗೆ ಅಕಸ್ಮಾತ್ತಾಗಿ ನಿಮ್ಮ ಬ್ಲಾಗನ್ನು ನೋಡಿದೆ. ನೇತ್ರಾವತಿ ತಿರುವು ಯೋಜನೆಯ ಕುರಿತು ನಾನು ಮೊದಲಿಂದಲೂ ಆಸಕ್ತಿ ತಳೆದವನು. ಹಾಗಾಗಿ ನಿಮ್ಮ ಲೇಖನಗಳನ್ನು ಕುತೂಹಲದಿಂದ ಓದಿದೆ. ಓದಿದ ನಂತರ ನನ್ನ ಕೆಲವು ವಿಚಾರಗಳನ್ನು ಮಂಡಿಸಿದ್ದೇನೆ.  ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ.&lt;br /&gt;"ಪ್ರಪಂಚದ ಮುಂದಿನ ಮಹಾಯುದ್ಧ ನೀರಿಗಾಗಿ ನಡೆಯಲಿದೆ" ಎಂದು ಯಾರೋ ಹೇಳಿದ್ದಾರಂತೆ. ನೀರು ದಿನದಿಂದ ದಿನಕ್ಕೆ ಅಮೂಲ್ಯವಾಗುತ್ತ ಹೋಗುತ್ತಿದೆ. ನಮ್ಮ ಚರ್ಚೆಯ ಮೂಲದಲ್ಲಿರುವುದೂ  ನೀರೇ. ನೀರಿಲ್ಲದ ಬಯಲುಸೀಮೆಯ ಜನರ, ಅದರಲ್ಲೂ ಹೆಂಗಸರ ಕಷ್ಟ ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಆದರೆ ಬಯಲು ಸೀಮೆಯ ಜನರ ಸಮಸ್ಯೆಗೆ ಪಶ್ಚಿಮ ಘಟ್ಟಗಳಿಂದ ನೀರು ಒಯ್ಯುವುದು ಪರಿಹಾರ ಅಲ್ಲ. ಅದು ಆಯಾ ಸ್ಥಳದಲ್ಲಿಯೇ ಪರಿಹಾರ ಮಾಡಿಕೊಳ್ಳಬೇಕಾದ ಸಮಸ್ಯೆ.&lt;br /&gt;ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಮುಖ್ಯವಾಗಿ ಜನರ ಸಹಭಾಗಿತ್ವ ಬೇಕು. ಭಾರತಕ್ಕೆ ಅದರ ದೊಡ್ಡ ಪರಂಪರೆಯೇ ಇದೆ. ಬಹಳ ಹಿಂದಿನಿಂದಲೂ ಬಯಲು ಸೀಮೆಯಲ್ಲಿ ಕೆರೆಗಳೇ ನೀರಿನ ಮೂಲಗಳಾಗಿದ್ದವು. ಆದರೆ "ಅಭಿವೃದ್ಧಿ" ಆದ ಹಾಗೆ ವಿದ್ಯುತ್ ಬಂತು. ಬೋರ್ ವೆಲ್ ತೆಗೆಯುವುದು ಸಾಧ್ಯವಾಯಿತು. ಕೆರೆಗಳನ್ನು, ಅದರೊಂದಿಗೆ ಬೆಳೆದು ಬಂದಿದ್ದ ನೀರು  ಹಂಚಿಕೆಯ ವ್ಯವಸ್ಥೆಯನ್ನು ನಾವು  ಕೈಬಿಟ್ಟೆವು. ಈಗ "ಇದ್ದಿದ್ದಿಲ್ಲ ಪೆದ್ದಂಭಟ್ಟ" ಎಂಬಂತಾಗಿದೆ ನಮ್ಮ ಸ್ಥಿತಿ.&lt;br /&gt;ಸರಕಾರವೇನೋ ಕೆರೆಗಳ ಪುನರುಜ್ಜೀವನ ಎಂಬ ಹೆಸರಿನಲ್ಲಿ ಹಣವನ್ನು "ನೀರಿನಂತೆ" (ಈಗ ಹಾಗೆ ಹೇಳುವ ಹಾಗಿಲ್ಲ ಅಲ್ಲವೆ?) ಚೆಲ್ಲುತ್ತಿದೆ. ಆದರೆ, ಎಲ್ಲಿಯವರೆಗೆ ಜನರ ಸಾಮೂಹಿಕ ಸಹಭಾಗಿತ್ವ ಇಲ್ಲವೋ, "ನಮ್ಮ ಊರ ಕೆರೆಗೆ ನಾವೇ ಜವಾಬ್ದಾರರು" ಎಂಬ ಭಾವನೆ ಪುನಃ ಬರುವುದಿಲ್ಲವೋ, ಎಲ್ಲಿಯವರೆಗೆ ನಾವು ಪ್ರತಿಯೊಂದಕ್ಕೂ ಸರಕಾರದ ಕಡೆಗೆ ನೋಡುತ್ತಿರುತ್ತೇವೋ ಅಲ್ಲಿಯವರೆಗೂ ಸಮಸ್ಯೆಗೆ ಪರಿಹಾರವಿಲ್ಲ.&lt;br /&gt;ಬಹುಶಃ ವಿನಾಯಕರೂ ಇದನ್ನು ಹೇಳಿರಬೇಕು. ನನ್ನ ನಿಲುವೂ ಅದೇ: ಜನಸಂಖ್ಯೆಯ ನಿಯಂತ್ರಣ, ಕೆರೆಗಳ ಪುನರುಜ್ಜೀವನ, ಜನರ ಸಹಭಾಗಿತ್ವ, ಮಳೆನೀರು ಕೊಯ್ಲು, ನೀರು ನಿರ್ವಹಣೆ, ಕಾಡುಗಳನ್ನು ಮತ್ತೆ ಬೆಳೆಸುವುದು ಮುಂತಾದ ವಿಧಾನಗಳಿಂದಲೇ ಬಯಲುಸೀಮೆಯ ನೀರಿನ ಸಮಸ್ಯೆ ಪರಿಹಾರವಾಗಬೇಕು. ಅದನ್ನು ಸಾಧಿಸಲು ಸಾಧ್ಯ. ರಾಳೇಗಾಂವ್ ಸಿದ್ದಿಯಲ್ಲಿ ಅಣ್ಣಾ ಹಜಾರೆ  ಅದನ್ನು ಸಾಧಿಸಿ ತೋರಿಸಿದ್ದಾರೆ ಎಂದುಕೊಂಡಿದ್ದೇನೆ. ನೀರಿನ ಕುರಿತಾದ ಶ್ರೀ ಪಡ್ರೆಯವರ ಪುಸ್ತಕಗಳನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಇಲ್ಲವಾದರೆ ದಯವಿಟ್ಟು ಓದಿ ನೋಡಿ.&lt;br /&gt;ಇನ್ನು ಪಶ್ಚಿಮಘಟ್ಟಗಳಿಂದ ನೀರು ಒಯ್ಯುವುದರ ಪರವಾಗಿ ನಿಮ್ಮ ಲೇಖನದಲ್ಲಿರುವ ಹಲವು ಅಂಶಗಳಿಗೆ ಉತ್ತರಿಸಲು ಇಲ್ಲಿ ಪ್ರಯತ್ನಿಸಿದ್ದೇನೆ. ವಾದ ನನ್ನ ಉದ್ದೇಶವಲ್ಲ. ಪಶ್ಚಿಮ ಘಟ್ಟವೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ. ಅದರ ಹೊಟ್ಟೆ ಕೊಯ್ಯುವ ಕೆಲಸ ನಾವು ಮಾಡುವುದು ಬೇಡ.&lt;br /&gt;&lt;br /&gt;&lt;strong&gt;ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುತ್ತಮುತ್ತಲಿರುವ ಇರುವ ಇಪ್ಪತ್ತೆರಡು ನದಿಗಳ ನೀರು ಅರಬ್ಬೀ ಸಮುದ್ರಕ್ಕೆ ಸೇರುತ್ತದೆ (೩೦೧೬ ಟಿ‌ಎಂಸಿ). ಅಂದರೆ ನೇತ್ರಾವತಿ ನದಿಯಿಂದ ಮಾತ್ರ ಅರಬ್ಬೀ ಸಮುದ್ರ ಜೀವಿಸಿಲ್ಲ. ಮುಂಗಾರು ಮಳೆಯ ಸಂದರ್ಭದಲ್ಲಿ ಈ ಜೀವನದಿಯಿಂದ ಪ್ರತಿದಿನ ೪೧೫ ಟಿ‌ಎಂಸಿಯಷ್ಟು ನೀರು ಸಮುದ್ರದ ಪಾಲಾದರೆ, ಉಳಿದ ೨೧ ನದಿಗಳು ಮತ್ತು ಅನೇಕ ಹಳ್ಳಗಳಿಂದ ೨೪೦೦ ಟಿ‌ಎಂಸಿಯಷ್ಟು ಸಿಹಿ ನೀರು ಸಮುದ್ರದಲ್ಲಿ ಕರಗುತ್ತದೆ. ಈ ಅಂಕಿ ಅಂಶಗಳನ್ನು ಏಕೆ ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇನೆ ಎಂದರೆ, ವಿನಾಯಕ ಭಟ್ಟರು ತಮ್ಮ ಲೇಖನದಲ್ಲಿ ಈ ಯೋಜನೆಯಿಂದ ಸಮುದ್ರದ ಉಪ್ಪಿನಾಂಶ ಹೆಚ್ಚಾಗುತ್ತದೆ ಹಾಗೂ ನೇತ್ರಾವತಿ ನದಿಗೆ ಸಮುದ್ರದ ನೀರು ನುಗ್ಗುವುದರಿಂದ ನದಿಯ ಉಪ್ಪಿನಾಂಶವು ಹೆಚ್ಚಾಗುತ್ತದೆ ಎಂದಿದ್ದಾರೆ. ಈ ಯೋಜನೆಗೆ ನೇತ್ರಾವತಿ ನದಿಯಿಂದ ಕೇವಲ ೪೦ ಟಿ.ಎಂ.ಸಿ ನೀರನ್ನು ಮಾತ್ರ ಬಳಸುತ್ತೇವೆ. ಅಂದರೆ ನೇತ್ರಾವತಿಯ ಮಳೆಗಾಲದ ೪೧೫ ಟಿ.ಎಂ.ಸಿ.ಯಲ್ಲಿ ಕೇವಲ ಶೇ.೧೦ರಷ್ಟು ನೀರು ಕಡಿಮೆಯಾಗುವುದರಿಂದ ನದಿಯ ನೀರಿನ ಲವಣಾಂಶಗಳಾಗಲಿ ಅಥವಾ ಉಪ್ಪಿನಾಂಶವಾಗಲಿ ಅಥವಾ ಸಿಹಿ ನೀರಿನ ಜೀವರಾಶಿಯ ಆಹಾರಕ್ಕಾಗಲಿ ತೊಂದರೆಯಾಗುತ್ತದೆನ್ನುವುದು ಹಾಸ್ಯಾಸ್ಪದ. ಮತ್ತೊಂದು ಅವರ ಪ್ರಶ್ನೆಯೆಂದರೆ, ಸಮುದ್ರಕ್ಕೆ ಸೇರುವ ನದಿ ನೀರು ಕಡಿಮೆಯಾದರೆ ಸಮುದ್ರದ ಉಪ್ಪಿನಾಂಶ ಹೆಚ್ಚಾಗುವ ಆತಂಕ. ನೇತ್ರಾವತಿ ನದಿ ಸಮುದ್ರ ಸೇರುವ ಆಜು ಬಾಜಿನಲ್ಲಿ ಸುಮಾರು ೨೦೦೦ ಟಿ.ಎಂ.ಸಿ.ಯಷ್ಟು ನೀರು ಉಳಿದ ೨೧ ನದಿಗಳಿಂದ ಹಾಗು ಅನೇಕ ಹಳ್ಳಗಳಿಂದ ಮಳೆಗಾಲದಲ್ಲಿ ಸೇರುತ್ತದೆ. ಇದಲ್ಲದೆ ಸಮುದ್ರದ ಸಾವಿರಾರು ಚದರ ಕಿ.ಮಿ.ಗಳ ಮೇಲೆ ೪೫೦೦ ಮಿ.ಮಿ.ಗಿಂತ ಹೆಚ್ಚು ಮಳೆ ಬೀಳುವುದರಿಂದ ಸಾವಿರಾರು ಟಿ.ಎಂ.ಸಿ.ಯಷ್ಟು ಸಿಹಿ ನೀರು ಸಮುದ್ರಕ್ಕೆ ಸೇರುತ್ತಿರುವಾಗ ಸಮುದ್ರದ ಉಪ್ಪಿನಾಂಶ ಹೆಚ್ಚಾಗಿ ಮೀನುಗಾರರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸುವವರಿಗೆ ಏನೆನ್ನಬೇಕೊ ನನಗೆ ತಿಳಿಯುತ್ತಿಲ್ಲ. ಏಕೆಂದರೆ ಅರಬ್ಬೀ ಸಮುದ್ರದಂತಹ ಅಕ್ಷಯಪಾತ್ರೆಗೆ ಅಸಂಖ್ಯಾತ ನದಿಗಳ ನೀರು, ಆಕಾಶದಿಂದ ಬೀಳುವ ಮಳೆಯೆ ನೀರು ಬಂದು ಸೇರುತ್ತಲೇ ಇರುತ್ತದೆ.&lt;/strong&gt;&lt;br /&gt;&lt;br /&gt;&lt;em&gt;ಪರಮಶಿವಯ್ಯನವರ ದೃಷ್ಟಿ ನೇತ್ರಾವತಿಯನ್ನು ತಿರುಗಿಸುವುದಕ್ಕೆ ಸೀಮಿತವಾಗಿಲ್ಲ. ಅವರ ವರದಿಯ ಒಂದನೇ ಅಧ್ಯಾಯದ ೧.೦೭ನೇ ಅಂಶ ಹೀಗಿದೆ: ".....conceiving this water for beneficial use, lies the INGENUITY of the Engineers, and marks as the first step in harnessing further waters of west flowing rivers." &lt;br /&gt;೧.೦೮ರಲ್ಲಿ ಹೀಗಿದೆ:"..... It also paves way  for utilising more water of west flowing rivers to drought affected areas" . &lt;br /&gt;ಅಧ್ಯಾಯ ೩ರ ೩.೦೫ರಲ್ಲಿ ಹೀಗಿದೆ: "All the waters of East flowing Rivers have been harnessed (some projects are under construction) and it is time to plan for harvesting these west flowing river waters for beneficial use."&lt;br /&gt;ಅಧ್ಯಾಯ ೨೦ರ ೨೦.೦೪ರಲ್ಲಿ ಹೀಗಿದೆ:&lt;br /&gt;It is expected that west flowing waters can be diverted to East by installing Riversible turbines. When this new concept becomes feasible this can be adopted in our country, when there will be huge quantity of water available to our state.&lt;br /&gt;ಇನ್ನು ನದಿಗಳ ಸಿಹಿನೀರು ಸಮುದ್ರವನ್ನು ಸೇರುವುದನ್ನು ತಡೆಯುವುದರಿಂದ ಆಗುವ ಪರಿಣಾಮಗಳೇನು ಎಂಬುದನ್ನು ತಜ್ನರು ಅಧ್ಯಯನ ಮಾಡಿ ವರದಿ ಕೊಡಬೇಕು. ಅದು ಜನಸಾಮಾನ್ಯರು ಉತ್ತರಿಸಬಹುದಾದ ಪ್ರಶ್ನೆಯಲ್ಲ.&lt;br /&gt;ಮಂಗಳೂರಿನ ಸಮುದ್ರಕ್ಕೆ ಈಗಾಗಲೇ ಎಂ ಆರ್ ಪಿ ಎಲ್ ಮತ್ತಿತರ ಕಂಪೆನಿಗಳು ತಮ್ಮ ತ್ಯಾಜ್ಯವನ್ನು ಸುರಿಯುತ್ತಿವೆ. ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿ ಇನ್ನು ಸ್ವಲ್ಪ ಸಮಯದಲ್ಲೇ ತನ್ನ ತ್ಯಾಜ್ಯಗಳನ್ನು ಸಮುದ್ರಕ್ಕೆ ಬಿಡಲು ಪ್ರಾರಂಭಿಸುತ್ತದೆ. ದಿನದಿಂದ ದಿನಕ್ಕೆ ಆಧುನಿಕ ತಾಂತ್ರಿಕತೆಯಿಂದಾಗಿ ಹೆಚ್ಚು ಹೆಚ್ಚು ಅಪಾಯಕಾರಿ ತ್ಯಾಜ್ಯಗಳು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ನದಿಗಳ ಮೂಲಕ ಸಮುದ್ರವನ್ನು ಸೇರುತ್ತಿದೆ.  ಮೀನುಗಾರಿಕೆ ಮಾಡುವ ಡೀಸೆಲ್ ಚಾಲಿತ ದೋಣಿಗಳಿಂದಾಗಿಯೂ ಸಮುದ್ರದ ನೀರು ಮಲಿನಗೊಳ್ಳುತ್ತಿದೆ. ಇದರೊಂದಿಗೆ, ಸೇರಬೇಕಾದ ಸಿಹಿನೀರು ಸೇರದೆ ಹೋದರೆ ಏನಾದೀತು ಎಂಬುದನ್ನು ಅಧ್ಯಯನ ಮಾಡಿಯೇ ಹೇಳಬೇಕಾಗುತ್ತದೆ. ಮೇಲ್ನೋಟಕ್ಕೆ ಕಾಣುವಂತೆ, ಮೀನುಗಾರಿಕೆ ನಿಧಾನವಾಗಿಯಾದರೂ ಅಪಾಯಕ್ಕೆ ಸಿಕ್ಕಿಕೊಳ್ಳುತ್ತಿದೆ.&lt;/em&gt;&lt;br /&gt;&lt;br /&gt;&lt;strong&gt;ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳ ತುದಿಯ ನೇತ್ರಾವತಿ ನದಿಯ ಒಟ್ಟು ಜಲಾಯನ ಪ್ರದೇಶದ ಶೇ.೧೦ರಷ್ಟು ಪ್ರದೇಶದಲ್ಲಿ ಮಾತ್ರ ಮಳೆ ಕೊಯ್ಲು ಮಾಡಲಾಗುತ್ತದೆ.&lt;/strong&gt; &lt;br /&gt; &lt;br /&gt;&lt;em&gt;ಶೇ. ೧೦ ಎನ್ನುವುದು ಪ್ರಾರಂಭ ಮಾತ್ರ. ಮುಂದೆ ಅದು ಹೆಚ್ಚುತ್ತ ಹೋಗುತ್ತದೆ.&lt;/em&gt;&lt;br /&gt;&lt;br /&gt;&lt;strong&gt;೧೯೧೩ರಲ್ಲಿ ನೇತ್ರಾವತಿ ನದಿ ಬತ್ತಿತ್ತು ಎಂದು ಮಾತ್ರ ತಿಳಿಸಲಾಗಿದೆ. ಆದರೆ ವಿನಾಯಕ್ ಅವರು ಎರಡು ಮುಖ್ಯ ಪ್ರವಾಹಗಳ (೧೯೨೪, ೧೯೭೪) ಬಗ್ಗೆ ತಿಳಿಸೇ ಇಲ್ಲ. ಆ ಎರಡು ಸಂದರ್ಭದಲ್ಲಿ ಬಂಟ್ವಾಳವು ಸಂಪೂರ್ಣ ಮುಳುಗಿ ಅಲ್ಲಿದ್ದ ನಿವಾಸಿಗಳು ಗುಳೆ ಎದ್ದು ಹೋಗಿದ್ದರು. ಅಷ್ಟಲ್ಲದೆ ಈ ನದಿಯಿಂದ ಅನೇಕ ಸಲ ತೀರದ ಪ್ರದೇಶಗಳು ಪ್ರವಾಹ ಪೀಡೆಯಿಂದ ಬಳಲಿದೆ.&lt;/strong&gt;&lt;br /&gt;&lt;br /&gt;&lt;em&gt;ನಾನು ಸುಮಾರು ಮೂವತ್ತು ವರ್ಷದಿಂದ ಬಂಟ್ವಾಳದಲ್ಲಿದ್ದೇನೆ.  ಬಂಟ್ವಾಳದವರಿಗೆ ನೆರೆ ಖಂಡಿತವಾಗಿಯೂ ಒಂದು ಸಮಸ್ಯೆಯಲ್ಲ. &lt;br /&gt;(ಈ ನಡುವೆ ವಿನಾಯಕರದ್ದಾಗಲಿ, ಮೋಹನ ಹೆಗಡೆಯವರದ್ದಾಗಲಿ ಪ್ರತಿಕ್ರಿಯೆ ನನಗೆ ಓದಲು ಸಿಗಲಿಲ್ಲ. ಅದನ್ನು ಒದಗಿಸಬಹುದೆ?)&lt;/em&gt;&lt;br /&gt;&lt;br /&gt;&lt;strong&gt;ಅರಣ್ಯ ನಾಶದ ಮುಖ್ಯ ಕಾರಣಗಳೆಂದರೆ ಜಮೀನಿನ ಒತ್ತುವರಿ ಮತ್ತು ಮರಗಳ ಕಳ್ಳ ಸಾಗಾಣಿಕೆ. ಇದಲ್ಲದೆ ಕೊಂಕಣ ರೈಲು ಯೋಜನೆಯ ಅನುಷ್ಠಾನದಲ್ಲಿ ೨೦೦೦ ಹೆಕ್ಟೆರುಗಳಿಗಿಂತ ಹೆಚ್ಚು ಅರಣ್ಯ ನಾಶವಾದದ್ದಲ್ಲದೆ, ೪೦ ಸುರಂಗಗಳ ಕೊರೆಯುವಿಕೆಯಿಂದ ಹಲವಾರು ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿವೆ. ಇದಲ್ಲದೆ ಸಕಲೇಶಪುರದಿಂದ- ಮಂಗಳೂರಿನವರೆಗೆ ಕೈಗೆತ್ತಿಕೊಳ್ಳುವ ಡಬಲ್ ರೋಡ್ ರಚನೆಯಿಂದಲೂ ಸಹ ಅರಣ್ಯ ನಾಶವಾಗುವುದಲ್ಲದೆ, ಭೂ ಕುಸಿತ ಸಂಭವಿಸುವ ಸಾಧ್ಯತೆಗಿಳಿವೆ. ಹಾಗೆಂದು ಅಭಿವೃದ್ಧಿಯ ವಿಚಾರದಲ್ಲಾಗಲಿ ಅಥವಾ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ತ್ಯಾಗ ಬಲಿದಾನಗಳನ್ನು ಮಾಡಬೇಕಾಗುತ್ತದೆ. ಯಾವುದೇ ಒಂದು ಮರವನ್ನು ಕಡಿದರೆ ಅದರ ಬದಲಿಗೆ ಮತ್ತೊಂದು ಗಿಡ ನೆಡಬೇಕೆಂದು ಒ‌ಔ‌ಇ‌ಈ  ತಿಳಿಸಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರ ಲಿಖಿತ ಭರವಸೆಯ ವಿನಃ ಕೇಂದ್ರ ಅರಣ್ಯ ಇಲಾಖೆ ಇಂತಹ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ.&lt;/strong&gt;&lt;br /&gt;&lt;br /&gt;&lt;em&gt;ಹಿಂದೆ ನಾಶವಾಗಿದೆ ಹೌದು. ಅದು ಇನ್ನು ಮುಂದೆ ಕಾಡನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಬೇಕು, ಕಡಿಯುವುದಕ್ಕೆ ಸಮರ್ಥನೆಯಾಗಬಾರದು. &lt;/em&gt;&lt;br /&gt;&lt;br /&gt;&lt;strong&gt;ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ. ನೂತನ ಮಾದರಿಯ ತಂತ್ರ ಜ್ಞಾನದಿಂದ ಕೊಳವೆಗಳನ್ನು ಅಳವಡಿಸುವುದರಿಂದ ಯಾವುದೇ ರೀತಿಯ ಬೃಹತ್ ಯತ್ರೋಪಕರಣಗಳ ಬಳಕೆಯ ಅವಶ್ಯಕತೆ ಇರುವುದಿಲ್ಲ. ನನ್ನ ಲೇಖನದಲ್ಲಿ ಈ ಪೈಪ್ ಅಳವಡಿಕೆಗೆ ಬೇಕಾಗುವ ಸ್ಥಳ ೭೩೦ ಹೆಕ್ಟೇರ್ ಎಂದು ಬರೆದಿದ್ದೆ. ಕ್ಷಮಿಸಿ ಅದು ಕಣ್ ತಪ್ಪಿನಿಂದ ಆದದ್ದು- ೧೮೦ ಹೆಕ್ಟೇರ್‌ನಷ್ಟು ಮಾತ್ರ ಬೇಕಾಗುತ್ತದೆ (ಪೂರಕ ದಾಖಲೆಗಳು ನನ್ನ ಬಳಿ ಇವೆ). ಬೇಕಾಗುವ ಕಾಲುವೆಯ ಉದ್ದ ಮತ್ತು ಅಗಲವನ್ನು ಲೆಕ್ಕಹಾಕಿದರೆ ೧೮೦ ಹೆಕ್ಟೇರ್‌ಗಳಷ್ಟು ಪ್ರದೇಶ ಮಾತ್ರ ಬೇಕಾಗುತ್ತದೆ. ಈ ೧೮೦ ಹೆಕ್ಟೇರ್‌ಗಳಲ್ಲಿ ಅರಣ್ಯ ಪ್ರದೇಶವಲ್ಲದೆ, ಕಾಫಿ ಹಾಗು ರಬ್ಬರ್ ಎಸ್ಟೇಟ್‌ಗಳು, ಸ್ಕ್ರಬ್ ಏರಿಯಾ ಮತ್ತು ಹಳ್ಳ, ಮಾರ್ಜಿನ್‌ಗಳು ಸೇರಿವೆ&lt;/strong&gt;.&lt;br /&gt;&lt;br /&gt;&lt;em&gt;ಯೋಜನೆಯ ಸ್ವರೂಪದ ಸ್ಪಷ್ಟ ಕಲ್ಪನೆ ಇಲ್ಲದೆ ಈ ಬಗ್ಗೆ ಏನೂ ಹೇಳುವುದು ಕಷ್ಟ. ಕಿ.ಮೀ.ಗೆ ಏಳು ಇಂಚು ಇಳಿಜಾರು ಇರುವ ಕಾಲುವೆಗಳ ಮೂಲಕ ನೀರು ಸಂಗ್ರಹಿಸುವುದಾಗಿ ಪರಮೇಶ್ವರಯ್ಯನವರು ಹೇಳಿದ್ದಾರೆ. ಕೊಳವೆಗಳ ವಿಷಯ ಅವರು ಎಲ್ಲೂ ಮಾತಾಡಿದ್ದು ಕಾಣಲಿಲ್ಲ. ಮೇಲಿಂದ ಇಳಿದು ಬಂದ ನೀರು ಸಂಗ್ರಹ ಆಗಬೇಕಾದರೆ ತೆರೆದ ಕಾಲುವೆ ಬೇಕು; ಈ ಕಾಲುವೆಗಳಲ್ಲಿ ನೀರು ಇಂಗಬಾರದು. ಎಂದರೆ ಅವುಗಳನ್ನು ಕಾಂಕ್ರೀಟಿನಲ್ಲಿ ನಿರ್ಮಾಣ ಮಾಡಬೇಕು. ಕಾಲುವೆಯ ಪ್ರಾರಂಭದ ಗಾತ್ರವನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ಹೋಗುತ್ತ ಹೋಗುತ್ತ ಸಂಗ್ರಹವಾಗುವ ನೀರಿನ ಪ್ರಮಾಣ ಹೆಚ್ಚುತ್ತ ಹೋಗುವುದರಿಂದ, ಕಾಲುವೆಯ ಗಾತ್ರವನ್ನೂ ಅದಕ್ಕೆ ತಕ್ಕಂತೆ ಹೆಚ್ಚಿಸುತ್ತ ಹೋಗಬೇಕಾದೀತು. ಇದೆಲ್ಲ ತಾಂತ್ರಿಕ ವಿಷಯಗಳು. "ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ." ಎಂದು ಪರಮಶಿವಯ್ಯನವರು ಎಲ್ಲಿ ಹೇಳಿದ್ದಾರೆ ಎಂದು ತಿಳಿಸಬಹುದೆ? &lt;/em&gt;&lt;br /&gt;&lt;br /&gt;&lt;strong&gt;ಬೆಳೆಯುತ್ತಿರುವ ನಗರವಾದ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿರುವುದರಿಂದ ದಿನವೊಂದಕ್ಕೆ ೫೦೦ ಮಿಲಿಯನ್ ಗ್ಯಾಲನ್‌ಗಳಷ್ಟು ನೀರು ಬೇಕೆಂದು ಹೇಳಿದ್ದಾರೆ! ಇದು ಸತ್ಯಕ್ಕೆ ದೂರವಾದುದು.&lt;/strong&gt;&lt;br /&gt;&lt;br /&gt;&lt;em&gt;ಹೌದು. ೫೦೦ ಎಂಜಿಡಿ ಎಂದು ಯಾರಾದರೂ ಹೇಳಿದ್ದರೆ ಅದು ಸರಿಯಲ್ಲ.&lt;br /&gt;ಇಡೀ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿಲ್ಲ. ಈಗ ಮಂಗಳೂರು ವಿಶೇಷ ಅರ್ಥಿಕ ವಲಯ ಕಂಪೆನಿ ಎಂಬ ಕಂಪೆನಿ ಅಸ್ತಿತ್ವಕ್ಕೆ ಬಂದಿದೆ. ಈ ಕಂಪೆನಿಗೆ ಸುಮಾರು ೪೦೦೦ ಎಕ್ರೆ ಭೂಮಿ ಬೇಕಾಗಿದ್ದು, ಈಗ ಸುಮಾರು ೨೦೦೦ ಎಕ್ರೆಯಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.&lt;br /&gt;ಈ ಕಂಪೆನಿಯ ಒಟ್ಟು ನೀರಿನ ಅವಶ್ಯಕತೆ ೪೫ ಎಂಜಿಡಿ. ಈ ಪೈಕಿ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು ೧೫ ಎಂಜಿಡಿ ನೀರೆತ್ತಲು ಸರಕಾರ ಅನುಮತಿ ನೀಡಿದೆ. ಈ ೧೫ರ ಪೈಕಿ ೧೨.೫ ಎಂಜಿಡಿ ನೀರನ್ನು ಕಂಪೆನಿ ನೇತ್ರಾವತಿ ನದಿಯಿಂದ ಎತ್ತಲು ಉದ್ದೇಶಿಸಿದೆ. ಈ ಬಗ್ಗ ಪೈಪ್ ಲೈನ್ ಅಳವಡಿಸಲು ಈಗಾಗಲೇ ಟೆಂಡರು ಕರೆಯಲಾಗಿದೆ.&lt;br /&gt;ನೇತ್ರಾವತಿ ನದಿಯ ನೀರು ಬಳಸುವ ಮುಖ್ಯ ಊರುಗಳೆಂದರೆ, ಕುಕ್ಕೆ ಸುಬ್ರಹ್ಮಣ್ಯ (ಕುಮಾರಧಾರೆ), ಧರ್ಮಸ್ಥಳ, ಉಪ್ಪಿನಂಗಡಿ, ಪುತ್ತೂರು, ಬಂಟ್ವಾಳ ಮತ್ತು ಮಂಗಳೂರು. ನದಿಯ ಉದ್ದಕ್ಕೂ ಅಸಂಖ್ಯಾತ ಸಣ್ಣ ಊರುಗಳಿವೆ. ಈ ಊರುಗಳೂ ನೀರಿಗಾಗಿ ನೇತ್ರಾವತಿಯನ್ನು ಆಶ್ರಯಿಸಿವೆ. ಅಸಂಖ್ಯಾತ ಪಂಪ್ ಸೆಟ್ ಗಳನ್ನು ನದಿಗೆ ಅಳವಡಿಸಲಾಗಿದೆ. (ನೇತ್ರಾವತಿ ಎಂದರೆ ಕುಮಾರಧಾರೆ ಮತ್ತು ನೇತ್ರಾವತಿ ನದಿಗಳ ಸಂಗಮ. ಸುಬ್ರಹ್ಮಣ್ಯದ ಕಡೆಯಿಂದ ಬರುವ ಕುಮಾರಧಾರೆ ಮತ್ತು  ಧರ್ಮಸ್ಥಳದ ಕಡೆಯಿಂದ ಬರುವ ನೇತ್ರಾವತಿಗಳು ಉಪ್ಪಿನಂಗಡಿಯಲ್ಲಿ ಸಂಗಮವಾಗಿ ಮುಂದೆ ನೇತ್ರಾವತಿ ಎಂಬ ಹೆಸರಿನಲ್ಲಿ ಮಂಗಳೂರಿನವರೆಗೂ ಹರಿಯುತ್ತದೆ.)&lt;br /&gt;ನೇತ್ರಾವತಿಗೆ ಈಗ ಮುಖ್ಯವಾಗಿ ಐದು ಅಣೆಕಟ್ಟುಗಳಿವೆ: ಮೊದಲನೆಯದು ಕುಮಾರಧಾರೆ ನದಿಗೆ ಪುತ್ತೂರಿನ ಸಮೀಪ ಕಟ್ಟಿರುವ ಅಣೆಕಟ್ಟು. ಇದರಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಎರಡನೆಯದು  ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ. ಇದು ಕಿರು ಜಲವಿದ್ಯುತ್ ಯೋಜನೆ. ಮೂರನೆಯದು ಎಂ ಆರ್ ಪಿ ಎಲ್ ಕಂಪೆನಿಯ ಅಣೆಕಟ್ಟು. ಈ ಅಣೆಕಟ್ಟಿನಿಂದ ಒಟ್ಟು ೬ ಎಂಜಿಡಿ ನೀರು ಎತ್ತಲಾಗುತ್ತಿದೆ.  ನಾಲ್ಕನೆಯದು  ಎ ಎಂ ಆರ್ ಪವರ್ ಪ್ರಾಜೆಕ್ಟ್ ನ ಅಣೆಕಟ್ಟು. ಇದು ಕಿರು ಜಲವಿದ್ಯುತ್ ಯೋಜನೆ. ಐದನೆಯದು ಮಂಗಳೂರು ಮಹಾನಗರ ಪಾಲಿಕೆಯದು. ಇದರಿಂದ ಕಳೆದ ವರ್ಷದ ವರೆಗೂ ೧೮ ಎಂಜಿಡಿ ನೀರೆತ್ತಲಾಗುತ್ತಿತ್ತು. ಈ ವರ್ಷದಿಂದ ೩೬ ಎಂಜಿಡಿ ನೀರೆತ್ತಲು ಸಿದ್ಧತೆಗಳು ನಡೆಯುತ್ತಿವೆ.&lt;br /&gt;ಆರನೆಯದಾಗಿ ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿ ೧೨.೫ ಎಂಜಿಡಿ ನೀರೆತ್ತಲು ಸಿದ್ಧತೆಗಳನ್ನು ನಡೆಸುತ್ತಿದೆ&lt;br /&gt;ಪರಮಶಿವಯ್ಯನವರ ಯೋಜನೆ ಮಳೆಯ ನೀರನ್ನು ಮಾತ್ರ ತಿರುಗಿಸುವ ಉದ್ದೇಶ ಹೊಂದಿರುವುದರಿಂದ, ಮೇಲುನೋಟಕ್ಕೆ ಅದರಿಂದ ಯಾವ ತೊಂದರೆಯೂ ಆಗುವಂತೆ ಕಾಣುವುದಿಲ್ಲ. ಆದರೆ ಸಮಸ್ಯೆ ಇಷ್ಟು ಸರಳ ಅಲ್ಲ.&lt;br /&gt;ನೇತ್ರಾವತಿಯ ಜೀವ ಇರುವುದು ಪಶ್ಚಿಮ ಘಟ್ಟದ ಕಾಡುಗಳಲ್ಲಿ. ಅಲ್ಲಿ ಕಾಡು ಇದ್ದರೆ ಮಾತ್ರ ನೇತ್ರಾವತಿ ಮಾತ್ರವಲ್ಲ, ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಎಲ್ಲ ನದಿಗಳಲ್ಲೂ ನೀರಿರುವುದು ಸಾಧ್ಯ. ಅಲ್ಲಿ ಕಾಡು, ಗುಡ್ಡಗಳನ್ನು ನಾಶ ಮಾಡುವುದೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಕೊಯ್ದ ಹಾಗೆಯೇ.&lt;br /&gt;ಕರ್ನಾಟಕ ಸರಕಾರ ಈಗ ಸುಮಾರು ೨೭ ಕಿರುಜಲವಿದ್ಯುತ್ ಯೋಜನೆಗಳಿಗೆ ಈ ಪ್ರದೇಶದಲ್ಲಿ ಅನುಮತಿ ಕೊಟ್ಟಿದೆ. ಇವುಗಳಲ್ಲಿ ಕೆಲವು ಈಗಾಗಲೇ ಕಾರ್ಯಾರಂಭ ಮಾದಿವೆ. (ತೀರ ಇತ್ತೀಚೆಗೆ ಇನ್ನು ಮುಂದೆ ಕಿರು ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ಕೊಡುವುದಕ್ಕೆ ಹೈಕೋರ್ಟು ತಡೆಯಾಜ್ನೆ ನೀಡಿದೆ) ಈ ಯೋಜನೆಗಳಲ್ಲಿ ಹಲವು, ನೇರವಾಗಿ ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲೇ ಇವೆ. ಇವುಗಳ ಉತ್ಪಾದನಾ ಘಟಕಗಳಿಗಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕಾಡು ನಾಶ ಆಗುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಅವು ಉತ್ಪಾದಿಸುವ ವಿದ್ಯುತ್ತನ್ನು ಪೇಟೆಗೆ ಸಾಗಿಸಲು ವಿದ್ಯುತ್ ಲೈನುಗಳನ್ನು ಎಳೆಯುವಾಗ ಅಪಾರ ಪ್ರಮಾಣದ ಕಾಡು ನಾಶವಾಗುತ್ತದೆ. ಮಾತ್ರವಲ್ಲ, ಸದ್ಯಕ್ಕೆ ದುರ್ಗಮವಾಗಿರುವ ಈ ಪ್ರದೇಶಕ್ಕೆ ಎಲ್ಲ ರೀತಿಯ ಖದೀಮರುಗಳಿಗೂ ಪ್ರವೇಶ ಅತ್ಯಂತ ಸುಲಭವಾಗುತ್ತದೆ. ವಾಸ್ತವವಾಗಿ ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳಲು ಮಾಡಬೇಕಾದ ಮೊದಲ ಕೆಲಸವೆಂದರೆ ಅಲ್ಲಿಗೆ ಮನುಷ್ಯಪ್ರವೇಶವನ್ನು ಸಾಧ್ಯವಾದಷ್ಟೂ  ತಡೆಯುವುದು. ಆದರೆ, ಈ ಕಿರು ಜಲವಿದ್ಯುತ್ ಯೋಜನೆಗಳಿಂದಾಗಿ ಪಶ್ಚಿಮಘಟ್ಟಗಳು ತಮ್ಮ ಸ್ವರೂಪವನ್ನೇ ಕಳೆದುಕೊಳ್ಳಲಿವೆ. ಇದರೊಂದಿಗೆ  ನೇತ್ರಾವತಿ ತಿರುವು ಯೋಜನೆ ಜಾರಿಗೆ ಬಂದರಂತೂ, ಅಷ್ಟು ಭಾಗ ಪಶ್ಚಿಮ ಘಟ್ಟಗಳು ಸಂಪೂರ್ಣ ವಿರೂಪಗೊಳ್ಳಲಿವೆ. ಈ ತಪ್ಪನ್ನು, ಮುಂದೆ , ಬೇಕೆಂದರೂ ಸರಿಪಡಿಸಿಕೊಳ್ಳುವುದು ಸಾಧ್ಯವಿಲ್ಲ.&lt;/em&gt;&lt;br /&gt;&lt;br /&gt;&lt;strong&gt;ಎರಡೂ ಜಿಲ್ಲೆಗಳಲ್ಲಿ ಸರಾಸರಿ ೭೪೫ ಮಿ.ಮೀ. ವಾರ್ಷಿಕ ಮಳೆಯಾಗುತ್ತದೆ. ಮಳೆ ಕೊಯ್ಲಿನಿಂದ ಸುಮಾರು ೮.೪೨ ಟಿ.ಎಮ್.ಸಿ ನೀರನ್ನು ಶೇಖರಿಸಬಹುದಾಗಿದೆ. ಎರಡೂ ಜಿಲ್ಲೆಗಳಿಗೆ ಒಟ್ಟು ೬೦ ಟಿ.ಎಂ.ಸಿ. ನೀರು ಬೇಕಾಗುತ್ತದೆ. ಅಂದರೆ ನಮಗೆ ಸುಮಾರು ೫೦ ಟಿ,ಎಂ.ಸಿ.ಗಳಷ್ಟು ನೀರು ಪ್ರತಿ ವರ್ಷ ಕೊರತೆ ಇದೆ.&lt;/strong&gt; &lt;br /&gt; &lt;br /&gt;&lt;em&gt;ನೀವು ಯಾವ ಎರಡು ಜಿಲ್ಲೆಗಳನ್ನು ಹೇಳುತ್ತಿದ್ದೀರೆಂದು ನನಗೆ ತಿಳಿಯಲಿಲ್ಲ. ಆ ಪೈಕಿ ಒಂದು ಕೋಲಾರ ಎಂದು ಭಾವಿಸುತ್ತೇನೆ.  ಅಲ್ಲಿ ಯಾರಾದರೂ, ವೈಯಕ್ತಿಕ ನೆಲೆಯಲ್ಲಾದರೂ ಮಳೆನೀರು ಸಂಗ್ರಹ ಮಾಡಿ ಬಳಸುತ್ತಿರುವ ಉದಾಹರಣೆಗಳು ನಿಮಗೆ ತಿಳಿದಿದೆಯೆ? ಅವರ ಅಭಿಪ್ರಾಯವೇನು? ಅಂಥವರ ವಿಳಾಸ ಸಿಕ್ಕಿದರೆ, ಅಲ್ಲಿಗೆ ಹೋಗಿ ನೋಡಿಬರುವ ಆಸೆ ನನಗಿದೆ. ದಯವಿಟ್ಟು ಗೊತ್ತಿದ್ದರೆ ತಿಳಿಸಿ.&lt;/em&gt;&lt;br /&gt;&lt;br /&gt;&lt;strong&gt;ಕರಾವಳಿಯ ಜಾರ್ಜ್ ಫರ್ನಾಂಡಿಸ್ ರ್‍ಯೆಲ್ವೆ ಮಂತ್ರಿಯಾಗಿದ್ದಾಗ ಕೊಂಕಣ ರ್‍ಯೆಲ್ವೆ ಪ್ರಾಜೆಕ್ಟ್ ಜಾರಿಯಾಯ್ತು. ಇದರಲ್ಲಿ ಸುಮಾರು ೪೦೦೦ ಹೆಕ್ಟೆರುಗಳಷ್ಟು ಅರಣ್ಯ ನಾಶವಾದರೂ ಕರಾವಳಿಯ ಯಾವುದೇ ಪರಿಸರವಾದಿಗಳು ಚಕಾರವೆತ್ತಲಿಲ್ಲ.&lt;/strong&gt;&lt;br /&gt;&lt;br /&gt;&lt;em&gt;ಇದು ವಾದದ ಮಾತು. ಪರಿಸರವಾದಿಗಳು ಅದನ್ನೂ ವಿರೋಧಿಸಿರಬಹುದು. ಇರಲಿ.&lt;br /&gt;ಕೊಂಕಣ ರೈಲ್ವೆ ಹೋಗುವುದು ಉದ್ದಕ್ಕೂ ಸಮುದ್ರದ ಬದಿಯಲ್ಲಿ. ಬಹುಶಃ ಎಲ್ಲಿಯೂ ಅದರ ಹಳಿಗಳು ಸಮುದ್ರದಿಂದ ಒಂದು ಕಿ.ಮೀ. ಗಿಂತ ಹೆಚ್ಚು ದೂರದಲ್ಲಿಲ್ಲ. ಈ ಪ್ರದೇಶದಲ್ಲಿ ಇದ್ದಿರಬಹುದಾದ ಕಾಡಿಗೂ, ಪಶ್ಚಿಮಘಟ್ಟದ ಹೃದಯಭಾಗದಲ್ಲಿ ಇರುವ ಕಾಡಿಗೂ ಹೋಲಿಕೆ ಇಲ್ಲ.&lt;br /&gt;"ಅಲ್ಲಿ ಕಡಿದಿದ್ದೇವೆ ಇಲ್ಲಿ ಯಾಕೆ ಕಡಿಯಬಾರದು?" ಎನ್ನುವುದಕ್ಕಿಂತ "ಅಲ್ಲಿ ಕಡಿದಿದ್ದೇವೆ, ಇಲ್ಲಾದರೂ ಉಳಿಸಿಕೊಳ್ಳೋಣ" ಎನ್ನುವುದು ನಮ್ಮ ದೃಷ್ಟಿಕೋನವಾಗಬೇಕು ಅಲ್ಲವೆ?&lt;/em&gt;&lt;br /&gt;&lt;br /&gt;&lt;strong&gt;ಆದರೆ ಪರಮಶಿವಯ್ಯನವರ ವರದಿಯಂತೆ ನೇತ್ರಾವತಿ ನದಿಯ ಜಲಾನಯನದ ಪ್ರದೇಶದಲ್ಲಿ ಮಳೆ ಕೊಯ್ಲು ಮಾಡಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ೪೦೦೦ದಿಂದ ೬೦೦೦ ಮಿ.ಮೀ. ಮಳೆಯಾಗುವ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಪೂರ್ವಕ್ಕೆ ಹರಿಸಿ, ಹೇಮಾವತಿಯಲ್ಲಿರುವ ಹೆಚ್ಚುವರಿ ನೀರಿಗೆ ಬೆರೆಸಿ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕೊಡಲಾಗುತ್ತದೆ.&lt;/strong&gt;&lt;br /&gt;&lt;br /&gt;&lt;em&gt;ಪರಮಶಿವಯ್ಯನವರ ವರದಿಯ ಮೂರನೆಯ ಅಧ್ಯಾಯದ ೩.೦೯ರ ಕೊನೆಯಲ್ಲಿ ಹೀಗಿದೆ: "The total yield of water at Pani Mangalore site is 446.62 TMC and total utilisation by these two projects is 142.46 TMC only" &lt;br /&gt;೫ನೇ ಅಧ್ಯಾಯದ ೫.೦೦ರಲ್ಲಿ ಹೀಗೆ ಹೇಳಿದೆ: "Total quantity of water available for this project 90.73"&lt;br /&gt;"ಹೇಮಾವತಿಯ ನೀರಿನೊಂದಿಗೆ ಬೆರಸುವ" ವಿಷಯವನ್ನು ಪರಮಶಿವಯ್ಯನವರು ಪ್ರಸ್ತಾವಿಸಿಲ್ಲ. ೫ನೇ ಅಧ್ಯಾಯದ b vii ನಲ್ಲಿ ಹೀಗಿದೆ:&lt;br /&gt;Main canal crosses Hemavathy River from right to left bank of the river&lt;br /&gt;The main canal is continued further from E to F for a length of 16 Kms in contour with bed slope of seven inches per Km and crosses the Hemavathy river by means of a aqueduct. The bed level of the canal on the left Bank  at pont F is 900 Mtrs The F.R. of Hemavathy reservoir is 891 Mtrs (2922 ft.) thus this canal will be about 9 Mtrs above the FRL of the Reservoir. "&lt;/em&gt;&lt;br /&gt;&lt;br /&gt;&lt;strong&gt;ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಅಣೆಕಟ್ಟನ್ನು ಕಟ್ಟುವುದಿಲ್ಲ &lt;/strong&gt;&lt;br /&gt;&lt;br /&gt;&lt;em&gt;ಅಧ್ಯಾಯ ೧ ರ ೧.೦೫: Any scheme for utilisation of heavy quantity of water, involves submersion of large areas of fertile lands, besides Rehabilitation of number of villages/Towns. But the project is entirely different and makes use of existing Tanks for storage"&lt;br /&gt;ಅಧ್ಯಾಯ ೩ರ ೩.೧೧: "As the configuration does not permit large scale storage reservoirs it is envisaged to Construct 27 small reservoirs to hold the yield available from the respective C.A. of hallas ......."&lt;br /&gt;ಅಧ್ಯಾಯ ೫ ರ ೫.೦೨ i): "...Total capacity of 27 reservoirs is about 39.365 TMC, some extra storage capacity is kept to store flash flood waters, since extra submersion area is negligible." &lt;br /&gt;ಈ ಯೋಜನೆಯನ್ನು ರೂಪಿಸುವಾಗ ಪರಮಶಿವಯ್ಯನವರಿಗೆ ಹತ್ತಿರ ಹತ್ತಿರ ಎಂಬತ್ತು ವರ್ಷ ಆಗಿರಬೇಕು. ಅವರ ವರದಿಯಲ್ಲಿ ಎಷ್ಟೋ ಸಲ ಅವರು ಹೇಳಿದ್ದನ್ನೇ ಹೇಳುತ್ತಾರೆ. ಅವರು ಹಿರಿಯರು ಎಂಬುದರಿಂದ, ಅವರ ವಯಸ್ಸಿಗೆ ಗೌರವ ಕೊಟ್ಟು ಅದನ್ನು ಸಹಿಸಿಕೊಳ್ಳಬಹುದು. ಆದರೆ ಮೇಲಿನ ಅವರ ಮಾತುಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?  "But the project is entirely different and makes use of existing Tanks for storage" ಎಂಬ ಅವರ ಮಾತು ಅಪ್ಪಟ ಸುಳ್ಳಲ್ಲವೆ? &lt;/em&gt;/&lt;br /&gt; &lt;br /&gt;&lt;strong&gt;ಪಶ್ಚಿಮ ಘಟ್ಟಗಳನ್ನು ಸೀಳುವ ಅವಶ್ಯಕತೆಯಿಲ್ಲ.&lt;/strong&gt; &lt;br /&gt;&lt;br /&gt;&lt;em&gt;ಅಧ್ಯಾಯ ೫ ರ ೫.೦೧ a (ಎರಡನೇ ಪ್ಯಾರಾ):&lt;br /&gt;"It is proposed to start the Garland canal from Gadikal Gudda at the peak line of western ghat with C.B.L. of 930 mtrs and reach 150th K.M. with a canal bed slope of seven inches per Km with sufficient canal capacity to intercept and convey all the Run-off water of normal rain-falling on the catchment area between western ghat peak line and the canal alignment......"&lt;br /&gt;ಗುಡ್ಡದ  ಮಧ್ಯಭಾಗದಲ್ಲಿ ಕಾಲುವೆ ತೆಗೆಯುವುದೆಂದರೆ ಗುಡ್ಡವನ್ನು ಸೀಳುವುದು ಎಂದೇ ಅರ್ಥವಲ್ಲವೆ?&lt;br /&gt;ಒಂದು ಕಿ.ಮೀ.ಗೆ ಏಳು ಇಂಚು ಇಳಿಜಾರು ಇರುವ ಕಾಲುವೆ ಎನ್ನುತ್ತಾರೆ. ಅದರ ಅಗಲ ಆಳಗಳನ್ನು ಹೇಳಿಲ್ಲ. (ಮುಂದೆ ೮೨೦೦ಕ್ಯೂಸೆಕ್ಸ್ ನೀರನ್ನು ಸಾಗಿಸಬಲ್ಲ ಕಾಲುವೆ, ಹಾಗಾಗಿ ಇದರಲ್ಲಿ ಜಲಸಾರಿಗೆ ಸಾಧ್ಯ ಎಂದಿದ್ದಾರೆ). ಗಡಿಕಲ್ ಗುಡ್ಡ ಸಮುದ್ರ ಮಟ್ಟದಿಂದ ೧೨೦೦ ಮೀಟರ್ ಎತ್ತರ ಇದೆಯೆಂದು ಭಾವಿಸೋಣ. ೯೩೦ನೇ ಮೀಟರಿನಲ್ಲಿ ಕಾಲುವೆ ಮಾಡಿದರೆ, ಮೇಲಿನ ೨೭೦ ಮೀಟರ್ ಎತ್ತರದಿಂದ ನೀರು ಇಳಿದು ಬಂದು ಕಾಲುವೆಯಲ್ಲಿ ಸಂಗ್ರಹವಾಗಿ ಮುಂದೆ ಹರಿಯಬೇಕು. ಎಂದರೆ ಕಾಲುವೆಯ ಮೇಲುಭಾಗ ೨೭೦ ಮೀಟರ್ ಇಳಿಜಾರಾದ ಗುಡ್ಡ ಮತ್ತು ಕೆಳಭಾಗ ೯೦೦ ಮೀಟರ್  ಇಳಿಜಾರಾದ ಗುಡ್ಡ. ಮಳೆಗಾಲದಲ್ಲಿ ಮೇಲಿಂದ ಗುಡ್ಡ ಜರಿದರೆ ಕಾಲುವೆ ಕಟ್ಟಿಕೊಳ್ಳುತ್ತದೆ. ಕೆಳಗಿಂದ ಜರಿದರೆ, ಕಾಲುವೆ ಹಿಸಿದು ನೀರು ಕೆಳಗೆ ಹರಿಯುತ್ತದೆ. ಗುಡ್ಡ ಜರಿಯದ ಹಾಗೆ ಮಾಡುವ ತಾಂತ್ರಿಕತೆ ಇದೆಯೆ? (ಘಾಟಿ ರಸ್ತೆಗಳಲ್ಲಿ ೩೦-೪೦ ಅಡಿ ಎತ್ತರದ ದರೆಗೆ ಕಲ್ಲು ಕಟ್ಟುವುದನ್ನು ಕಂಡಿದ್ದೇನೆ. ಆದರೆ ಅಂಥಲ್ಲೂ, ಕಲ್ಲಿನ ಸಮೇತ ಜರಿದು ಬೀಳುವುದು ಮಾಮೂಲು.)&lt;br /&gt;ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತಿದೆ. ಪಶ್ಚಿಮ ಘಟ್ಟಗಳ ಪರ್ವತಗಳು, ನೆಲದ ಮೇಲೆ ಕವುಚಿಹಾಕಿದ ತೆಂಗಿನಕಾಯಿಯ ಕರಟಗಳಲ್ಲ. ಹತ್ತಿರ ಹೋಗಿ ನೋಡಿದರೆ ಮಾತ್ರ ಅಲ್ಲಿ ಪರಮಶಿವಯ್ಯನವರು ಹೇಳುವ ಬೃಹತ್  ಕಾಲುವೆಗಳನ್ನು  ತೋಡಿದರೆ ಪಶ್ಚಿಮಘಟ್ಟಕ್ಕೆ ಆಗುವ ಹಾನಿಯ ಕಲ್ಪನೆ ಬರಬಹುದು. ಅಥವಾ ಆಗಲೂ ಬರುವುದು ಕಷ್ಟ.&lt;br /&gt;ಪರಮಶಿವಯ್ಯನವರು ಹೇಳುತ್ತಿರುವ ಭಾಗದ ಪಶ್ಚಿಮ ಘಟ್ಟಗಳ ಸ್ವರೂಪ ಸಾಮಾನ್ಯವಾಗಿ ಹೀಗಿದೆ. ಗುಡ್ಡದ  ತಳದಿಂದ ಪ್ರಾರಂಭಿಸಿ ಸುಮಾರು ಮುಕ್ಕಾಲು ಭಾಗದ ಎತ್ತರದವರೆಗೆ ಬೇರೆ ಬೇರೆ ಸ್ವರೂಪದ ಅರಣ್ಯ. ನಂತರ ಉಳಿದ ಕಾಲುಭಾಗದಲ್ಲಿ, ಎಂದರೆ ಗುಡ್ಡದ ನೆತ್ತಿಯ ಭಾಗದಲ್ಲಿ, ಆಳೆತ್ತರದ ಹುಲ್ಲು. ಈ ಹುಲ್ಲು ಆನೆಗಳ ಆಹಾರ. ಹಾಗಾಗಿಯೇ ಈ ಪ್ರದೇಶದಲ್ಲಿ ಆನೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಇತ್ತ ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಹೋಗುವ ರೈಲುದಾರಿ ಆನೆಗಳ ತಿರುಗಾಟಕ್ಕೆ ಅಡ್ಡಿಯಾಗಿ ನಿಂತಿದೆ. ಶಿರಾಡಿ ಘಾಟಿಯ ಹೆದ್ದಾರಿಯಲ್ಲಿ ಆನೆಗಳ ಸಂಚಾರ ಅಸಾಧ್ಯವಲ್ಲವಾದರೂ, ವಾಹನಗಳ ದಟ್ಟಣೆಯಿಂದಾಗಿ ಅವುಗಳು ಸ್ವಚ್ಛಂದವಾಗಿ ತಿರುಗಾಡುವಂತಿಲ್ಲ. ಇನ್ನು ಅವುಗಳ ಆಹಾರವಾದ ಹುಲ್ಲಿರುವ ಪ್ರದೇಶಕ್ಕೇ ಪರಮಶಿವಯ್ಯನವರ ಕಾಲುವೆ ಅಡ್ಡ ಬಂತೆಂದರೆ, ಬಹುಶಃ ಕೋಟಿ ಕೋಟಿ ವರ್ಷಗಳಿಂದ ಈ ಭಾಗವನ್ನು ತಮ್ಮ ಮನೆಯಾಗಿ ಮಾಡಿಕೊಂಡಿರುವ ಆ ಬಡಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳಲು ಎಲ್ಲಿಗೆ ಹೋಗಬೇಕು? ಅವು ಊರು ನುಗ್ಗದೆ ಬೇರೆ ದಾರಿ ಇದೆಯೆ?&lt;/em&gt;&lt;br /&gt;&lt;br /&gt;&lt;strong&gt;ಮಳೆಯಾಗುವ ದಿನಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ.&lt;/strong&gt;&lt;br /&gt;&lt;br /&gt;&lt;em&gt;ಇದನ್ನು ಅಂಕಿ ಅಂಶಗಳ ಮೂಲಕ ನಿರೂಪಿಸಬಹುದೆ?&lt;/em&gt;&lt;br /&gt;&lt;br /&gt;&lt;strong&gt;ಪರಮಶಿವಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದರೆ ಅವರಿಗಿರುವ ಆತಂಕ ದೂರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ&lt;/strong&gt;.&lt;br /&gt; &lt;br /&gt;&lt;em&gt;ಈಗ ಸುಮಾರು ಐದು ವರ್ಷಗಳ ಕೆಳಗೆ ನಾವು ಪರಮಶಿವಯ್ಯನವರನ್ನು ಮಂಗಳೂರಿಗೆ ಕರೆಸಿ, ಅವರ ಯೋಜನೆಯನ್ನು ವಿವರಿಸಲು ಅವರಿಗೆ ಅವಕಾಶ ಮಾಡಿಕೊಟ್ಟೆವು. ಅಷ್ಟು ದೂರದಿಂದ ಮಂಗಳೂರಿಗೆ ಬಂದ ಅವರು-ಸಾವಿರಾರು ಕೋಟಿ ರೂಪಾಯಿ ಖರ್ಚಿನ ಯೋಜನೆಯನ್ನು ರೂಪಿಸಿದವರು-ಸುಮಾರು ಇಪ್ಪತ್ತು ನಿಮಿಷ  ಯೋಜನೆಯ ಬಗ್ಗೆ ಮಾತಾಡಿದರು. ಸಂಘಟಕರಾಗಿ ನಾವು ಅವರಿಗೆ ಸಮಯವನ್ನೇನೂ ನಿಗದಿಪಡಿಸಿರಲಿಲ್ಲ. ಅವರು ತಮ್ಮ ಯೋಜನೆಯನ್ನು ವಿವರಿಸಲು ಬೋರ್ಡು, ಸೀಮೆಸುಣ್ಣ ಆಗಲಿ, ಪವರ್ ಪಾಯಿಂಟ್ ಆಗಲಿ ಬಳಸಲಿಲ್ಲ. ಭಾಷಣದ ನಂತರ ಬಂದ ಹೆಚ್ಚಿನ ಪ್ರಶ್ನೆಗಳಿಗೆ ಯೋಜನೆಯನ್ನು ಹೈದರಾಬಾದಿನ ಯಾವುದೋ ಸಂಸ್ಥೆಗೆ ಕಳಿಸಲಾಗಿದೆ, ಅಲ್ಲಿಂದ ವರದಿ ಬಂದ ಮೇಲೆ ಎಲ್ಲ ಸ್ಪಷ್ಟವಾಗುತ್ತದೆ ಎಂಬ ಉತ್ತರವನ್ನೇ ಮತ್ತೆ ಮತ್ತೆ ಕೊಟ್ಟರು. ಹಾಗಾಗಿ ಅವರ ಹತ್ತಿರ ಚರ್ಚಿಸಿ ನಮಗೆ ಯಾವ ಪ್ರಯೋಜನವೂ ಆಗಲಿಲ್ಲ.&lt;/em&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-749960006989290923?l=sundararao.blogspot.com' alt='' /&gt;&lt;/div&gt;</content><link rel='enclosure' type='' href='http://www.madhuseethappa.blogspot.com' length='0'/><link rel='replies' type='application/atom+xml' href='http://sundararao.blogspot.com/feeds/749960006989290923/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=749960006989290923&amp;isPopup=true' title='6 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/749960006989290923'/><link rel='self' type='application/atom+xml' href='http://www.blogger.com/feeds/1105138094084974837/posts/default/749960006989290923'/><link rel='alternate' type='text/html' href='http://sundararao.blogspot.com/2011/04/blog-post_23.html' title='ನೇತ್ರಾವತಿ ತಿರುವು: ಡಾ. ಮಧು ಸೀತಪ್ಪನವರೊಂದಿಗೆ ಸಂವಾದ'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-Jtb8Qtbsv1A/TbPCJC-ws_I/AAAAAAAAADE/k07hhDdCFx0/s72-c/26012008778.jpg' height='72' width='72'/><thr:total>6</thr:total></entry><entry><id>tag:blogger.com,1999:blog-1105138094084974837.post-189614720036703908</id><published>2011-04-20T05:24:00.000-07:00</published><updated>2011-04-20T05:28:20.570-07:00</updated><title type='text'>ಅಂತೂ ಬಂತು ಅಂತರ್ಜಲ ವಿಧೇಯಕ - ೨೦೧೧</title><content type='html'>ಜನ ಬೇಕಾಬಿಟ್ಟಿಯಾಗಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆದು ಮುಗಿಸುವವರೆಗೂ ಕಾದು, ಹೆಚ್ಚುಕಡಿಮೆ ಎಲ್ಲ ಮುಗಿದ ಮೇಲೆ, ಈಗ ಕರ್ನಾಟಕ ಸರಕಾರವು, ಕೊಳವೆ ಬಾವಿಗಳನ್ನು ಬೇಕಾಬಿಟ್ಟಿಯಾಗಿ ಕೊರೆಯುವುದನ್ನು  ನಿಯಂತ್ರಿಸುವ ಉದ್ದೇಶದಿಂದ,  ಒಂದು ವಿಧೇಯಕವನ್ನು ವಿಧಾನಮಂಡಲದ ಎರಡೂ ಸದನಗಳಲ್ಲಿಟ್ಟು ಅಂಗೀಕಾರ ಪಡೆದಿದೆ. ಪಕ್ಷಾಂತರವೋ, ಅದಿರು ತಿಂದವರು ಯಾರು ಎಂಬುದರ ಕಚ್ಚಾಟವೋ  ಇಂಥದೇ ಯಾವುದೋ ಒಂದು ಪ್ರಕರಣ ವಿಧಾನಮಂಡಲದ ಕಾರ್ಯ ಕಲಾಪಗಳನ್ನೇ ತಿಂದು ಹಾಕುತ್ತಿದ್ದ ದಿನಗಳಲ್ಲಿ, ಈ ವಿಧೇಯಕ ಒಂದು ಸಂದಿಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಪಾಸಾಗಿಬಿಟ್ಟಿದೆ. ಕರ್ನಾಟಕದ ಯಾವುದೇ ಶಾಸಕನಿಗೂ, ಈ ವಿಧೇಯಕದ ವಿವರಗಳಿರಲಿ, ಇದು  ಪಾಸಾಗಿರುವ ವಿಷಯ ಗೊತ್ತಿರುವುದು ಸಹ ಅನುಮಾನ. ಇನ್ನು ಜನಸಾಮಾನ್ಯರ ಪಾಡೇನು?&lt;br /&gt;ಸುಮಾರು ಹತ್ತು ತಿಂಗಳ ಹಿಂದೆ  ಯಾವುದೋ ಕಾರಣಕ್ಕೆ ಗಣಿ ಮತ್ತು ಭೂವಿಜ್ನಾನ ಇಲಾಖೆಯ ಜಾಲತಾಣಕ್ಕೆ ಹೋದಾಗ "ಅಂತರ್ಜಲ ವಿಧೇಯಕ ೨೦೦೯ರ ಕುರಿತಂತೆ ಸಾರ್ವಜನಿಕರು ಮೇ ೨೦೧೦ರ ಅಂತ್ಯದ ವರೆಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶವಿದೆ" ಎಂಬ ವಾಕ್ಯ ಓಡುತ್ತಿರುವುದು ಕಂಡೆ. ಕುತೂಹಲಕ್ಕೆ ವಿಧೇಯಕವನ್ನು  ಓದಿದೆ. &lt;br /&gt;&lt;strong&gt;ಬ್ರಿಟಿಷರನ್ನು ಬಿಡಲೊಲ್ಲರು ಅವರ  ಮಾನಸಪುತ್ರರು&lt;/strong&gt;&lt;br /&gt;ಹೊಸ ವಿಧೇಯಕವೆಂದರೆ ಹೊಸ ಕಾನೂನೇ. ನಮ್ಮ ಹೆಚ್ಚಿನ ಕಾನೂನುಗಳು ಬ್ರಿಟಿಷರ ಕಾಲದವು. ಸಹಜವಾಗಿ ಅವು ಆಳುವ ಅಧಿಕಾರಿಗಳ ಪರವಾಗಿ ಇವೆ.  ಇಂದು ಪ್ರಜಾಪ್ರಭುತ್ವ ಬಂದಿದೆ. ಆಳರಸರು ಹೋಗಿದ್ದಾರೆ, ಇಂದಿನ ಸರಕಾರಿ ಅಧಿಕಾರಿಗಳು "ಸಾರ್ವಜನಿಕ ಸೇವಕರು" ಎಂದು ಕರೆಸಿಕೊಳ್ಳುತ್ತಿದ್ದಾರೆ. ಎಂದ ಮೇಲೆ ಇಂದು ನಾವು ರೂಪಿಸುವ ಕಾನೂನುಗಳು ಅಧಿಕಾರಿಗಳ ಅನುಕೂಲಕ್ಕಿಂತ ಹೆಚ್ಚಾಗಿ ಪ್ರಜೆಗಳ ಅನುಕೂಲಕ್ಕಾಗಿ ಇರಬೇಕು. ದುರದೃಷ್ಟವಶಾತ್,  ಸಾರ್ವಜನಿಕ ಸೇವಕರೆನ್ನಿಸಿಕೊಳ್ಳುವ  ಸರಕಾರಿ ಅಧಿಕಾರಿಗಳೇ ನಮ್ಮ ಹೊಸ ಕಾನೂನುಗಳನ್ನು  ರೂಪಿಸುತ್ತಾರೆ. ಸಹಜವಾಗಿ ಅದು ಅವರ ಪರವಾಗಿ ಇರುತ್ತದೆ. (ಮಾಹಿತಿ ಹಕ್ಕು ೨೦೦೫ ಇದಕ್ಕೊಂದು ಅಪವಾದ. ಆದರೆ ಅದನ್ನು ಸಾಧ್ಯವಿದ್ದಷ್ಟೂ ತಮಗೆ ಅನುಕೂಲವಾಗುವಂತೆ ಬದಲಿಸಿಕೊಳ್ಳಲು ಬಾಬೂಜಿಗಳು ಪ್ರಯತ್ನಿಸುತ್ತಲೇ ಇದ್ದಾರೆ). ನಂತರ ಅದನ್ನು ಚರ್ಚೆಗಾಗಿ ವಿಧಾನಮಂಡಲದಲ್ಲಿ ಇಟ್ಟರೂ, ಯಾವ್ಯಾವುದೋ ಹಗರಣಗಳಲ್ಲಿ ಮುಳುಗಿಹೋದ ನಮ್ಮ ಶಾಸಕರಿಗೆ, ಈ ಕಾನೂನುಗಳನ್ನು ವಿವರವಾಗಿ ಓದಿ, ಚರ್ಚೆ ಮಾಡಿ, ಅಗತ್ಯವಿದ್ದಲ್ಲಿ ಜನಪರವಾದ ಬದಲಾವಣೆಗಳನ್ನು ಸೂಚಿಸುವ ವ್ಯವಧಾನವಾದರೂ ಎಲ್ಲಿಂದ? ಅಸಲಿಗೆ ನಮ್ಮ ಶಾಸಕರಿಗಾದರೂ ನಿಜವಾದ ಜನಪರ ನಿಲುವುಗಳು ಇವೆಯೇ? ಇಂಥ ಕೆಲಸಕ್ಕಾಗಿಯೇ ಸಂಬಳ ಪಡೆಯುವ ಈ ಶಾಸಕರುಗಳು ತಮ್ಮ ಕರ್ತವ್ಯ ನಿರ್ವಹಿಸದೆ ಜನವಂಚನೆ ಮಾಡುತ್ತ  ಕಾಲ ಕಳೆಯುತ್ತಿರುವುದು ಅಧಿಕಾರಿ ವರ್ಗಕ್ಕೆ ಬಯಸದೆ ಬಂದ ಭಾಗ್ಯವಾಗಿದೆ. ಇನ್ನು ಜನಸಾಮಾನ್ಯರನ್ನು ಬಿಡಿ, ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವವರೂ ಇಂಥದ್ದರಲ್ಲೆಲ್ಲ ಆಸಕ್ತಿ ವಹಿಸುವುದನ್ನು ನಮ್ಮ ಸಂದರ್ಭದಲ್ಲಿ ಊಹಿಸುವುದೂ  ಸಾಧ್ಯವಿಲ್ಲ. &lt;br /&gt;&lt;strong&gt;ಕೊಟ್ಟ ಕುದುರೆಯನೇರಲರಿಯದೆ...&lt;/strong&gt;&lt;br /&gt;ಏನೇ ಇದ್ದರೂ, ಸರಕಾರ ವಿಧೇಯಕಗಳನ್ನು ಜಾರಿಗೆ ಕೊಡುವಾಗ, ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳುವ ಶಾಸ್ತ್ರವನ್ನಂತೂ ಮಾದಿಯೇ ಮಾಡುತ್ತದೆ. ಎಷ್ಟು ಕಡಿಮೆ ಜನ ತಮ್ಮ ಅಭಿಪ್ರಾಯ ಕೊಡುತ್ತಾರೋ, ಅಧಿಕಾರಿಗಳಿಗೆ  ಅಷ್ಟು ತಲೆನೋವು ಕಡಿಮೆ. ಹಾಗಾಗಿ ಅವರು ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸುವ ಶಾಸ್ತ್ರ ಮಾತ್ರ ಮಾಡುತ್ತಾರೆ. ಕುತೂಹಲಕ್ಕಾಗಿ  "ಈ ವಿಧೇಯಕದ ಬಗ್ಗೆ ಎಷ್ಟು ಸಾರ್ವಜನಿಕರು ಮತ್ತು ಎಷ್ಟು ಸಂಘಸಂಸ್ಠೆಗಳು ತಮ್ಮ ಅಭಿಪ್ರಾಯವನ್ನು ನೀಡಿವೆ?" ಎಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದೆ. "೧೧ ಸಾರ್ವಜನಿಕರು ಮತ್ತು ಮೂರು ಸಂಘ ಸಂಸ್ಥೆಗಳು ಅಭಿಪ್ರಾಯ ನೀಡಿವೆ" ಎಂಬ ಉತ್ತರ ಬಂತು. ಸಾಕೆ? ಐದು ಕೋಟಿಗೆ ಹನ್ನೊಂದು!&lt;br /&gt;&lt;br /&gt;ಲೋಕಪಾಲ ಮಸೂದೆ ಸಾಲದು, ಜನಲೋಕಪಾಲ ಮಸೂದೆ ಬೇಕು ಎಂದು ಅಣ್ಣಾ ಹಜಾರೆಯವರು ಉಪವಾಸ ಕೂತಾಗ ಅವರಿಗೆ ಅಭೂತಪೂರ್ವ ಬೆಂಬಲ ದೊರೆಯಿತು. ಭ್ರಷ್ಟಾಚಾರದ ಕುರಿತು ಜನ ರೋಸಿಹೋಗಿದ್ದಾರೆ ಎಂಬುದಕ್ಕೆ ಇದೊಂದು ಜೀವಂತ ಸಾಕ್ಷಿ ಎಂದು ಟಿವಿಗಳೂ, ಪತ್ರಿಕೆಗಳೂ ಎಷ್ಟು ಸಾಧ್ಯವೋ ಅಷ್ಟು ತಾರಸ್ಥಾಯಿಯಲ್ಲಿ ಬೊಬ್ಬೆ ಹೊಡೆದವು. ಆದರೆ, ಯಾವುದೇ ವಿಧೇಯಕ ತರುವ ಮೊದಲು, ಅದರಲ್ಲಿ ಬದಲಾವಣೆಗಳನ್ನು ಮಾಡಲು ಸರಕಾರ ಈಗಾಗಲೇ ಕೊಡುತ್ತಿರುವ ಅವಕಾಶವನ್ನು ನಾವು ಉಪಯೋಗಿಸುತ್ತಿದ್ದೇವೆಯೇ?  ಜನಸಾಮಾನ್ಯರನ್ನು ಬಿಡಿ, ಹಜಾರೆಯವರನ್ನು ಬೆಂಬಲಿಸಿ ಮಾಧ್ಯಮಗಳಲ್ಲಿ ಮಿಂಚಿದ ನಮ್ಮ ವಿವಿಧರಂಗದ ನಾಯಕಮಣಿಗಳು ಪ್ರಜಾಪ್ರಭುತ್ವವನ್ನು ಅನುಸಂಧಾನ ಮಾಡಿದ ಉದಾಹರಣೆಗಳು ಎಷ್ಟಿವೆ? ಎಷ್ಟು ಮಂದಿ ಬುದ್ಧಿಜೀವಿಗಳು ಸರಕಾರದ ಆಗುಹೋಗುಗಳ ಕುರಿತು ತಮ್ಮ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸುತ್ತಾರೆ? ಎಷ್ಟು ಜನ ಲೇಖಕರು ಸಾರ್ವಜನಿಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಸರಕಾರಕ್ಕೆ ತಿಳಿಸುತ್ತಾರೆ? ಎಷ್ಟು ಮಂದಿ ವಿದ್ಯಾವಂತರಿಗೆ ಮಾಹಿತಿ ಹಕ್ಕಿನ ಕುರಿತು ತಿಳುವಳಿಕೆ ಇದೆ? ಎಷ್ಟು ಜನ ಅದನ್ನು ಸಾರ್ವಜನಿಕ ಹಿತಕ್ಕಾಗಿ ಬಳಸುತ್ತಿದ್ದಾರೆ? ಎಷ್ಟು ಊರುಗಳಲ್ಲಿ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಜನ ಸೇರಿ ಚರ್ಚಿಸುವ ಸಂಪ್ರದಾಯವಿದೆ?&lt;br /&gt;ಶಿವರಾಮ ಕಾರಂತರು ಒಂದು ಕಡೆ ಹೇಳಿರುವುದು ನೆನಪಾಗುತ್ತದೆ: "ನಮ್ಮನ್ನು ದೇವರೇ ಹುಟ್ಟಿಸಿದ್ದಾನೆ ಎನ್ನುವುದಾದರೆ,  ಸಾಕಷ್ಟು ಬುದ್ದಿಯನ್ನು ಕೊಟ್ಟೇ ಹುಟ್ಟಿಸಿದ್ದಾನೆ ಎಂದು ತಿಳಿಯಬೇಕು. ಕೊಟ್ಟದ್ದನ್ನು ಉಪಯೋಗಿಸಿಕೊಳ್ಳದೆ ಇನ್ನೂ ಕೊಡು ಮತ್ತೂ ಕೊಡು ಎನ್ನುವುದರಲ್ಲಿ ಏನರ್ಥವಿದೆ?"&lt;br /&gt;&lt;strong&gt;ಸುಲಭದಲ್ಲಿ ಸಿಕ್ಕಿದ ಮಾಹಿತಿ &lt;/strong&gt;&lt;br /&gt;ಇರಲಿ. ಕಾನೂನಿನ ಬಡಿಗೆ ತೋರಿಸಿ ಭ್ರಷ್ಟಾಚಾರವನ್ನು ಊರ ಹೊರಗೆ ಓಡಿಸಿಬಿಡಬಹುದೆಂದು ನಾನು ನಂಬುವುದಿಲ್ಲ. ಆದರೂ ಜನಲೋಕಪಾಲ ಮಸೂದೆ ಬಂದರೆ ನನಗೆ ಖಂಡಿತವಾಗಿಯೂ ಸಂತೋಷವಿದೆ. ಇತ್ತ ವಿಧೇಯಕದ ಕರಡನ್ನು ಓದಿದ ಮೇಲೆ, ಉಳಿದಿದ್ದ ಹತ್ತೋ ಹದಿನೈದೋ ದಿವಸದ ಅವಧಿಯಲ್ಲಿ ನನಗೆ ಕಂಡ ಹಲವು ಬದಲಾವಣೆಗಳನ್ನು ಸೂಚಿಸಿ, ಒಂದು ಪತ್ರವನ್ನು ಜೊತೆಗಿಟ್ಟು ಕಳಿಸಿಕೊಟ್ಟೆ. ತಲುಪಿದ್ದಕ್ಕೆ ಉತ್ತರವೇನೂ ಬರಲಿಲ್ಲ. ನಾನೂ ಅಲ್ಲಿಗೇ ಮರೆತಿದ್ದೆ.&lt;br /&gt;ಮೊನ್ನೆ ಟಿವಿಯಲ್ಲಿ ಸಣ್ಣದೊಂದು ಸುದ್ದಿ ತೇಲಿ ಬಂತು: ಅಂತರ್ಜಲ ವಿಧೇಯಕ ಮಂಡನೆಯಾಗಿದೆ. ಇಲಾಖೆಗೆ ಬರೆದಾಗ ಮಾರ್ಚ್ ತಿಂಗಳಿನಲ್ಲಿಯೇ ಮಂಡನೆಯಾಗಿದೆ ಎಂದು ಖಚಿತವಾಯಿತು. ಅದರ ಪ್ರತಿ ಬೇಕು ಎಂದು ಕೇಳಿದ್ದಕ್ಕೆ ವಿಧಾನಸೌಧಕ್ಕೆ ಬರೆಯುವಂತೆ ಸಲಹೆ ಸಿಕ್ಕಿತು! ಶಾಸಕರ ಮೂಲಕ ಪಡೆಯುವುದು ಸುಲಭವಾಗಬಹುದು ಎನಿಸಿದ್ದರಿಂದ ಅವರ ಕಚೇರಿಗೆ ಹೋದೆ. ಅವರ ಪಿಎ ಚಂದ್ರಶೇಖರ ಪಾತೂರು ಇದ್ದರು. "ಗೆಜೆಟ್ಟಿನಲ್ಲಿ ಬಂದಿರಬಹುದು. ಗೆಜೆಟ್ ಶಾಸಕರ ಮನೆಗೆ ಬಂದಿರುತ್ತದೆ. ನಾನು ನೋಡಿ ಹೇಳುತ್ತೇನೆ ನಿಮಗೆ" ಎಂದರು. ನಾನು ಮನೆಗೆ ಬಂದವನು  ಇಂಟರ್ ನೆಟ್ ನಲ್ಲಿ ಹುಡುಕಿದೆ. ಸುಲಭದಲ್ಲಿ ಸಿಕ್ಕಿತು.&lt;br /&gt;&lt;strong&gt;ಕಲ್ಲನಾಗರ ಕಂಡರೆ ಹಾಲನೆರೆ ಎಂಬರು, ನಿಜದ ನಾಗರ ಕಂಡರೆ ಕೊಲ್ಲೆಂಬರಯ್ಯಾ...!&lt;/strong&gt;&lt;br /&gt;ಪುಣ್ಯಾತ್ಮ ಬಸವಣ್ಣ ಎಂಥ ಮಾತು ಆಡಿಬಿಟ್ಟಿದ್ದಾರೆ ನೋಡಿ! ಸ್ವಲ್ಪ ವಿಷಯಾಂತರವೆನಿಸಿದರೂ ಒಂದು ಮಾತು ಇಲ್ಲಿ ಹೇಳಲೇಬೇಕು. ಈಗ ನಮ್ಮ ಶಾಸಕ ರಮಾನಾಥ ರೈಗಳು ತುಂಬಾ ಬಿಜಿ. ನಾಡಿದ್ದು ೨೩ಕ್ಕೆ ಅವರಲ್ಲಿ ನಾಗಮಂಡಲೋತ್ಸವ. ಭಾರೀ ಗೌಜಿ.  ಊರ ತುಂಬ ಅದರದ್ದೇ ದೊಡ್ಡ ದೊಡ್ಡ ಬ್ಯಾನರುಗಳು. ಕರ್ನಾಟಕದ ವಿಷಯ ನಾನು ಹೇಳಲಾರೆ, ಆದರೆ ದ.ಕ. ಜಿಲ್ಲೆಯಲ್ಲಂತೂ  ಜೆಸಿಬಿಗಳು, ಹಗಲು ರಾತ್ರೆಯ ವ್ಯತ್ಯಾಸವಿಲ್ಲದೆ ಸರ್ಪಯಜ್ನಕ್ಕೆ ತೊಡಗಿವೆ. ಮೊಟ್ಟೆ, ಮರಿ, ಬೆಳೆದ ಸರ್ಪ, ಮುದಿಸರ್ಪ, ನಾಗರ, ಕೇರೆ, ಕಂದೊಡಿ, ಪೆರ್ಮರಿ ಯಾವ ವ್ಯತ್ಯಾಸವನ್ನೂ ನೋಡದೆ ಜೆಸಿಬಿಗಳು ಆಧುನಿಕ ಖಾಂಡವವನ ದಹನವನ್ನೇ ನಡೆಸಿವೆ. ಈ ಅಸಹಾಯಕ ಪ್ರಾಣಿಗಳನ್ನು ರಕ್ಷಿಸಲು ಇರುವ ವನ್ಯಜೀವಿ ಕಾನೂನು, ಜೆಸಿಬಿಗಳ ಚಕ್ರದಡಿ ಸಿಕ್ಕಿ ವಿಲವಿಲನೆ ಒದ್ದಾಡುತ್ತಿದೆ. ಆ ಕಾನೂನನ್ನು ಜಾರಿಗೆ ಕೊಡಬೇಕಾದ ಅರಣ್ಯ ಇಲಾಖೆಯವರು ನಿದ್ರೆಯನ್ನು ನಟಿಸುತ್ತಿದ್ದಾರೆ. ನಮ್ಮ ಶಾಸಕರು ಈ ಕಾನೂನಿಗೆ ಮರುಜೀವ ಕೊಟ್ಟು ಸರ್ಪಜಾತಿ ಉಳಿಯುವಂತೆ ಮಾಡಿದರೆ ಅವರು ನಾಗಮಂಡಲ ಮಾಡಿಸಿದ್ದರ ಫಲ ಪೂರ್ತಿಯಾಗಿ ಪ್ರಾಪ್ತಿ ಆದೀತು. ಅಲ್ಲದಿದ್ದರೆ, ಕಲ್ಲನಾಗರ ಕಂಡರೆ.....&lt;br /&gt;&lt;strong&gt;ಸ್ವೀಕೃತವಾದ ಒಂದೇ ಒಂದು ಸಲಹೆ&lt;/strong&gt;&lt;br /&gt;ವಿಧೇಯಕದಲ್ಲಿ ಬಳಸಿದ ಕನ್ನಡ ಭಾಷೆಯ ಬಗೆಗೆ ನನಗೆ ಏನೂ ಸಮಾಧಾನವಿರಲಿಲ್ಲ. ಅದು ತುಂಬ ಕೆಟ್ಟದಾಗಿತ್ತು. ತಪ್ಪುಗಳೂ ಅಸಂಖ್ಯವಾಗಿದ್ದವು.. ನನ್ನ ಪತ್ರದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದ್ದೆ. ಬೇರೆ ಅನೇಕರೂ ಇದನ್ನು ಹೇಳಿರಬಹುದು. ಒಟ್ಟಿನಲ್ಲಿ ಮೊದಲಿನ ಕನ್ನಡದ ಕರಡು ಈಗ ನಾಪತ್ತೆಯಾಗಿತ್ತು. ಅದರ ಸ್ಥಳದಲ್ಲಿ ಬೇರೆಯೇ ಆದ ಕರಡು ತಯಾರಿಸಿ ಮಂಡಿಸಲಾಗಿತ್ತು. ನನ್ನ ಅಭಿಪ್ರಾಯಕ್ಕೂ ಕೊಂಚ ಬೆಲೆ ಬಂತೆಂದು ಬೆನ್ನು ತಟ್ಟಿಕೊಂಡೆ. ಏನಿದ್ದರೂ ಕರಡು ಮೊದಲು ತಯಾರಾಗುವುದು ಇಂಗ್ಲಿಷಿನಲ್ಲಿ. ನಂತರ ಅದನ್ನು ಕನ್ನಡಕ್ಕೆ ಅನುವಾದ ಮಾಡುವುದು. ಮೂಲವನ್ನೇ ಕನ್ನಡದಲ್ಲಿ ತಯಾರಿಸಿ, ನಂತರ ಅದನ್ನು ಇಂಗ್ಲಿಷಿಗೆ ಅನುವಾದ ಮಾದುವಷ್ಟು ಸ್ವಂತಿಕೆ, ಆತ್ಮವಿಶ್ವಾಸಗಳು  ನಮಗೆ ಇನ್ನೂ ಸಾಧಿಸಿಲ್ಲ. ಅದರೆ, ಈ ಹೊಸ ಅನುವಾದ ಮೊದಲಿನದ್ದಕ್ಕಿಂತ ಖಂಡಿತ ಚೆನ್ನಾಗಿದೆ.ವಾಕ್ಯಗಳು ಸುಸಂಗತವಾಗಿವೆ, ಅರ್ಥ ಹೆಚ್ಚು ನಿರ್ದಿಷ್ಟವಾಗಿದೆ.&lt;br /&gt;&lt;strong&gt;ಗೋರ್ಕಲ್ಲ ಮೇಲೆ ಸುರಿದ ಮಳೆ?&lt;/strong&gt;&lt;br /&gt;ಈ ಸಲಹೆ ಬಿಟ್ಟರೆ ನಾನು ಕೊಟ್ಟ ಒಂದೇ ಒಂದು ಸಲಹೆಯೂ ಸ್ವೀಕಾರಗೊಂಡಿಲ್ಲ. ಸಲಹೆ ಬಿಡಿ, ಇಂಗ್ಲಿಷಿನ public servant  ಎಂಬ ಪದವನ್ನು ಮೊದಲಿನ ಕರಡಿನಲ್ಲಿ "ಸರಕಾರಿ ನೌಕರರು" ಎಂದು ಅನುವಾದಿಸಲಾಗಿತ್ತು. ನಾನು ಅದನ್ನು "ಸಾರ್ವಜನಿಕ ಸೇವಕರು" ಎಂದು ಬದಲಿಸಲು ಸೂಚಿಸಿದೆ. ಹೊಸ ಕರಡಿನಲ್ಲಿ ಅದನ್ನು "ಸಾರ್ವಜನಿಕ ನೌಕರರು" ಎಂದು ಅನುವಾದಿಸಲಾಗಿದೆ! ಇಂಥ ಅನುವಾದದ ಹಿಂದೆ  ತಮ್ಮನ್ನು ತಾವು ಸೇವಕರು ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಒಂದು ಮನೋಭಾವ ಕೆಲಸ ಮಾಡುತ್ತಿದೆ ಅನ್ನಿಸುವುದಿಲ್ಲವೆ?&lt;br /&gt;"ಲೋಕಪಾಲ್ ಬೇಡ, ಜನಲೋಕಪಾಲ್ ಬೇಕು" ಎನ್ನುವಾಗ ಅದರ ಹಿಂದಿರುವುದು ವಿಧೇಯಕ ಜನರ ಕೈಗೆ ಅಧಿಕಾರವನ್ನು ಕೊಡುವಂತಿರಬೇಕು ಎನ್ನುವ ಕಾಳಜಿ ತಾನೆ?  ಸುಮ್ಮನೆ ಮಾದರಿಗಾಗಿ ವಿಧೇಯಕದ ಒಂದು ಸಣ್ಣ ಭಾಗ  ಏನು ಹೇಳುತ್ತದೆ ಎಂಬುದನ್ನೂ, ನಾನು ಸೂಚಿಸಿದ ಬದಲಾವಣೆ ಏನು ಎಂಬುದನ್ನೂ ನೋಡಿ:&lt;br /&gt;&lt;br /&gt;ವಿಧೇಯಕದಲ್ಲಿ ಇರುವುದು:&lt;br /&gt;&lt;br /&gt;(೪) ಪ್ರಾಧಿಕಾರವು (೧)ನೇ ಉಪ ಪ್ರಕರಣದ (ಎಚ್) ಖಂಡದ ಅಡಿಯಲ್ಲಿ ಯಾವುದೇ ಯಂತ್ರೋಪಕರಣವನ್ನು ಅಥವಾ ಸಾಧನವನ್ನು ವಶಪಡಿಸಿಕೊಂಡರೆ, ಅದು ಆದಷ್ಟು ಬೇಗನೆ ಈ ಅಪರಾಧದ ವಿಚಾರಣೆ ನಡೆಸಲು ಅಧಿಕಾರ ವ್ಯಾಪ್ತಿಯುಳ್ಳ ಮ್ಯಾಜಿಸ್ಟ್ರೇಟರಿಗೆ ಹಾಗೆ ವಶಪಡಿಸಿಕೊಂಡದ್ದಕ್ಕೆ ಮಾಹಿತಿ ನೀಡತಕ್ಕದ್ದು ಮತ್ತು ಅದರ ಅಭಿರಕ್ಷೆಗಾಗಿ ಅವರ ಅದೇಶವನ್ನು ಪಡೆಯತಕ್ಕದ್ದು&lt;br /&gt;&lt;br /&gt;ನಾನು ಸೂಚಿಸಿದ್ದು:&lt;br /&gt;&lt;br /&gt;(೪) ಪ್ರಾಧಿಕಾರವು (೧)ನೇ ಉಪ ಪ್ರಕರಣದ (ಎಚ್) ಖಂಡದ ಮೇರೆಗೆ ಯಂತ್ರೋಪಕರಣಗಳನ್ನು ಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ, ಇಪ್ಪತ್ತನಾಲ್ಕು ಗಂಟೆಗಳ ಅವಧಿಯೊಳಗೆ ಅಪರಾಧದ ವಿಚಾರಣೆ ಮಾಡಲು ಅಧಿಕಾರ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟರಿಗೆ ಮಾಹಿತಿ ನೀಡತಕ್ಕದ್ದು ಮತ್ತು ಸ್ವಾಧೀನ ಪ್ರಕ್ರಿಯೆಗೆ ಅವರ ಆಜ್ನೆಯನ್ನು ಪಡೆಯತಕ್ಕದ್ದು. ಸ್ವಾಧೀನಪಡಿಸಿಕೊಂಡ ಯಂತ್ರಗಳ ವಿವರವಾದ ಪಟ್ಟಿಯನ್ನು ತಯಾರಿಸಿ ಅದರಲ್ಲಿ ಸ್ಥಳದ ಮಾಲಕ ಅಥವಾ ಹಾಜರಿರುವ ಇತರ ವ್ಯಕ್ತಿ ಹಾಗೂ ನೆರೆಹೊರೆಯ ಕನಿಷ್ಟ ಮೂವರು ಗೃಹಸ್ಥರ ಸಹಿ ಪಡೆದು, ಅದರ ಒಂದು ಪ್ರತಿಯನ್ನು ಸ್ಥಳದ ಮಾಲಕ ಅಥವಾ ಹಾಜರಿರುವ ವ್ಯಕ್ತಿಗೆ ನೀಡತಕ್ಕದ್ದು.&lt;br /&gt;&lt;br /&gt;ಈಗ ವಿಧೇಯಕದಲ್ಲಿ ಇರುವುದನ್ನು ಗಮನಿಸಿ: "ಆದಷ್ಟು ಬೇಗನೆ" ಎಂದರೆ ಏನು? ವ್ಯಾವಹಾರಿಕವಾಗಿ, ಅದು, ಯಂತ್ರೋಪಕರಣಗಳನ್ನು ವಶಪಡಿಸಿಕೊಂಡ ನಂತರ  ಅಧಿಕಾರಿಗಳು ತಮಗೆ ಅನುಕೂಲವಾದ ಸಮಯದಲ್ಲಿ ಮ್ಯಾಜಿಸ್ಟ್ರೇಟರ ಹತ್ತಿರ ಹೋದರೆ ಸಾಕು ಎಂದು ಹೇಳುತ್ತಿದೆ ತಾನೆ? "ಸೇವಕ"ರಾದ ಅವರು ಮಾಡಬೇಕಾದ ಕೆಲಸಕ್ಕೆ ಒಂದು ಅವಧಿಯನ್ನು ಯಾಕೆ ನಿರ್ದಿಷ್ಟ ಪಡಿಸಬಾರದು?&lt;br /&gt;ತಾವು ಯಾವ ಯಾವ ಯಂತ್ರಗಳನ್ನು ವಶಪಡಿಸಿಕೊಂಡಿದ್ದೇವೆ ಎಂಬುದರ ಪಟ್ಟಿ ತಯಾರಿಸಿ ಅದರ ಪ್ರತಿಯನ್ನು ಸ್ಥಳದ ಮಾಲಕನಿಗೆ ಕೊಡಲು ಅಧಿಕಾರಿಗಳಿಗೆ ಅಡ್ಡಿ ಏನು?  ಅಷ್ಟು ಕೆಲಸ ಮಾಡುವುದು, ಎಂದರೆ ಯಂತ್ರೋಪಕರಣಗಳು ಯಾವುವು ಎಂದು ಪರಿಶೀಲಿಸಿ ಅವುಗಳನ್ನು ಬರೆದು ಪಟ್ಟಿ ಮಾಡುವ ಕೆಲಸವನ್ನು ಅಧಿಕಾರಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ ಅಲ್ಲವೆ? ಅಂಥದೊಂದು ಪಟ್ಟಿ ಇಲ್ಲದಿದ್ದರೆ, ಅಧಿಕಾರಿಗಳು ವಶಪಡಿಸಿಕೊಂಡ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ಯಾಕೆ ಅವಕಾಶ ಇರಬೇಕು? ಮುಂದೊಂದು ದಿನ ಯಂತ್ರೋಪಕರಣಗಳನ್ನು ಹಿಂದಿರುಗಿಸತಕ್ಕದ್ದು ಎಂದು ನ್ಯಾಯಾಲಯದಲ್ಲಿ ಆಜ್ನೆಯಾದರೆ, ಅಧಿಕಾರಿಗಳು ಯಾವ ಆಧಾರದಲ್ಲಿ ಯಂತ್ರೋಪಕರಣಗಳನ್ನು ಹಿಂತಿರುಗಿಸುತ್ತಾರೆ? ಐದೋ ಹತ್ತೋ ವರ್ಷದ ಹಿಂದೆ ಏನೇನು ವಶಪಡಿಸಿಕೊಳ್ಳಲಾಗಿತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಹಿಂದಿರುಗಿಸುತ್ತಾರೆಯೆ?&lt;br /&gt;"ಹಾಗೇನಿಲ್ಲ. ಕ್ರಮಪ್ರಕಾರ ಒಂದು ಪಟ್ಟಿ ಮಾಡಲೇ ಬೇಕು. ಮಾಡಿಯೇ ಮಾಡುತ್ತೇವೆ" ಎಂಬುದು ಇದಕ್ಕೆ ಅಧಿಕಾರಿಗಳು ಕೊಡುವ ಉತ್ತರ ಎಂದು ಊಹಿಸುತ್ತೇನೆ. ಹಾಗಾದರೆ ಅದನ್ನು ವಿಧೇಯಕದಲ್ಲಿ ಸೇರಿಸಿಬಿಡಿ! ಅದಕ್ಕೇನು ಸಮಸ್ಯೆ?&lt;br /&gt;&lt;br /&gt;ಇನ್ನೊಂದು ಉದಾಹರಣೆ:&lt;br /&gt;&lt;br /&gt;ವಿಧೇಯಕದಲ್ಲಿ ಇರುವುದು:&lt;br /&gt;(೪) (೨)ನೇ ಉಪ-ಪ್ರಕರಣದಲ್ಲಿ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ತಾನು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ನಂತರ ಪ್ರಾಧಿಕಾರವು ಅರ್ಜಿದಾರನಲ್ಲಿ ಅಂತರ್ಜಲವನ್ನು ತೆಗೆಯಲು ಬೇಕಾದ ಸಾಧನಗಳಿವೆ ಮತ್ತು ಬಾವಿಯನ್ನು ಕೊರೆಯುವ ಅಥವಾ ತೋಡುವ ಕಾರ್ಯಕ್ಕೆ ಬೇಕಾದ ಜ್ನಾನವಿದೆ ಎಂದು ತನಗೆ ಮನದಟ್ಟಾದರೆ, ನಿಯಮಿಸಲಾದಂಥ ಷರತ್ತಿಗೊಳಪಟ್ಟು, ಅಂಥ ಅವಧಿಗೆ ಅಂಥ ನಮೂನೆಯಲ್ಲಿ ನೋಂದಣಿ ಪ್ರಮಾಣ ಪತ್ರವನ್ನು ಮಂಜೂರು ಮಾಡಬಹುದು&lt;br /&gt;&lt;br /&gt;ನಾನು ಸೂಚಿಸಿದ ಬದಲಾವಣೆ:&lt;br /&gt;ಮೇಲಿನ ಪ್ಯಾರಾಕ್ಕೆ ಈ ಮುಂದಿನಂತೆ ಸೇರ್ಪಡೆ:&lt;br /&gt;ಅರ್ಜಿದಾರನು ಅರ್ಜಿ ಸಲ್ಲಿಸಿದ ಮೂವತ್ತು ದಿನಗಳ ಒಳಗೆ ಪ್ರಾಧಿಕಾರವು ಆತನಿಗೆ ದೃಡಪತ್ರಿಕೆಯನ್ನು ನೀಡತಕ್ಕದ್ದು ಅಥವಾ ಸಕಾರಣವಾಗಿ ನಿರಾಕರಿಸತಕ್ಕದ್ದು. ಈ ಅವಧಿಯೊಳಗೆ ದೃಢಪತ್ರಿಕೆಯನ್ನು ನೀಡದಿದ್ದರೆ ಅಥವಾ ಸಕಾರಣವಾಗಿ ನಿರಾಕರಿಸದಿದ್ದರೆ, ನಂತರ ಹದಿನೈದು ದಿನಗಳ ಒಳಗೆ ಪ್ರಾಧಿಕಾರವು ದೃಡಪತ್ರಿಕೆಯನ್ನು ಅರ್ಜಿದಾರನಿಗೆ, ಮೂವತ್ತು ದಿನಗಳ ಒಳಗೆ ನೀಡದೆ ಇರಲು ಕಾರಣಗಳೊಂದಿಗೆ, ಉಚಿತವಾಗಿ ನೀಡತಕ್ಕದ್ದು. ಪ್ರಾಧಿಕಾರಕ್ಕೆ ಬರಬೇಕಾದ ಶುಲ್ಕವನ್ನು ಸಂಬಂಧಪಟ್ಟ ಅಧಿಕಾರಿಗಳಿಂದಲೇ ಪ್ರಾಧಿಕಾರವು ವಸೂಲು ಮಾಡತಕ್ಕದ್ದು.&lt;br /&gt;&lt;br /&gt;ಇಂತಹ ಹಲವು ಬದಲಾವಣೆಗಳನ್ನು ನಾನು ಸೂಚಿಸಿದ್ದೆ. ನನ್ನ ಒಂದೇ ಒಂದು ಸಲಹೆ ಸಹ ಸ್ವೀಕೃತವಾಗಿಲ್ಲ.&lt;br /&gt;ಇನ್ನು, ಈ  ವಿಧೇಯಕದ ಕರಡನ್ನು ತಯಾರಿಸಿದವರು ಯಾರು, ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಪರಿಗಣಿಸಲು ಯಾವ ಕ್ರಮವನ್ನು ಅನುಸರಿಸಲಾಗುವುದು ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮುಂದುವರಿಸಬೇಕೆಂದಿದೆ. ನೋಡೋಣ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-189614720036703908?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/189614720036703908/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=189614720036703908&amp;isPopup=true' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/189614720036703908'/><link rel='self' type='application/atom+xml' href='http://www.blogger.com/feeds/1105138094084974837/posts/default/189614720036703908'/><link rel='alternate' type='text/html' href='http://sundararao.blogspot.com/2011/04/blog-post_20.html' title='ಅಂತೂ ಬಂತು ಅಂತರ್ಜಲ ವಿಧೇಯಕ - ೨೦೧೧'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>4</thr:total></entry><entry><id>tag:blogger.com,1999:blog-1105138094084974837.post-6540792770586442933</id><published>2011-04-08T03:41:00.000-07:00</published><updated>2011-04-08T04:15:40.281-07:00</updated><title type='text'>ಎಂಡೋಸಲ್ಫಾನ್: ಸದ್ದಿಲ್ಲದೆ ಬಿದ್ದ ಅಣುಬಾಂಬ್</title><content type='html'>&lt;a href="http://1.bp.blogspot.com/-AvPbUvPhxKk/TZ7nbmhSqaI/AAAAAAAAAC8/ravHB-PnppY/s1600/Akash.JPG"&gt;&lt;img id="BLOGGER_PHOTO_ID_5593162248623401378" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 240px" alt="" src="http://1.bp.blogspot.com/-AvPbUvPhxKk/TZ7nbmhSqaI/AAAAAAAAAC8/ravHB-PnppY/s320/Akash.JPG" border="0" /&gt;&lt;/a&gt; &lt;br /&gt;&lt;div&gt;&lt;/div&gt;ಸುಮಾರು ಒಂದು ತಿಂಗಳ ಹಿಂದೆ ಡಾ ರವೀಂದ್ರನಾಥ ಶಾನುಭಾಗರಿಂದ ಒಂದು ಮೈಲ್ ಬಂತು: ಅದು ಎಂಡೋ ಸಲ್ಫಾನ್ ಬಹಿಷ್ಕರಿಸುವ ವಿಷಯದಲ್ಲಿ. ನಾನು ಉತ್ತರಿಸಿದೆ: "ಕುಡಿಯುವ ನೀರಿಗೆ, ತಿನ್ನುವ ಅನ್ನಕ್ಕೆ ಅಪಾಯ ಬಂದರೂ ಜನ ಎದ್ದು ಪ್ರತಿಭಟಿಸುತ್ತಾರೆಂದು ನನಗೆ ಅನ್ನಿಸುವುದಿಲ್ಲ. ಆದರೂ, ನಾವು ಮಾಡಬೇಕಾದ್ದನ್ನು ಮಾಡಲೇಬೇಕು. ಖಂಡಿತ ಮಾಡೋಣ" ಕಳೆದ ತಿಂಗಳಿನಲ್ಲಿ ಕರ್ನಾಟಕ ಸರಕಾರ ಎಂಡೋಸಲ್ಫಾನನ್ನು ಎರಡು ತಿಂಗಳ ಮಟ್ಟಿಗೆ ನಿಷೇಧಿಸಿತು.. ಹೀಗೆ ಮಾಡಲು ಮೂಲ ಕಾರಣ ಬೆಳ್ತಂಗಡಿಯ ವಿಶ್ವನಾಥ ಗೌಡ ಮತ್ತು ಪುತ್ತೂರಿನ ಸಂಜೀವ ಎಂಬ ಸಾಮಾಜಿಕ ಕಾರ್ಯಕರ್ತರ ಸತತ ಪ್ರಯತ್ನ. ( ವಿಶ್ವನಾಥ ಗೌಡರು ಸ್ವತಃ ಎಂಡೋಸಲ್ಫಾನಿನ ಬಲಿ. ಅವರಿಗೆ ಒಂದು ಕಣ್ಣಿನಲ್ಲಿ ಶೇ. ೧೦ ದೃಷ್ಟಿ ಇದೆ. ಮತ್ತೊಂದರಲ್ಲಿ ದೃಷ್ಟಿ ಇಲ್ಲ.) ಅವರು ಹೇಗಾದರೂ ಮಾಡಿ, ಶೋಭಾ ಕರಂದ್ಲಾಜೆಯವರನ್ನು, ಕೊಕ್ಕಡ, ಶಿಶಿಲಗಳಿಗೆ ಸ್ವತಃ ಬಂದು ಸಮಸ್ಯೆಯನ್ನು ಪರಿಶೀಲಿಸುವಂತೆ ಮನ ಒಲಿಸಿದರು. ಶೋಭಾ ಕರಂದ್ಲಾಜೆಯವರು ಬಂದು ನೋಡಿದಾಗ ಅವರಿಗೆ ದುರಂತದ ಸಂಪೂರ್ಣ ಅರಿವಾಯಿತು. ಮುಂದೆ ಕೆಲವೇ ದಿನದಲ್ಲಿ ಎಂಡೋ ಸಲ್ಫಾನ್ ಕರ್ನಾಟಕದಲ್ಲಿ ಎರಡು ತಿಂಗಳ ಮಟ್ಟಿಗೆ ನಿಷೇಧ ಆಯಿತು. ಈಗ ಸರಕಾರದ ಈ ಆಜ್ನೆಯನ್ನು ಪ್ರಶ್ನಿಸಿ ಎಂಡೋಸಲ್ಫಾನ್ ತಯಾರಿಸುವ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲೇರಿವೆ, ನಿಷೇಧಿಸಿದ್ದಕ್ಕೆ ಸರಿಯಾದ ಆಧಾರವನ್ನು ಕೋರ್ಟಿಗೆ ಕೊಟ್ಟು ಎಂಡೋಸಲ್ಫಾನ್ ಖಾಯಮ್ಮಾಗಿ ನಿಷೇಧವಾಗುವಂತೆ ನೋಡಿಕೊಳ್ಳುವ ಹೊಣೆ ಕರ್ನಾಟಕ ಸರಕಾರದ ಮೇಲೆ ಇದೆ. ಎಂಡೋಸಲ್ಫಾನಿನಿಂದ ಪೀಡಿತರಾದವರು ಎಷ್ಟು ಜನ ನಮ್ಮ ನಡುವೆ ಇದ್ದಾರೆಂಬುದರ ಲೆಕ್ಕ ಕೋರ್ಟಿಗೆ ಕೊಡಬೇಕು. ಅವರೆಲ್ಲ ಹೀಗಾಗಲು ಕಾರಣ ಎಂಡೋಸಲ್ಫಾನೇ ಎಂಬುದನ್ನು ವೈಜ್ನಾನಿಕವಾಗಿ ಕೋರ್ಟಿನ ಎದುರು ಸಾಬೀತು ಮಾಡಬೇಕು.ಈ ಹೊಣೆಯನ್ನು ನಿಭಾಯಿಸುವಲ್ಲಿ ಸಾರ್ವಜನಿಕರೂ ಸರಕಾರಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ. ಶಾಸಕರುಗಳು ಪಕ್ಷಭೇದ ಮರೆತು, ಸರಕಾರಕ್ಕೆ ಬೆಂಬಲ ನೀಡಬೇಕಾಗಿದೆ. &lt;br /&gt;&lt;strong&gt;ಏನಿದು ಎಂಡೋ ಸಲ್ಫಾನ್?&lt;/strong&gt; &lt;br /&gt;ಸಾಮಾನ್ಯವಾಗಿ ಜನರ ಅಭಿಪ್ರಾಯವೆಂದರೆ ಅದೊಂದು ಕೀಟಗಳನ್ನು ನಾಶಪಡಿಸುವ ಔಷಧಿ. ಯಾವುದೇ ಕೀಟನಾಶಕ ಕೀಟಗಳನ್ನು ಮಾತ್ರ ನಾಶ ಮಾಡಲು ಶಕ್ತವಾಗಿರಬೇಕು ಹೊರತು ಅದನ್ನು ಸೇವಿಸಿದ ಇತರ ದೊಡ್ಡ ಪ್ರಾಣಿಗಳ ಮೇಲೆ, ಮನುಷ್ಯರ ಮೇಲೆ ದುಷ್ಪರಿಣಾಮ ಉಂಟು ಮಾಡುವಂತಿರಬಾರದು. ಆದರೆ ಎಂಡೋ ಸಲ್ಫಾನನ್ನು ಸತತವಾಗಿ ಸೇವಿಸಿದರೆ, ಅದು ಮನುಷ್ಯರ ಮೇಲೂ, ಪ್ರಾಣಿಗಳ ಮೇಲೂ ಅತ್ಯಂತ ಘೋರ ಪರಿಣಾಮಗಳನ್ನುಂಟು ಮಾಡುತ್ತದೆ ಎಂಬುದು ಈಗ ವೈಜ್ನಾನಿಕವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಅದನ್ನು ಸುಮಾರು 1960ರ ಸುಮಾರಿಗೆ ಉತ್ಪಾದಿಸಲು ಪ್ರಾರಂಭಿಸಿದ ಅಮೆರಿಕಾ ಸೇರಿ ಜಗತ್ತಿನ 73 ದೇಶಗಳು ಅದರ ತಯಾರಿಕೆ ಹಾಗೂ ಬಳಕೆಯನ್ನು ಬಹಿಷ್ಕರಿಸಿವೆ. ಆದರೆ ಭಾರತದಲ್ಲಿ ಅದರ ತಯಾರಿಕೆ ಹಾಗೂ ಬಳಕೆ ಎರಡನ್ನೂ ಇಲ್ಲಿಯವರೆಗೂ ನಿಷೇಧಿಸಲಾಗಿಲ್ಲ. ಈಗಲೂ ನಮ್ಮ ರೈತರು ಅತ್ಯಂತ ವ್ಯಾಪಕವಾಗಿ ಎಂಡೋಸಲ್ಫಾನನ್ನು ಬಳಸುತ್ತಿದ್ದಾರೆ. &lt;br /&gt;&lt;strong&gt;ಎಂಡೋ ಸಲ್ಫಾನ್ ಮತ್ತು ಬಂಟ್ವಾಳ ತಾಲೂಕು &lt;/strong&gt;&lt;br /&gt;ಕೇರಳದಲ್ಲಿ ಮಾತ್ರ ಎಂಡೋಸಲ್ಫಾನ್ ಬಳಸುತ್ತಾರೆಂದೂ, ಕರ್ನಾಟಕದಲ್ಲಿ ಅದು ಇಲ್ಲವೆಂದೂ ನಾನು ನನ್ನಷ್ಟಕ್ಕೆ ಭಾವಿಸಿಕೊಂಡಿದ್ದೆ. ವಿಶ್ವನಾಥ ಗೌಡರೂ, ಸಂಜೀವರೂ ಸೇರಿ ಕರ್ನಾಟಕದ ಪುತ್ತೂರು, ಬೆಳ್ತಂಗಡಿಗಳಲ್ಲಿ ಎಂಡೋಸಲ್ಫಾನನ್ನು ಗೇರು ತೋಟಗಳಿಗೆ ಧಾರಾಳವಾಗಿ ಸಿಂಪಡಿಸಲಾಗಿದೆ, ಅದರ ಪರಿಣಾಮವಾಗಿಯೇ ಸಾವಿರಾರು ಜನರು ಘೋರವಾದ ಕಾಹಿಲೆಗಳಿಂದ ನರಳುತ್ತಿದ್ದಾರೆ ಎಂಬ ಸತ್ಯ ಸಂಗತಿಯನ್ನು ಬಯಲಿಗೆಳೆದರು. ಆಗ ನಾನು ಅದು ಬಂಟ್ವಾಳ ತಾಲೂಕಿನಲ್ಲಿ ಇಲ್ಲವೆಂದು ನಿಶ್ಚಿಂತೆಯಿಂದಿದ್ದೆ! ಆದರೆ ಸಂಜೀವರು ಮಾಹಿತಿ ಹಕ್ಕಿನ ಮೂಲಕ ಗೇರು ಅಭಿವೃದ್ಧಿ ನಿಗಮದಿಂದ ಪಡೆದ ಮಾಹಿತಿಗಳು ಬೇರೆಯೇ ಸತ್ಯವನ್ನು ಹೇಳುತ್ತಿದ್ದವು: ಬಂಟ್ವಾಳ ತಾಲೂಕಿನ ಅಳಿಕೆ, ವಿಟ್ಲ ಮುಡ್ನೂರು ಹಾಗೂ ಕೇಪು ಗ್ರಾಮಗಳಲ್ಲೂ ಗೇರು ಅಭಿವೃದ್ಧಿ ನಿಗಮದವರು ಎಂಡೋಸಲ್ಫಾನ್ ಸಿಂಪಡಿಸಿದ್ದ ವಿಷಯವನ್ನು ಅಧಿಕೃತ ದಾಖಲೆಗಳ ಮೂಲಕವೇ ಸಂಜೀವರು ನನ್ನೆದುರಿಗೆ ಒಡ್ಡಿದರು. ಈ ವಿಷಯ ತಿಳಿದಾಗ ನಾನು ಕೂತಲ್ಲಿಂದ ಏಳದೆ ವಿಧಿಯೇ ಇರಲಿಲ್ಲ. ಎದ್ದೆ. ಕಣ್ಣು ಬಿಟ್ಟು ಕೊಂಚ ಅತ್ತ ಇತ್ತ ಹುಡುಕಾಡಿದೆ. ನನಗೆ ಕಂಡ ಸತ್ಯ ಘೋರವಾಗಿತ್ತು. ವಿಶ್ವನಾಥ ಗೌಡರು, ಸಂಜೀವರು ಮತ್ತು ಶಾನುಭಾಗರು ನನ್ನ ದಿವ್ಯ ಸೋಮಾರಿತನಕ್ಕೆ ಚಾಟಿ ಏಟು ಕೊಟ್ಟು ಎಬ್ಬಿಸಿದ ಹೊರತು ಏಳಲು, ಕಣ್ಣು ಬಿಡಲು ಸಿದ್ಧನಾಗದ ನನ್ನ ಬಗ್ಗೆ ನನಗೆ ನಾಚಿಕೆಯಾಯಿತು. &lt;br /&gt;&lt;strong&gt;ಎಂಡೋಸಲ್ಫಾನ್ ಪೀಡಿತರಿಗಾಗಿ ಶೋಧ &lt;/strong&gt;&lt;br /&gt;ಕೇಪು, ವಿಟ್ಲಮುಡ್ನೂರು, ಅಳಿಕೆ ಈ ಗ್ರಾಮಗಳಲ್ಲಿ ನನ್ನ ಗುರುತಿನವರು ಯಾರು ಎಂದು ನೆನಪು ಮಾಡಿಕೊಂಡೆ. ತಕ್ಷಣಕ್ಕೆ ಯಾರೂ ನೆನಪಾಗಲಿಲ್ಲ. ಕೊನೆಗೆ ಅನಂತಾಡಿ ಗೋವಿಂದ ಭಟ್ಟರಿಗೆ ಮೇಲ್ ಕಳಿಸಿದೆ. ಅವರು ಕೇಪುವಿನ ನಾರಾಯಣ ಮೂರ್ತಿಯವರ ನಂಬರ್ ಕೊಟ್ಟರು. ನಾರಾಯಣ ಮೂರ್ತಿ ತಮ್ಮ ಸುತ್ತಮುತ್ತ ಅಂಥವರು ಯಾರನ್ನೂ ಕಂಡು ಗೊತ್ತಿಲ್ಲವೆಂದೂ, ವಿ.ಕೆ. ಶರ್ಮರನ್ನು ವಿಚಾರಿಸಿದರೆ ಏನಾದರೂ ಮಾಹಿತಿ ದೊರೆಯಬಹುದೆಂದೂ ಹೇಳಿದರು. ವಿ.ಕೆ. ಶರ್ಮರಿಗೆ ಫೋನ್ ಮಾಡಿದೆ. ಅವರು ಈ ಮುಂಚೆ ಮುಳಿಯದ (ಮುಚ್ಚಿರಪದವು) ಶಾಲೆಯಲ್ಲಿ ಅಧ್ಯಾಪಕರಾಗಿದ್ದವರು. ಅವರೂ ಸಹ ಅಂಥ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿಲ್ಲವೆಂದೂ, ಆದರೆ ಎಂಟು ಹತ್ತು ವರ್ಷಗಳ ಕೆಳಗೆ ನಡೆಯಲು ಕೂಡದ ಒಬ್ಬ ಹುಡುಗ ಶಾಲೆಗೆ ಬರುತ್ತಿದ್ದನೆಂದೂ, ಈಚೆಗೆ ಅವನ ಸಮಾಚಾರ ಗೊತ್ತಿಲ್ಲವೆಂದೂ, ವಿಚಾರಿಸಿ ಹೇಳುವುದಾಗಿಯೂ ತಿಳಿಸಿದರು. ಮಾರನೆಯ ದಿನ ವಿಚಾರಿಸಿದಾಗ ಅಂಥ ಒಬ್ಬ ಹುಡುಗ ಇರುವುದು ಹೌದೆಂದೂ, ಬಂದರೆ ಅವನ ಮನೆಗೆ ಕರೆದುಕೊಂಡು ಹೋಗುವುದಾಗಿಯೂ ಶರ್ಮರು ಹೇಳಿದರು. ಮರುದಿನ ಕೃಷ್ಣ ಗಟ್ಟಿಯವರೂ, ನಾನೂ ಮುಳಿಯಕ್ಕೆ ಹೋದೆವು. ಶಾಲೆಗೆ ಅಂದಾಜು ೩೦೦ ಮೀ. ದೂರದಲ್ಲಿ ಸುಮಾಲಿನಿಯವರ ಮನೆ. ನಾವು ಅಲ್ಲಿಗೆ ಹೋದೆವು. ಚಾವಡಿಯಲ್ಲೇ ಒಂದು ಕುರ್ಚಿಯಲ್ಲಿ ಕೂತಿದ್ದ ಅವರ ಮಗ ಆಕಾಶ್. ಆಕಾಶನನ್ನು ನೋಡಿದರೆ ಅವನು ಆಂಗ್ರಿ ಯಂಗ್ ಮ್ಯಾನ್ ನ ಹಾಗೆ ಕಾಣುತ್ತಾನೆ. ಹಾಗೆ ಇರಲು ಅವನಿಗೆ ಎಲ್ಲ ಕಾರಣವೂ ಇದೆ. ಯಾರೋ ಮಾಡಿದ ತಪ್ಪಿಗಾಗಿ ಆಕಾಶ್ ಇಂದು ಕೂತಲ್ಲೇ ಬದುಕು ಕಳೆಯಬೇಕಾಗಿದೆ. ಜನರ ಅನುಕಂಪವನ್ನು ಸಹಿಸಿಕೊಳ್ಳಬೇಕಾಗಿದೆ. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ರೋಷನ್ ಫೆರಾವೋನ ಮನೆ ಇದೆ. ರೋಷನ್ ಗೆ ಈಗ ಅಂದಾಜು ಹದಿನಾರು ವರ್ಷ. ನಾವು ಹೋದಾಗ ಅವನು ಮನೆಯಲ್ಲಿರಲಿಲ್ಲ, ಶಾಲೆಗೆ ಹೋಗಿದ್ದ. ಆದರೆ ಶಾಲೆಯಲ್ಲಿ ಅವನು ಅವನ ತಮ್ಮನಿಗಿಂತ ಹಿಂದೆ ಬಿದ್ದಿದ್ದಾನೆ. ಕ್ಯಾನ್ಸರ್ ಅವನ ವಿದ್ಯಾಭ್ಯಾಸದ ಎರಡು ವರ್ಷಗಳನ್ನೇ ತಿಂದು ಹಾಕಿದೆ. ಅವನ ಮನೆಯಲ್ಲಿರುವುದು ತಂದೆ ಮಾತ್ರ. ರೋಷನ್ ನ ಚಿಕಿತ್ಸೆಗಾಗಿ ಅವನ ತಂದೆ ತಾಯಿ ಈವರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಅವನ ಚಿಕಿತ್ಸೆಯ ಖರ್ಚು ತೂಗಿಸಲೆಂದೇ ಅವನ ತಾಯಿ ಗಲ್ಫಿಗೆ ಹೋಗಿ ದುಡಿಯುತ್ತಿದ್ದಾರೆ. ಆಕಾಶನ ತಾಯಿ ಸುಮಾಲಿನಿ ನಮಗೆ ಮೂಡಾಯಿಬೆಟ್ಟಿನ ದೇವಕಿಯವರ ಮಗನೂ ಮಲಗಿದಲ್ಲೇ ಎಂಬ ಸುಳಿವು ನೀಡಿದರು. ಆದರೆ ಆ ದಿನ ನಮಗೆ ಅಲ್ಲಿಗೆ ಹೋಗುವುದು ಸಾಧ್ಯವಾಗಲಿಲ್ಲ. ಈ ನಡುವೆ ನಾನು ಮಾಣಿಮೂಲೆ ಗೋವಿಂದ ಭಟ್ಟರನ್ನು ಸಂಪರ್ಕಿಸಿದೆ. ಅವರದೂ ಅದೇ ಮಾತು: "ಈ ಸುತ್ತಿನಲ್ಲೆಲ್ಲೂ ಅಂಥವರು ಕಾಣಲಿಲ್ಲ".ನಾನೆಂದೆ: "ಅಂಥವರು ಸುಲಭದಲ್ಲಿ ಕಾಣಲು ಸಿಗುವುದಿಲ್ಲ. ಏಕೆಂದರೆ ಅವರು ಯಾರಿಗೂ ಕಾಣದ ಹಾಗೆ ಮನೆಯಲ್ಲೇ ಇರುತ್ತಾರೆ". ಗೋವಿಂದ ಭಟ್ಟರಿಗೆ ರವೀಂದ್ರನಾಥ ಶಾನುಭಾಗರ ಪರಿಚಯ ಚೆನ್ನಾಗಿತ್ತು. ಅವರು ಆಸಕ್ತಿ ವಹಿಸಿದರು. ಹೀಗೆ ಅಳಿಕೆಯ ಪಂಚಾಯತ್ ಅಧ್ಯಕ್ಷ ಕಾನ ಈಶ್ವರ ಭಟ್ಟರು, ಗೋವಿಂದ ಭಟ್ಟರು, ಕೃಷ್ಣ ಗಟ್ಟಿ ಮತ್ತು ನಾನು ಒಂದು ದಿನ ಅಳಿಕೆಯಲ್ಲಿ ಸಮೀಕ್ಷೆ ಶುರು ಮಾಡಿದೆವು. ಅಡ್ಯನಡ್ಕ ದಾಟಿ ಕೇರಳದ ಕಡೆಗೆ ಮುಂದೆ ಹೋದರೆ ಅಳಿಕೆಗೆ ತಿರುಗುವ ರಸ್ತೆ ಸಿಗುತ್ತದೆ. ಇದು ಪಡಿಬಾಗಿಲು. ಇಲ್ಲಿ ರಸ್ತೆಯ ಎಡಕ್ಕೆ ಕೆಳಗಿಳಿದು ಹೋದರೆ ಆನಂದ ಆಚಾರರ ಮನೆ ಇದೆ. ಅವರ ಮಗ ಉಮೇಶ ಫಕ್ಕನೆ ನೋಡಲು ಎಲ್ಲರ ಹಾಗೇ ಕಾಣುತ್ತಾನೆ. ಆದರೆ ಅವನು ಎಲ್ಲರಂತಿಲ್ಲ. ಅವನಿಗೀಗ ಹನ್ನೆರಡು ವರ್ಷ. ಅವನು ನನ್ನನ್ನು ನೋಡಿದ್ದು ಅಂದೇ ಮೊದಲು. ಆದರೂ ನಾನು ಕೂತಲ್ಲಿಗೆ ಬಂದು ನನ್ನ ಕಿಸೆಗೇ ಕೈ ಹಾಕಿದ. ಶಾಲೆಗೆ ಹೋಗುತ್ತಾನಾದರೂ. ಓದುವುದು ಅವನಿಗೆ ತುಂಬ ಕಷ್ಟವಾಗುತ್ತದೆ ಎನ್ನುತ್ತಾರೆ ಅವನ ತಾಯಿ.. ನಾವು ಮೂಡಾಯಿಬೆಟ್ಟಿನ ದೇವಕಿಯವರ ಮನೆಗೆ ಹೋದೆವು. ದೇವಕಿ ಈ ಮೊದಲು ತಾಲೂಕು ಪಂಚಾಯತ್ ಸದಸ್ಯರಾಗಿದ್ದವರಂತೆ.ತುಂಬ ಚುರುಕಿನವರು. ನಾವು ಹೋದಾಗ ಬತ್ತ ಹೊತ್ತು ತರುವ ಕೆಲಸದಲ್ಲಿದ್ದರು. ಅವರ ಮಗ ರಾಜೇಂದ್ರ ಪ್ರಸಾದ ಚಾವಡಿಯಲ್ಲಿ ಒಂದು ಮಂಚದ ಮೇಲೆ ಮಲಗಿದ್ದ. ಅವನಿಗೀಗ ಸುಮಾರು ೩೦ ವರ್ಷ."ಇವನು ಹುಟ್ಟಿದಾಗಿಂದಲೂ ಹೀಗೇ ಮಲಗಿದ್ದಾನೆ. ಟಿವಿ ನೋಡಿ ಎಲ್ಲಾ ಭಾಷೆ ಕಲಿತಿದ್ದಾನೆ. ಇತ್ತೀಚೆಗೆ ಅವನನ್ನು ಎತ್ತಿ ಆಚೆ ಈಚೆ ಮಾಡುವುದು ನಮಗೆ ತುಂಬ ಕಷ್ಟವಾಗುತ್ತಿದೆ" ಎಂದರು ದೇವಕಿ. ಅವರ ಮಾತಿನಲ್ಲಿ ಕಷ್ಟ, ದುಃಖಗಳ ಛಾಯೆ ಇರಲಿಲ್ಲ. ದುಃಖ ಪಡುವ ಶಕ್ತಿ ಅವರಲ್ಲಿ ಉಳಿದ ಹಾಗೆ ಕಾಣಲಿಲ್ಲ.ಆದರೆ ದೇವಕಿ, ಅಂಥ ಮಗನನ್ನು ಮನೆಯಲ್ಲಿಟ್ಟುಕೊಂಡೇ ಸಮಾಜದಲ್ಲಿ ತೊಡಗಿಕೊಂಡವರು. ಇಂಥದೇ ಸಮಸ್ಯೆ ಇರುವವರ ಒಂದು ಪಟ್ಟಿಯೇ ಅವರ ಹತ್ತಿರ ಇತ್ತು! ಅದುವರೆಗೂ ಕಣ್ಣಿಗೆ ಮರೆಯಾಗಿದ್ದ ಎಂಡೋಸಲ್ಫಾನ್ ದುರಂತ ಸ್ವಲ್ಪ ಸ್ವಲ್ಪವಾಗಿ ತನ್ನ ಘೋರಸ್ವರೂಪವನ್ನು ನಮ್ಮೆದುರು ಬಿಚ್ಚತೊಡಗಿತು. ದೇವಕಿಯವರು ಕೊಟ್ಟ ಪಟ್ಟಿಯ ಆಧಾರದ ಮೇಲೆ ನಾವು ಹುಡುಕುತ್ತ ಹೋದೆವು.ನಾಲ್ಕು ವರ್ಷದ ಯಶವಂತನಿಗೆ ತಲೆ ತುಂಬ ದೊಡ್ಡದಾಗಿದೆ. ನೀರು ತುಂಬಿದೆ ಎನ್ನುತ್ತಾರಂತೆ ವೈದ್ಯರು.... ಮೂವತ್ತೆರಡರ ಹರಿಪ್ರಸಾದ ಶೆಟ್ಟಿ ಆಚೆ ಈಚೆ ತೆವಳಿಯೇ ಚಲಿಸಬೇಕು.... ಇಪ್ಪತ್ತೆರಡರ ಅಬ್ದುಲ್ ನಝೀರ್ ಮತ್ತು ಇಪ್ಪತ್ನಾಲ್ಕರ ಅವನ ಅಕ್ಕ ಜೋಹರಾ ಇಬ್ಬರಿಗೂ ಬುದ್ಧಿ ಮಾಂದ್ಯ......ಇನ್ನೂ ಆರು ವರ್ಷದ ಮುಹ್ಸೀನ್ ಬಾತಿಶ್ ಗೆ ಬುದ್ಧಿ ಮಂದ.... ೨೬ ವರ್ಷದ ಮಹಮ್ಮದ್ ಆಶ್ರಫ್ ಸಹ ಆಚೆ ಈಚೆ ತೆವಳಿಕೊಂಡೇ ಹೋಗಬೇಕು.... ರಾಮಣ್ಣಗೌಡರ ಪತ್ನಿ ಕುಸುಮಾಗೆ ಕ್ಯಾನ್ಸರ್.... ಮರುದಿನ ಮತ್ತೆ ಗೋವಿಂದ ಭಟ್ಟರನ್ನು ಸಂಪರ್ಕಿಸಿದೆ. ನಿಮಗೆ ಬಿಲ್ಲಂಪದವು ನಾರಾಯಣ ಭಟ್ಟರನ್ನು ಜೊತೆ ಮಾಡಿಕೊಡುತ್ತೇನೆ ಅಂದರು ಅವರು. ಹೀಗೆ ನಾರಾಯಣ ಭಟ್ಟರೂ ನಾನೂ ಮತ್ತೊಂದು ದಿನ ಕುದ್ದುಪದವಿನ ಸುತ್ತಮುತ್ತ ತಿರುಗಿದೆವು: ನಾರಾಯಣ ಭಟ್ಟರು ಸ್ಥಳೀಕರು. ನಾವು ಹೆಚ್ಚು ದೂರ ಹೋಗಬೇಕಾಗಿರಲಿಲ್ಲ. ಎಲ್ಲ ಅಲ್ಲೇ ಇದ್ದಾರೆ. ಇನ್ನೂ ೫೨ರ, ಒಳ್ಳೆಯ ದೇಹ ಸೌಷ್ಟವ ಇರುವ ಬಾಲಕೃಷ್ಣ ಶೆಟ್ಟರು ಕಣ್ಣು ಕಳೆದುಕೊಂಡಿದ್ದಾರೆ... ಅವರ ತಮ್ಮ ನಲವತ್ತರ ಆಸುಪಾಸಿನ ಸತೀಶ ಶೆಟ್ಟರಿಗೆ ಒಂದು ಕೈ, ಒಂದು ಕಾಲು ಬಲಹೀನವಾಗಿದೆ...(ಬಿಲ್ಲಂಪದವು ನಾರಾಯಣ ಭಟ್ಟರ ಮನೆಯಲ್ಲಿ ಹಿಂದಿನಿಂದಲೂ ಒಂದು ನೋವಿನ ಎಣ್ಣೆ ಉಚಿತವಾಗಿ ಕೊಡುವ ಸಂಪ್ರದಾಯ ಇದೆಯಂತೆ. ಆ ಎಣ್ಣೆ ಹಚ್ಚಿದರೆ ನೋವು ಸ್ವಲ್ಪ ಕಡಿಮೆಯಾಗುತ್ತದೆ ಎಂದರು ಸತೀಶ ಶೆಟ್ಟರು. "ಬಲೆ, ಇತ್ತೆ ರೆಡಿ ಉಂಡು, ಕೊರ್ಕ" ಎಂದರು ನಾರಾಯಣ ಭಟ್ಟರು.) ರೈಹಾನಳಿಗೆ ನಡೆಯುವುದೇ ಕಷ್ಟ..... ಸುಲೈಮಾನ್ ರಿಗೆ ಶ್ವಾಸಕೋಶದ ಸಮಸ್ಯೆ.....ಕ್ವಾಟರ್ಸಿನ ಅಡ್ರುರವರ ಮಗಳು ಬೇಬಿಗೆ ನಡೆಯಲು ಆಗುವುದಿಲ್ಲ.... ಎಲ್ಲಕ್ಕಿಂತ ನನಗೆ ಕಷ್ಟವಾದದ್ದು ಅಬೂಬಕ್ಕರ್ ರ ಮನೆಯಲ್ಲಿ. ಅವರ ಮನೆಯಲ್ಲಿ ಒಂದಲ್ಲ ಎರಡಲ್ಲ ಮೂರು ಮಕ್ಕಳಿದ್ದಾರೆ ಇಂಥವರು. ಹಿರಿಯವಳಿಗೆ ಸುಮಾರು ಇಪ್ಪತ್ತು. ಎರಡನೆಯವಳು ಸುಮಾರು ಹದಿನಾರು. ಮೂರನೆಯವ ಸುಮಾರು ಹತ್ತು. ಬುದ್ದಿಮಾಂದ್ಯರು. "ಒಂದು, ಎರಡು ಎಲ್ಲಿ ಮಾಡಬೇಕು ಅಂತ ಅವರಿಗೆ ತಿಳುವಳಿಕೆ ಇಲ್ಲ" ಎಂದರು ಆ ಮಕ್ಕಳ ತಾಯಿ. ದೇವರೇ...... ಪತಿ ಪತ್ನಿ ಡಾಕ್ಟರ ಹತ್ತಿರ ಹೋಗಿ ಪರೀಕ್ಷೆ ಮಾಡಿಸಿ, ಅದೇನೋ ಅಮೆರಿಕದವರೆಗೂ ಹೋಯಿತಂತೆ, ಅಂತೂ ಈಗ ಅವರಿಗೆ ಮತ್ತೆ ಎರಡು ಮಕ್ಕಳಾಗಿವೆ. ಇಬ್ಬರೂ ಆರೋಗ್ಯವಾಗಿದ್ದಾರೆ. ಬಂಟ್ವಾಳ ತಾಲೂಕಿನ ಇನ್ನೂ ಹಲವು ಭಾಗಗಳಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಆಗಿದೆ ಎಂದು ಹಲವರು ಹೇಳುವುದು ಕೇಳಿದ್ದೇನೆ. ಮುಖ್ಯವಾಗಿ ವೀರಕಂಬ ಮತ್ತು ಅಜ್ಜಿಬೆಟ್ಟು ಗ್ರಾಮಗಳಲ್ಲಿ ಸಿಂಪಡಣೆ ಆಗಿದೆ ಎಂದು ಹೇಳುತ್ತಾರೆ. ಸಿಂಪಡಣೆ ಆಗಿರುವುದು ಹೌದಾದರೆ, ಅಲ್ಲಿಯೂ ಇಂತಹ ಪ್ರಕರಣಗಳಿರುವ ಸಾಧ್ಯತೆ ಇದೆ. ಇರಲಿ. ಇದನ್ನಿನ್ನು ಮುಂದುವರಿಸುವುದಿಲ್ಲ. ಅನಾರೋಗ್ಯದ ಎಲ್ಲ ಪ್ರಕರಣಗಳನ್ನೂ ಎಂಡೋಸಲ್ಫಾನ್ ತಲೆಗೇ ಕಟ್ಟಿ, "ಸತ್ತ ಎಲ್ಲ ಹುಲಿಗಳನ್ನೂ ಉಲ್ಲಾಸ ಕಾರಂತರ ಖಾತೆಗೆ ಹಾಕುವುದು" ನನ್ನ ಉದ್ದೇಶವಲ್ಲ. ಮುಂದೊಂದು ದಿನ ಈ ಎಲ್ಲರನ್ನೂ ವೈದ್ಯರು ಪರೀಕ್ಷೆ ಮಾಡಬೇಕು. ಅವರ ಕಾಹಿಲೆಗೆ ಕಾರಣವನ್ನೂ ವೈದ್ಯರೇ ಹೇಳಬೇಕು. ಹಾಗೆ ವೈದ್ಯರು ಹೇಳಿದರೆ ಮಾತ್ರ ನ್ಯಾಯಾಲಯ ಒಪ್ಪುತ್ತದೆ ಹೊರತು ಅನ್ಯಥಾ ಅಲ್ಲ. ನನಗೆ ಕಾಣುವಂತೆ ಎಂಡೋಸಲ್ಫಾನಿನ ಬಹು ದೊಡ್ಡ ಅಪಾಯವೆಂದರೆ ಅದು ಮನುಷ್ಯರ ವಂಶವಾಹಿಯನ್ನು ವಿರೂಪಗೊಳಿಸುವುದು. ಮಕ್ಕಳು ಅಂಗವಿಕಲರಾಗುವುದು, ಬುದ್ಧಿಮಾಂದ್ಯತೆ ಮುಂತಾದ್ದಕ್ಕೆ ವಂಶವಾಹಿ ವಿರೂಪಗೊಳ್ಳುವುದೇ ಕಾರಣ. ನಾಗಾಸಾಕಿ, ಹಿರೋಶಿಮಾಗಳಲ್ಲಿ ಅಣುಬಾಂಬು ಬಿದ್ದಾಗ, ಚೆರ್ನೋಬಿಲ್ ಅಣುದುರಂತ ಸಂಭವಿಸಿದಾಗ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರ ವಂಶವಾಹಿಗಳು ವಿರೂಪಗೊಂಡಿದ್ದರೆ, ಮಕ್ಕಳಾಗದಂತೆ ಎಚ್ಚರಿಕೆ ವಹಿಸಲು ಅವರಿಗೆ ಸೂಚಿಸಲಾಯಿತಂತೆ. ಅದೇ ರೀತಿಯ ಎಚ್ಚರಿಕೆಯನ್ನು ಕರ್ನಾಟಕ ಸರ್ಕಾರವೂ ತೆಗೆದುಕೊಳ್ಳಬೇಕು; ಜನರ ವಂಶವಾಹಿಯನ್ನು ಉಚಿತವಾಗಿ ಪರೀಕ್ಷೆಗೊಳಪಡಿಸಿ, ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳು ಹುಟ್ಟದಂತೆ ಎಚ್ಚರಿಕೆ ವಹಿಸಬೇಕು ಎನ್ನುವುದು ಡಾ. ರವೀಂದ್ರನಾಥ ಶಾನುಭಾಗರ ಅಭಿಪ್ರಾಯ. ಕರ್ನಾಟಕ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ, ಅಖಿಲ ಭಾರತದ ಮಟ್ಟದಲ್ಲೂ ಎಂಡೋಸಲ್ಫಾನನ್ನು ನಿಷೇಧಿಸಬೇಕೆಂಬ ದೊಡ್ಡ ಆಂದೋಲನವೇ ನಡೆಯುತ್ತಿದೆ. ಈ ಆಂದೋಲನವನ್ನು ಬೆಂಬಲಿಸಬೇಕೆನ್ನುವವರು ಕೇಂದ್ರ ಪರಿಸರ ಮಂತ್ರಿ ಜಯರಾಮ ರಮೇಶ್ ಅವರಿಗೆ Sri Jayaram Ramesh, Minister of Environment and Forest, Paryavaran Bhavan, CGO Complex, Lodhi Road, New Delhi - 110003 ಈ ವಿಳಾಸಕ್ಕೆ ತಮ್ಮ ಅಭಿಪ್ರಾಯ ತಿಳಿಸಿ ಪತ್ರ ಬರೆಯಬಹುದು ಅಥವಾ http://www.petitiononline.com/endoban/petition.html ಎಂಬ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-6540792770586442933?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/6540792770586442933/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=6540792770586442933&amp;isPopup=true' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/6540792770586442933'/><link rel='self' type='application/atom+xml' href='http://www.blogger.com/feeds/1105138094084974837/posts/default/6540792770586442933'/><link rel='alternate' type='text/html' href='http://sundararao.blogspot.com/2011/04/blog-post.html' title='ಎಂಡೋಸಲ್ಫಾನ್: ಸದ್ದಿಲ್ಲದೆ ಬಿದ್ದ ಅಣುಬಾಂಬ್'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-AvPbUvPhxKk/TZ7nbmhSqaI/AAAAAAAAAC8/ravHB-PnppY/s72-c/Akash.JPG' height='72' width='72'/><thr:total>0</thr:total></entry><entry><id>tag:blogger.com,1999:blog-1105138094084974837.post-5527175207646420196</id><published>2011-03-08T07:49:00.000-08:00</published><updated>2011-03-08T07:51:03.815-08:00</updated><title type='text'>ನೇತ್ರಾವತಿ ತಿರುವು ಯೋಜನೆ: ತಕ್ಷಣಕ್ಕೆ ಅನ್ನಿಸಿದ್ದು:</title><content type='html'>&lt;div align="justify"&gt;&lt;br /&gt;ನೇತ್ರಾವತಿ ತಿರುವು ಯೋಜನೆಗೆ ಮತ್ತೆ ಜೀವ ಬಂದಿದೆ. ಈ ಯೋಜನೆಯನ್ನು ಜಾರಿಗೆ ಕೊಡುವ ಮೊದಲು ನಮ್ಮ ಸರಕಾರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು:&lt;br /&gt;ಈ ಯೋಜನೆ ತುಮಕೂರು, ಕೋಲಾರ, ಚಿತ್ರದುರ್ಗ, ರಾಮನಗರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ. ಹಾಗಿದ್ದರೆ,&lt;br /&gt;೧. ಈ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ಯಾವಾಗಿನಿಂದ ಪ್ರಾರಂಭವಾಯಿತು?&lt;br /&gt;೨, ಅಭಾವ ಉಂಟಾಗಲು ಕಾರಣಗಳೇನು?&lt;br /&gt;೩. ಸಮಸ್ಯೆಯನ್ನು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳುವುದು ಸಾಧ್ಯವೇ?&lt;br /&gt;೪. ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಮಾಡಿರುವ ಪ್ರಯತ್ನಗಳು ಯಾವುವು? ಅವುಗಳು ಫಲ ಕೊಟ್ಟಿಲ್ಲವೇ? ಯಾಕೆ?&lt;br /&gt;೫. ಸಮಸ್ಯೆಯ ಪರಿಹಾರ ಹೇಗೆ?&lt;br /&gt;ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಮೊದಲು ಕಂಡುಕೊಳ್ಳಬೇಕು. ಈ ಅಧ್ಯಯನದ ನಂತರವೂ ಹೊರಗಿನಿಂದ ನೀರು ತರುವುದು ಅನಿವಾರ್ಯ ಎಂದಾದರೆ ಮಾತ್ರ ಆ ಪ್ರಯತ್ನಕ್ಕೆ ಕೈ ಹಾಕಬಹುದು.&lt;br /&gt;ಹಿಂದೊಬ್ಬಳು ಮುದುಕಿ ಇದ್ದಳಂತೆ. ಮನೆಯೊಳಗೆ ಸೂಜಿ ಕಳೆದುಕೊಂಡು, ಒಳಗೆ ಕತ್ತಲು, ಹೊರಗೆ ಬೆಳಕಿದೆ ಎಂದು, ಅಂಗಳಕ್ಕೆ ಬಂದು ಸೂಜಿ ಹುಡುಕಿದವಳು. ನಮ್ಮ ಕಥೆಯೂ ಹಂಗಾಗಬಾರದು. ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲಿ ಹುಡುಕೋಣ. ಸಿಗುವುದು ಸಾಧ್ಯ, ಸಿಗುತ್ತದೆ.&lt;br /&gt;ಒಂದು ಉದಾಹರಣೆ: ಬೆಂಗಳೂರಿನಲ್ಲಿ ವೃಷಭಾವತಿ ಎಂಬ ನದಿ ಇತ್ತಂತೆ. ಅದೀಗ ದೊಡ್ಡ ಚರಂಡಿಯಾಗಿದೆ. ಒಂದು ಕಾಲಕ್ಕೆ (ಬಹಳ ಹಿಂದೇನೂ ಅಲ್ಲ. ಬಹುಶಃ ಐವತ್ತು ವರ್ಷಗಳ ಹಿಂದೆ) ಕುಡಿಯುವ ಸಿಹಿನೀರು ಕೊಡುತ್ತಿದ್ದ ನದಿ ಇಂದು ಕೊಳಚೆ ಹರಿಯುವ ಚರಂಡಿಯಾಗಿದ್ದರೆ, ಅದಕ್ಕೆ ನಾವೇ ಹೊಣೆ. ನಮ್ಮ ಮೊದಲ ಕರ್ತವ್ಯ ಆ ಚರಂಡಿಯನ್ನು ಹಿಂದೆ ಇದ್ದ ನದಿಯಾಗಿ ಪರಿವರ್ತಿಸುವುದು. ಬೆಂಗಳೂರಿನ ಕೆರೆಗಳ ನೀರನ್ನು ಕುಡಿಯಲಾಗದಂತೆ ಮಲಿನ ಮಾಡಿ, ಅಲ್ಲಿ ದೋಣಿಯಾಟವಾಡಿ ಮಜಾ ಮಾಡುವ, ಕೆರೆಯಂಗಳವನ್ನು ಕ್ರಿಕೆಟ್ ಮೈದಾನ ಮಾಡಿ ಹಗಲೂ ರಾತ್ರಿ ಕ್ರಿಕೆಟ್ ನಶೆಯಲ್ಲಿ ಮುಳುಗಿರುವ ಪಾಪಿಗಳು ನಾವು. ಅದಕ್ಕೆ ಪ್ರಾಯಶ್ಚಿತ್ತವನ್ನೂ ನಾವೇ ಮಾಡಿಕೊಳ್ಳಬೇಕು. ಈ ಮಾತು ಮೇಲೆ ಹೇಳಿದ ಎಲ್ಲ ಜಿಲ್ಲೆಗಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದುಕೊಂಡಿದ್ದೇನೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-5527175207646420196?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/5527175207646420196/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=5527175207646420196&amp;isPopup=true' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/5527175207646420196'/><link rel='self' type='application/atom+xml' href='http://www.blogger.com/feeds/1105138094084974837/posts/default/5527175207646420196'/><link rel='alternate' type='text/html' href='http://sundararao.blogspot.com/2011/03/blog-post.html' title='ನೇತ್ರಾವತಿ ತಿರುವು ಯೋಜನೆ: ತಕ್ಷಣಕ್ಕೆ ಅನ್ನಿಸಿದ್ದು:'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>0</thr:total></entry><entry><id>tag:blogger.com,1999:blog-1105138094084974837.post-78336767641775898</id><published>2011-02-26T08:21:00.000-08:00</published><updated>2011-02-26T08:23:15.766-08:00</updated><title type='text'>ಎಸ್ ಇ ಜಡ್ ಕಂಪೆನಿ ಹೈಕೋರ್ಟಿಗೆ ಹೋದದ್ದರ ಒಳಗುಟ್ಟೇನು?</title><content type='html'>"ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ" ಎಂದು ಕರ್ನಾಟಕ ಮಾಹಿತಿ ಆಯೋಗ ನೀಡಿದ ತೀರ್ಪನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟಿಗೆ ಹೋಗಿದೆಯಷ್ಟೆ? ಇದರ ಒಳಗುಟ್ಟೇನು?&lt;br /&gt;ಕೆಲವು ಸಮಯದಿಂದಲೂ ವಿದ್ಯಾ ಮೇಡಂ (ವಿದ್ಯಾ ದಿನಕರ್) "ಏನೋ ಗುಟ್ಟು ಇರಬೇಕು" ಎಂದು ಅನುಮಾನಿಸುತ್ತಲೇ ಇದ್ದರು. ಕಂಪೆನಿ ಹೈಕೋರ್ಟಿಗೆ ಹೋದರೂ ಹೋಗಬಹುದು ಎಂಬ ಅನುಮಾನ, ಆಯೋಗ ನಿರ್ದೇಶಿಸಿದ ಅವಧಿದೊಳಗೆ ಮಾಹಿತಿ ಸಿಗದಿದ್ದಾಗ, ನನಗೂ ಬಂದಿತ್ತು.&lt;br /&gt;ನಾನು ಕೇಳಿದ ಮಾಹಿತಿ ನೀರಿಗೆ ಸಂಬಂಧಿಸಿದ್ದು. ಬಂಟ್ವಾಳ ತಾ. ಶಂಬೂರಿನಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟಿ, ಆ ನೀರಿನಿಂದ ಎ ಎಂ ಆರ್ ಕಂಪೆನಿ ಜಲವಿದ್ಯುತ್ತನ್ನು ತಯಾರಿಸುತ್ತಿದೆ. ಇದೇ ಆಣೆಕಟ್ಟಿನಿಂದ ನೀರನ್ನು ಸಾಗಿಸಲು ತಾನು ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್ ಇ ಜಡ್ ಕಂಪೆನಿ ನನಗೆ ತಿಳಿಸಿತ್ತು. ಆ ಒಪ್ಪಂದದ ಪ್ರತಿಯನ್ನು ಕೊಡುವಂತೆ ನಾನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದೆ. ಕಂಪೆನಿ ನನಗೆ ಒಪ್ಪಂದದ ಪ್ರತಿ ಕೊಡಲಿಲ್ಲ. ಈಗ ಹೈಕೋರ್ಟ್ ಎದುರಿಗೆ ಇರುವುದು ಇದೇ ವಿವಾದ.&lt;br /&gt;ನೋಡೋಣ ಎಂದು ಮೊನ್ನೆ ನಾನು ಮತ್ತೊಂದು ಕಡೆಯಿಂದ ಒಂದು ಪ್ರಯತ್ನ ಮಾಡಿದೆ. ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾ.ನಿ. ಎಂಜಿನಿಯರ್ ರವರ ಕಛೇರಿಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿ, ಮೂರು ಮಾಹಿತಿಗಳನ್ನು ಕೇಳಿದೆ:&lt;br /&gt;೧. ಎಸ್ ಇ ಜಡ್ ಕಂಪೆನಿಗೆ ತನ್ನ ಆಣೆಕಟ್ಟಿನಿಂದ ನೀರು ಒದಗಿಸಲು ಎ ಎಂ ಆರ್ ಕಂಪೆನಿಗೆ ಅನುಮತಿ ನೀಡಲಾಗಿದೆಯೆ?&lt;br /&gt;೨. ಎ ಎಂ ಆರ್ ಕಂಪೆನಿಯ ಆಣೆಕಟ್ಟಿನಿಂದ ನೀರು ಪಡೆಯಲು ಎಸ್ ಇ ಜಡ್ ಕಂಪೆನಿಗೆ ಅನುಮತಿ ನೀಡಲಾಗಿದೆಯೆ?&lt;br /&gt;೩. ಒಂದು ವೇಳೆ ಅನುಮತಿ ನೀಡಿದ್ದರೆ, ಆ ಎರಡೂ ಕಂಪೆನಿಗಳ ನಡುವೆ ಈ ಬಗ್ಗೆ ಆಗಿರುವ ಒಪ್ಪಂದವನ್ನು ನೀವು ಅಂಗೀಕರಿಸಿದ್ದೀರಾ? ಆ ಒಪ್ಪಂದದ ಪ್ರತಿ.&lt;br /&gt;25-02-2011ರಂದು ಅವರಿಂದ ಹೀಗೆ ಉತ್ತರ ಬಂದಿದೆ:&lt;br /&gt;"..... ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿ ಎ.ಎಂ.ಆರ್. ಕಂಪೆನಿಗೆ ಅದರ ಆಣೆಕಟ್ಟಿನಿಂದ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು ಸರಬರಾಜು ಮಾಡಲು ಮತ್ತು ವಿಶೇಷ ಆರ್ಥಿಕ ವಲಯಕ್ಕೆ ಎ. ಎಂ. ಆರ್. ಕಂಪೆನಿಯ ಆಣೆಕಟ್ಟಿನಿಂದ ನೀರು ಪಡೆದುಕೊಳ್ಳಲು ಈ ವಿಭಾಗದಿಂದ ಅನುಮತಿ ನೀಡಿರುವುದಿಲ್ಲ. ಹಾಗೂ ಈ ಕುರಿತು ಯಾವುದೇ ಒಪ್ಪಂದವನ್ನು ಈ ವಿಭಾಗದಿಂದ ಮಾಡಿರುವುದಿಲ್ಲ"&lt;br /&gt;ಎಂದರೆ ಎಸ್ ಇ ಜಡ್ ಕಂಪೆನಿ ನನಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾವಿಸಿರುವ ಒಪ್ಪಂದವು ನಿಜವಾಗಿ ಅಸ್ತಿತ್ವದಲ್ಲಿಯೇ ಇಲ್ಲವೆ? ( ಈ ನಡುವೆ ಎ. ಎಂ. ಆರ್. ಕಂಪೆನಿಯನ್ನು ಜರ್ಮನ್ ಮೂಲದ ಗ್ರೀನ್ ಕೇರ್ ಕಂಪೆನಿಗೆ ಮಾರಲಾಗಿದೆ ಎಂಬ ಸುದ್ದಿಯೂ ಇದೆ. ಆದರೆ ಆ ವಿಷಯ ನನಗೆ ಖಚಿತವಾಗಿ ಗೊತ್ತಿಲ್ಲ.) ಒಪ್ಪಂದವೇ ಇಲ್ಲದಿದ್ದರೆ ಯಾವ ಕೋರ್ಟು ಹೇಳಿದರೆ ತಾನೆ ಕಂಪೆನಿ ಅದನ್ನು ನನಗೆ ಕೊಡಲು ಸಾಧ್ಯ? ಮುಖ್ಯವಾಗಿ ಈ ಕಾರಣಕ್ಕಾಗಿಯೇ ಕಂಪೆನಿ ಕೋರ್ಟು ವ್ಯವಹಾರದಲ್ಲಿ ತೊಡಗಿರಬಹುದೆ? "ಹೇಗಾದರೂ ಒಮ್ಮೆ ಕೋರ್ಟಿನಲ್ಲಿ ಪ್ರವೇಶ ಗಿಟ್ಟಿಸಿಕೊಂಡರೆ ಮತ್ತೆ ವರ್ಷಗಟ್ಟಲೆ ಪ್ರಕರಣವನ್ನು ಎಳೆಯಬಹುದು, ಮುಂದೊಂದು ದಿನ ಸಮಸ್ಯೆಯನ್ನು ಹೇಗೋ ಬಗೆಹರಿಸಿಕೊಳ್ಳಬಹುದು" ಎಂಬ ಕುರುಡು ಧೈರ್ಯದಿಂದ ಕಂಪೆನಿ ಹೀಗೆ ಮಾಡಿರಬಹುದೆ? ಜೊತೆಗೆ, ಕೋರ್ಟಿನಲ್ಲಿ ತಾನೇ ಗೆದ್ದರೆ, ಆಗ ಡಬಲ್ ಲಾಭ ಸಿಕ್ಕಿದಂತಾಯಿತಲ್ಲ. ಮತ್ತು ಅಲ್ಲಿಯವರೆಗೆ, ಮಾಹಿತಿ ಕೇಳುವವರಿಗೆಲ್ಲ ಇದೇ ನೆಪವೊಡ್ಡಿ ಮಾಹಿತಿಯನ್ನು ನಿರಾಕರಿಸಬಹುದಲ್ಲ? ಈ ದಿಸೆಯಲ್ಲಿ ಯೋಚನೆ ಮಾಡಿದರೆ, ಪ್ರಕರಣವನ್ನು ಕಂಪೆನಿ ಸುಪ್ರೀಂ ಕೋರ್ಟಿಗೆ ಕೊಂಡು ಹೋಗಲು ಯತ್ನಿಸಿದರೂ ಆಶ್ಚರ್ಯವಿಲ್ಲ ಎಂದು ನನಗೆ ಕಾಣುತ್ತದೆ.&lt;br /&gt;&lt;strong&gt;ಒಪ್ಪಂದ ಇದೆಯೋ ಇಲ್ಲವೋ?&lt;br /&gt;&lt;/strong&gt;ನೇತ್ರಾವತಿ ನದಿಯ ನೀರು ಸಾರ್ವಜನಿಕ ಸಂಪತ್ತು. ಅದರ ಮೇಲೆ ಅಧಿಕಾರ ಇರುವುದು ಸರಕಾರಕ್ಕೆ. ಆದ್ದರಿಂದಲೇ, ಸರಕಾರದ ಒಪ್ಪಿಗೆ ಇಲ್ಲದೆ ಎರಡು ಖಾಸಗಿ ಕಂಪೆನಿಗಳು ನದಿಯ ನೀರಿನ ವಿಷಯವಾಗಿ ಯಾವ ಒಪ್ಪಂದವನ್ನೂ ಮಾಡಿಕೊಳ್ಳಲು ಬರುವುದಿಲ್ಲ. ಇಲ್ಲಿ ಸರಕಾರದ ಪರವಾಗಿ ಒಪ್ಪಿಗೆ ನೀಡುವ, ಒಪ್ಪಂದವನ್ನು ಅಂಗೀಕರಿಸುವ ಅಧಿಕಾರ ಇರುವುದು, ನನಗೆ ತಿಳಿದ ಮಟ್ಟಿಗೆ, ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾ.ನಿ. ಎಂಜಿನಿಯರ್ ಅವರಿಗೆ. ("ಪೆರ್ಲ ಮಿನಿ ಹೈಡಲ್ ಪ್ರಾಜಕ್ಟ್"ನೊಂದಿಗೆ ಕರ್ನಾಟಕ ಸರಕಾರದ ಪರವಾಗಿ ಒಪ್ಪಂದ ಮಾಡಿಕೊಂಡಿರುವುದು ಅವರೇ).ಅವರಿಗೇ ಈ ಒಪ್ಪಂದದ ಬಗ್ಗೆ ಗೊತ್ತಿಲ್ಲ ಎಂದಾದ ಮೇಲೆ, "ಎ. ಎಂ. ಆರ್. ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ" ಎಂಬ ಎಸ್. ಇ. ಜಡ್. ಕಂಪೆನಿಯ ಮಾತನ್ನು ನಂಬುವುದು ಹೇಗೆ?&lt;br /&gt;ಶಂಬೂರಿನ ಸಮೀಪ ಜಲವಿದ್ಯುತ್ ತಯಾರಿಸಲು ಮೂಲತಃ ಅನುಮತಿ ಮಂಜೂರಾದದ್ದು "ಪೆರ್ಲ ಮಿನಿ ಹೈಡಲ್ ಪ್ರಾಜಕ್ಟ್" ಎಂಬ ಸಂಸ್ಥೆಗೆ. ೨೦೦೬ರಲ್ಲಿ ಆ ಕಂಪೆನಿಗೆ ಅನುಮತಿ ನೀಡುವಾಗ ಸರಕಾರ ಹಾಕಿರುವ ಷರತ್ತುಗಳಲ್ಲಿ ಒಂದು ಹೀಗಿದೆ:&lt;br /&gt;"2. ನೀರನ್ನು ಬಳಕೆಯೇತರ ಉಪಯೋಗಕ್ಕಾಗಿ (Non-consumptive) ಮಾತ್ರ ಬಳಸತಕ್ಕದ್ದು. ವಿದ್ಯುತ್ ಉತ್ಪಾದನೆಯ ನಂತರ ನೀರಾವರಿ, ನೀರು ಸರಬರಾಜು (consumptive) ಇಂತಹ ಬಳಕೆಯ ಉದ್ದೇಶಗಳಿಗೆ ನೀರನ್ನು ಬಳಸಬಾರದು"&lt;br /&gt;ವಸ್ತುಸ್ಥಿತಿ ಹೀಗಿದ್ದರೂ, ಎಸ್ ಇ ಜಡ್ ಕಂಪೆನಿ ಈಗ್ಗೆ ಏಳು ತಿಂಗಳುಗಳ ಕೆಳಗೆ, ನೇತ್ರಾವತಿ ನದಿಯಿಂದ ಕಂಪೆನಿಗೆ ನೀರು ಸಾಗಿಸಲು ಪೈಪ್ ಅಳವಡಿಸುವ ಕೆಲಸಕ್ಕೆ ದೇಶೀ/ವಿದೇಶೀ ಕಂಪೆನಿಗಳಿಂದ ಟೆಂಡರ್ ಕರೆದಿದೆ! ಈ ಜಾಹೀರಾತಿನಲ್ಲಿ ನೇತ್ರಾವತಿಯ ಯಾವ ಭಾಗದಿಂದ ಪೈಪುಗಳನ್ನು ಅಳವಡಿಸಬೇಕಾಗುತ್ತದೆ ಎಂಬುದನ್ನೇನೂ ಸೂಚಿಸಿಲ್ಲ. "ನೇತ್ರಾವತಿ ನದಿಯಿಂದ" ಎಂದು ಮಾತ್ರ ಹೇಳಲಾಗಿದೆ. (ನೇತ್ರಾವತಿ ನದಿಗೆ ಈಗ ಬಂಟ್ವಾಳ ತಾಲೂಕಿನಲ್ಲಿ 3 ದೊಡ್ಡ ಅಣೆಕಟ್ಟುಗಳಿವೆ. 1. ಎಂ ಆರ್ ಪಿ ಎಲ್ ಕಂಪೆನಿಯದು, 2. ಎ.ಎಂ.ಆರ್. ಕಂಪೆನಿಯದು 3. ಮಂಗಳೂರು ಮಹಾನಗರ ಪಾಲಿಕೆಯದು).&lt;br /&gt;ಉದಯವಾಣಿಯಲ್ಲಿ ಪ್ರಕಟವಾಗಿದ್ದ ಈ ಜಾಹೀರಾತಿನ ಪ್ರತಿಯನ್ನಿಟ್ಟು ನಾನು ಅರಣ್ಯ ಇಲಾಖೆಗೆ ಪತ್ರ ಬರೆದು, ಈ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ನೀಡಿದೆಯೇ ಎಂದು ಕೇಳಿದ್ದೆ. ತಾ. 4-10-2010ರಲ್ಲಿ ಇಲಾಖೆ ನನಗೆ ಹೀಗೆ ಉತ್ತರಿಸಿತ್ತು:&lt;br /&gt;"ಎಮ್ ಎಸ್ ಇ ಝಡ್ ಕಂಪೆನಿಯು ಯೋಜನೆ ಪ್ರಾರಂಭಿಸುವ ಮುನ್ನ, ಮರಗಳನ್ನು ಕಡಿಯುವ ಕುರಿತು ಅರಣ್ಯ ಇಲಾಖೆಗೆ ತಮ್ಮ ಯೋಜನೆಯ ಪ್ರಸ್ತಾವನೆಯನ್ನು ಎಲ್ಲಾ ದಾಖಲೆಗಳೊಂದಿಗೆ ಈ ಕಛೇರಿಗೆ ಸಲ್ಲಿಸಿದ ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ವರದಿ ಸಲ್ಲಿಸಿದ ನಂತರವೇ ಅವಶ್ಯ ಮತ್ತು ಅನಿವಾರ್ಯತೆಗಳನ್ನು ಪರಾಂಬರಿಸಿ, ಮರಗಳನ್ನು ಕಡಿಯಲು ಅನುಮತಿ ನೀಡಲಾಗುತ್ತದೆ...". ಇದರ ಅರ್ಥ ಪತ್ರಿಕೆಗಳಲ್ಲಿ ಪೈಪ್ ಅಳವಡಿಸುವ ಕೆಲಸಕ್ಕೆ ಟೆಂಡರ್ ಕರೆಯುವಾಗ ಕಂಪೆನಿ ಅರಣ್ಯ ಇಲಾಖೆಯಿಂದ ಮರಗಳನ್ನು ಕಡಿಯಲು ಅನುಮತಿ ಪಡೆದಿರಲಿಲ್ಲ! ಈ ವಿಷಯದಲ್ಲಿ ಇತ್ತೀಚಿನ ಬೆಳವಣಿಗೆ ತಿಳಿಯಲು ಇನ್ನು ಪತ್ರ ಬರೆಯಬೇಕು.&lt;br /&gt;ಅರಣ್ಯ ಇಲಾಖೆಗೆ ಬರೆದಂತೆಯೇ, ಲೋಕೋಪಯೋಗಿ ಇಲಾಖೆಗೂ ಪತ್ರ ಬರೆದಿದ್ದೆ. ಆ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿ, "ನೀರಿನ ಪೈಪುಗಳನ್ನು ಅಳವಡಿಸಲು ರಸ್ತೆ ಅಗೆತದ ಬಗ್ಗೆ" ದಿನಾಂಕ 22-5-10 ರಂದು ಕೆಳಕಂಡಂತೆ ಅನುಮತಿ ನೀಡಿದೆ:&lt;br /&gt;೧. ಮಣಿಹಳ್ಳದಿಂದ ಬಂಟ್ವಾಳದವರೆಗೆ - 3.ಕಿ.ಮೀ.&lt;br /&gt;೨. ಬಂಟ್ವಾಳದಿಂದ ಸೊರ್ನಾಡ್ ವರೆಗೆ - 5.7 ಕಿ.ಮೀ.&lt;br /&gt;೩. ಸೊರ್ನಾಡಿನಿಂದ ಮೂಲರಪಟ್ನವರೆಗೆ - 5.8 ಕಿ.ಮೀ.&lt;br /&gt;ಈ ಮಾಹಿತಿಯಿಂದಲೂ, ಎಸ್. ಇ. ಜಡ್. ಕಂಪೆನಿ ನೇತ್ರಾವತಿಯ ಯಾವ ಭಾಗದಿಂದ ನೀರೆತ್ತಲು ಹೊರಟಿದೆ ಎಂಬುದು ತಿಳಿಯುವುದಿಲ್ಲ. ಮಣಿಹಳ್ಳದಿಂದ ನೇತ್ರಾವತಿಯ ಕಡೆಗೆ ಹೋಗುವ ರಸ್ತೆ ಬಹುಶಃ ಜಿಲ್ಲಾ ಪಂಚಾಯತಿಗೆ ಸೇರಿದ್ದು. ಇನ್ನು ಅವರಿಂದ ಮಾಹಿತಿ ಪಡೆಯಬೇಕು. ನೋಡೋಣ.&lt;br /&gt;ಹೈಕೋರ್ಟು ಮಾಹಿತಿ ಆಯೋಗದ ತೀರ್ಪಿಗೆ ಆರು ವಾರಗಳ ಅವಧಿಯ ಮಧ್ಯಂತರ ತಡೆಯಾಜ್ಞೆ ಕೊಟ್ಟಿತ್ತು. ಈ ಆರು ವಾರ ಮುಗಿದ ಮೇಲೆ ಕಂಪೆನಿಯ ಪರವಾಗಿ ಅದರ ಮುಖ್ಯಸ್ಥರು ಮಾಹಿತಿ ಆಯೋಗದೆದುರು ಹಾಜರಾಗಿ, ಹೈಕೋರ್ಟು ತಡೆಯಾಜ್ಞೆಯನ್ನು ಮತ್ತೂ ಎರಡು ವಾರಗಳಿಗೆ ವಿಸ್ತರಿಸಿರುವುದನ್ನು ತಿಳಿಸಿದ್ದರು. ಈಗ ಆ ಅವಧಿಯೂ ಮುಗಿದಿದೆ. ಇಂದು (25-02-2011) ಮಾಹಿತಿ ಆಯೋಗ ಪ್ರಕರಣವನ್ನು ಮತ್ತೆ ವಿಚಾರಣೆಗೆ ಎತ್ತಿಕೊಂಡಿದೆ. ವಿಚಾರಣೆಗೆ ನಾನು ಹೋಗಿರಲಿಲ್ಲ. ಹಾಗಾಗಿ ಫಲಿತಾಂಶ ಇನ್ನು ನನಗೆ ಗೊತ್ತಾಗಬೇಕಷ್ಟೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-78336767641775898?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/78336767641775898/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=78336767641775898&amp;isPopup=true' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/78336767641775898'/><link rel='self' type='application/atom+xml' href='http://www.blogger.com/feeds/1105138094084974837/posts/default/78336767641775898'/><link rel='alternate' type='text/html' href='http://sundararao.blogspot.com/2011/02/blog-post.html' title='ಎಸ್ ಇ ಜಡ್ ಕಂಪೆನಿ ಹೈಕೋರ್ಟಿಗೆ ಹೋದದ್ದರ ಒಳಗುಟ್ಟೇನು?'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>0</thr:total></entry><entry><id>tag:blogger.com,1999:blog-1105138094084974837.post-2126634860191771499</id><published>2011-01-29T19:52:00.000-08:00</published><updated>2011-01-29T19:53:28.330-08:00</updated><title type='text'>ಮಾಹಿತಿ ಆಯೋಗದ ತೀರ್ಪು ಪ್ರಶ್ನಿಸಿ  ಮಂಗಳೂರು ಎಸ್ ಇ ಜಡ್ ಕಂಪೆನಿ ಹೈಕೋರ್ಟಿಗೆ!</title><content type='html'>"ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕು ವ್ಯಾಪ್ತಿಗೆ ಬರುತ್ತದೆ" ಎಂದು ಕರ್ನಾಟಕ ಮಾಹಿತಿ ಆಯೋಗ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಂಗಳೂರು ಎಸ್ ಇ ಜಡ್ ಕಂಪೆನಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿದೆ. ಈ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟು, ಮಾಹಿತಿ ಆಯೋಗದ ತೀರ್ಪಿಗೆ ಆರುವಾರಗಳ ತಡೆಯಾಜ್ನೆ ನೀಡಿದೆ. ಮಾಹಿತಿ ಆಯೋಗ ನೀಡಿದ ತೀರ್ಪನ್ನು ಈ ಹಿಂದೆಯೇ ಪ್ರಕಟಿಸಿದ್ದೇನೆ. ಈಗ ಈ ವಿಷಯದಲ್ಲಿ ಕಾನೂನು ಏನು ಹೇಳುತ್ತದೆ, ಮಂಗಳೂರು ಎಸ್ ಇ ಜಡ್ ಕಂಪೆನಿಯ ಪರ ವಕೀಲರು ಏನು ವಾದ ಮಂಡಿಸಿದ್ದಾರೆ ಮತ್ತು ಅದಕ್ಕೆ ನನ್ನ ಪ್ರತಿವಾದ ಏನು ಎಂದು ನೋಡೋಣ:&lt;br /&gt;ಈ ಪ್ರಕರಣದಲ್ಲಿ ತೀರ್ಮಾನವಾಗಬೇಕಾದ ಮುಖ್ಯ ಅಂಶ ಮಂಗಳೂರು ಎಸ್ ಇ ಜಡ್ ಕಂಪೆನಿಯು ಒಂದು ಸಾರ್ವಜನಿಕ ಪ್ರಾಧಿಕಾರ ಹೌದೇ ಅಲ್ಲವೇ ಎನ್ನುವುದು. ಅದು ಸಾರ್ವಜನಿಕ ಪ್ರಾಧಿಕಾರ ಹೌದು ಎಂದಾದರೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ, ಅಲ್ಲ ಎಂದಾದರೆ ಬರುವುದಿಲ್ಲ. ಕರ್ನಾಟಕ ಮಾಹಿತಿ ಹಕ್ಕು ಆಯೋಗ ಸ್ಪಷ್ಟವಾಗಿ "Commission comes to the conclusion that M/s Mangalore SEZ Ltd., is a 'public authority' under section 2(h) of the Right to information Act, 2005" ಎಂದು ತೀರ್ಪು ನೀಡಿದೆ.&lt;br /&gt;ಮಾಹಿತಿ ಹಕ್ಕು 2005ರ ಪ್ರಕಾರ ಸಾರ್ವಜನಿಕ ಪ್ರಾಧಿಕಾರ ಎಂದರೆ:&lt;br /&gt;(h) "public authority" means any authority or body or institution of self- government established or constituted—&lt;br /&gt;(a) by or under the Constitution;&lt;br /&gt;(b) by any other law made by Parliament;&lt;br /&gt;(c) by any other law made by State Legislature;&lt;br /&gt;(d) by notification issued or order made by the appropriate Government,&lt;br /&gt;and includes any—&lt;br /&gt;(i) body owned, controlled or substantially financed;&lt;br /&gt;(ii) non-Government organisation substantially financed,&lt;br /&gt;directly or indirectly by funds provided by the appropriate Government;&lt;br /&gt;ಈ ನಿಯಮಗಳ ವ್ಯಾಪ್ತಿಯೊಳಗೆ ಮಂಗಳೂರು ಎಸ್ ಇ ಜಡ್ ಕಂಪೆನಿ ಬರುವುದಿಲ್ಲ ಎನ್ನುವ ವಾದವನ್ನು ಮಂಡಿಸುತ್ತಾ ಹೈಕೋರ್ಟಿನ ವಕೀಲರು (ಶ್ರೀ ಪಿ.ಡಿ. ವಿಶ್ವನಾಥ್) ಹೀಗೆ ಹೇಳುತ್ತಾರೆ:&lt;br /&gt;"The petitioner ( ಎಂದರೆ ಮಂಗಳೂರು ಎಸ್ ಇ ಜಡ್ ಕಂಪೆನಿ) is not established or constituted by or under the Constitution. The petitioner is not established or constituted either by any law made by the parliament or the state legislature or by any notification issued or order made by the Government. The petitioner is not a body owned or controlled or substantially financed by the Government. The Oil &amp;amp; Natural Gas Corporation Ltd (ONGC) is a Government Company and it is not the Central Government. The Karnataka Industrial Areas Development Board(KIADB) is a statutory corporation constituted under the Karnataka Industrial Areas Development Act and it is not a Government...."&lt;br /&gt;ಮಂಗಳೂರು ಎಸ್ ಇ ಜಡ್ ಕಂಪೆನಿಯಲ್ಲಿ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪಾಲು ಒಟ್ಟು ಶೇ. 49; ಉಳಿದ ಶೇ. 51 ಐಎಲ್ &amp;amp; ಎಫ್ ಎಸ್ ಕಂಪೆನಿಯದು ಎಂಬುದು ಈ ಮೊದಲೇ ಸಾಬೀತಾಗಿದೆ. ಕರ್ನಾಟಕ ಮಾಹಿತಿ ಆಯೋಗ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗಳ ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಾಲು ಎಂದು ಪರಿಗಣಿಸಿದೆ. ಈ ಎರಡೂ "ಸರಕಾರ" ಅಲ್ಲ; ಓಎನ್ ಜಿಸಿ ಒಂದು ಸರಕಾರಿ ಕಂಪೆನಿಯಾದರೆ, ಕಕೈಪ್ರಮಂ ಒಂದು ಸರಕಾರಿ ನಿಗಮ ಮಾತ್ರ, ಹಾಗಾಗಿ ಇವುಗಳ ಪಾಲನ್ನು ಸರಕಾರದ ಪಾಲು ಎಂದು ಪರಿಗಣಿಸುವಂತಿಲ್ಲ, ಹಾಗಾಗಿ ಮಂಗಳೂರು ಎಸ್ ಇ ಜಡ್ ಕಂಪೆನಿ ಒಂದು ಸಾರ್ವಜನಿಕ ಪ್ರಾಧಿಕಾರ ಅಲ್ಲ ಎನ್ನುವುದು ಹೈಕೋರ್ಟ್ ವಕೀಲರ ವಾದ.&lt;br /&gt;"ಶೇ. 49ರ ಪಾಲು 'ಗಣನೀಯ'ವಾದ ಪಾಲು ಅಲ್ಲ" ಎಂಬ ವಾದವನ್ನೇನೂ ಅವರು ಮಂಡಿಸಿಲ್ಲ.&lt;br /&gt;ವಾದಕ್ಕಾಗಿ ಒಂದು ಕ್ಷಣ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇವುಗಳ ಪಾಲು ನೇರವಾಗಿ ಸರಕಾರದ ಪಾಲು ಅಲ್ಲವೆಂದೇ ತಿಳಿಯೋಣ. ಆಗಲೂ ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕಿನ ಕುಣಿಕೆಯಿಂದ ಉಣುಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮಾಹಿತಿ ಹಕ್ಕು 2005ರ 2(h) ಹೀಗೆ ಹೇಳುತ್ತದೆ:&lt;br /&gt;"public authority" means any authority or body or institution of self- government established or constituted—&lt;br /&gt;.........&lt;br /&gt;.........&lt;br /&gt;and includes any— .......&lt;br /&gt;(i) body ........substantially financed;&lt;br /&gt;.........&lt;br /&gt;directly or indirectly by funds provided by the appropriate Government;&lt;br /&gt;ಎಂದರೆ ಸರಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣವನ್ನು ಪಡೆದಿದ್ದರೆ ಅಂತಹ ನಿಕಾಯವು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ.&lt;br /&gt;ವಕೀಲರ ವಾದದ ಪ್ರಕಾರ ಮಂಗಳೂರು ಎಸ್ ಇ ಜಡ್ ಕಂಪೆನಿ ನೇರವಾಗಿ ಸರಕಾರದಿಂದ ಹಣವನ್ನು ಪಡೆದಿಲ್ಲ ಎಂಬುದನ್ನು ಒಪ್ಪಿದರೂ, ಪರೋಕ್ಷವಾಗಿ, ಕೇಂದ್ರ ಸರಕಾರದ ಕಂಪೆನಿಯಾದ ಓಎನ್ ಜಿಸಿಯಿಂದ ಮತ್ತು ಕರ್ನಾಟಕ ಸರಕಾರದ ನಿಗಮವಾದ ಕಕೈಪ್ರಮಂಡಳಿಯಿಂದ ಗಣನೀಯ ಪ್ರಮಾಣದ ಹಣ ಪಡೆದಿದೆ. ಹೀಗಾಗಿ ಮಂಗಳೂರು ಎಸ್ ಇ ಜಡ್ ಕಂಪೆನಿಯು ನಿಸ್ಸಂದೇಹವಾಗಿ ಒಂದು ಸಾರ್ವಜನಿಕ ಪ್ರಾಧಿಕಾರವೇ ಆಗುತ್ತದೆ.&lt;br /&gt;*******************************&lt;br /&gt;ಕಾನೂನಿನಲ್ಲಿರುವ "ಸರಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣವನ್ನು ಪಡೆದಿದ್ದರೆ ಅಂತಹ ನಿಕಾಯವು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ" ಎಂಬ ವಾಕ್ಯವನ್ನು ಕೊಂಚ ಹಿಂಜಿ ನೋಡಬೇಕಾದ ಅಗತ್ಯವಿದೆ. ಕಾನೂನು "Funds" ಎಂಬ ಪದವನ್ನು ಬಳಸಿರುವುದರಿಂದ "ಸರಕಾರವು ನೇರವಾಗಿ ಅಥವಾ ಪರೋಕ್ಷವಾಗಿ ಹಣ ಹೂಡಿದ್ದರೆ" ಎಂದೇ ಅರ್ಥ ಮಾಡುವುದು ಅನಿವಾರ್ಯವಾಗುತ್ತದೆ. ಆದರೆ ಸರಕಾರದ ಪಾಲು ಹಣದ ರೂಪದಲ್ಲಿರದೆ ವಸ್ತುರೂಪದಲ್ಲಿದ್ದರೂ ಸಹ ಅಂತಹ ನಿಕಾಯವು ಕಾನೂನಿನ ವ್ಯಾಪ್ತಿಗೆ ಏಕೆ ಬರಬಾರದು?&lt;br /&gt;ಉದಾಹರಣೆಗೆ ಮಂಗಳೂರು ವಿ.ಆ.ವ. ಕಂಪೆನಿಗೆ ಕರ್ನಾಟಕ ಸರಕಾರವು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ದಿನಕ್ಕೆ ಒಟ್ಟು 6.75 ಕೋಟಿ ಲೀಟರ್ ನೀರೆತ್ತಲು ಅನುಮತಿ ನೀಡಿದೆ. (ಈ ನೀರಿಗೆ ಕಂಪೆನಿ ಹಣ ಕೊಡಬೇಕಾಗಿದೆಯಾದರೂ ಅದು ತೀರ ನಿಕೃಷ್ಟ ಮೊತ್ತ) ಆದರೆ ಸದ್ಯದ ಕಾನೂನಿನಲ್ಲಿ ಸರಕಾರದ ಈ ಪಾಲನ್ನು ಪರಿಗಣಿಸಲು ಅವಕಾಶವಿಲ್ಲ. ಇದರಿಂದಾಗಿ ಕಾನೂನಿನ ಮೂಲ ಉದ್ದೇಶವೇ ನಿಷ್ಫಲವಾದಂತಾಗುತ್ತದೆ. ಆದ್ದರಿಂದ ಸರಕಾರವು ವಸ್ತುರೂಪದಲ್ಲಿ ಏನನ್ನಾದರೂ ತೊಡಗಿಸಿದ ಸಂದರ್ಭದಲ್ಲಿಯೂ, ಅಂತಹ ನಿಕಾಯವನ್ನು ಸಾರ್ವಜನಿಕ ಪ್ರಾಧಿಕಾರ ಎಂದೇ ಪರಿಗಣಿಸಬೇಕಾದ ಅಗತ್ಯವಿದೆ. (ಈ ವಿಷಯದಲ್ಲಿ ಈಗಾಗಲೇ ಯಾವುದಾದರೂ ಕೋರ್ಟಿನ ತೀರ್ಪು ಆಗಿರುವುದು ಸಾಧ್ಯ. ಅಂತಹ ತೀರ್ಪು ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿರಿ).&lt;br /&gt;ಮಂಗಳೂರು ವಿ.ಆ.ವ. ಕಂಪೆನಿಯಲ್ಲೇನೋ ಸರಕಾರದ ಪಾಲು ನೇರವಾಗಿಯೋ ಪರೋಕ್ಷವಾಗಿಯೋ ಇದೆ. ಆದ್ದರಿಂದ ಅದು ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರಬೇಕಾಗುತ್ತದೆ. ಆದರೆ ಇಂದು ಅಸ್ತಿತ್ವಕ್ಕೆ ಬರುತ್ತಿರುವ ಎಷ್ಟೋ ಖಾಸಗಿ ಎಸ್ ಇ ಜಡ್ ಕಂಪೆನಿಗಳು ಈ ಕಾನೂನಿನ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ವಾಸ್ತವವಾಗಿ ಸರಕಾರಗಳು ಭೂಮಿಯನ್ನು ಅದರ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು ಇವುಗಳಿಗೆ ಹಸ್ತಾಂತರಿಸದೆ ಹೋದರೆ, ಇವು ಅಸ್ತಿತ್ವಕ್ಕೆ ಬರುವುದು ಸಾಧ್ಯವೇ ಇಲ್ಲ. ಹಾಗಾಗಿ ಪರೋಕ್ಷವಾಗಿ ಸರಕಾರದಿಂದ ಭೂಮಿಯನ್ನು ಪಡೆದಿರುವ ಕಾರಣಕ್ಕಾಗಿ ಈ ಖಾಸಗಿ ಕಂಪೆನಿಗಳನ್ನೂ ಸಹ ಮಾಹಿತಿ ಹಕ್ಕಿನ ವ್ಯಾಪ್ತಿಗೆ ತರುವುದು ಅಗತ್ಯವಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-2126634860191771499?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/2126634860191771499/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=2126634860191771499&amp;isPopup=true' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/2126634860191771499'/><link rel='self' type='application/atom+xml' href='http://www.blogger.com/feeds/1105138094084974837/posts/default/2126634860191771499'/><link rel='alternate' type='text/html' href='http://sundararao.blogspot.com/2011/01/blog-post.html' title='ಮಾಹಿತಿ ಆಯೋಗದ ತೀರ್ಪು ಪ್ರಶ್ನಿಸಿ  ಮಂಗಳೂರು ಎಸ್ ಇ ಜಡ್ ಕಂಪೆನಿ ಹೈಕೋರ್ಟಿಗೆ!'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>1</thr:total></entry><entry><id>tag:blogger.com,1999:blog-1105138094084974837.post-8342927261269801780</id><published>2010-11-03T06:31:00.000-07:00</published><updated>2010-11-03T06:32:55.508-07:00</updated><title type='text'>ಮಂಗಳೂರು ಎಸ್ ಇ ಝಡ್ ಕಂಪೆನಿ ಆರ್ ಟಿ ಐ ವ್ಯಾಪ್ತಿಗೆ</title><content type='html'>&lt;div align="justify"&gt;&lt;br /&gt;ನೇತ್ರಾವತಿ ನದಿನೀರಿಗೆ ಸಂಬಂಧಪಟ್ಟಂತೆ ಮಂಗಳೂರು ಎಸ್ ಇ ಝಡ್ ಕಂಪೆನಿ ಎ ಎಂ ಆರ್ ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರತಿಯನ್ನು ಮಾಹಿತಿ ಹಕ್ಕಿನಡಿ ನಾನು ಕೇಳಿದಾಗ, ಕಂಪೆನಿ ನನಗೆ ಮಾಹಿತಿ ನೀಡಲು ತಿರಸ್ಕರಿಸಿತ್ತು. ಪ್ರಕರಣ ಮಾಹಿತಿ ಹಕ್ಕು ಆಯೋಗದ ಎದುರಿಗೆ ವಿಚಾರಣೆಗೆ ಬಂದಾಗ ಕಂಪೆನಿ ತನ್ನನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಮನವಿ ಸಲ್ಲಿಸಿತ್ತು. ಇದಕ್ಕೆ ಬೆಂಬಲವಾಗಿ ಅದು ಮಂಗಳೂರಿನ ಖ್ಯಾತ ವಕೀಲ ಶ್ರೀ ಎಂ. ಶಂಕರ ಭಟ್ಟರ ಕಾನೂನು ಅಭಿಪ್ರಾಯವನ್ನೂ ಲಗತ್ತಿಸಿತ್ತು.&lt;br /&gt;ಮೊದಲು ಮಡಿಕೇರಿಯಲ್ಲಿ, ನಂತರ ಬೆಂಗಳೂರಿನಲ್ಲಿ ಹೀಗೆ ಎರಡು ಸಲ ವಿಚಾರಣೆ ನಡೆದು ಈಗ ಆಯೋಗದ ತೀರ್ಪು ಹೊರಬಿದ್ದಿದೆ. ಅದನ್ನು ಯಥಾವತ್ತಾಗಿ ಮುಂದೆ ಕೊಟ್ಟಿದ್ದೇನೆ.&lt;br /&gt;14-10-2010&lt;br /&gt;1. Petitioner is present.&lt;br /&gt;2. Complaint was last heard on 05-06-2010, when the Commission directed the Respondent to file the copies of balance sheets of Mangalore SEZ for last 3 years to enable the Commission to decide whether the Company is substantially financed by the Government and whether it is a public authority under the provision of Right to Information Act 2005 or not.&lt;br /&gt;3. In his letter dated 22nd July 2010 to Commission, Sri A.G.Pai, ED&amp;amp;COO, Mangalore SEZ Ltd., has furnished the copies of the balance sheets.&lt;br /&gt;4. In his letter dated 12th October 2010 to the Commission, Sri Ramachandra Bhandarkar, PIO &amp;amp; PRO, Mangalore SEZ has requested the Commission to adjourn the case by two weeks and he also states that in the meanwhile he is seeking legal opinion.&lt;br /&gt;5. Commission noted that request for information was received on 19-12-2009, case was posted for hearing on 05-06-2010, Respondent was allowed time to file copies of Balance Sheets, Respondent filed copies of Balance Sheets on 22nd July 2010. Since no information is provided till today i.e., till 14-12-2010 for nearly twelve months, Commission considers the delay is considerable and it didn't agree with the request of the Respondent to adjourn the case for another two weeks. Hence Commission decides to proceed with the case treating Respondent ex-parte.&lt;br /&gt;6. In his letter dated 06-10-2010 to the Commission, Petitioner has produced documents such as Annual report of M/s ONGC for the year 2008-09 and 2009-10 wherein ONGC has recorded that it has got a share holding of Rs. 13 crores in M/s Mangalore SEZ Ltd. He has also produced documents to show that KIADB has got Rs. 11.27 crore share capital in M/s Mangalore SEZ Ltd.&lt;br /&gt;7. Commission noted that ONGC had entered into a Memorandum of Understanding with the Governemt of Karnataka to jointly develop the Special Economic Zone (SEZ) near Mangalore through Special Purpose Vehicle(SPV) consequently with the appproval of the cabinet, the SPV known as M/s Mangalore SEZ Ltd. has been incorporated during February 2006 with a authoized share capital of Rs. One crore the equity pattern M/s Mangalore SEZ Ltd. is stated as follows&lt;br /&gt;a) ONGC - 26%&lt;br /&gt;b) KIADB - 23%&lt;br /&gt;c) IL &amp;amp; FS - 51%&lt;br /&gt;8. Government of Karnataka in his order number CI 400 SPI 2006 dated 3rd March 2007, has accorded permission to KIADB to subscribe to the additional equity share capital to the extent of Rs. 11.27 crores in M/s Mangalore SEZ Ltd. and permission was given to KIADB to sign the share holders agreement in connection with M/s Mangalore SEZ Ltd.&lt;br /&gt;9. In the statement of accounts produced along with the Balance Sheet by M/s Mangalore SEZ Ltd., in Schedule 7 under the head "Significant Accounting Policies" under sub-heading at Sl. No. 6 it is mentioned as follows:-&lt;br /&gt;"6. Advance against Share Capital as at 31/3/2008 represents, the amount received from the following parties in terms of clause 3.3 of share holder's agreement dated 29-03-2007"&lt;br /&gt;Name of the Share holder As on 31-03-2008(in Rs.)&lt;br /&gt;Oil and Natural Gas corporation Limited 127,412,000&lt;br /&gt;Karnataka Industrial Area Development Board 112,700,000&lt;br /&gt;Infrastructure leasing and Financial Services Limited 245,100,000&lt;br /&gt;Total 485,212,000&lt;br /&gt;The above documents produced by the Petitioner and Respondents clearly show that M/s Mangalore SEZ Ltd., has received substantial Financial Aid both from Central and State Governments. Hence there is no substance in the argument that M/s Mangalore SEZ Ltd., is not a Public Authority. Commission comes to the conclusion that M/s Mangalore SEZ Ltd., is a 'Public Authority' under section 2(h) of the Right to Information Act. 2005.&lt;br /&gt;10. Commission therefore directs Sri A.G.Pai, ED &amp;amp; COO, Mangalore SEZ Ltd., 3rd Floor, MUDA Building, Ashokanagar, Urwa Stores, Mangalore-575006 to provide the information sought by the Petitioner within 30 days free of cost, through RPAD, under intimation to the Commission.&lt;br /&gt;11. The complaint is adjourned to 18-01-2011at 3-30 p.m.&lt;br /&gt;ದಿನಾಂಕ 6-10-2010 ರಂದು ನಾನು ಕಳಿಸಿಕೊಟ್ಟ ದಾಖಲೆಗಳನ್ನು ಆಯೋಗ ವಿವರವಾಗಿ ಪರಿಶೀಲಿಸಿ, ಹೆಚ್ಚು ಕಡಿಮೆ ಅದರ ಆಧಾರದ ಮೇಲೆಯೇ ತೀರ್ಪು ಕೊಟ್ಟಿರುವುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.&lt;br /&gt;ಕರ್ನಾಟಕ ಸರಕಾರವು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ದಿನಕ್ಕೆ 6.75 ಕೋಟಿ ಲೀ. ನೀರೆತ್ತಲು ಅನುಮತಿ ನೀಡಿರುವುದರ ದಾಖಲೆಯನ್ನೂ ನಾನು ಆಯೋಗಕ್ಕೆ ನೀಡಿದ್ದೆ. ಆದರೆ ಮಾನ್ಯ ಆಯೋಗ ಆ ದಾಖಲೆಯನ್ನು ಪರಿಗಣಿಸಿಲ್ಲ.&lt;br /&gt;ಅನುಮಾನವೇ ಇಲ್ಲದಂತೆ "ಮಂಗಳೂರು ಎಸ್ ಇ ಝಡ್ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ " ಎಂದು ತೀರ್ಪು ನೀಡಿದ ಮೇಲೂ, ವಿಚಾರಣೆಯನ್ನು ಪುನಃ 18-01-2011ಕ್ಕೆ ಯಾಕೆ ಇಡಲಾಗಿದೆ ಎಂಬುದು ಮಾತ್ರ ನನಗೆ ಅರ್ಥವಾಗಿಲ್ಲ. ತಿಳಿದವರು ಯಾರಾದರೂ ಇದು ಹೀಗೆ ಯಾಕೆ ಎಂದು ತಿಳಿಸಿ ಹೇಳಿದರೆ ಕೃತಜ್ಞ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-8342927261269801780?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/8342927261269801780/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=8342927261269801780&amp;isPopup=true' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/8342927261269801780'/><link rel='self' type='application/atom+xml' href='http://www.blogger.com/feeds/1105138094084974837/posts/default/8342927261269801780'/><link rel='alternate' type='text/html' href='http://sundararao.blogspot.com/2010/11/blog-post_4392.html' title='ಮಂಗಳೂರು ಎಸ್ ಇ ಝಡ್ ಕಂಪೆನಿ ಆರ್ ಟಿ ಐ ವ್ಯಾಪ್ತಿಗೆ'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>4</thr:total></entry><entry><id>tag:blogger.com,1999:blog-1105138094084974837.post-7899225574755898395</id><published>2010-11-03T03:42:00.001-07:00</published><updated>2010-11-03T06:31:20.591-07:00</updated><title type='text'>ಕೆಂಪುಕಲ್ಲೆಂಬ ಮೈಸೂರುಪಾಕು!</title><content type='html'>&lt;a href="http://1.bp.blogspot.com/_8556utxmbGA/TNFjV9naiuI/AAAAAAAAACg/vPT3JyVqECU/s1600/sajipa3.jpg"&gt;&lt;img id="BLOGGER_PHOTO_ID_5535314645983333090" style="DISPLAY: block; MARGIN: 0px auto 10px; WIDTH: 226px; CURSOR: hand; HEIGHT: 150px; TEXT-ALIGN: center" alt="" src="http://1.bp.blogspot.com/_8556utxmbGA/TNFjV9naiuI/AAAAAAAAACg/vPT3JyVqECU/s400/sajipa3.jpg" border="0" /&gt;&lt;/a&gt;&lt;br /&gt;&lt;div&gt;&lt;a href="http://3.bp.blogspot.com/_8556utxmbGA/TNFir1fs0qI/AAAAAAAAACY/sVzVXmj8aeE/s1600/sajipa1.jpg"&gt;&lt;img id="BLOGGER_PHOTO_ID_5535313922248987298" style="DISPLAY: block; MARGIN: 0px auto 10px; WIDTH: 226px; CURSOR: hand; HEIGHT: 150px; TEXT-ALIGN: center" alt="" src="http://3.bp.blogspot.com/_8556utxmbGA/TNFir1fs0qI/AAAAAAAAACY/sVzVXmj8aeE/s400/sajipa1.jpg" border="0" /&gt;&lt;/a&gt; ಕಂಚಿನಡ್ಕಪದವು ಇರುವುದು ಸಜಿಪನಡು ಸಜಿಪಪಡುಗಳ ನಡುವೆ. ಈ ಎರಡೂ ಸಣ್ಣ ಊರುಗಳಿರುವುದು ಬಂಟ್ವಾಳ ತಾಲೂಕಿನಲ್ಲಿ; ಬಿ.ಸಿ.ರೋಡಿನಿಂದ ಮೆಲ್ಕಾರಿಗಾಗಿ ಕೊಣಾಜೆಗೆ ಹೋಗುವ ದಾರಿಯಲ್ಲಿ. ಬಂಟ್ವಾಳ ಪುರಸಭೆಯ ತ್ಯಾಜ್ಯ ಘಟಕ ಕಂಚಿನಡ್ಕಪದವಿನಲ್ಲಿ ನಿರ್ಮಾಣವಾಗುತ್ತಿದೆ. ಗಲೀಜು ಅಲ್ಲಿ ಸಂಗ್ರಹವಾದಮೇಲೆ ಗಬ್ಬು ವಾಸನೆ ಹೊಡೆಯುವುದು ಇದ್ದೇ ಇದೆಯಷ್ಟೆ. ಆದರೆ ಈ ತ್ಯಾಜ್ಯಘಟಕದ ವ್ಯವಹಾರ ಕಸ ತಂದು ಇಲ್ಲಿ ಸುರಿಯುವ ಮೊದಲೇ, ಘಟಕದ ನಿರ್ಮಾಣ ಹಂತದಲ್ಲಿಯೇ, ಗಬ್ಬು ವಾಸನೆ ಹೊರಡಿಸುತ್ತಿದೆ ಎಂದು ನಮ್ಮ ಬಿ.ಸಿ.ರೋಡಿನ ವಂಶ ಪತ್ರಿಕೆ ವರದಿ ಮಾಡಿತ್ತು. ಹಾಗಾಗಿ ಈ ಪವಾಡವನ್ನು ಕಣ್ಣಾರೆ ಕಂಡುಬಿಡೋಣ ಎಂದು ಮೊನ್ನೆ ಭಾನುವಾರ (31-10-2010) ನಾನು ವಂಶದ ಪತ್ರಕರ್ತರೊಂದಿಗೆ ಅಲ್ಲಿಗೆ ಹೋದೆ. ಗೆಳೆಯ ಕೃಷ್ಣಗಟ್ಟಿಯವರೂ ಜೊತೆಗಿದ್ದರು.&lt;br /&gt;ಬಂಟ್ವಾಳ ತಾಲೂಕಿನಲ್ಲಿ ಇಂತಹ ಹಲವು ಪದವುಗಳಿವೆ. ವಿಸ್ತಾರವಾದ ಖಾಲಿ ಬಯಲು ಪ್ರದೇಶ. ಸ್ವಲ್ಪಮಟ್ಟಿಗೆ ಹುಲ್ಲು, ಸಣ್ಣ ಸಣ್ಣ ಸಸ್ಯಗಳು ಮಾತ್ರ ಬೆಳೆಯುವ ಜಮ್ಮಿಟಿಗೆ ಅಥವಾ ಕೆಂಪುಕಲ್ಲಿನ ರಚನೆಗಳು. ಬೆಂಜನಪದವು ಇಂತಹದೇ ಇನ್ನೊಂದು ಪ್ರದೇಶ. ಸಜಿಪನಡುವಿನಲ್ಲಿ ಎಡಕ್ಕೆ ತಿರುಗಿ ಕೆಂಪುಕಲ್ಲು ಸಾಗಿಸುವ ಲಾರಿಗಳು ಓಡಿಯಾಡಿ ಎರಡು-ಮೂರು ಅಡಿ ಆಳದ ಗುಂಡಿಗಳಾಗಿರುವ ರಸ್ತೆಯಲ್ಲಿ ಅಂದಾಜು ಮೂರು ಕಿ.ಮೀ. ಹೋದರೆ ಕಂಚಿನಡ್ಕಪದವು. ಅಲ್ಲಲ್ಲಿ ಒನ್ನೊಂದು ಮನೆಗಳು. ಜನವಸತಿ ಕಡಿಮೆ. ಕೆಂಪುಕಲ್ಲಿನ ಹಲವು ಕೋರೆಗಳು. ನಾವು ಹೋದದ್ದು ಭಾನುವಾರವಾದ್ದರಿಂದ ಕೆಲಸ ನಡೆಯುತ್ತಿರಲಿಲ್ಲ. ಘಟಕದ ದಾರಿಯಲ್ಲಿ ಒಂದು ಜಲ್ಲಿ ಕ್ರಷರ್ ಸಹ ಇದೆ.ಅಡ್ಡಾದಿಡ್ಡಿಯಾಗಿ ಹರಡಿಕೊಂಡಿರುವ ಕೆಂಪುಮಣ್ಣಿನ ರಾಶಿ ತುಂಬಿದ ಕೋರೆಗಳನ್ನು ಬಿಟ್ಟರೆ ಉಳಿದಂತೆ ಧಾರಾಳ ಶುದ್ಧಗಾಳಿ ಬೀಸುವ, ಪೃಕೃತಿಸಹಜವಾಗಿ ನಿರ್ಮಲವಾಗಿರುವ, ಮನೋಹರ ಭೂಪ್ರದೇಶ.&lt;br /&gt;ಜನ ಇಲ್ಲವೇ ಇಲ್ಲ ಎಂದಲ್ಲ. ನಾವು ಐದು ಜನ ಅಲ್ಲಿಗೆ ಹೋದಮೇಲೆ ಸಹಜ ಕುತೂಹಲದಿಂದ ಜನ ಸೇರಿದರು. ಪತ್ರಕರ್ತ ಮಿತ್ರರು ಅವರೊಂದಿಗೆ ಮಾತನಾಡಿ ವಿಷಯ ಸಂಗ್ರಹಿಸುತ್ತಿದ್ದರು. ಅಲ್ಲಿಗೆ ಬಂದ ಒಂದಿಬ್ಬರು ಸ್ಥಳೀಯ ಲೀಡರುಗಳು "ನೀವು ಯಾರನ್ನು ಕೇಳಿ ಇಲ್ಲಿ ಬಂದಿರಿ? ಯಾರನ್ನು ಕೇಳಿ ಫೋಟೋ ತೆಗೆದಿರಿ? ಅಬ್ಬಾಸರನ್ನು ಕರೆದುಕೊಂಡು ಬರಬೇಕಿತ್ತು. ರೈಗಳನ್ನು (ಎಂದರೆ ಬಂಟ್ವಾಳ ಶಾಸಕ ರಮಾನಾಥ ರೈ) ಕರೆದುಕೊಂಡು ಬರಬೇಕಿತ್ತು" ಎಂದೆಲ್ಲ ತಕರಾರು ತೆಗೆದರು. ಪತ್ರಕರ್ತರೂ ಬುದ್ಧಿವಂತರೇ. ಬ್ಯಾರಿ ಭಾಷೆ, ತುಳು ಎರಡನ್ನೂ ಸರಾಗ ಮಾತಾಡಬಲ್ಲವರು. ಕ್ರಮೇಣ ವಾತಾವರಣ ತಿಳಿಯಾಯಿತು.&lt;br /&gt;ಘಟಕದ ಕೆಲಸ ಶುರುವಾಗಿದೆ. ಸುತ್ತ ಪಾಗಾರ ಹಾಕುವ ಕೆಲಸ ನಡೆಯುತ್ತಿದೆ. ಹಾಗಾಗಿ ಎಂಟೂವರೆ ಎಕ್ರೆ ವಿಸ್ತಾರದ ಘಟಕ ಕಣ್ಣಳತೆಗೆ ಸಿಗುತ್ತದೆ. ನಾನು ಹೋದ ಮೂಲ ಉದ್ದೇಶ ತ್ಯಾಜ್ಯ ತುಂಬುವ ಮೊದಲೇ ಗಬ್ಬುವಾಸನೆ ಹೊರಡುತ್ತಿರುವ ಆರೋಪ ನಿಜವೇ ಸುಳ್ಳೇ ಎಂದು ತಿಳಿಯಲು. ನಮ್ಮಲ್ಲಿ ಬಗೆಬಗೆಯದನ್ನು ತಿಂದು ಜೀರ್ಣಿಸಿಕೊಳ್ಳುವ ಜನ ಇದ್ದಾರಷ್ಟೆ. ಮೇವು ತಿನ್ನುವವರು, ಮಣ್ಣು(ಭೂಮಿ) ತಿನ್ನುವವರು, ಸಿಮೆಂಟ್, ಹೊಯ್ಗೆ, ಕಬ್ಬಿಣ ಇತ್ಯಾದಿ ತಿನ್ನುವವರು, ಮರ ತಿನ್ನುವವರು, ಪುಸ್ತಕ ತಿನ್ನುವವರು ಹೀಗೆ ವೈವಿಧ್ಯಮಯ ಆಹಾರಪದ್ಧತಿ ಇರುವ ಪುಣ್ಯಭೂಮಿ ನಮ್ಮದು. ನಾವೊಂದು ಕಡಿಮೆಯಾಗುವುದು ಯಾಕೆ ಅಂತ ನಮ್ಮೂರ ಕೆಲವರು ಕಲ್ಲು (ಕೆಂಪುಕಲ್ಲು) ತಿನ್ನುತ್ತಿದ್ದಾರೆ ಎಂಬುದು ನಮ್ಮಲ್ಲಿ ಕೆಲವರ ಅನುಮಾನ. ಅಂಥದನ್ನೆಲ್ಲ ತಿನ್ನುವವರಿಗೆ ಇಂದಲ್ಲ ನಾಳೆ ಹೊಟ್ಟೆ ನೋವು ಬರಲಾರದೆ? ಯಾಕೆ ಅನ್ನ ತಿನ್ನಬಾರದು? ಕಲ್ಲು, ಮಣ್ಣು ಯಾಕೆ ತಿನ್ನಬೇಕು? ನನಗೆ ಅರ್ಥವಾಗುವುದಿಲ್ಲ.&lt;br /&gt;ನೋಡಿದರೆ ಪೂರ್ತಿ ಎಂಟೂವರೆ ಎಕ್ರೆ ಜಾಗ ಹರಪ್ಪ ಮೊಹೆಂಜೋದಾರೋದ ಹಾಗೆ ಕಾಣುತ್ತದೆ. ಎಲ್ಲ ಕಡೆ ಅಗೆದ ಕೆಂಪು ಮಣ್ಣಿನ ರಾಶಿ. ಕೆಂಪು ಕಲ್ಲು ಕಡಿದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ, ಉಳಿದಿರುವ ಭಾಗದಲ್ಲಿ ಕೆಂಪುಕಲ್ಲಿನ ಚೌಕಾಕಾರದ ಅಚ್ಚುಗಳು. ಎಡೆ ಎಡೆಯಲ್ಲಿ ವಾಹನಗಳು ಓಡಾಡಬಹುದಾದ ದಾರಿಗಳು. ಯಾರೋ ಈ ಜಾಗದಲ್ಲಿ ಕೆಂಪುಕಲ್ಲು ಕಡಿದಿದ್ದಾರೆ, ಸಾಗಿಸಿದ್ದಾರೆ ಎನ್ನುವುದು ಎಂಥ ದಡ್ಡನಿಗೂ ಸ್ಪಷ್ಟವಾಗುವ ಸನ್ನಿವೇಶ, ದೃಶ್ಯ. ಪತ್ರಕರ್ತ ಮಿತ್ರರು ಸುಮಾರು ಫೋಟೋ ತೆಗೆದರು. ಆ ಪೈಕಿ ಒಂದೆರಡನ್ನು ಇಲ್ಲಿಯೂ ಕೊಟ್ಟಿದ್ದೇನೆ.&lt;br /&gt;ಈ ಘಟಕದ ನಿರ್ಮಾಣಕ್ಕೆ ಸರಕಾರ 62 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದೆಯಂತೆ. ಈ ಯೋಜನೆಯನ್ನು ಯಾರು ತಯಾರಿಸಿದರು, ಸ್ಥಳ ಪರಿಶೀಲನೆ ಯಾರು ಮಾಡಿದರು, ಹಾಗೆ ಪರಿಶೀಲನೆ ಮಾಡಿದವರು ಇಲ್ಲಿ ಕೆಂಪುಕಲ್ಲಿನ ನಿಕ್ಷೇಪವಿದೆ ಎಂದು ತಮ್ಮ ವರದಿಯಲ್ಲಿ ಕಾಣಿಸಿದ್ದಾರೆಯೆ? ಯಾರಾದರೂ ಈ ಕೆಂಪುಕಲ್ಲಿನ ಮೌಲ್ಯನಿರ್ಣಯ ಮಾಡಿದ್ದಾರೆಯೆ? ಇಲ್ಲಿ ಕೋರೆ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆಯೆ? ಕೆಂಪುಕಲ್ಲುಗಳನ್ನು ಈ ಜಾಗದಿಂದ ಈಗ ತೆಗೆದು ಸಾಗಿಸುತ್ತಿರುವವರು ಯಾರು? ಅದರ ಹಣ ಯಾರಿಗೆ ಹೋಗುತ್ತಿದೆ? ಈ ವಿದ್ಯಮಾನಗಳು ಬಂಟ್ವಾಳ ಪುರಸಭೆಯ ಗಮನಕ್ಕೆ ಬಂದಿದೆಯೆ? ಮುಂತಾದ ಅನೇಕ ಪ್ರಶ್ನೆಗಳು ಇಲ್ಲಿ ಹುಟ್ಟುತ್ತವೆ.ಅಲ್ಲಿ ಬೀಸುತ್ತಿರುವ ಶುದ್ಧ ಗಾಳಿಯನ್ನು ಮಲಿನಗೊಳಿಸುತ್ತಿವೆ.&lt;br /&gt;ನನಗೆ ಇಲ್ಲಿ ಇದ್ದ, ಇರುವ, ಕೆಂಪುಕಲ್ಲಿನ ಮೌಲ್ಯ ನಿರ್ಣಯ ಮಾಡುವಷ್ಟು ಪರಿಣತಿ ಇಲ್ಲ. ಆದರೆ, ಅದು ಯೋಜನೆಯ ಮೊತ್ತವಾದ 62 ಲಕ್ಷವನ್ನು ಮೀರಿಸಬಹುದು ಎಂಬ ಅನುಮಾನವಿದೆ. ವಂಶ ಪತ್ರಿಕೆ ಪ್ರಕರಣವನ್ನು ಎರಡು ಸಂಚಿಕೆಗಳಲ್ಲಿ ವರದಿ ಮಾಡಿದೆ. ನೋಡೋಣ ಏನಾಗುತ್ತದೆಂದು.&lt;br /&gt;[ಈ ಮೊದಲು ನೇತ್ರಾವತಿ ನದಿಯಲ್ಲಿ (ನದಿಯಲ್ಲಿ ಎಂದರೆ ನದಿಯ ದಂಡೆಯಲ್ಲಿ ಅಲ್ಲ. ನದಿಯ ಪಾತ್ರದಲ್ಲಿ, ನದಿ ಹರಿಯುವ ದಾರಿಯಲ್ಲಿ) ಜಲವಿದ್ಯುತ್ ಯೋಜನೆ ಕಾರ್ಯಗತಗೊಳಿಸುವಾಗಲೂ ಡೈನಮೈಟ್ ಬಳಸಿ ಒಡೆದು ತೆಗೆದ ಕಲ್ಲನ್ನು ಕಂಪೆನಿ ಮಾರಿ ಹಣ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅದು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ ಯೋಜನೆಗಳಿಗೆ ಅನುಮತಿ ನೀಡುವಾಗ ಅಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳ ಲೆಕ್ಕವನ್ನು ನಮ್ಮ ಅಧಿಕಾರಿಗಳೂ, ಎಂಜಿನಿಯರುಗಳೂ ಬುದ್ಧಿವಂತಿಕೆಯಿಂದ ಮರೆತುಬಿಡುತ್ತಿದ್ದಾರೆ ಎಂಬ ಅನುಮಾನ ನನಗಿದೆ. ಪಶ್ಚಿಮ ಘಟ್ಟಗಳ ಉದ್ದಕ್ಕೂ ಹತ್ತು ಮೂವತ್ತು ಕಿರು ಜಲವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರಕಾರ ಅನುಮತಿ ನೀಡಿದೆ. ಈ ಎಲ್ಲ ಕಡೆಯಲ್ಲೂ ಗ್ರಾನೈಟ್ ಶಿಲೆ ಸಾಕಷ್ಟು ಪ್ರಮಾಣದಲ್ಲಿ ದೊರೆಯಲೇಬೇಕು. ಅನುಮತಿ ನೀಡುವಾಗ ಅಧಿಕಾರಿಗಳು ಈ ಅಂಶವನ್ನು ಲೆಕ್ಕ ಹಿಡಿದಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಲು ನಿಶ್ಚಯಿಸಿದ್ದೇನೆ.]&lt;br /&gt;********************&lt;br /&gt;ತ್ಯಾಜ್ಯವಸ್ತುಗಳನ್ನು ಹೀಗೆ ಒಂದುಕಡೆ ತಂದು ಸುರಿಯುವುದರಿಂದ ಅಲ್ಲೊಂದು ನರಕ ಸೃಷ್ಟಿಯಾಗುತ್ತದೆ. ಸುತ್ತಮುತ್ತ ಮನುಷ್ಯರು ಬದುಕಲು ಸಾಧ್ಯವೇ ಇಲ್ಲದಂಥ ವಾತಾವರಣ ನಿರ್ಮಾಣವಾಗುತ್ತದೆ. ಈ ಜನರ ಕೂಗು ಕೇಳುವವರಾರು? ಹಾಗೆಂದು ಅಂಥವರ ಕೂಗನ್ನು ಮನ್ನಿಸಿದರೆ ಕಸ ಸುರಿಯುವುದೆಲ್ಲಿ? ಈ ಕಗ್ಗಂಟನ್ನು ಬಿಡಿಸಲು ನಾನು ಹೊರಡುವುದಿಲ್ಲ. ನನ್ನ ಬುದ್ಧಿಗೆ ಕಾಣುವ ಒಂದೇ ಪರಿಹಾರವೆಂದರೆ, ಅವರವರ ಮನೆಯ, ಅಂಗಡಿಯ, ಕಾರ್ಖಾನೆಯ ಕಸದ ವಿಲೇವಾರಿ ಅವರವರದೇ ಜವಾಬ್ದಾರಿಯಾಗಬೇಕು. ಯಾರೂ ತಾವು ಸೃಷ್ಟಿಸಿದ ಕಸವನ್ನು ಸಾರ್ವಜನಿಕ ಸ್ಥಳಕ್ಕೆ ತಂದು ಹಾಕಲು ಅವಕಾಶ ಇರಬಾರದು. ಕಸ ಸೃಷ್ಟಿಯಾಗದಂತೆ ಮಾಡುವುದೇ ಕಸ ವಿಲೇವಾರಿಯ ಅತ್ಯುತ್ತಮ ವಿಧಾನ. ಆದರೆ ಕಸ ಸೃಷ್ಟಿ ಮಾಡದಿದ್ದರೆ ಆಧುನಿಕ ನಾಗರಿಕತೆ ಉಸಿರು ಕಟ್ಟಿ ಸತ್ತೇ ಹೋಗುತ್ತದೆ. ಕಸ ಹೀಗೆ ಸೃಷ್ಟಿ ಮಾಡುತ್ತ ಹೋದರೂ ಮುಂದೊಂದು ದಿನ ಅದೇ ಪರಿಣಾಮ ಆದೀತು. ಆದರೆ ಅದು ಮುಂದೊಂದು ದಿನವಷ್ಟೆ? ಇವತ್ತಲ್ಲವಲ್ಲ? ಆಗ ನೋಡಿಕೊಂಡರಾಯಿತು!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-7899225574755898395?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/7899225574755898395/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=7899225574755898395&amp;isPopup=true' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/7899225574755898395'/><link rel='self' type='application/atom+xml' href='http://www.blogger.com/feeds/1105138094084974837/posts/default/7899225574755898395'/><link rel='alternate' type='text/html' href='http://sundararao.blogspot.com/2010/11/blog-post_03.html' title='ಕೆಂಪುಕಲ್ಲೆಂಬ ಮೈಸೂರುಪಾಕು!'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_8556utxmbGA/TNFjV9naiuI/AAAAAAAAACg/vPT3JyVqECU/s72-c/sajipa3.jpg' height='72' width='72'/><thr:total>3</thr:total></entry><entry><id>tag:blogger.com,1999:blog-1105138094084974837.post-102041162492194172</id><published>2010-11-03T03:35:00.000-07:00</published><updated>2010-11-03T03:36:19.817-07:00</updated><title type='text'>ಅಂಗೈಯಲ್ಲಿ ಬೆಣ್ಣೆ ಇರಿಸಿಕೊಂಡು, ತುಪ್ಪಕ್ಕಾಗಿ ಅಲೆದಂತೆ!</title><content type='html'>(ಪುತ್ತೂರಿನ ಡಾ ನಿತ್ಯಾನಂದ ಪೈಯವರು ವೈದ್ಯವೃತ್ತಿಯ ಜೊತೆಗೆ ಬಳಕೆದಾರರ ಚಳುವಳಿಯಲ್ಲೂ ತೀವ್ರವಾಗಿ ತೊಡಗಿಕೊಂಡಿರುವವರು. ಅವರ ಲೇಖನಗಳು ಉದಯವಾಣಿಯಲ್ಲಿ ಆಗಾಗ ಪ್ರಕಟವಾಗುತ್ತಿವೆ. ಪೈಗಳು ಮಹಾ ಛಲವಾದಿ. ಒಂದು ಸಮಸ್ಯೆಯ ಬೆನ್ನು ಹಿಡಿದರೆ ಫಕ್ಕನೆ ಬಿಡುವ ಪೈಕಿ ಅಲ್ಲ. ಪುತ್ತೂರಿನ ಕುಡ್ಸೆಂಪ್ ಕಾಮಗಾರಿಗಳ ಅನರ್ಥಗಳ ಕುರಿತು ಮತ್ತೆ ಮತ್ತೆ ಲೇಖನಗಳನ್ನು ಬರೆದು, ವ್ಯವಸ್ಥೆಗೆ ಮೂಗುದಾರ ಹಾಕಿದವರು ಅವರು. ಇಂಥವರೇ ಪ್ರಜಾಪ್ರಭುತ್ವದ ನಿಜವಾದ ರಕ್ಷಕರು.&lt;br /&gt;31-10-2010ರ ಉದಯವಾಣಿಯ ಪುರವಣಿಯಲ್ಲಿ ಈ ಲೇಖನ ಪ್ರಕಟವಾಗಿದೆ. ವಿದ್ಯುತ್ತಿನ ಸಮಸ್ಯೆ ಪರಿಹರಿಸಲೆಂದು ಪಶ್ಚಿಮ ಘಟ್ಟಗಳ ಅಮೂಲ್ಯ ಕಾಡುಗಳನ್ನು ನಾಶ ಮಾಡಲು ಕರ್ನಾಟಕ ಸರ್ಕಾರ ಹೊಂಚುಹಾಕುತ್ತಿದೆ. ಕಂಟ್ರಾಕ್ಟರುಗಳು ಜೆಸಿಬಿಗಳನ್ನು ತಯಾರಿಟ್ಟುಕೊಂಡು ತೆರೆಮರೆಯಲ್ಲಿ ಕಾಯುತ್ತಿದ್ದಾರೆ. ಅಧಿಕಾರಿಗಳಲ್ಲಿ ಕೆಲವರು ಲೋಕಾಯುಕ್ತರಿಗೆ ಸಿಕ್ಕದ ಹಾಗೆ ದುಡ್ಡು ಮುಚ್ಚಿಡಲು ಹೊಸ ಉಪಾಯಗಳನ್ನು ಹುಡುಕಿಟ್ಟುಕೊಂಡು ತಯಾರಾಗಿದ್ದಾರೆ. ಇಂಥ ಸನ್ನಿವೇಶದಲ್ಲಿ ಸಮಸ್ಯೆಗೆ ಬೇರೊಂದು ಪರಿಹಾರ ಇರುವುದನ್ನು ಎತ್ತಿ ತೋರಿಸಿರುವುದಕ್ಕಾಗಿ ಈ ಲೇಖನ ನನಗೆ ಮಹತ್ವದ್ದಾಗಿ ಕಂಡಿದೆ. ಹಾಗಾಗಿ ಅದನ್ನು ನನ್ನ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ. ಲೇಖನವನ್ನು ಈಗಿನ ಇಂಧನ ಮಂತ್ರಿ ಶೋಭಾ ಕರಂದ್ಲಾಜೆಯವರಿಗೂ ಕಳಿಸಿ, ಅವರ ಅಭಿಪ್ರಾಯ ಕೇಳಿದ್ದೇನೆ. ನಿಮ್ಮಲ್ಲೂ ಯಾರಿಗಾದರೂ ಹಾಗೆ ಮಾಡಬೇಕೆಂದು ಕಂಡರೆ, ಮಾಡಬಹುದು).&lt;br /&gt;-ಎಚ್. ಸುಂದರ ರಾವ್)&lt;br /&gt;&lt;br /&gt;ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಬೇಸಗೆಯ ದಿನಗಳಲ್ಲಿ ಮಾತ್ರ ತಲೆದೋರುತ್ತಿದ್ದ ವಿದ್ಯುತ್ ಕ್ಷಾಮವು ಇತ್ತೀಚೆಗೆ ಮಳೆಗಾಲದ ದಿನಗಳಲ್ಲೂ ಉದ್ಭವಿಸಲಾರಂಭಿಸಿದೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯದಲ್ಲಿನ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಅಲ್ಪ ಬೆಲೆಗೆ ಖರೀದಿಸದ ರಾಜ್ಯ ಸರಕಾರವು, ನೆರೆಯ ರಾಜ್ಯಗಳಿಂದ ದುಬಾರಿ ಬೆಲೆ ತೆತ್ತು ವಿದ್ಯುತ್ತನ್ನು ಖರೀದಿಸುತ್ತಿದೆ!&lt;br /&gt;ಕಳೆದ ಕೆಲ ವರ್ಷಗಳಿಂದ ಕರ್ನಾಟಕ ರಾಜ್ಯವು ವಿದ್ಯುತ್ ಕ್ಷಾಮದ ಸಮಸ್ಯೆಯಿಂದ ತತ್ತರಿಸುತ್ತಿದೆ. ಏಕೆಂದರೆ ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಬೇಡಿಕೆಯ ಪ್ರಮಾಣವು ಉತ್ಪಾದನೆಯ ಪ್ರಮಾಣಕ್ಕಿಂತಲೂ ಸಾಕಷ್ಟು ಹೆಚ್ಚಾಗಿದೆ. ಇದಲ್ಲದೆ ರಾಜ್ಯದಲ್ಲಿರುವ ಹಳೆಯ ವಿದ್ಯುತ್ ಉತ್ಪಾದನಾ ಸ್ಥಾವರಗಳು ಪದೇ ಪದೇ ಕೆಟ್ಟು ಹೋಗುತ್ತಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣವು ಇನ್ನಷ್ಟು ಕಡಿಮೆಯಾಗುತ್ತಿದೆ. ಇಷ್ಟೆಲ್ಲಾ ಸಾಲದೆಂಬಂತೆ ವಿದ್ಯುತ್ತಿನ ಕೊರತೆ ಅತಿಯಾದ ಸಂದರ್ಭಗಳಲ್ಲಿ ಕೇಂದ್ರದ ವಿದ್ಯುತ್ ಗ್ರಿಡ್ ನಿಂದ ರಾಜ್ಯಕ್ಕೆ ನ್ಯಾಯಸಮ್ಮತವಾಗಿ ಲಭಿಸಬೇಕಿದ್ದ ವಿದ್ಯುಚ್ಛಕ್ತಿಯಲ್ಲಿ ಗಣನೀಯ ಪ್ರಮಾಣದ ವಿದ್ಯುತ್ತನ್ನು ನೆರೆಯ ರಾಜ್ಯಗಳು ಕಬಳಿಸುತ್ತಿರುವುದರಿಂದ ರಾಜ್ಯದ ವಿದ್ಯುತ್ ಕ್ಷಾಮದ ಸಮಸ್ಯೆಯು ಇನ್ನಷ್ಟು ಬಿಗಡಾಯಿಸುತ್ತಿದೆ.&lt;br /&gt;ರಾಜ್ಯದ ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆಗಳ ನಡುವಿನ ಕೊರತೆಯನ್ನು ತುಂಬಿಸಲು ಸರಕಾರವು ನೆರೆಯ ರಾಜ್ಯಗಳಿಂದ ಆವಶ್ಯಕ ಪ್ರಮಾಣದ ವಿದ್ಯುಚ್ಛಕ್ತಿಯನ್ನು ಖರೀದಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿರುವ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಖರೀದಿಸಲು ಮೀನ ಮೇಷ ಎಣಿಸುತ್ತಿದೆ. ನಿಜ ಹೇಳಬೇಕಿದ್ದಲ್ಲಿ ರಾಜ್ಯ ಸರಕಾರವು ಇದೀಗ ಪ್ರತಿನಿತ್ಯ 1000 ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ನೆರೆಯ ರಾಜ್ಯಗಳಿಂದ ಖರೀದಿಸುತ್ತಿದೆ. ವಿಶೇಷವೆಂದರೆ ನೆರೆಯ ರಾಜ್ಯಗಳು ನಮ್ಮ ರಾಜ್ಯದ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಅಲ್ಪಬೆಲೆಗೆ ಖರೀದಿಸುತ್ತಿವೆ!&lt;br /&gt;ಇದೇ ವರ್ಷದ ಬೇಸಗೆಯ ದಿನಗಳಲ್ಲಿ ವಿದ್ಯುತ್ ಕ್ಷಾಮದ ಬಾಧೆ ಮಿತಿ ಮೀರಿದಾಗ ರಾಜ್ಯದಲ್ಲಿ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಕಡ್ಡಾಯವಾಗಿ ತನಗೆ ನೀಡಬೇಕೆಂದು ಸರಕಾರ ಆದೇಶಿಸಿತ್ತು. ಸರಕಾರದ ಈ ನಿಲುವು ಖಾಸಗಿ ಘಟಕಗಳ ಅಸಮಾಧಾನಕ್ಕೆ ಕಾರಣವೆನಿಸಿತ್ತು. ಏಕೆಂದರೆ ಈ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ವರ್ಷವಿಡೀ ಅಲ್ಪಬೆಲೆಗೆ ಪೂರೈಸುವ ಪ್ರಸ್ತಾವವನ್ನು ನಿರಾಕರಿಸಿರುವ ಸರಕಾರವು, ವಿದ್ಯುತ್ ಕ್ಷಾಮದ ದಿನಗಳಲ್ಲಿ ಮಾತ್ರ ತಮಗೆ ಬೇಕಾದಷ್ಟು ವಿದ್ಯುಚ್ಛಕ್ತಿಯನ್ನು ಪೂರೈಸಲೇ ಬೇಕು ಎನ್ನುವುದೇ ಅಸಮಾಧಾನಕ್ಕೆ ಕಾರಣವೆನಿಸಿದೆ. ಸರಕಾರವು ಈ ಘಟಕಗಳಿಂದ ನಿರಂತರವಾಗಿ ವಿದ್ಯುಚ್ಛಕ್ತಿಯನ್ನು ಖರೀದಿಸಿದಲ್ಲಿ "ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡುವುದು" ತಪ್ಪುತ್ತದೆ.&lt;br /&gt;ಉದಾಹರಣೆಗೆ ಬಳ್ಳಾರಿಯ ತೋರಣಗಲ್ಲಿನಲ್ಲಿರುವ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯು ಪ್ರತಿನಿತ್ಯ 1100 ಮೆ.ವ್ಯಾ. ವಿದ್ಯುತ್ತನ್ನು ಉತ್ಪಾದಿಸುತ್ತಿದೆ. ಉಕ್ಕಿನ ಕಾರ್ಖಾನೆಗೆ ಬೇಕಾಗುವ 400 ಮೆ.ವ್ಯಾ. ವಿದ್ಯುತ್ತನ್ನು ಬಳಸಿದ ಬಳಿಕ ಉಳಿದ 700 ಮೆ.ವ್ಯಾ. ವಿದ್ಯುತ್ತನ್ನು ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳಿಗೆ ಕರ್ನಾಟಕದ ಗ್ರಿಡ್ ಮೂಲಕವೇ ಪೂರೈಕೆ ಮಾಡುತ್ತದೆ.&lt;br /&gt;ಇದೀಗ ರಾಜ್ಯಸರಕಾರವು ನೆರೆಯ ರಾಜ್ಯಗಳಿಂದ ಪ್ರತಿ ಯೂನಿಟ್ ವಿದ್ಯುತ್ತಿಗೆ 10 ರೂ.ನಂತೆ ಪಾವತಿಸುತ್ತಿದ್ದು ನಮ್ಮದೇ ರಾಜ್ಯದಲ್ಲಿರುವ ಜಿಂದಾಲ್ ಉಕ್ಕು ತಯಾರಿಕಾ ಘಟಕದೊಂದಿಗೆ ದೀರ್ಘಕಾಲೀನ ಒಪ್ಪಂದವನ್ನು ಮಾಡಿಕೊಂಡಲ್ಲಿ ಈ ಸಂಸ್ಥೆಯು ಪ್ರತಿ ಯೂನಿಟ್ಟಿಗೆ ಕೇವಲ 4 ರೂ.ನಂತೆ ವಿದ್ಯುತ್ ಪೂರೈಸಲು ಸಿದ್ಧವಿದೆ. ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯ ನಿರ್ದೇಶಕರು ಹೇಳುವಂತೆ ರಾಜ್ಯ ಸರಕಾರವು ಬೇಸಗೆ ದಿನಗಳಲ್ಲಿ ಮಾತ್ರ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸದೇ, ವರ್ಷವಿಡೀ ವಿದ್ಯುತ್ತನ್ನು ಖರೀದಿಸಲು ಸಿದ್ಧವಿದ್ದಲ್ಲಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳು ಉಳಿತಾಯವಾಗಲಿದೆ. ಇಷ್ಟು ಮಾತ್ರವಲ್ಲ ಈ ಸಂಸ್ಥೆಯು ತನ್ನ ವಿದ್ಯುತ್ ಉತ್ಪಾದನೆಯನ್ನು ಇನ್ನೂ 600 ಮೆ.ವ್ಯಾ.ಗಳಷ್ಟು ಹೆಚ್ಚಿಸಲಿದ್ದು ಇದನ್ನು ರಾಜ್ಯ ಸರಕಾರಕ್ಕೆ ಪೂರೈಸಲು ಸಿದ್ಧವಿದೆ. ಪ್ರಸ್ತುತ ಈ ಸಂಸ್ಥೆಯು ನೆರೆಯ ರಾಜ್ಯಗಳಿಗೆ ಸಾಕಷ್ಟು ವಿದ್ಯುಚ್ಛಕ್ತಿಯನ್ನು ಪೂರೈಸುತ್ತಿದ್ದರೂ ವಿದ್ಯುತ್ ರವಾನೆಯ ಸಂದರ್ಭದಲ್ಲಿ ಸುಮಾರು 200 ಮೆ.ವ್ಯಾ.ನಷ್ಟು ವಿದ್ಯುಚ್ಛಕ್ತಿಯು ನಷ್ಟವಾಗುತ್ತಿದೆ. ಆದರೆ ಈ ಹೆಚ್ಚುವರಿ ವಿದ್ಯುತ್ತನ್ನು ರಾಜ್ಯ ಸರಕಾರವೇ ಖರೀದಿಸಲು ಸಿದ್ಧವಿದ್ದಲ್ಲಿ, ರಾಜ್ಯ ಸರಕಾರಕ್ಕೆ 10 ರೂ.ಗಳಿಗೆ 2.5 ಯೂನಿಟ್ ವಿದ್ಯುಚ್ಛಕ್ತಿ ಲಭಿಸುವುದರೊಂದಿಗೆ ಸಂಸ್ಥೆಗೆ ಸಂಭವಿಸುತ್ತಿರುವ ನಷ್ಟವನ್ನೂ ತಡೆಗಟ್ಟಬಹುದಾಗಿದೆ.&lt;br /&gt;ಉಕ್ಕು ತಯಾರಿಸುವ ಸಂದರ್ಭದಲ್ಲಿ ಕಲ್ಲಿದ್ದಲನ್ನು ಉರಿಸುವ ಕಾರ್ಖಾನೆಗಳು ಇದರಿಂದ ಉತ್ಪನ್ನವಾಗುವ ಉಷ್ಣತೆಯನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸುತ್ತವೆ. ರಾಜ್ಯದಲ್ಲಿ ಇರುವ ಇತರ ಕಬ್ಬಿಣದ ಕಾರ್ಖಾನೆಗಳು ಮತ್ತು ಜಾಗತಿಕ ಹೂಡಿಕೆದಾರರ ಸಮಾವೇಶದ ಫಲವಾಗಿ ರಾಜ್ಯದಲ್ಲಿ ಹೊಸತಾಗಿ ನಿರ್ಮಿತವಾಗಲಿರುವ ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಮುಂದೆ ಉತ್ಪಾದಿಸಲಿರುವ ಹೆಚ್ಚುವರಿ ವಿದ್ಯುತ್ತನ್ನು ಸರಕಾರವು ನಿರಂತರವಾಗಿ ಖರೀದಿಸಿದಲ್ಲಿ, ರಾಜ್ಯದ ವಿದ್ಯುತ್ ಕ್ಷಾಮದ ಸಮಸ್ಯೆಯು ನಿಶ್ಚಿತವಾಗಿ ಅಂತ್ಯಗೊಳ್ಳಲಿದೆ. ಜೊತೆಗೆ ನೂತನ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕಾಗಿ ರಾಜ್ಯ ಸರಕಾರಗಳು ವ್ಯಯಿಸಲೇಬೇಕಾದ ಸಹಸ್ರಾರು ಕೋಟಿ ರೂ.ಗಳು ಉಳಿತಾಯವಾಗಲಿದೆ. ರಾಜ್ಯ ಸರಕಾರವು ಇದೀಗ ನೆರೆಯ ರಾಜ್ಯಗಳಿಂದ 1000 ಮೆ.ವ್ಯಾ. ವಿದ್ಯುತ್ತನ್ನು ಖರೀದಿಸಲು ಬಳಸುತ್ತಿರುವ 350 ಕೋಟಿ ರೂ.ಗಳಲ್ಲೇ ಇದರ ಎರಡೂವರೆ ಪಟ್ಟು ಅಧಿಕ ವಿದ್ಯುಚ್ಛಕ್ತಿಯನ್ನು ರಾಜ್ಯದ ಉಕ್ಕಿನ ಕಾರ್ಖಾನೆಗಳಿಂದಲೇ ಖರೀದಿಸಬಹುದಾಗಿದೆ.&lt;br /&gt;-ಡಾ. ಸಿ. ನಿತ್ಯಾನಂದ ಪೈ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-102041162492194172?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/102041162492194172/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=102041162492194172&amp;isPopup=true' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/102041162492194172'/><link rel='self' type='application/atom+xml' href='http://www.blogger.com/feeds/1105138094084974837/posts/default/102041162492194172'/><link rel='alternate' type='text/html' href='http://sundararao.blogspot.com/2010/11/blog-post.html' title='ಅಂಗೈಯಲ್ಲಿ ಬೆಣ್ಣೆ ಇರಿಸಿಕೊಂಡು, ತುಪ್ಪಕ್ಕಾಗಿ ಅಲೆದಂತೆ!'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>3</thr:total></entry><entry><id>tag:blogger.com,1999:blog-1105138094084974837.post-877739967529047021</id><published>2010-09-09T04:57:00.000-07:00</published><updated>2010-09-09T05:05:36.145-07:00</updated><title type='text'>ಎಸ್ ಇ ಝಡ್ ಪೈಪ್ ಲೈನ್: ಪರೋಕ್ಷ ಉದ್ಯೋಗ ಪರದೇಶಿಗಳಿಗೆ?</title><content type='html'>&lt;div style="text-align: justify;"&gt;&lt;b&gt;ಅಭಿವೃದ್ಧಿ:ಕಾಲ ಮೇಲೆ ಕಲ್ಲು&lt;/b&gt; &lt;/div&gt;&lt;div style="text-align: justify;"&gt;ಕಳೆದ ಜುಲೈ ತಿಂಗಳ 24ನೇ ತಾರೀಖಿನಂದು ಮಂಗಳೂರು ಎಸ್ ಇ ಝಡ್ ಕಂಪೆನಿ ಉದಯವಾಣಿಯಲ್ಲಿ "ನೇತ್ರಾವತಿ ನದಿಯಿಂದ ನೀರು ಸಾಗಿಸುವ ಕಾಮಗಾರಿ"ಗೆ ಒಂದು ಟೆಂಡರ್ ಕರೆದಿದೆ. ಈ ಟೆಂಡರಿನ ಒಂದು ಪ್ರಮುಖ ಲಕ್ಷಣ "Bidding is open to all contractors / firms, both Indian and foreign firms......". ಎಂದರೆ ಭಾರತದ ಅಥವಾ ವಿದೇಶದ ಯಾವುದೇ ಗುತ್ತಿಗೆದಾರರು ಈ ಕಾಮಗಾರಿಯನ್ನು ನಿರ್ವಹಿಸಲು ಅರ್ಜಿ ಸಲ್ಲಿಸಬಹುದು. ಅಭಿವೃದ್ಧಿಯ ದ್ಯೋತಕವಾಗಿರುವ ಈ ಮತ್ತು ಇಂತಹ ಕಂಪೆನಿಗಳ ಪರವಾಗಿ ಮಾತಾಡುವವರು ಪ್ರಮುಖವಾಗಿ ಮುಂದಿಡುವ ವಾದ "ಅವು ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿ ಮಾಡುತ್ತವೆ" ಎನ್ನುವುದು. ಈಗ ಪೈಪ್ ಲೈನ್ ಕೂರಿಸುವ  "ಪರೋಕ್ಷ ಉದ್ಯೋಗಸೃಷ್ಟಿ" ಆಗಿದೆ. ಆದರೆ ಯಾರಿಗೆ? ತಾಂತ್ರಿಕವಾಗಿ ಭಾರತಕ್ಕಿಂತ ಎಷ್ಟೋ ಮುಂದಿರುವ ಚೀನಾ, ಜಪಾನ್, ಕೊರಿಯಾ ಮುಂತಾದ ದೇಶಗಳ ಯಾವುದೇ ಕಂಪೆನಿ ಭಾರತದ ಕಂಪೆನಿಗಳಿಗಿಂತ ಕಡಿಮೆ ದರದಲ್ಲಿ ಈ ಕಾಮಗಾರಿ ನಿರ್ವಹಿಸಲು ಮುಂದೆ ಬರುವ ಸಾಧ್ಯತೆ ಇಲ್ಲದೆ ಇಲ್ಲ. ಆಗ ಸಹಜವಾಗಿ ಕಾಮಗಾರಿ ಅಂತಹ ಕಂಪೆನಿಯ ಪಾಲಾಗುತ್ತದೆ. ಹಾಗಾದರೆ "ಉದ್ಯೋಗ ಸೃಷ್ಟಿ" ಆದದ್ದು ಯಾರಿಗೆ? ಕಾಲುವೆ ತೋಡಿ ಪೈಪು ಕೂರಿಸಿ ಕೊಡಬಲ್ಲ ತಾಂತ್ರಿಕತೆ, ಆರ್ಥಿಕ ಬಲ ಹೊಂದಿರುವ  ಭಾರತೀಯ  ಕಂಪೆನಿಗಳು  ಇಲ್ಲವೆ? ಈ ಮೊದಲು ನೇತ್ರಾವತಿ ನದಿಯಿಂದ ಮಂಗಳೂರು ಮಹಾನಗರಪಾಲಿಕೆ ಹಾಗೂ ಎಂ ಆರ್ ಪಿ ಎಲ್ ಕಂಪೆನಿಗಳು ಪೈಪ್ ಲೈನ್ ಹಾಕಿಲ್ಲವೆ? ಆ ಪೈಪುಗಳಲ್ಲಿ ನೀರು ಹರಿಯುತ್ತಿಲ್ಲವೆ?  ಟೆಂಡರಿಗೆ ಅರ್ಜಿ ಸಲ್ಲಿಸಲು ವಿದೇಶೀ ಕಂಪೆನಿಗಳಿಗೆ ಅವಕಾಶ ಕೊಟ್ಟರೆ,  ಅಭಿವೃದ್ಧಿಯ ಫಲವನ್ನು ನಾವಾಗಿ ಪರದೇಶಿಗಳಿಗೆ ಬಿಟ್ಟುಕೊಟ್ಟಂತಾಗಲಿಲ್ಲವೆ? ಇಂತಹ ಉದ್ಯೋಗಸೃಷ್ಟಿಯಿಂದ ದ.ಕ. ಅಥವಾ ಕರ್ನಾಟಕದವರನ್ನು ಬಿಡಿ,  ಭಾರತೀಯರಿಗೆ ಆಗುವ ಪ್ರಯೋಜನವಾದರೂ ಏನು? ಕಾಮಗಾರಿಯ ಹೆಸರಿನಲ್ಲಿ ಯಾವ್ಯಾವ ಪರದೇಶಿಗಳು ನಮ್ಮ ದೇಶದ ಮೂಲೆ ಮೂಲೆಗೆ ಪ್ರವೇಶಿಸಿ, ದೇಶದ ಆಯಕಟ್ಟಿನ ಪ್ರದೇಶಗಳ ನಿಕಟ ಪರಿಚಯ ಮಾಡಿಕೊಳ್ಳಲು ನಾವು ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೆ? ಇದು ದೇಶದ ಭದ್ರತೆಯ ದೃಷ್ಟಿಯಿಂದ ಸಾಧುವೆ? ಸೂಕ್ತವೆ? ಹಾಗಾದರೆ  ಕಾಲ ಮೇಲೆ ಕಲ್ಲು ಹಾಕಿಕೊಳ್ಳುವ ಇಂತಹ ಕೆಲಸವನ್ನೇ ಅಭಿವೃದ್ಧಿ ಎಂದು ಕರೆಯಲಾಗುತ್ತಿದೆಯೆ?&lt;/div&gt;&lt;div style="text-align: justify;"&gt;ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ.&lt;/div&gt;&lt;div style="text-align: justify;"&gt;&lt;b&gt;ಷರತ್ತುಗಳಿವೆ, ಪಾಲಿಸುವವರೆಲ್ಲಿ?&lt;/b&gt;&lt;/div&gt;&lt;div style="text-align: justify;"&gt;ನೇತ್ರಾವತಿ ನದಿಯಿಂದ ನೀರೆತ್ತಲು ಅನುಮತಿ ಕೊಡುವಾಗ ಜಲ ಸಂಪನ್ಮೂಲ ಇಲಾಖೆಯು ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಒಟ್ಟು 19 ಷರತ್ತುಗಳನ್ನು ವಿಧಿಸಿದೆ. ಈ ಪೈಕಿ 6ನೆಯ ಷರತ್ತು ಇದು: "ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು". ಕಂಪೆನಿ  ಅನುಮತಿಯನ್ನೇನಾದರೂ ಪಡೆದಿದೆಯೇ ಎಂಬುದನ್ನು ತಿಳಿಯುವ  ಕುತೂಹಲದಿಂದ ನಾನು ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ದ.ಕ. ಜಿಲ್ಲಾಧಿಕಾರಿಯವರಿಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿಗಳನ್ನು ಸಲ್ಲಿಸಿದೆ.&lt;/div&gt;&lt;div style="text-align: justify;"&gt;ಲೋಕೋಪಯೋಗಿ ಇಲಾಖೆ ಯಾವುದೇ ತಕರಾರಿಲ್ಲದೆ ಕೂಡಲೇ ಸಾಕಷ್ಟು ವಿವರವಾದ  ಮಾಹಿತಿ ನೀಡಿತು. ( ಈ ಮಾಹಿತಿಯ ಮುಖ್ಯಭಾಗವನ್ನು "ವಂಶ" ಪತ್ರಿಕೆ ಕಳೆದ ಸಂಚಿಕೆಯಲ್ಲಿ ಪ್ರಕಟಿಸಿದೆ). ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳಲ್ಲಿ ಯಾವ ಯಾವ ರಸ್ತೆಗಳ ಬದಿಯಲ್ಲಿ ಪೈಪ್ ಲೈನ್ ಗಳನ್ನು ಅಳವಡಿಸಲಾಗುವುದು, ಈ ಬಗ್ಗೆ ಕಂಪೆನಿಗೆ ವಿಧಿಸಲಾಗಿರುವ ಷರತ್ತುಗಳೇನು ಮುಂತಾದ ಮಾಹಿತಿಯಲ್ಲದೆ, ಕಂಪೆನಿ ಇಲಾಖೆಗೆ ನೀಡಬೇಕಾದ ಹಣ ಎಷ್ಟು ಎಂಬ ಮಾಹಿತಿಯನ್ನೂ ಇಲಾಖೆ ನನಗೆ ನೀಡಿತು.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಜಿಲ್ಲಾಧಿಕಾರಿಗಳ ಕಛೇರಿ ನನ್ನ ಅರ್ಜಿಯನ್ನು-ಮಾಹಿತಿ ನೀಡುವಂತೆ ಸೂಚಿಸಿ-ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಕಳಿಸಿಕೊಟ್ಟಿತು! ಮಂಗಳೂರು ಎಸ್ ಇ ಝಡ್ ಕಂಪೆನಿ "ನಾವು RTI ವ್ಯಾಪ್ತಿಯಲ್ಲಿ ಬರುವುದಿಲ್ಲ" ಎಂಬ ಒಂದು ಸಾಲಿನ ಉತ್ತರ ನೀಡಿ ಕೈ ತೊಳೆದುಕೊಂಡಿತು. ನಾನು ಜಿಲ್ಲಾಧಿಕಾರಿಯವರಿಗೆ ಪುನಃ ಪತ್ರ ಬರೆದು "ಮಾಹಿತಿ ನೇರವಾಗಿ ನಿಮ್ಮ ಕಛೇರಿಗೆ ಸಂಬಂಧಪಟ್ಟಿದೆ. ಆದ್ದರಿಂದ ನೀವೇ ಅದನ್ನು ಕೊಡಬೇಕು" ಎಂದು ಕೇಳಿದ್ದೇನೆ. ಅವರ ಉತ್ತರಕ್ಕೆ ಕಾಯುತ್ತಿದ್ದೇನೆ. ಉತ್ತರ ಬರುತ್ತದೆ ಎಂಬ ವಿಶ್ವಾಸವಿದೆ.&lt;/div&gt;&lt;div style="text-align: justify;"&gt;ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಹೀಗೆ ಉತ್ತರಿಸಿದ್ದೇನೆ: "ನಿಮಗೆ ಗೊತ್ತಿರುವಂತೆ ಪ್ರಕರಣ ಮಾಹಿತಿ ಹಕ್ಕು ಆಯೋಗದ ಎದುರಿಗೆ ತೀರ್ಪಿಗೆ ಬಾಕಿ ಇದೆ. ಆದ್ದರಿಂದ "ನಾವು RTI ವ್ಯಾಪ್ತಿಯಲ್ಲಿ ಬರುವುದಿಲ್ಲ" ಎಂದು ಹೇಳುವ ಅಧಿಕಾರ ನಿಮಗೆ ಇಲ್ಲ.  ಆ ಅಧಿಕಾರ ಇರುವುದು ಮಾಹಿತಿ ಹಕ್ಕು ಆಯೋಗಕ್ಕೆ"&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಸ್ವಾರಸ್ಯ ಇರುವುದು ಅರಣ್ಯ ಇಲಾಖೆಗೆ ಸಲ್ಲಿಸಿದ ಅರ್ಜಿ ವಿಚಾರದಲ್ಲಿ. ನಾನು ಅರ್ಜಿ ಸಲ್ಲಿಸಿದ್ದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ. ಅವರು ಅದನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ವರ್ಗಾಯಿಸಿ, ಮಾಹಿತಿ ನೀಡುವಂತೆ ಸೂಚಿಸಿದರು. ಸ.ಅ.ಸಂ. ರವರು "ಈ ಬಗ್ಗೆ ಯಾವುದೇ ಮಾಹಿತಿಯು ಅರಣ್ಯ ಇಲಾಖೆಯಲ್ಲಿ ಲಭ್ಯವಿರುವುದಿಲ್ಲ" ಎಂಬ ಒಂದು ಸಾಲಿನ ಉತ್ತರ (ಮಾಹಿತಿ?) ನೀಡಿದರು! ನಾನು ಪಟ್ಟು ಬಿಡಲಿಲ್ಲ. "ನಾನು ಕೇಳಿರುವುದು ಅರಣ್ಯಕ್ಕೆ ಸಂಬಂಧಪಟ್ಟ ಮಾಹಿತಿ. ಅದನ್ನು ನಿಮ್ಮನ್ನಲ್ಲದೆ ಬೇರಾರನ್ನೂ ನಾನು ಕೇಳುವಂತಿಲ್ಲ. ಆದ್ದರಿಂದ ನೀವೇ ಅದನ್ನು ಕೊಡಬೇಕಾಗುತ್ತದೆ" ಎಂದು ಹೇಳಿ ಪೂರಕ ಮಾಹಿತಿಯಾಗಿ, ನನಗೆ ಈ ಬಗ್ಗೆ ಗೊತ್ತಿರುವ ಎಲ್ಲ ವಿಷಯವನ್ನೂ ತಿಳಿಸಿ, ಮಾಹಿತಿ ನೀಡುವಂತೆ ಪುನಃ ಪತ್ರ ಬರೆದೆ. ಸುಮಾರು ಒಂದು ತಿಂಗಳ ನಂತರ ಸ.ಅ.ಸಂ. ರವರ ಉತ್ತರ ಬಂತು: "ಮೇಲಿನ ವಿಷಯಕ್ಕೆ ಸಂಬಂಧಿಸಿ ದಿನಾಂಕ 7-8-2010ರಂದು ನೀಡಿದ ಉತ್ತರವು ಸಮಂಜಸವಾಗಿದೆ. ಹೆಚ್ಚಿನ ಮಾಹಿತಿಗಳಿಗೆ ಮಂಗಳೂರು ಎಸ್ ಇ ಝಡ್ ಕಂಪೆನಿಯನ್ನು ಸಂಪರ್ಕಿಸಬಹುದಾಗಿದೆ". ಮೊದಲ ಪತ್ರಕ್ಕೆ ಒಂದು ಸಾಲಿನ ಉತ್ತರವಾದರೆ, ಎರಡನೆಯದಕ್ಕೆ ಎರಡು ಸಾಲಿನ ಉತ್ತರ! ಹೇಗಾದರೂ ಮಾಡಿ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸುವ ವಿಶಿಷ್ಟ ಅಧಿಕಾರಶಾಹಿ ಮನೋಭಾವ! ನಾನು ಬೇರೆ ದಾರಿ ಇಲ್ಲದೆ, ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿ ಬೇಕಾದ ದಾಖಲೆಗಳನ್ನೂ, ಅರ್ಜಿಯನ್ನೂ ಸಿದ್ದಪಡಿಸಿದೆ. ಆದರೆ ಅದನ್ನು ಮಾಹಿತಿ ಹಕ್ಕು ಆಯೋಗಕ್ಕೆ ಕಳಿಸುವ ಮುಂಚೆಯೇ ಉ.ಅ.ಸಂ.ರವರಿಂದ ಒಂದು ಪತ್ರ ಬಂತು: ".....ತಾವು ತಿಳಿಸಿರುವ ಮಾಹಿತಿಗಳಿಗೆ ಧನ್ಯವಾದಗಳು. ಸದ್ರಿ ಮಾಹಿತಿಯನ್ನು ಆಧರಿಸಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ತಮ್ಮ ಪತ್ರವನ್ನು ವಲಯ ಅರಣ್ಯ ಅಧಿಕಾರಿ, ಮಂಗಳೂರು ಮತ್ತು ಬಂಟ್ವಾಳ ಇವರಿಗೆ ಕಳುಹಿಸಲಾಗಿದೆ. ಹೆಚ್ಚಿನ ಮಾಹಿತಿಗಳಿಗೆ ತಾವು ಅವರನ್ನು ನೇರವಾಗಿ ಸಂಪರ್ಕಿಸಬಹುದು". ಕೇವಲ ಕುತೂಹಲಕ್ಕಾಗಿ ಸ.ಅ.ಸಂ.ರವರ ಎರಡು ಸಾಲಿನ ಪತ್ರವನ್ನೂ, ಉ.ಅ.ಸಂ.ರವರ ಪತ್ರವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದೆ. ಎರಡು ಪತ್ರಗಳಿಗೂ ಸಹಿ ಇರುವುದು ಒಬ್ಬರದ್ದೇ: ಸ.ಅ.ಸಂ.ರವರದ್ದು. 31-8-2010ರ ಪತ್ರದಲ್ಲಿ ಉ.ಅ.ಸಂ.ರವರ ಪರವಾಗಿ ಅವರು ಸಹಿ ಹಾಕಿದ್ದರೆ, 1-9-2010ರ ಪತ್ರದಲ್ಲಿ ತಾನು ಬರೆದ ಪತ್ರಕ್ಕೆ ತಾನೇ ಸಹಿ ಹಾಕಿದ್ದಾರೆ!&lt;/div&gt;&lt;div style="text-align: justify;"&gt;ಈ ನಡುವೆ ಮಂಗಳೂರು ಮತ್ತು ಬಂಟ್ವಾಳದ ವಲಯ ಅಧಿಕಾರಿಗಳು ನಾನು ನೀಡಿದ ಮಾಹಿತಿಯ ಆಧಾರದಲ್ಲಿ ಸ್ಥಳ ತನಿಖೆ ನಡೆಸಬೇಕೆಂದು ಉ.ಅ.ಸಂ.ರವರು ಹೇಗೆ ನಿರೀಕ್ಷಿಸುತ್ತಾರೋ ನನಗೆ ಅರ್ಥವಾಗುವುದಿಲ್ಲ. ಇಲಾಖೆಗೆ ಮಾಹಿತಿ ನೀಡಲು ನಾನು ಯಾವ ಪೋತಪ್ಪ ನಾಯಕ? ನನಗೆ ತಿಳಿದ ಮಟ್ಟಿಗೆ ಉ.ಅ.ಸಂ. ಅಥವಾ ಸ.ಅ.ಸಂ.ರವರು ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಬರೆದು, ಕಂಪೆನಿಯ ಪೈಪ್ ಲೈನ್ ಹೋಗುವ ದಾರಿಯ ನಕಾಶೆಯನ್ನು ಪಡೆದು, ಅದನ್ನು ವಲಯ ಅರಣ್ಯ ಅಧಿಕಾರಿಗಳಿಗೆ ಕೊಟ್ಟರೆ ಮಾತ್ರ ವಲಯ ಅರಣ್ಯ ಅಧಿಕಾರಿಗಳು ಸಮರ್ಪಕವಾಗಿ ಸ್ಥಳ ತನಿಖೆ ನಡೆಸಲು ಸಾಧ್ಯ. ಹಾಗಲ್ಲದೆ ನಾನು ಕೊಟ್ಟ ಅರೆಬರೆ ಮಾಹಿತಿಯಿಂದ ಎಂಥ ಸ್ಥಳ ತನಿಖೆ? ಎಂಥ ವರದಿ?&lt;/div&gt;&lt;div style="text-align: justify;"&gt;ಉ.ಅ.ಸಂ.ರವರಿಗೆ ಪತ್ರ ಬರೆಯುವಾಗ ನನ್ನಿಂದ ಒಂದು ಲೋಪವಾಗಿತ್ತು. ಜಲಸಂಪನ್ಮೂಲ ಇಲಾಖೆ ವಿಧಿಸಿರುವ ಷರತ್ತಿನ ಬಗ್ಗೆ ನಾನು ಅವರಿಗೆ ಮಾಹಿತಿ ನೀಡಿರಲಿಲ್ಲ. ಇದೀಗ ಆ ಮಾಹಿತಿಯನ್ನು ನೀಡಿ, ಸ್ಥಳ ತನಿಖೆಗೆ ವಲಯ ಅರಣ್ಯಾಧಿಕಾರಿಗಳಿಗೆ ನಕಾಶೆ ಅಗತ್ಯವಿರುವುದನ್ನು ತಿಳಿಸಿ ಮತ್ತೊಂದು ಪತ್ರ ಬರೆದಿದ್ದೇನೆ. ಏನಾಗುತ್ತದೋ ನೋಡೋಣ.&lt;/div&gt;&lt;div style="text-align: justify;"&gt;&lt;b&gt;ಹಾದಿಗುಂಟ  ಊರುಗಳಿಗೆ ಕುಡಿಯುವ ನೀರು?&lt;/b&gt;&lt;/div&gt;&lt;div style="text-align: justify;"&gt;ಜಲಸಂಪನ್ಮೂಲ ಇಲಾಖೆ ವಿಧಿಸಿರುವ 16ನೆಯ ಷರತ್ತು ಇದು: "ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೇಲೆ ಸಂಗ್ರಹಿಸಿ ಕೊಂಡೊಯ್ಯುವ ನೀರಿನಿಂದ ಸಂಸ್ಥೆಯು ಹಾದಿಗುಂಟ ಬರುವ ಪಟ್ಟಣಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ವ್ಯವಸ್ಥೆ ಮಾಡತಕ್ಕದ್ದು." (ಇಲ್ಲಿ "ಕುಮಾರಧಾರಾ" ಎಂದಿರುವುದು ತಪ್ಪು; "ಗುರುಪುರ ನದಿ" ಎಂದಿರಬೇಕಾಗಿತ್ತು. ಷರತ್ತುಗಳಿರಲಿ, ಲಕ್ಷಾಂತರ ರೂಪಾಯಿ ವ್ಯವಹಾರದ, ಸ್ಟಾಂಪ್ ಪೇಪರ್ ಮೇಲೆ ಬರೆಯುವ ಅಗ್ರಿಮೆಂಟುಗಳಲ್ಲೂ ಇಂತಹ ದೋಷಗಳು ಸರಕಾರಿ ಅಧಿಕಾರಿಗಳಿಗೆ ಲೆಕ್ಕದ್ದೇ ಅಲ್ಲ. ಈ ಮಾತಿಗೆ  ನನ್ನಲ್ಲಿ ಆಧಾರವಿದೆ).&lt;/div&gt;&lt;div style="text-align: justify;"&gt;ಲೋಕೋಪಯೋಗಿ ಇಲಾಖೆ ನನಗೆ ನೀಡಿದ ಮಾಹಿತಿಯಲ್ಲಿ ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ ಯಾವ ಯಾವ ಭಾಗದಲ್ಲಿ ಪೈಪ್ ಲೈನ್ ಹಾದು ಹೋಗುತ್ತದೆ ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಈ ಮಾಹಿತಿಗಳನ್ನು ನೀಡಿ ನಾನು ಬಂಟ್ವಾಳದ ಶಾಸಕರಾದ ಶ್ರೀ ಬಿ. ರಮಾನಾಥ ರೈಯವರಿಗೂ, ಲೋಕಸಭಾ ಸದಸ್ಯ ಶ್ರೀ ನಳಿನ್ ಕುಮಾರ್ ಕಟೀಲು ಅವರಿಗೂ ಪತ್ರಗಳನ್ನು ಬರೆದೆ. ರೈಗಳನ್ನು ಭೇಟಿ ಮಾಡಿ, ವಿಷಯ ವಿವರಿಸಿ ಹೇಳಿದೆ. ಅವರು ಕೂಡಲೇ ಶ್ರೀ ಐ ಎಸ್ ಎನ್ ಪ್ರಸಾದರಿಗೆ ಫೋನ್ ಮಾಡಿದರು. ಪ್ರಸಾದ್ ಯಾವುದೋ ಮೀಟಿಂಗಿನಲ್ಲಿದ್ದರಂತೆ, ಸಿಕ್ಕಲಿಲ್ಲ. ರೈಗಳು ಜಿಲ್ಲಾಧಿಕಾರಿಗೆ ಫೋನ್ ಮಾಡಿ, ವಿಷಯ ತಿಳಿಸಿ, ಎಸ್ ಇ ಝಡ್ ಅಧಿಕಾರಿಗಳನ್ನು ಕರೆಸಿ ಒಂದು ಮೀಟಿಂಗ್ ಮಾಡುವಂತೆ ಸೂಚಿಸಿದರು. ಜೊತೆಗೇ, ಜಿಲ್ಲಾಧಿಕಾರಿಯವರಿಗೆ ಒಂದು ಪತ್ರವನ್ನೂ ಬರೆಯುವಂತೆ ತಮ್ಮ ಸಹಾಯಕರಿಗೆ ಸೂಚಿಸಿದರು. ಆ ಪತ್ರದ ಯಥಾಪ್ರತಿಯನ್ನು ನನಗೂ ಕಳಿಸಿದ್ದಾರೆ. ಅದನ್ನಿಟ್ಟು ನಾನು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಬೇಕಾಗಿದೆ. ಬರೆಯುತ್ತೇನೆ.&lt;/div&gt;&lt;div style="text-align: justify;"&gt;ಇತ್ತ ನಳಿನ್ ಕುಮಾರ್ ಕಟೀಲ್ ಅವರಿಂದ ಇನ್ನೂ ಉತ್ತರ ಬಂದಿಲ್ಲ. ಬಂದೀತೆಂಬ ನಿರೀಕ್ಷೆಯಲ್ಲಿದ್ದೇನೆ.&lt;/div&gt;&lt;div style="text-align: justify;"&gt;ದಿನಕ್ಕೆ ಆರೂಕಾಲು ಕೋಟಿ ಲೀಟರ್ ನೀರು ಎಸ್ ಇ ಝಡ್ ಕಡೆಗೆ ತಿರುಗಿದರೆ, ಬೆಳೆಯುತ್ತಿರುವ ಮಂಗಳೂರಿಗೆ ಏಪ್ರಿಲ್, ಮೇ ತಿಂಗಳುಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆಗಳು ಹೆಚ್ಚು. ಆದರೆ, ಕೊನೆಯ ಪಕ್ಷ ಎಸ್ ಇ ಝಡ್ ಪೈಪ್ ಲೈನ್ ಹಾದು ಹೋಗುವ ಊರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾದರೆ, ಅದನ್ನು ಒಂದು ಪ್ರಯೋಜನ ಎಂದು ಪರಿಗಣಿಸಬಹುದು. ಈ ಊರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲು ಅಲ್ಲಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳು ಪ್ರಯತ್ನ ಮಾಡಬೇಕು, ತಮ್ಮ ಹಕ್ಕಿನ ಪ್ರಯೋಜನ ಪಡೆದುಕೊಳ್ಳಬೇಕು ಅಷ್ಟೆ. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-877739967529047021?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/877739967529047021/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=877739967529047021&amp;isPopup=true' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/877739967529047021'/><link rel='self' type='application/atom+xml' href='http://www.blogger.com/feeds/1105138094084974837/posts/default/877739967529047021'/><link rel='alternate' type='text/html' href='http://sundararao.blogspot.com/2010/09/blog-post.html' title='ಎಸ್ ಇ ಝಡ್ ಪೈಪ್ ಲೈನ್: ಪರೋಕ್ಷ ಉದ್ಯೋಗ ಪರದೇಶಿಗಳಿಗೆ?'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>2</thr:total></entry><entry><id>tag:blogger.com,1999:blog-1105138094084974837.post-4085463225745452940</id><published>2010-07-30T22:53:00.000-07:00</published><updated>2010-08-01T20:47:14.116-07:00</updated><title type='text'>ಎಸ್ ಇ ಝಡ್ ಕಂಪೆನಿಗೆ ಮಳೆನೀರು ಯಾಕೆ ಬೇಡ?</title><content type='html'>&lt;p align="justify"&gt;&lt;br /&gt;ಎಸ್ ಇ ಝಡ್ ಕಂಪೆನಿಗೆ ಮಳೆನೀರು ಯಾಕೆ ಬೇಡ?&lt;br /&gt;ದಿನಾಂಕ 24-7-2010ರ ಉದಯವಾಣಿಯಲ್ಲಿ ಮಂಗಳೂರು ಎಸ್ ಇ ಝಡ್ ಕಂಪೆನಿಯು ಒಂದು ಜಾಹೀರಾತು ನೀಡಿ ನದಿನೀರು ಸಾಗಣೆಗೆ ಪೈಪುಗಳನ್ನು ಅಳವಡಿಸಲು ಒಂದು ಜಾಗತಿಕ ಟೆಂಡರನ್ನು ಆಹ್ವಾನಿಸಿದೆ. ಈ ಜಾಹೀರಾತಿನಲ್ಲಿ ಯಾವ ನದಿಯಿಂದ, ಯಾವ ಜಾಗದಿಂದ ಇತ್ಯಾದಿ ಯಾವ ವಿವರಗಳೂ ಇಲ್ಲ. ಈ ಕಾಮಗಾರಿಯ ಸಂಪೂರ್ಣ ವಿವರಗಳು ಬೇಕಾದಲ್ಲಿ ನೀವು ಕಂಪೆನಿಗೆ ರೂ. 25,000/- ಹಣ ಕೊಟ್ಟು ಬಿಡ್ಡಿಂಗ್ ಫಾರ್ಮುಗಳನ್ನು ಪಡೆದುಕೊಳ್ಳಬೇಕು!&lt;br /&gt;ನೀರಿಗೇನು ವ್ಯವಸ್ಥೆ?&lt;br /&gt;ಎಸ್ ಇ ಝಡ್ ಕಂಪೆನಿಗೆ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು ದಿನಕ್ಕೆ 6.75 ಕೋಟಿ ಲೀಟರ್ ನೀರೆತ್ತಲು ಸರಕಾರ ಅನುಮತಿ ನೀಡಿದೆ. ಈ ಪೈಕಿ ದಿನಕ್ಕೆ 5.625 ಕೋಟಿ ಲೀಟರು ನೀರನ್ನು ನೇತ್ರಾವತಿ ನದಿಯಿಂದಲೂ, ದಿನಕ್ಕೆ 1.125 ಕೋಟಿ ಲೀಟರು ನೀರನ್ನು ಗುರುಪುರ ನದಿಯಿಂದಲೂ ಅದು ಎತ್ತುವ ಸಾಧ್ಯತೆ ಇದೆ. ಎಂ ಆರ್ ಪಿ ಎಲ್ ಕಂಪೆನಿಗೆ ನೇತ್ರಾವತಿಯಿಂದ ದಿನಕ್ಕೆ 2.25 ಕೋಟಿ ಲೀಟರು ನೀರೆತ್ತಲು ಸರಕಾರ ಅನುಮತಿ ನೀಡಿದೆ. ಎಂದರೆ ಎಸ್ ಇ ಝಡ್ ಕಂಪೆನಿಗೆ ಎಂ ಆರ್ ಪಿ ಎಲ್ ಕಂಪೆನಿಗಿಂತ ಎರಡೂವರೆ ಪಟ್ಟು ಹೆಚ್ಚು ನೀರು ಎತ್ತಲು ಸರಕಾರ ಹೊಸದಾಗಿ ಅನುಮತಿ ನೀಡಿದೆ ಎಂದಾಯಿತು.&lt;br /&gt;ಎ ಎಂ ಆರ್ ಕಂಪೆನಿಯು ಜಲವಿದ್ಯುತ್ ಉತ್ಪಾದನೆ ಮಾಡಲು ಸರಕಾರದಿಂದ ಅನುಮತಿ ಪಡೆದು ಬಂಟ್ವಾಳ ತಾಲೂಕಿನ ಶಂಬೂರಿನಲ್ಲಿ ನೇತ್ರಾವತಿ ನದಿಗೆ ಒಂದು ಅಣೆಕಟ್ಟು ಹಾಕಿದೆಯಷ್ಟೆ. ಈ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರನ್ನು ಎಸ್ ಇ ಝಡ್ ಕಂಪೆನಿ ತನ್ನ ನೆಲೆಗೆ ಸಾಗಿಸಲು ಉದ್ದೇಶಿಸಿದೆ. ಈ ಬಗ್ಗೆ ತಾನು ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆಂದು ಅದು ತಿಳಿಸಿದೆ. ಆದರೆ ಆ ಒಪ್ಪಂದದಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. (ಈ ಮಾಹಿತಿಯನ್ನು ಕೇಳಿ ನಾನು ಎಸ್ ಇ ಝಡ್ ಕಂಪೆನಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಕಂಪೆನಿ ಮಾಹಿತಿಯನ್ನು ನೀಡಲು ನಿರಾಕರಿಸಿತು. ನಾನು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಅಲ್ಲಿ ಕಂಪೆನಿಯು ತಾನು ಹೂಡಿರುವ ಬಂಡವಾಳದಲ್ಲಿ ಸರಕಾರದ ಗಣನೀಯ ಪಾಲು (substantial) ಇಲ್ಲವಾದ್ದರಿಂದ ತನ್ನನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಅಹವಾಲು ಮಂಡಿಸಿದೆ. ಈ ಬಗ್ಗೆ ಮಾಹಿತಿ ಹಕ್ಕು ಆಯೋಗ ವಿಚಾರಣೆ ನಡೆಸುತ್ತಿದ್ದು ತೀರ್ಪು ಇನ್ನೂ ಬರಬೇಕಾಗಿದೆ.)&lt;br /&gt;ಗುರುಪುರ ನದಿಯ ಯಾವ ಸ್ಥಳದಿಂದ ಕಂಪೆನಿಯು ನೀರು ಸಾಗಿಸಲು ಉದ್ದೇಶಿಸಿದೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ. .&lt;br /&gt;ಒಟ್ಟಿನಲ್ಲಿ ಈ ಮೊದಲು ಎಂ ಆರ್ ಪಿ ಎಲ್ ನ ಪೈಪುಗಳನ್ನು ಅಳವಡಿಸಿದಂತೆಯೇ, ಎಂ ಎಸ್ ಇ ಝಡ್ ಕಂಪೆನಿಯ ಪೈಪು ಅಳವಡಿಸುವ ಕಾರ್ಯವು ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಈ ಪೈಪುಗಳು ಯಾವ ಅಳತೆಯವು, ಅದಕ್ಕೆ ಎಷ್ಟು ಜಾಗ ಬೇಕಾಗಬಹುದು ಎಂಬ ವಿಷಯ ಸ್ಪಷ್ಟವಿಲ್ಲ. ಈ ಎಲ್ಲ ವಿಷಯಗಳಲ್ಲಿ ಮಾಹಿತಿ ಬೇಕಾದವರು ಕಂಪೆನಿಯನ್ನು ಅಥವಾ ಅದರ ಕಂಟ್ರಾಕ್ಟುದಾರರನ್ನು ಸಂಪರ್ಕಿಸುವ ಬದಲು ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಅಥವಾ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸುವುದೇ ಉತ್ತಮ ಎಂದು ನನ್ನ ಅಭಿಪ್ರಾಯ.&lt;br /&gt;ಎಂ ಎಸ್ ಇ ಝಡ್ ಕಂಪೆನಿಯು ಒಟ್ಟು ಸುಮಾರು 4000 ಎಕ್ರೆ ಸ್ಥಳದಲ್ಲಿ ಸ್ಥಾಪಿತವಾಗುತ್ತದೆ ಎಂದು ಹೇಳಲಾಗಿದೆ. ಈ ಪೈಕಿ ಈಗ ಕಂಪೆನಿಯು ಸ್ವಾಧೀನ ಪಡಿಸಿಕೊಂಡಿರುವುದು ಹತ್ತಿರ ಹತ್ತಿರ 2000 ಎಕ್ರೆ ಭೂಮಿಯನ್ನು. ಇನ್ನುಳಿದ ಭೂಮಿಯ ಸ್ವಾಧೀನಕ್ಕೆ ಕಂಪೆನಿಯು ತೀವ್ರವಾದ ವಿರೋಧವನ್ನು ಎದುರಿಸುತ್ತಿದೆ. ಪಾರ್ಲಿಮೆಂಟ್ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರೇ ತಾನು ಇನ್ನೂ ಹೆಚ್ಚಿನ ಭೂಸ್ವಾಧೀನವನ್ನು ವಿರೋಧಿಸುತ್ತೇನೆ ಎಂದು ಹಲವಾರು ಬಾರಿ ಹೇಳಿಕೆಗಳನ್ನು ನೀಡಿದ್ದಾರೆ. ತನ್ನ ಕೃಷಿಭೂಮಿಯನ್ನು ಸರಕಾರ ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ಕೃಷಿಕ ಗ್ರೆಗರಿ ಪತ್ರಾವೋ ಅವರು ನಡೆಸಿರುವ ಹೋರಾಟ ಅಖಿಲ ಭಾರತ ಪ್ರಸಿದ್ದಿ ಪಡೆದಿದೆ. ಒಟ್ಟಿನಲ್ಲಿ ಭೂಸ್ವಾಧೀನದ ವಿರುದ್ಧ ದೊಡ್ಡದೊಂದು ಚಳುವಳಿಯೇ ಹುಟ್ಟಿಕೊಂಡಿದ್ದು, ಪೇಜಾವರ ಸ್ವಾಮಿಗಳು, ಕೇಮಾರು ಸ್ವಾಮಿಗಳು, ಕ್ರೈಸ್ತ, ಮುಸ್ಲಿಂ ಧಾರ್ಮಿಕ ನಾಯಕರು ಎಲ್ಲರೂ ಒಟ್ಟಾಗಿ ಭೂಸ್ವಾಧೀನವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪೆನಿಯು ಇನ್ನೂ ಹೆಚ್ಚಿನ ಭೂಸ್ವಾಧೀನ ಮಾಡಿಕೊಳ್ಳುವುದನ್ನು, ಅದು ಆದ ಮೇಲೆ ಮಾತ್ರ ಒಪ್ಪಿಕೊಳ್ಳಬಹುದೇ ಹೊರತು ಆಗುವ ಮೊದಲು ಅಲ್ಲ.&lt;br /&gt;ನೀರಿಗೆ ಅನ್ಯಮೂಲಗಳಿಲ್ಲವೆ?&lt;br /&gt;ತನಗೆ ಬೇಕಾಗಿರುವ ಒಟ್ಟು ನೀರಿನ ಪ್ರಮಾಣ ದಿನಕ್ಕೆ &lt;span class=""&gt;20.&lt;/span&gt;25 ಕೋಟಿ ಲೀಟರುಗಳು; ಈ &lt;span class=""&gt;8.&lt;/span&gt;1 ಕೋಟಿ ಲೀಟರ್ ನೀರನ್ನು ಮಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸುವ ಮೂಲಕ; 5.4 ಕೋಟಿ ಲೀಟರ್ ನೀರನ್ನು ಮಳೆನೀರು ಸಂಗ್ರಹದ ಮೂಲಕ ಮತ್ತು ಉಳಿದ 6.75 ಕೋಟಿ ಲೀಟರ್ ನೀರನ್ನು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಎತ್ತುವ ಮೂಲಕ ಒದಗಿಸಿಕೊಳ್ಳುವುದಾಗಿ ತಾ. 6-10-2009ರ ಉದಯವಾಣಿ ಪತ್ರಿಕೆಯಲ್ಲಿ ನೀಡಿದ ಜಾಹೀರಾತಿನಲ್ಲಿ ಕಂಪೆನಿಯು ಘೋಷಿಸಿದೆ. ಈ ಜಾಹೀರಾತಿನ ಕುರಿತು ನಾನು ಕಂಪೆನಿಯಿಂದ ಹೆಚ್ಚಿನ ಕೆಲವು ಮಾಹಿತಿಗಳನ್ನು - ಮುಖ್ಯವಾಗಿ ಮಳೆ ನೀರು ಸಂಗ್ರಹದ ಬಗ್ಗೆ - ಕೇಳಿದ್ದೆ. ಅದಕ್ಕೆ ಉತ್ತರ ಬರೆಯುವಾಗ ಕಂಪೆನಿಯು ಹೀಗೆ ಹೇಳಿತ್ತು. "ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಯ ಕಾಮಗಾರಿಯು ಈಗಷ್ಟೇ ಆರಂಭವಾಗಿದ್ದು, ತತ್ ಕ್ಷಣಕ್ಕೆ ದಿನವಹಿ 45 ಎಂಜಿಡಿ (ಎಂದರೆ 20.25 ಕೋಟಿ ಲೀಟರ್) ನೀರಿನ ಅವಶ್ಯಕತೆ ಇರುವುದಿಲ್ಲ. ಬಹು ಉತ್ಪಾದನಾ ವಿಶೇಷ ಆರ್ಥಿಕ ವಲಯ ಸ್ಥಾಪನೆಯಾಗುವ ಸಂದರ್ಭದಲ್ಲಿ ನೀರಿನ ಅವಶ್ಯಕತೆಗೆ ಅನುಗುಣವಾಗಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು"&lt;br /&gt;ಎಂದರೆ ಕಂಪೆನಿಯು ಮಳೆನೀರು ಸಂಗ್ರಹಿಸಿ ಬಳಸುವ ಯೋಜನೆಯನ್ನು ಜಾಹೀರಾತಿಗೆ ಸೀಮಿತಗೊಳಿಸಿದೆ. ಕಾರ್ಯಗತ ಮಾಡುವ ಗಂಭೀರ ಚಿಂತನೆಯನ್ನು ನಡೆಸಿಯೇ ಇಲ್ಲ. ನೇತ್ರಾವತಿ ನದಿಯಲ್ಲಿ ನೀರು ಇರುವುದರಿಂದ ಅದು ನಿಶ್ಚಿಂತೆಯಿಂದ ನೇರವಾಗಿ ಆ ನೀರಿಗೇ ಕೈ ಹಾಕಿದೆ!&lt;br /&gt;ಮಳೆಯ ನೀರು ಶ್ರೇಷ್ಠ - ಅದನ್ನೇ ಸಂಗ್ರಹಿಸಲಿ&lt;br /&gt;ಆದರೆ ಕಂಪೆನಿ ನದಿಯ ನೀರಿಗೆ ಕೈ ಹಾಕುವ ಮೊದಲೇ ತನಗೆ ಬೇಕಾದ ನೀರಿಗಾಗಿ ಮಳೆ ನೀರು ಸಂಗ್ರಹದ ಯೋಜನೆಯನ್ನು ಯಾಕೆ ಕೈಗೆತ್ತಿಕೊಳ್ಳಬಾರದು? ಹಾಗೆ ಮಾಡಲು ಅದಕ್ಕೆ ಏನು ಸಮಸ್ಯೆ ಇದೆ? ನದಿಯಿಂದ ನೀರು ಕೊಂಡು ಹೋಗುವುದೆಂದರೆ, ಪೈಪುಗಳನ್ನು ಅಳವಡಿಸುವ ದಾರಿಯುದ್ದಕ್ಕೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳ ನಾಶ ಮಾಡಲೇ ಬೇಕಾಗುತ್ತದೆ. ಎಷ್ಟೋ ಕಡೆ ಕೃಷಿಭೂಮಿಯನ್ನೂ ಇದಕ್ಕಾಗಿ ಬಲಿಕೊಡಬೇಕಾಗಬಹುದು. ಅಲ್ಲದೆ, ನೀರೆತ್ತಲು ಅಳವಡಿಸುವ ಮೋಟರುಗಳು ಬೃಹತ್ ಪ್ರಮಾಣದಲ್ಲಿ ಅಮೂಲ್ಯವಾದ ವಿದ್ಯುತ್ತನ್ನು ನುಂಗುತ್ತವೆ. ಅದರ ಬದಲಿಗೆ ಕಂಪೆನಿಯೇ ಹೇಳುವಂತೆ, ತತ್ಕಾಲದ ಅಗತ್ಯಕ್ಕೆ ಮಳೆನೀರು ಸಂಗ್ರಹಿಸಿ ದಿನಕ್ಕೆ 5.4 ಕೋಟಿ ಲೀಟರ್ ನೀರನ್ನು ಯಾಕೆ ಪೂರೈಸಿಕೊಳ್ಳಬಾರದು? ವೈಜ್ಞಾನಿಕವಾಗಿ ಸಂಗ್ರಹಿಸಿದರೆ, ಮಳೆ ನೀರು ಪೃಕೃತಿಯಲ್ಲಿ ದೊರೆಯುವ ಅತ್ಯಂತ ಪರಿಶುದ್ಧ ನೀರೆಂಬುದನ್ನೂ ಇಲ್ಲಿ ಪರಿಗಣಿಸಬೇಕು.&lt;br /&gt;ಮಳೆ ನೀರು ಸಂಗ್ರಹದ ಯೋಜನೆಯನ್ನೇ ಮೊದಲು ಕೈಗೆತ್ತಿಕೊಳ್ಳಬೇಕು. ಮುಂದೆ ಭೂಸ್ವಾಧೀನ ಮಾಡಿಕೊಳ್ಳುವುದು ಸಾಧ್ಯವಾದರೆ ಮಾತ್ರ ನದಿಯ ನೀರಿಗೆ ಕೈ ಹಾಕುವ ಬಗ್ಗೆ ಯೋಚಿಸಬಹುದು, ಈ ನಡುವೆ ಮಂಗಳೂರಿನ ಕೊಳಚೆ ನೀರು ಶುದ್ಧೀಕರಣ ಸ್ಥಾವರಗಳ ಕಾಮಗಾರಿಯನ್ನು ಆದಷ್ಟೂ ತ್ವರಿತವಾಗಿ ಮುಗಿಸಬೇಕು ಎಂದು ಸಾರ್ವಜನಿಕರೂ, ಜಿಲ್ಲಾಧಿಕಾರಿಗಳೂ, ಬಂಟ್ವಾಳ ಪುರಸಭೆಯೂ, ಎಲ್ಲಕ್ಕಿಂತ ಮುಖ್ಯವಾಗಿ ಮಂಗಳೂರಿನ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಜವಾಬ್ದಾರಿ ಇರುವ ಮಹಾನಗರ ಪಾಲಿಕೆಯೂ ಕಂಪೆನಿಯ ಮೇಲೆ ಒತ್ತಡ ತರುವ ಅಗತ್ಯವಿದೆ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-4085463225745452940?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/4085463225745452940/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=4085463225745452940&amp;isPopup=true' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/4085463225745452940'/><link rel='self' type='application/atom+xml' href='http://www.blogger.com/feeds/1105138094084974837/posts/default/4085463225745452940'/><link rel='alternate' type='text/html' href='http://sundararao.blogspot.com/2010/07/blog-post.html' title='ಎಸ್ ಇ ಝಡ್ ಕಂಪೆನಿಗೆ ಮಳೆನೀರು ಯಾಕೆ ಬೇಡ?'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>3</thr:total></entry><entry><id>tag:blogger.com,1999:blog-1105138094084974837.post-3660684786099155210</id><published>2010-06-22T09:22:00.000-07:00</published><updated>2010-06-22T09:23:45.356-07:00</updated><title type='text'>ಎಸ್ ಇ ಝಡ್ ನೇತ್ರಾವತಿಯನ್ನು ತಿರುಗಿಸಲು ಹೊರಟಿದೆಯೇ?</title><content type='html'>ಮಂಗಳೂರು ವಿಶೇಷ ಆರ್ಥಿಕ ವಲಯದ ವೆಬ್ ಸೈಟನ್ನು ನಾನು ನಿಯಮಿತವಾಗಿ ನೋಡುವುದಿಲ್ಲ. "ವಿಶೇಷ ಆರ್ಥಿಕ ವಲಯಕ್ಕೆ ನೀರೆಲ್ಲಿಂದ?" ಎಂಬ ಲೇಖನ ಬರೆದಾಗ ನೋಡಿದ್ದೆ. ಅಲ್ಲಿ ಕೊಟ್ಟಿದ್ದ ಕೆಲವು ಅಂಕಿಸಂಖ್ಯೆಗಳನ್ನು ಲೇಖನದಲ್ಲಿ ಬಳಸಿಕೊಂಡಿದ್ದೆ. ಅದೇ ನೆನಪಿನ ಮೇಲೆ ಮೊನ್ನೆ "ನಿಮ್ಮ ಕಾನೂನು ನಿಮಗಿರಲಿ......" ಲೇಖನದಲ್ಲಿ "ಕರ್ನಾಟಕ ಸರಕಾರ ದಿನಕ್ಕೆ ೬.೭೫ ಕೋಟಿ ಲೀಟರ್ ನೀರು ಕೊಡಲು ಒಪ್ಪಿಕೊಂಡಿದೆ" ಎಂದು ಬರೆದೆ. ನಿನ್ನೆ ಅಂದರೆ ೧೭-೦೬-೨೦೧೦ರಂದು ಯಾಕೋ ಕಂಪೆನಿಯ ವೆಬ್ ಸೈಟನ್ನು ಪುನಃ ನೋಡಬೇಕಾಯಿತು. ನೋಡಿದರೆ ನೀರಿನ ಕುರಿತಾದ ಕಂಪೆನಿಯ ಅಂಕಿಸಂಖ್ಯೆಗಳು ಬದಲಾಗಿಬಿಟ್ಟಿವೆ!&lt;br /&gt;೧. ಒಟ್ಟು ಅಗತ್ಯ ೪೫ ಎಂಜಿಡಿ ನೀರು ಎಂಬುದೇನೋ ಮೊದಲಿನಂತೆಯೇ ಇದೆ. ಈ ಪೈಕಿ ೧೫ ಎಂಜಿಡಿ ನೀರನ್ನು ನೇತ್ರಾವತಿ ಮತ್ತು ಗುರುಪುರ ನದಿಗಳಿಂದ ಒದಗಿಸಿಕೊಳ್ಳುತ್ತೇವೆ ಎಂದು ಹಿಂದಿನ ವೆಬ್ ಸೈಟಿನಲ್ಲಿ ಇತ್ತು. ಈಗ ಅದು ೨೫ ಎಂಜಿಡಿ ಆಗಿದೆ! ಎಂದರೆ ಈಗಿನ ಲೆಕ್ಕದ ಪ್ರಕಾರ ಈ ನದಿಗಳಿಂದ ಅದು ಎತ್ತುವ ಒಟ್ಟು ನೀರಿನ ಪ್ರಮಾಣ ದಿನಕ್ಕೆ ೧೧.೨೫ ಕೋಟಿ ಲೀಟರುಗಳು!&lt;br /&gt;೨೦೦೭ರ ಸರ್ಕಾರಿ ಆಜ್ಞೆಯಲ್ಲಿ "೧೫ ಎಂಜಿಡಿ ನೀರು ಎತ್ತಲು ಅನುಮತಿ ನೀಡಲಾಗಿದೆ" ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾದರೆ ಈಗ ಹತ್ತು ಎಂಜಿಡಿ ಜಾಸ್ತಿ ಆದದ್ದು ಹೇಗೆ? ಸರಕಾರ ೨೫ ಎಂಜಿಡಿ ನೀರೆತ್ತಲು ಕಂಪೆನಿಗೆ ಹೊಸದಾಗಿ ಅನುಮತಿ ನೀಡಿದೆಯೆ? ಈ ಬಗ್ಗೆ ಮಾಹಿತಿ ಕೇಳಿ ಸಣ್ಣ ನೀರಾವರಿ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದೇನೆ.&lt;br /&gt;೨, ಇನ್ನೊಂದು ಬದಲಾವಣೆ ಎಂದರೆ ಮಳೆನೀರಿನ ಸಂಗ್ರಹದ ವಿಷಯ ಮಂಗಮಾಯ ಆಗಿರುವುದು! ಈ ಹಿಂದೆ, ೧೨ ಎಂಜಿಡಿ ನೀರನ್ನು ಮಳೆ ನೀರು ಸಂಗ್ರಹದ ಮೂಲಕ ಒದಗಿಸಿಕೊಳ್ಳುವುದಾಗಿ ಕಂಪೆನಿ ಹೇಳಿತ್ತು. "ಸ್ವಾಧೀನ ಪಡಿಸಿಕೊಂಡ ಜಮೀನಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸುವ" ಮಾತನ್ನು ಆಗ ಕಂಪೆನಿ ಆಡಿತ್ತು.ಇದರ ಸಾಧ್ಯತೆಯ ಬಗ್ಗೆ ನನ್ನ ಲೇಖನದಲ್ಲಿ ಅನುಮಾನ ವ್ಯಕ್ತಪಡಿಸಿದ್ದೆ. ಸ್ವಾಧೀನ ಪಡಿಸಿಕೊಂಡ ಎಲ್ಲ ಭೂಮಿಯನ್ನೂ ಈಗ ಒಂದೇ ಲೆಕ್ಕ ತಟ್ಟು ಮಾಡಿದ್ದಾರಂತೆ. ಹಾಗಾಗಿ "ತಗ್ಗು ಪ್ರದೇಶ"ದ ಜೊತೆಗೇ ಮಳೆನೀರು ಸಂಗ್ರಹದ ಯೋಜನೆಯೂ ಮಾಯವಾಗಿರಬೇಕು!&lt;br /&gt;೩. ಈಗಿನ ಲೆಕ್ಕಾಚಾರದ ಪ್ರಕಾರ ನದಿಗಳಿಂದ ೨೫ ಎಂಜಿಡಿ, ಮಂಗಳೂರಿನ ಗಲೀಜು ನೀರು ಸಂಸ್ಕರಿಸಿ ೧೦ ಎಂಜಿಡಿ ಎಂದಿದೆ. ಇನ್ನೂ ಬೇಕಾಗುವ ೧೦ ಎಂಜಿಡಿ ಎಲ್ಲಿಂದ ಬರುತ್ತದೆ ಎನ್ನುವುದಕ್ಕೆ ಯಾವ ವಿವರಣೆಯೂ ಇಲ್ಲ.&lt;br /&gt;ವೆಬ್ ಸೈಟಿನಲ್ಲಿ, ಪತ್ರಿಕೆಯಲ್ಲಿ, ಕಂಪೆನಿಯ ಹೆಸರು ಹಾಕಿ "ಮಳೆ ನೀರು ಸಂಗ್ರಹಿಸುತ್ತೇವೆ" ಎಂದು ಎಲ್ಲರೂ ಓದುವಂತೆ ಪ್ರಕಟಿಸಿದ ಮೇಲೆ, ಅದು ಸಾರ್ವಜನಿಕರಿಗೆ ಕೊಟ್ಟ ವಾಗ್ದಾನವೇ ಆಯಿತು. ಮಳೆನೀರು ಸಂಗ್ರಹ ಮಾಡುತ್ತೇವೆಂದು ಮೊದಲು ಹೇಳಿದವರು, ಈಗ ಆ ಯೋಜನೆಯನ್ನು ಕೈ ಬಿಡುವುದು ಹೇಗೆ ಸಾಧ್ಯ? ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಕಂಪೆನಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ.&lt;br /&gt;ನೇರವಾಗಿ ಕೇಳುವುದೇ ಸರಿ ಎಂದುಕೊಂಡು ಎಸ್ ಇ ಝಡ್ ಕಂಪೆನಿಗೆ ಸಮಸ್ಯೆ ವಿವರಿಸಿ ಸ್ಪಷ್ಟೀಕರಣ ಕೇಳಿ ಒಂದು ಮಿಂಚಂಚೆ ಕಳಿಸಿದೆ. ೨೧ರ ಮಂಗಳವಾರ ಮಧ್ಯಾಹ್ನ ಒಂದು ಫೋನು: "ನಾನು ದಿವಾಕರ್ ಅಂತ ಎಸ್ ಇ ಝಡ್ನಿಂದ ಮಾತಾಡುವುದು. ಇದು ನಮ್ಮ ವೆಬ್ ಸೈಟಿನಲ್ಲಿ ಮೊದಲು ಏನಂತ ಇತ್ತು ಸಾರ್?"&lt;br /&gt;ನಾನು: ಮೊದಲು ಇದ್ದದ್ದು ೧೫ ಎಂಜಿಡಿ ನೇತ್ರಾವತಿ ಮತ್ತು ಗುರುಪುರ ನದಿಗಳಿಂದ, ೧೮ ಎಂಜಿಡಿ ಮಂಗಳೂರು ಎಸ್ ಟಿ ಪಿ ಯಿಂದ ಮತ್ತು ೧೨ ಎಂಜಿಡಿ ಮಳೆ ನೀರು ಸಂಗ್ರಹದಿಂದ ಅಂತ"&lt;br /&gt;ದಿವಾಕರ್: ಓ ಹಾಗಿತ್ತ?&lt;br /&gt;ನಾನು: ನನ್ನ ಹತ್ತಿರ ಅದರ ಪ್ರಿಂಟ್ ಔಟ್ ಇದೆ. ಉದಯವಾಣಿ ಜಾಹೀರಾತಿನಲ್ಲೂ ಹಾಗೇ ಇತ್ತು.&lt;br /&gt;ದಿವಾಕರ್: ಸರಿ, ಹಾಗಾದರೆ ನಾನು ಚೆಕ್ ಮಾಡಿ ನಿಮಗೆ ಪುನಃ ಫೋನ್ ಮಾಡುತ್ತೇನೆ. ಮತ್ತೆ ಇದು ಮೊನ್ನೆ ಮಡಿಕೇರಿಯಲ್ಲಿ ಮಾಹಿತಿ ಹಕ್ಕಿನದು ಇತ್ತಲ್ಲ. ನಾವು ಕಂಪೆನಿಯಿಂದ ಒಂದು ಕಾಗದ ಬರೆದಿದ್ದೆವು ಅಲ್ಲಿಗೆ.&lt;br /&gt;ನಾನು: ನಾನು ಹೋಗಿದ್ದೆ. ನನಗೆ ನಿಮ್ಮ ಕಾಗದ, ವಕೀಲರ ಅಭಿಪ್ರಾಯ ಸಿಕ್ಕಿದೆ. ಅದರ ವಿಷಯ ನಾನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿ&lt;br /&gt;ದಿವಾಕರ್: ನಿಮ್ಮ ಬ್ಲಾಗ್ ಯಾವುದು"&lt;br /&gt;ನಾನು: ಇವೊತ್ತಿನ ಉದಯವಾಣಿ ಆರನೇ ಪುಟದಲ್ಲಿ ಹಾಕಿದ್ದಾರೆ ನೋಡಿ ವಿಳಾಸ&lt;br /&gt;ದಿವಾಕರ್: ಸರಿ ಸರಿ ನೋಡುತ್ತೇನೆ&lt;br /&gt;ಸುಮಾರು ಒಂದೂವರೆ ಗಂಟೆ ಕಳೆದ ಮೇಲೆ ಪುನಃ ಫೋನ್ ಬಂತು: "ನೀವು ಹೇಳಿದ್ದು ಸರಿ. ಅದು ಹಾಗೆಯೇ ಇರಬೇಕು. ವೆಬ್ ಸೈಟಿನಲ್ಲಿ ಸರಿ ಮಾಡುತ್ತೇವೆ&lt;br /&gt;ನಾನು: ಸರಿ ಸರಿ. ನನಗೊಂದು ಮೇಲ್ ಕಳಿಸಿಬಿಡಿ&lt;br /&gt;ದಿವಾಕರ್: ಇಲ್ಲ ಅದು ಕಳಿಸುವುದಿಲ್ಲ....&lt;br /&gt;ನಾನು: ಸರಿ ಹಾಗಾದರೆ.&lt;br /&gt;ದಿವಾಕರ್: ನಿಮ್ಮ ಬ್ಲಾಗ್ ನೋಡಿದೆ. ಲೇಖನ ಚೆನ್ನಾಗಿದೆ.&lt;br /&gt;ನಾನು : ಥ್ಯಾಂಕ್ಸ್!&lt;br /&gt;ಇವೊತ್ತು ಅಂದರೆ ೨೨ರ ಬುಧವಾರ ರಾತ್ರಿ ವೆಬ್ ಸೈಟ್ ನೋಡಿದೆ. ನೀರಿನ ವಿಷಯ ನಾಪತ್ತೆ! ಜೊತೆಗೆ ಕಂಪೆನಿಗೆ ಬೇಕಾಗುವ ವಿದ್ಯುತ್ ಎಷ್ಟು, ಅದಕ್ಕೆ ಏನು ವ್ಯವಸ್ಥೆ ಎಂಬ ಮಾಹಿತಿ ಇತ್ತು, ಅದೂ ನಾಪತ್ತೆ! ಹೇಗಾದರೂ ನನ್ನ ಹತ್ತಿರ ಅದರ ಪ್ರಿಂಟೌಟ್ ಇದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-3660684786099155210?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/3660684786099155210/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=3660684786099155210&amp;isPopup=true' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/3660684786099155210'/><link rel='self' type='application/atom+xml' href='http://www.blogger.com/feeds/1105138094084974837/posts/default/3660684786099155210'/><link rel='alternate' type='text/html' href='http://sundararao.blogspot.com/2010/06/blog-post_22.html' title='ಎಸ್ ಇ ಝಡ್ ನೇತ್ರಾವತಿಯನ್ನು ತಿರುಗಿಸಲು ಹೊರಟಿದೆಯೇ?'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>7</thr:total></entry><entry><id>tag:blogger.com,1999:blog-1105138094084974837.post-6569349127970344480</id><published>2010-06-11T06:16:00.000-07:00</published><updated>2010-06-11T06:18:07.116-07:00</updated><title type='text'>ನಿಮ್ಮ ಕಾನೂನು ನಿಮಗಿರಲಿ; ನೀರು, ಭೂಮಿ ನಮಗಿರಲಿ!</title><content type='html'>&lt;p align="justify"&gt;&lt;br /&gt;ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿಯನ್ನು ಅದರ ನೀರಿನ ವ್ಯವಸ್ಥೆ ಬಗ್ಗೆ ಮಾಹಿತಿ ಕೇಳಿದಾಗ "ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ತಿಳಿಸಿತ್ತು. ಒಪ್ಪಂದದ ಪ್ರತಿಯನ್ನು ಕೇಳಿ ನಾನು ಅರ್ಜಿ ಸಲ್ಲಿಸಿದೆ. ಕಂಪೆನಿ ಅದನ್ನು ಕೊಡಲು ನಿರಾಕರಿಸಿತು. ನಾನು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಮೊನ್ನೆ ೫-೬-೨೦೧೦ರಂದು ಮಡಿಕೇರಿಯಲ್ಲಿ ಮಾಹಿತಿ ಹಕ್ಕು ಆಯೋಗ ಈ ಬಗ್ಗೆ ವಿಚಾರಣೆ ಇಟ್ಟುಕೊಂಡಿತ್ತು. ನಾನು ಹಾಜರಾದೆ. ಕಂಪೆನಿಯ ಪರವಾಗಿ ಯಾರೂ ಬಂದಿರಲಿಲ್ಲ. ಆದರೆ, ಬರಹ ರೂಪದಲ್ಲಿ ಆಯೋಗಕ್ಕೆ ಒಂದು ಅರ್ಜಿ ಸಲ್ಲಿಸಿ ಕಂಪೆನಿಯನ್ನು ಮಾಹಿತಿ ಹಕ್ಕು ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವಂತೆ ವಿನಂತಿಸಿಕೊಂಡಿದ್ದರು. ಆಯೋಗದ ಅಧ್ಯಕ್ಷರು, "ಕಂಪೆನಿ ಸಲ್ಲಿಸಿದ ಅರ್ಜಿ ಹಾಗೂ ವಕೀಲರ ಅಭಿಪ್ರಾಯಗಳ ಯಥಾಪ್ರತಿಗಳು ನಿಮಗೆ ಬೇಕೆ?" ಎಂದು ಕೇಳಿದಾಗ ನಾನು "ದಯವಿಟ್ಟು ಕೊಡಿ" ಎಂದೆ. ಕೂಡಲೇ ಯಥಾಪ್ರತಿ ಮಾಡಿಸಿಕೊಟ್ಟರು, ಉಚಿತವಾಗಿ. ಹೀಗೆ ನಾನು ಹಾಜರಾದದ್ದು ಸಾರ್ಥಕವಾಯಿತು.&lt;br /&gt;ಮಾಹಿತಿ ಆಯೋಗದ ಅಧ್ಯಕ್ಷರು "ಈಗ ನಾನು ಏನು ಮಾಡಲಿ?" ಎಂದು ನನ್ನನ್ನು ಕೇಳಿದರು. ನನ್ನ ತಲೆ ಓಡುವುದು ನಿಧಾನ. (ಅದು ಓಡಿದ್ದನ್ನು ನಾನು ಕಂಡೇ ಇಲ್ಲ ಎನ್ನುವ ಟೀಕಾಚಾರ್ಯರೂ ಇದ್ದಾರು - ಅಂಥವರ ಸಂತತಿ ಬೆಳೆಯಲಿ!). ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ. ಕಡೆಗೆ ಅವರೇ, "ನೋಡೋಣ. ಮೂರು ವರ್ಷದ ಬ್ಯಾಲೆನ್ಸ್ ಶೀಟ್ ಹಾಜರುಪಡಿಸಲು ಆಜ್ಞೆ ಮಾಡುತ್ತೇನೆ. ಅದರ ಆಧಾರದಲ್ಲಿ ತೀರ್ಮಾನಿಸೋಣ" ಎಂದರು. ನಾನು "ಆಗಲಿ" ಎಂದೆ. ಪ್ರಕರಣದ ವಿಚಾರಣೆ ನಡೆಯುವುದು ಇನ್ನು ನಾಲ್ಕು ತಿಂಗಳು ಬಿಟ್ಟು. ಅಲ್ಲಿಯವರೆಗೆ ನನ್ನ ತಲೆ ಓಡಿದಷ್ಟು ಓಡಿಸಲು ನನಗೆ ಪುರುಸೊತ್ತಿದೆ. ತಜ್ಞರ ಸಲಹೆ ಪಡೆಯಲೂ ಅವಕಾಶವಿದೆ.&lt;br /&gt;ಓದುಗರ ಸಲಹೆಗಳಿಗೆ, ಮಾಹಿತಿಗೆ ಸ್ವಾಗತ. ಮಾಹಿತಿ ಹಕ್ಕು ಆಯೋಗಕ್ಕೆ ನಾನು ಸಲ್ಲಿಸಬೇಕೆಂದಿರುವ ಉತ್ತರ ವಕೀಲರ ಅಭಿಪ್ರಾಯಕ್ಕೆ ನಾನು ನೀಡಿರುವ ಪ್ರತಿಕ್ರಿಯೆಯಲ್ಲಿರುವ ಅಂಶಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಇನ್ನೂ ಸೇರಿಸಬಹುದಾದ್ದು ಇದ್ದರೆ, ತಿಳಿಸಿರಿ.&lt;br /&gt;ಎಂ ಎಸ್ ಇ ಝಡ್ ಕಂಪೆನಿ ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆ:&lt;br /&gt;ಕಂಪೆನಿಯ ಹೇಳಿಕೆ ೧: ಮಾಹಿತಿ ಹಕ್ಕು ಕಾಯಿದೆಯು ಪ್ರತಿವಾದಿ ಕಂಪೆನಿಗೆ ಲಗಾವು ಆಗುವುದಿಲ್ಲ. ಮೊದಲು ಇದ್ದ ಕರ್ನಾಟಕದ ಕಾಯಿದೆಯಲ್ಲಿ ಬಳಸಲಾದ ವ್ಯಾಪಕವಾದ ಪರಿಭಾಷೆಯು ಕೇಂದ್ರದ ಕಾಯಿದೆಯಲ್ಲಿ ಇಲ್ಲದಿರುವ ಕಾರಣ, ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತ ಎಂಬ ಕಂಪೆನಿಯು "ಸಾರ್ವಜನಿಕ ಪ್ರಾಧಿಕಾರ" ಆಗಲಾರದು. ಆದ ಕಾರಣ ಪಿರ್ಯಾದಿಯು ರದ್ದಾಗತಕ್ಕದ್ದು.&lt;br /&gt;ನನ್ನ ವಿವರಣೆ: ಈ ಅಂಶವು ವಕೀಲರು ನೀಡಿರುವ ಅಭಿಪ್ರಾಯದಲ್ಲಿ ಇದೆ. ಹಾಗಾಗಿ ಅಲ್ಲಿ ಚರ್ಚಿಸಿದ್ದೇನೆ.&lt;br /&gt;ಕಂಪೆನಿಯ ಹೇಳಿಕೆ ೨: ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತ ಇವರು ಆರಂಭದಿಂದಲೂ ಮಾಹಿತಿಯನ್ನು ಸಾಧ್ಯವಾದ ಮಟ್ಟಿಗೆ ಒದಗಿಸುತ್ತಾ ಬಂದುದು ಬಹುಶಃ ತಪ್ಪು ಕಲ್ಪನೆಗೆ ಅವಕಾಶ ಆಗಿರಬೇಕು. ಪಾರದರ್ಶಕತೆಯ ದೃಷ್ಟಿಯಿಂದ ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತದವರು ಈ ರೀತಿ ವರ್ತಿಸಿದ್ದೇ ಹೊರತು ಮಾಹಿತಿ ಹಕ್ಕು ಕಾಯಿದೆಯು ತಮಗೆ ಲಗಾವಾಗುವುದೆಂಬ ಕಾರಣದಿಂದಲ್ಲ. ನಮ್ಮ ಕಂಪೆನಿಯು ಈ ಕುರಿತಾಗಿ ನುರಿತ ವಕೀಲರಿಂದ ಕಾನೂನಿನ ಅಭಿಪ್ರಾಯವನ್ನು ಪಡೆದಿತ್ತು. ಅದರ ಒಂದು ಪ್ರತಿಯನ್ನು ತಮ್ಮ ಅವಗಾಹನೆಗೆ ಈ ಉದಾಹರಣೆಯ ಜೊತೆಗೆ ಲಗತ್ತಿಸಿದ್ದೇವೆ.&lt;br /&gt;ನನ್ನ ವಿವರಣೆ: ಪಾರದರ್ಶಕತೆಯ ದೃಷ್ಟಿಯಿಂದ ಈ ಮೊದಲು ಮಾಹಿತಿಗಳನ್ನು ಒದಗಿಸಲಾಗಿತ್ತಷ್ಟೆ. ಅದೇ ಉದಾತ್ತ ಧ್ಯೇಯವನ್ನು ಮುಂದುವರಿಸಿಕೊಂಡು ಹೋಗಿದ್ದರೆ, ಕಂಪೆನಿಯ ಬಗ್ಗೆ ಜನಸಾಮಾನ್ಯರಿಗೆ ಗೌರವ-ವಿಶ್ವಾಸಗಳು ಹೆಚ್ಚುತ್ತಿದ್ದವು. ಪ್ರಾರಂಭಿಸಿದ್ದ ಒಂದು ಸತ್ಸಂಪ್ರದಾಯವನ್ನು ಮಧ್ಯದಲ್ಲಿಯೇ ನಿಲ್ಲಿಸಿಬಿಟ್ಟದ್ದರಿಂದ ಕಂಪೆನಿಯ ವ್ಯವಹಾರಗಳಲ್ಲಿ ಮುಚ್ಚಿಟ್ಟುಕೊಳ್ಳುವಂಥದ್ದು ಏನೋ ಇದೆ ಎಂಬ ಅನುಮಾನ ಜನಸಾಮಾನ್ಯರಿಗೆ ಬರುವಂತಾಯಿತು.&lt;br /&gt;ವಕೀಲರು ನೀಡಿರುವ ಕಾನೂನು ಅಭಿಪ್ರಾಯದ ಕುರಿತು ಮುಂದೆ ಪ್ರತಿಕ್ರಿಯೆ ನೀಡಿದ್ದೇನೆ.&lt;br /&gt;ಕಂಪೆನಿಯ ಹೇಳಿಕೆ ೩: ಮಾಹಿತಿಯನ್ನು ಕೋರುವವರು ಅದನ್ನು ಪಡೆಯಲು ಯಾವುದಾದರೂ ಸರಿಯಾದ ಕಾರಣ ಬೇಕು. ಈ ಪ್ರಕರಣವನ್ನು ದಯವಿಟ್ಟು ಗಮನಿಸಿರಿ. ೬-೧೦-೨೦೦೯ರ ಉದಯವಾಣಿ ಪತ್ರಿಕೆಯಲ್ಲಿ ಬಂದ ಜಾಹೀರಾತಿಗೆ ಮತ್ತು ಅರ್ಜಿದಾರರಿಗೆ ಯಾವ ಸಂಬಂಧವೂ ಇಲ್ಲ. ಆ ಜಾಹೀರಾತು ಆರ್ಥಿಕ ವಲಯದ ಪ್ರಗತಿಗೆ ಸಂಬಂಧಿಸಿತ್ತು. ಅದರ ಒಂದು ಜೆರೋಕ್ಸ್ ಪ್ರತಿಯನ್ನು ಲಗತ್ತಿಸಿದ್ದೇವೆ. ಆದರೂ ಅವರು ಬರೆದ ಪತ್ರಕ್ಕೆ ನಾವು ಮಾಹಿತಿಯನ್ನು ನಮ್ಮ ಪತ್ರ ದಿನಾಂಕ ೧೪-೧೨-೨೦೦೯ರ ಪ್ರಕಾರ ಒದಗಿಸಿದೆವು.&lt;br /&gt;ನನ್ನ ವಿವರಣೆ: ಮಾಹಿತಿ ಹಕ್ಕು ಕಾಯಿದೆಯಲ್ಲಿ ಮಾಹಿತಿ ಕೇಳಲು ಯಾವುದೇ ಕಾರಣ ನೀಡಬೇಕಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.&lt;br /&gt;ಕಾರಣ ನೀಡುವುದು ಬೇರೆ, ಕಾರಣ ಇರುವುದು ಬೇರೆ ಎಂದೇ ತಿಳಿಯೋಣ. ಕಂಪೆನಿ ಪತ್ರಿಕೆಯಲ್ಲಿ ಜಾಹೀರಾತು ನೀಡಿರುವುದು ಅದನ್ನು ಸಾರ್ವಜನಿಕರು ಓದಬೇಕೆಂಬ ಉದ್ದೇಶದಿಂದ. ಪ್ರಜಾಪ್ರಭುತ್ವ ಇರುವ ದೇಶದ ಒಬ್ಬ ಪ್ರಜೆಯಾಗಿ, ದೇಶದ ಆರ್ಥಿಕ ವಲಯದ ಪ್ರಗತಿಯು ನನಗೆ ಖಂಡಿತವಾಗಿಯೂ ಸಂಬಂಧಪಡುತ್ತದೆ. ಅದೇ ಕಾರಣಕ್ಕೆ ಈ ಜಾಹೀರಾತು ಸಹ ನನಗೆ ಸಂಬಂಧಪಡುತ್ತದೆ.&lt;br /&gt;ಈ ಜಾಹೀರಾತಿನ ಆಧಾರದಲ್ಲಿ ನಾನು ಕೇಳಿರುವ ಮಾಹಿತಿಯು ಬಂಟ್ವಾಳ ಮತ್ತು ಮಂಗಳೂರಿನ ಜನರ ಕುಡಿಯುವ ನೀರಿಗೆ ಸಂಬಂಧಪಟ್ಟಿದೆ. ಕಂಪೆನಿಯು ನೀಡಿದ ಮಾಹಿತಿಯನ್ನು ವಿಶ್ಲೇಷಿಸಿ, ನಾನು ನನ್ನ ಬ್ಲಾಗಿನಲ್ಲಿ ಲೇಖನವನ್ನೂ ಪ್ರಕಟಿಸಿದ್ದೇನೆ. ಈ ಕುರಿತು ಒಂದು ವಿಚಾರಸಂಕಿರಣ ನಡೆಸಲು ಕೋರಿ ಮಂಗಳೂರಿನ ಮೇಯರ್ ರವರಿಗೆ ಒಂದು ಪತ್ರವನ್ನೂ ಬರೆದಿದ್ದೇನೆ. ವಾಸ್ತವವಾಗಿ ಇದೊಂದು ಸಾರ್ವಜನಿಕ ಹಿತಾಸಕ್ತಿಯ ವಿಷಯ. ಬಂಟ್ವಾಳ ಹಾಗೂ ಮಂಗಳೂರಿನ, ನೇತ್ರಾವತಿ ನದಿ ನೀರನ್ನು ಕುಡಿಯುವ ಎಲ್ಲ ಜನರಿಗೂ ನೇರವಾಗಿ ಸಂಬಂಧಪಡುವ ವಿಷಯ. ಆ ಎಲ್ಲರೂ ಈ ವಿಷಯದಲ್ಲಿ ಆಸಕ್ತಿ ತಳೆಯಬೇಕಾದ ಅಗತ್ಯವಿದೆ. ಬಂಟ್ವಾಳದಲ್ಲಿ ವಾಸಿಸುವ ನನಗೆ ಇದು ಖಂಡಿತವಾಗಿಯೂ ನೇರವಾಗಿ ಸಂಬಂಧಪಡುತ್ತದೆ.&lt;br /&gt;ಇನ್ನೊಂದು ವಿಷಯ: ಯಾವುದೇ ಜಾಹೀರಾತು ಜನರನ್ನು ತಪ್ಪುದಾರಿಗೆ ಎಳೆಯುವಂತಿರಬಾರದು, ಅವರಿಗೆ ತಪ್ಪು ಮಾಹಿತಿಗಳನ್ನು ನೀಡಬಾರದು. ಯಾವುದಾದರೂ ಜಾಹೀರಾತು ಹೀಗೆ ಮಾಡಿದರೆ, ಅಂಥ ಜಾಹೀರಾತುಗಳ ಕುರಿತು Advertising Standarads Council of India ಎಂಬ ಸಂಸ್ಥೆಗೆ ಯಾರು ಬೇಕಾದರೂ ದೂರು ನೀಡಬಹುದು. ಚರ್ಚಿತ ಜಾಹೀರಾತಿನಲ್ಲಿ ಮಳೆ ನೀರು ಸಂಗ್ರಹದ ಕುರಿತಾದ ಮಾತುಗಳು ಯಾವ ಅಧ್ಯಯನವನ್ನೂ ಆಧರಿಸಿದವಲ್ಲ ಎಂಬುದನ್ನು ಕಂಪೆನಿಯೇ ಒಪ್ಪಿಕೊಂಡಿದೆ. ಇವು ಮಳೆ ನೀರು ಸಂಗ್ರಹದ ಹೆಸರಿನಲ್ಲಿ, ಜನಸಾಮಾನ್ಯರಲ್ಲಿ ಕಂಪೆನಿಯ ಕುರಿತು ಸದ್ಬಾವನೆ ಮೂಡಿಸುವ ಬೇರೆಯೇ ಉದ್ದೇಶ ಹೊಂದಿದಂತೆ ಭಾಸವಾಗುತ್ತದೆ. ಇದು ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಲ್ಲವೆ?&lt;br /&gt;ಈ ಮುಂದಿನ ಕಂಪೆನಿಯ ಹೇಳಿಕೆಗಳಿಗೆ ನನ್ನ ಪ್ರತಿಕ್ರಿಯೆ ಏನೂ ಇಲ್ಲ&lt;br /&gt;೪. ಅರ್ಜಿದಾರರ ಪತ್ರದಲ್ಲಿ ೨ನೇ ಪ್ರಶ್ನೆ ಹೀಗಿತ್ತು: ಗುರುಪುರ ಮತ್ತು ನೇತ್ರಾವತಿಯಲ್ಲಿ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದೆ? ಹೀಗೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ನೀಡಿರುವ ಅನುಮತಿಯ (ಲೈಸೆನ್ಸ್) ಯಥಾಪ್ರತಿ.&lt;br /&gt;೫. ಇದಕ್ಕೆ ನಾವು ಕೊಟ್ಟ ಉತ್ತರ ಹೀಗಿತ್ತು. ಈಗಾಗಲೇ ನೇತ್ರಾವತಿ ನದಿಯಿಂದ ನೀರಿನ್ ಪೂರೈಕೆಗಾಗಿ ಎ.ಎಂ.ಆರ್. ಪವರ್ ಪ್ರೋಜೆಕ್ಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯ ಜಲ ಸಂಪನ್ಮೂಲ ವಿಭಾಗದಿಂದ ೨೦೦೭ರಲ್ಲಿ ಅನುಮತಿ ದೊರಕಿದ್ದು ಅದರ ಪ್ರತಿ ಲಗತ್ತಿಸಿದೆ&lt;br /&gt;೬. ನಮ್ಮ ಬಳಿ ಇದ್ದು ಸರಕಾರದ ವತಿಯಿಂದ ದೊರಕಿದ ಅನುಮತಿಯನ್ನು ನಾವು ಅರ್ಜಿದಾರರಿಗೆ ಒದಗಿಸಿದ್ದೆವು. ಆದರೆ, ಎ ಎಂ ಆರ್ ಕಂಪೆನಿಯ ಜೊತೆ ಮಾಡಿದ ಒಪ್ಪಂದವು ಸಾರ್ವಜನಿಕರಿಗೆ ಅದರಲ್ಲೂ ಏನೂ ಸಂಬಂಧವಿಲ್ಲದ ಅರ್ಜಿದಾರರಿಗೆ ಒದಗಿಸುವ ಅಗತ್ಯ ಇಲ್ಲದ್ದರಿಂದ ಮತ್ತು ಆ ದಾಖಲೆಯು ಇನ್ನೊಬ್ಬ ವ್ಯಕ್ತಿಯು ನಮ್ಮ ಬಳಿ ಮಾಡಿದ ಒಪ್ಪಂದಕ್ಕೆ ಸಂಬಂಧಿಸಿದ್ದರಿಂದ ಅದರ ಪ್ರತಿಯನ್ನು ನಾವು ಕೊಡಲಿಲ್ಲ. ದಿನಾಂಕ ೧೮-೦೧-೨೦೧೦ರಂದು ಅರ್ಜಿದಾರರಿಗೆ ಉತ್ತರವನ್ನು ನೀಡಿದ್ದೇವೆ. ಇದು ನಮ್ಮ ಪ್ರಕಾರ ಸರಿಯಾದ ಕ್ರಮವೆಂದು ತಿಳಿಯುತ್ತೇವೆ.&lt;br /&gt;೭. ಈಗಲೂ ಸಹ ಇದೇ ಮೇಲೆ ಬರೆದ ಕಾರಣಕ್ಕಾಗಿ ದಯವಿಟ್ಟು ಅರ್ಜಿಯನ್ನು ವಜಾ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ. ಮಾಹಿತಿ ಹಕ್ಕು ಕಾಯಿದೆಯ ಕಲಂ ೮(ಡಿ) ಮತ್ತು (ಇ) ಎಂಬ್ ಉಪಕಲಂಗಳ ಪ್ರಕಾರ ಸದ್ರಿ ದಾಖಲೆಯನ್ನು (ಮಾಹಿತಿಯನ್ನು) ನೀಡುವುದು ಕಡ್ಡಾಯವಲ್ಲ.&lt;br /&gt;ಮೇಲೆ ಬರೆದ ವಿವರವಾದ ಉತ್ತರವನ್ನು ಪರಿಗಣಿಸಿ ಅರ್ಜಿಯನ್ನು ವಜಾ ಮಾಡಬೇಕಾಗಿ ಪ್ರಾರ್ಥಿಸುತ್ತೇವೆ.&lt;br /&gt;***********************&lt;br /&gt;ಈ ಮುಂದಿನದು ವಕೀಲರ ಅಭಿಪ್ರಾಯ:&lt;br /&gt;M.V. Shanker Bhat, B.A.B.L.,&lt;br /&gt;Advocate&lt;br /&gt;H-3, II Floor, Ramabhavan Complex&lt;br /&gt;Kodialbail, Mangalore.&lt;br /&gt;ED&amp;amp; COO&lt;br /&gt;Mangalore SEZ Ltd.&lt;br /&gt;Muda Building&lt;br /&gt;Urva Stores, Managalore-575006&lt;br /&gt;Sir,&lt;br /&gt;Sub: Opinion on query regarding applicability of Right to Information Act.&lt;br /&gt;Ref: Your company's memorandum, Articles and certificate of incorportion dtd. 24-2-2006&lt;br /&gt;1. The Memorandum dtd. 18-2-2006 as amended up to 18-7-08 relating to Mangalore SEZ Ltd shows that it is a public company limited by shares. It has authorised share capital of One Hundred Crores of Rs. 10/- value per share. Memorandum of Association of the company has been subscribed by ONGC representing MRPL, KIADB, Kanara Chamber of Commerce, and four individuals. In all 76200 shares were subscribed by them. KIADB has subscribed only 5000 shares. MRPL has subscribed 50000 shares. Chamber of Commerce has subscribed 20000 shares. Rest by the four individuals.&lt;br /&gt;2. On the above facts the question is whether your company is Public Authority as defined in Sec.2(h) of the RTI Act. 2005.&lt;br /&gt;3. Your company is not established by or under Constitution, or by law made by Parliament or State Legislature. Your company has not been notified as Public Authority by State or Central Government. Your company is not financed by State or Central Government either directly or indirectly. Even if participation of KIADB, which is an independent Board, is considered as indirect financing by State Government, its holding is very small compared to what has been subscribed as per Menorandum of Association. Therefore it would not be 'substantially financed by State Government'.&lt;br /&gt;4. From the above analysis of facts with reference to the definition found in the Act, I am of the considered opinion that your company will not be covered by the RTI Act, 2005&lt;br /&gt;Yours faithfully&lt;br /&gt;(Sd)&lt;br /&gt;ಕಂಪೆನಿಯು ನೀಡಿದ ಮಾಹಿತಿಯನ್ನು ಆಧರಿಸಿ ವಕೀಲರು ನೀಡಿರುವ ಮೇಲಿನ ಅಭಿಪ್ರಾಯ ಖಂಡಿತವಾಗಿಯೂ ಸರಿಯಾಗಿದೆ. ದುರದೃಷ್ಟವಶಾತ್ ಕಂಪೆನಿಯು ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ವಕೀಲರ ಗಮನಕ್ಕೆ ತಂದಿಲ್ಲ. ತನ್ನ ಕಕ್ಷಿದಾರನು ತನ್ನಿಂದ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಚ್ಚಿಡುತ್ತಿದ್ದಾನೆ ಎಂಬ ಅನುಮಾನ ಬಂದರೆ - ಅದರಲ್ಲೂ ಪ್ರಕರಣವು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದ್ದಾಗ - ಆ ಅನುಮಾನವನ್ನು ಪರಿಹರಿಸಿಕೊಳ್ಳುವುದು ವಕೀಲರ ಕರ್ತವ್ಯದ ಒಂದು ಭಾಗ ಎಂದು ನಾನು ಭಾವಿಸಿದ್ದೇನೆ. ಆ ಅಭಿಪ್ರಾಯ ತಪ್ಪೆ?&lt;br /&gt;ಕಂಪೆನಿಯು ವಕೀಲರ ಗಮನಕ್ಕೆ ತಾರದ ಮಾಹಿತಿಗಳು ಈ ಕೆಳಗಿನಂತಿವೆ:&lt;br /&gt;೧, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಬಗೆಯ ತೆರಿಗೆ ರಿಯಾಯತಿಗಳನ್ನು ವಿಶೇಷ ಆರ್ಥಿಕ ವಲಯಕ್ಕೆ ನೀಡಿವೆ. ಈ ರಿಯಾಯತಿಗಳು ಪ್ರಸ್ತುತ ಕಂಪೆನಿಗೂ ಅನ್ವಯವಾಗುತ್ತವೆ. ಈ ರಿಯಾಯತಿಗಳನ್ನು ನೀಡಲು ಬೇಕಾಗಿ ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಆದಾಯತೆರಿಗೆ ಮತ್ತಿತರ ಕೆಲವು ಕಾನೂನುಗಳಿಗೇ ತಿದ್ದುಪಡಿ ಮಾಡಲಾಗಿದೆ.&lt;br /&gt;೨. ವಿಶೇಷ ಆರ್ಥಿಕ ವಲಯಕ್ಕೆ ಬೇಕಾದ ಒಟ್ಟು ಭೂಮಿ ಸುಮಾರು ೪೦೦೦ ಎಕರೆಗಳು. ಈ ಪೈಕಿ ಸುಮಾರು ೨೦೦೦ ಎಕ್ರೆಯಷ್ಟು ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ರೈತರ ತೀವ್ರ ವಿರೋಧದ ನಡುವೆಯೂ, ಜಮೀನನ್ನು ಸ್ವಾಧೀನಪಡಿಸಿಕೊಂಡು ಕಂಪೆನಿಗೆ ಹಸ್ತಾಂತರಿಸುವಲ್ಲಿ ಕರ್ನಾಟಕ ರಾಜ್ಯ ಸರಕಾರವು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.&lt;br /&gt;೩. ಕಂಪೆನಿಗೆ ಪ್ರತಿದಿನ ೬.೭೫ ಕೋಟಿ ಲೀಟರು ನೀರನ್ನು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಎತ್ತಲು ರಾಜ್ಯ ಸರಕಾರವು ಅನುಮತಿ ನೀಡಿದೆ. ಈ ನೀರಿನ ದರ ೪೫ ಲಕ್ಷ ಲೀಟರಿಗೆ ರೂ. ೨೮೮-೯೦. (ಸ್ಥಳೀಯಾಡಳಿತ ಸಂಸ್ಥೆಗಳು ಜನಸಾಮಾನ್ಯರಿಗೆ ಸರಬರಾಜು ಮಾಡುವ ಕುಡಿಯುವ ನೀರಿನ ದರ ೧೦೦೦ ಲೀಟರಿಗೆ ೨-೦೦ ರೂಪಾಯಿ.)&lt;br /&gt;೪. ಕಂಪೆನಿಗೆ ಅಗತ್ಯವಿರುವಷ್ಟು ಪ್ರಮಾಣದ ವಿದ್ಯುತ್ತನ್ನು ಸರಬರಾಜು ಮಾಡಲು ಸಹ ಕರ್ನಾಟಕ ಸರಕಾರವು ಒಪ್ಪಿಕೊಂಡಿದೆ.&lt;br /&gt;೫. ಮಂಗಳೂರು ಮಹಾನಗರ ಪಾಲಿಕೆಯು ಗಲೀಜು ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡುವ ಬಗ್ಗೆ ಎಂ ಎಸ್ ಇ. ಝಡ್ ಕಂಪೆನಿಯೊಂದಿಗೆ ಮೂವತ್ತು ವರ್ಷಗಳ ದೀರ್ಘಾವಧಿಗೆ ಅನ್ವಯಿಸುವ (೩೦:೭೦ ಅನುಪಾತ) ಒಂದು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಕರ್ನಾಟಕ ಸರ್ಕಾರವು ಕಂಪೆನಿಯ ಆಗುಹೋಗುಗಳಲ್ಲಿ ಗಣನೀಯ ಪಾತ್ರ ವಹಿಸಿರುವುದರ ದ್ಯೋತಕವಾಗಿದೆ.&lt;br /&gt;ಈ ಮೇಲಿನ ಅಂಶಗಳನ್ನು ಪರಿಗಣಿಸಿದರೆ ಕಂಪೆನಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಪಾಲು "ಗಣನೀಯ"ವಾಗಿಯೇ ಇದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಮಂಗಳೂರು ಎಸ್ ಇ ಝಡ್ ಕಂಪೆನಿಯನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡುವುದು ನ್ಯಾಯವಲ್ಲ.&lt;br /&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-6569349127970344480?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/6569349127970344480/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=6569349127970344480&amp;isPopup=true' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/6569349127970344480'/><link rel='self' type='application/atom+xml' href='http://www.blogger.com/feeds/1105138094084974837/posts/default/6569349127970344480'/><link rel='alternate' type='text/html' href='http://sundararao.blogspot.com/2010/06/blog-post.html' title='ನಿಮ್ಮ ಕಾನೂನು ನಿಮಗಿರಲಿ; ನೀರು, ಭೂಮಿ ನಮಗಿರಲಿ!'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>5</thr:total></entry><entry><id>tag:blogger.com,1999:blog-1105138094084974837.post-4280877679651704908</id><published>2010-05-17T06:59:00.000-07:00</published><updated>2010-05-17T07:01:21.339-07:00</updated><title type='text'>ಮರಗಳ ಸಂರಕ್ಷಣೆಯ ಕಾನೂನು ಜಾರಿಗೆ ಕೊಡುವ ಪರಿ.......</title><content type='html'>&lt;div align="justify"&gt;&lt;br /&gt;ಎಪ್ರಿಲ್ ೮ರಂದು "ಅರಣ್ಯ ಇಲಾಖೆ ಅಧಿಕಾರಿಗಳ ಉತ್ತರ ಬಂತು, ಆದರೆ....." ಎಂಬ ಲೇಖನ ಬರೆದಿದ್ದೆ. ಇದು ಪ್ರಕರಣ ಮುಂದುವರಿದ ಬಗೆ:&lt;br /&gt;.&lt;br /&gt;ನನ್ನ ಪತ್ರಕ್ಕೆ ಮಂಗಳೂರಿನ ಉ.ಅ.ಸಂ. ಯವರು ಉತ್ತರ ಬರೆಯಲಿಲ್ಲ. ನೆನಪೋಲೆ ಬರೆದೆ. ಪ್ರಯೋಜನವಾಗಲಿಲ್ಲ. "ಉತ್ತರ ಬರೆಯದಿದ್ದರೆ ನಿಮ್ಮ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವುದು ಅನಿವಾರ್ಯವಾಗುತ್ತದೆ" ಎಂಬ ಎಚ್ಚರಿಕೆ ರವಾನಿಸಿದೆ. ಆದರೂ ಉತ್ತರ ಬರಲಿಲ್ಲ. ಮಂಗಳೂರಿನ ಮಹಾನಗರಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿ ಕಛೇರಿ ಇರುವ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಎಲ್ಲಾ ದಾಖಲೆಗಳ ಸಮೇತ ಒಂದು ದೂರು ನೀಡಿ ಯಥಾಪ್ರತಿಯನ್ನು ಉ.ಅ.ಸಂ.ಯವರಿಗೆ ಕಳಿಸಿದೆ. ಇಷ್ಟು ಹಟ ಮಾಡಿದ ಮೇಲೆ ಮೊನ್ನೆ ೧೩-೫-೨೦೧೦ರಂದು ಉ.ಅ.ಸಂ. ಒಂದು ಉತ್ತರ ಬರೆದಿದ್ದಾರೆ. ನಾನು ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಬರೆದ ಪತ್ರದ ಪರಿಣಾಮ ಈ ಪತ್ರವೋ ಎಂದು ತಿಳಿಯುವಂತಿಲ್ಲ. ಹೇಗಾದರೂ ಇರಲಿ, ಅವರ ಉತ್ತರ ಓದಿ ನೋಡಿ:&lt;br /&gt;"...... -ದ.ಕ.ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ- ಎಂಬ ಕುರಿತು ಮೊದಲನೆಯದಾಗಿ ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ತಾವು ಇಟ್ಟುಕೊಂಡಿರುವ ತಮ್ಮ ಕಾಳಜಿಗೆ ಅಭಿನಂದನೆಗಳು. ದ.ಕ.ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.&lt;br /&gt;೧. ಮರಗಳ ರಕ್ಷಣೆಯ ಬಗ್ಗೆ "ಕಾಡು ಉಳಿಸಿ ನಾಡು ಬೆಳೆಸಿ" ಎಂಬ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.&lt;br /&gt;೨. ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ.&lt;br /&gt;೩. "ವೃಕ್ಷಲಕ್ಷ" ಕಾರ್ಯಕ್ರಮದಡಿಯಲ್ಲಿ ಹಲವು ಕಡೆಗಳಲ್ಲಿ ಕಾರ್ಯಾಗಾರ, ಗಿಡ ನೆಡುವ ಕಾರ್ಯಕ್ರಮ, ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ&lt;br /&gt;೪. ಮರಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಜನರನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಗ್ರಾಮ ಅರಣ್ಯ ಸಮಿತಿಗಳನ್ನು ರಚನೆ ಮಾಡಲಾಗಿದೆ.&lt;br /&gt;೫. ಈ ವಿಭಾಗದಲ್ಲಿ ಕಾರ್ಯಕಾರಿ ಸಿಬ್ಬಂದಿ ಕೊರತೆ ಇದ್ದರೂ, ಅರಣ್ಯ ಅಪರಾಧಗಳನ್ನು ತಡೆಗಟ್ಟುವರೇ ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ.&lt;br /&gt;ಈ ಮೇಲಿನಂತಹ ಹಲವಾರು "ಜಾಗೃತಿ" ಕ್ರಮಗಳನ್ನು ಜನರಲ್ಲಿ ಮೂಡಿಸಿದ್ದರೂ, ಆಗಾಗ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದು ಸಾಗಿಸುವುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಾಗೂ ತಮ್ಮ ಪತ್ರದಲ್ಲಿ ತಿಳಿಸಿದಂತೆ ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.&lt;br /&gt;ಇನ್ನು ಮುಂದೆ ಮರಗಳ ರಕ್ಷಣೆಯ ಬಗ್ಗೆ ಇರುವ ಕಾಯ್ದೆ, ಕಾನೂನುಗಳನ್ನು ಸಾರ್ವಜನಿಕರಿಗೆ ತಿಳಿಸುವ ಬಗ್ಗೆ ಕಾರ್ಯಗಾರಗಳನ್ನು ಏರ್ಪಡಿಸಿದಾಗ ಸದ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವನ್ನು ತಮಗೂ ಕೂಡ ಮಾಡಲಾಗುವುದು ಎಂಬ ವಿಷಯವನ್ನು ತಮ್ಮ ಮಾಹಿತಿಗೆ ನೀಡಲಾಗಿದೆ"&lt;br /&gt;ಪತ್ರಕ್ಕೆ ಕೂಡಲೇ ಹೀಗೆ ಉತ್ತರಿಸಿದ್ದೇನೆ:&lt;br /&gt;ಮರಗಳ ರಕ್ಷಣೆಯ ಕಾನೂನನ್ನು ಜಾರಿಗೆ ಕೊಡುವ ಬಗ್ಗೆ ನೀವು ತೆಗೆದುಕೊಂಡಿರುವ ಹಾಗೂ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ತಿಳಿದು ತುಂಬಾ ಸಂತೋಷವಾಯಿತು. ಅರಣ್ಯ ಸಂರಕ್ಷಣೆಗೆ ನೀವು ನೀಡುತ್ತಿರುವ ಮಹತ್ವವು ಅಭಿನಂದನಾರ್ಹವಾಗಿದೆ.&lt;br /&gt;೧. "ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ" ಎಂದು ನಿಮ್ಮ ಪತ್ರದಲ್ಲಿ ಹೇಳಿದ್ದೀರಿ. ೨೦೦೫-೨೦೦೬ರಲ್ಲಿ ಬಂಟ್ವಾಳ ಅರಣ್ಯವಲಯಕ್ಕೆ ಸಂಬಂಧಪಟ್ಟ ಬಿ. ಮೂಡ ಗ್ರಾಮದಲ್ಲಿ ನೀವು ಹೇಳುವ ಯಾವುದಾದರೂ ಕಾರ್ಯಕ್ರಮದಡಿಯಲ್ಲಿ ಸಸಿಗಳನ್ನು ನೆಡಲಾಗಿತ್ತೆ? ಎಲ್ಲಿ, ಎಷ್ಟು ಸಸಿಗಳನ್ನು ನೆಡಲಾಗಿತ್ತು, ಯಾವ ಜಾತಿಗೆ ಸೇರಿದ ಸಸಿಗಳು ಎಂಬುದರ ಪೂರ್ಣ ವಿವರವನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.&lt;br /&gt;೨. ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ಅರಣ್ಯ ಸಮಿತಿಯು ಅಸ್ತಿತ್ವದಲ್ಲಿದೆಯೆ? ಇದ್ದರೆ ಅದರ ವಿಳಾಸ, ಸದಸ್ಯರ ಹೆಸರು ಇತ್ಯಾದಿ ವಿವರಗಳನ್ನೂ, ಒಂದು ವೇಳೆ ಇಲ್ಲದಿದ್ದರೆ, ಬಿ.ಮೂಡ ಗ್ರಾಮವು ಯಾವ ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನೂ ಅದರ ವಿಳಾಸ ಇತ್ಯಾದಿ ವಿವರಗಳನ್ನೂ ನನಗೆ ನೀಡಬೇಕಾಗಿ ಕೋರುತ್ತೇನೆ.&lt;br /&gt;೩. " ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ." ಎಂದು ನೀವು ಹೇಳಿದ್ದೀರಿ. ದಿನಾಂಕ ೧೬-೩-೨೦೧೦ರ ನನ್ನ ಪತ್ರದಲ್ಲಿ ನಾನು ಪ್ರಸ್ತಾವಿಸಿರುವ ಮರಗಳ ನಾಶವನ್ನು ಕಂಡುಕೊಳ್ಳಲು ಹಗಲು ರಾತ್ರಿ ಗಸ್ತು ತಿರುಗುವ ಅವಶ್ಯಕತೆಯೇ ಇಲ್ಲ. ಈ ರೀತಿಯಲ್ಲಿ ಆಗುತ್ತಿರುವ ಮರಗಳ ನಾಶವು ಹಾಡುಹಗಲೇ, ಎಲ್ಲರ ಎದುರಿನಲ್ಲೇ, ಸಾಕಷ್ಟು ದೂರಕ್ಕೆ ಕೇಳುವಂತೆ ಶಬ್ದ ಮಾಡುವ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಆಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಿ ತಿರುಗಿದರೂ ನೀವು ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ಕಾಣಬಹುದು. ಜಿಲ್ಲೆಯ ನಗರ ಪ್ರದೇಶಗಳೂ ಸೇರಿದಂತೆ ಎಲ್ಲ ಕಡೆಯೂ ಸಹ, ಈ ರೀತಿಯಲ್ಲಿ ಮರಗಳನ್ನು ಬುಡಸಮೇತ ಉರುಳಿಸುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಎಷ್ಟೋ ಸಂದರ್ಭಗಳಲ್ಲಿ ಇದನ್ನು ಕಂಡುಕೊಳ್ಳಲು ನೀವು ನಿಮ್ಮ ವಾಹನದಿಂದ ಕೆಳಗೆ ಇಳಿಯಬೇಕಾಗಿಯೂ ಇಲ್ಲ. ನೀವು ಕುಳಿತಲ್ಲಿಗೇ ಕಾಣುವಷ್ಟು ಸ್ಪಷ್ಟವಾಗಿ ಈ ನಾಶಕ್ರಿಯೆ ನಡೆಯುತ್ತಿದೆ. ಯಾವುದಾದರೊಂದು ಗುಡ್ಡದ ನೆತ್ತಿಗೆ ಹೋಗಿ ನಿಂತು ನೋಡಿದರೆ, ಭೂಭಾಗವು ಅಲ್ಲಲ್ಲಿ ಕೆಂಪಾಗಿರುವುದನ್ನು ನೀವು ಕಾಣಬಹುದು. ಹತ್ತಿರ ಹೋಗಿ ನೋಡಿದರೆ, ಉರುಳಿಸಿದ ಮರಗಳು ಅಥವಾ ಅವುಗಳ ಅವಶೇಷಗಳು ಅಲ್ಲಿಯೇ ಬಿದ್ದಿರುವುದನ್ನೂ ಕಾಣುವ ಸಾಧ್ಯತೆ ಇದೆ.&lt;br /&gt;ಆದ್ದರಿಂದ ಯಂತ್ರಗಳನ್ನು ಬಳಸಿ ಆಗುತ್ತಿರುವ ಮರಗಳ ನಾಶವನ್ನು ತಡೆಹಿಡಿಯುವ ನಿಟ್ಟಿನಲ್ಲಿ ನೀವು ಮರಗಳ ರಕ್ಷಣೆಯ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡಬೇಕಾಗಿ ನಿಮ್ಮನ್ನು ಮತ್ತೊಮ್ಮೆ ಕೋರುತ್ತೇನೆ.&lt;br /&gt;"ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ" ಎಂದು ನೀವು ಹೇಳಿದ್ದೀರಿ. ಆ ಪತ್ರದ ಒಂದು ಪ್ರತಿಯನ್ನು ನನಗೂ ಕಳುಹಿಸಿಕೊಡಬೇಕಾಗಿ ಕೋರುತ್ತೇನೆ.&lt;br /&gt;ಈ ಪತ್ರಕ್ಕೆ ಇನ್ನು ಹದಿನೈದು ದಿನಗಳಲ್ಲಿ ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ."&lt;br /&gt;ಈ ಪ್ರಕರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. ಬ್ಲಾಗಿನಲ್ಲಿ ಪ್ರತಿಕ್ರಿಯೆ ಪ್ರಕಟಿಸುವುದು ಬೇಡ ಎಂದಿದ್ದರೆ, ಇ-ಮೇಲ್ ವಿಳಾಸಕ್ಕೆ ಪ್ರತಿಕ್ರಿಯೆ ಕಳಿಸಿ. (nesara.mudrana@gmail.com) ನನ್ನನ್ನು ಟೀಕಿಸಲು ಯಾವ ಮುಲಾಜೂ, ದಾಕ್ಷಿಣ್ಯವೂ ಬೇಡ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-4280877679651704908?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/4280877679651704908/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=4280877679651704908&amp;isPopup=true' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/4280877679651704908'/><link rel='self' type='application/atom+xml' href='http://www.blogger.com/feeds/1105138094084974837/posts/default/4280877679651704908'/><link rel='alternate' type='text/html' href='http://sundararao.blogspot.com/2010/05/blog-post.html' title='ಮರಗಳ ಸಂರಕ್ಷಣೆಯ ಕಾನೂನು ಜಾರಿಗೆ ಕೊಡುವ ಪರಿ.......'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>3</thr:total></entry><entry><id>tag:blogger.com,1999:blog-1105138094084974837.post-9115082659891818838</id><published>2010-04-22T10:53:00.000-07:00</published><updated>2010-04-22T10:54:10.254-07:00</updated><title type='text'>ತನ್ನ ಶಕ್ತಿ ಗೊತ್ತಿರಲಿಲ್ಲವಂತೆ ಹನುಮಂತನಿಗೆ!</title><content type='html'>ಬಂಟ್ವಾಳ ತಾಲೂಕಿನ ಮಂಚಿ ಬಿ.ವಿ. ಕಾರಂತರ ಹುಟ್ಟೂರು. ಈ ತಿಂಗಳ ೯,೧೦,೧೧ರಂದು ಅಲ್ಲಿ ಅವರ ನೆನಪಿಗಾಗಿ ಅವರ ಅಭಿಮಾನಿಗಳೆಲ್ಲ ಸೇರಿ ಹಲವು ಕಾರ್ಯಕ್ರಮಗಳನ್ನು ನಡೆಸಿದರು. ನಾನು ಈ ಕಾರ್ಯಕ್ರಮದ ಬಗ್ಗೆ ಹೇಳಲು ಹೊರಟದ್ದಲ್ಲ. ಆ ದಿನ ಶ್ರೀಮತಿ ವೈದೇಹಿಯವರು ವ್ಯಕ್ತಪಡಿಸಿದ ಒಂದು ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಬೇಕೆನ್ನಿಸಿದ್ದರಿಂದ ಈ ಬರಹ.&lt;br /&gt;ವೈದೇಹಿಯವರು ಆ ದಿನ ಸಂಜೆಯ ತಮ್ಮ ಭಾಷಣದಲ್ಲಿ ಪ್ರಾಸಂಗಿಕವಾಗಿ ಒಂದು ಮಾತು ಹೇಳಿದರು: "ಎಂಜಿನಿಯರ್ ಎಂದರೆ ಮರಗಳನ್ನು ಕಡಿದು ರಸ್ತೆ ನಿರ್ಮಿಸುವವನಲ್ಲ. ಆ ಕೆಲಸವನ್ನು ಯಾವ ಕಂಟ್ರಾಕ್ಟರ್ ಕೂಡ ಮಾಡಬಲ್ಲ. ಎಂಜಿನಿಯರ್ ಆದವನು ಮರಗಳನ್ನು ಉಳಿಸಿಕೊಂಡೇ ರಸ್ತೆ ಮಾಡುವ ಜಾಣ್ಮೆ ಹೊಂದಿರಬೇಕು. ಈಗ ಎಲ್ಲೆಂದರಲ್ಲಿ ರಸ್ತೆ ಮಾಡಲೆಂದು ಮರ ಕಡಿಯುತ್ತಾರೆ. ಯಾರು ಇದನ್ನು ತಡೆಯುವವರು? ನಾವು ಹೇಳಲು ಸಾಧ್ಯವೆ? ನಾವು ಹೇಳಿದರೆ ಕೇಳುತ್ತಾರೆಯೆ?". ಮೊನ್ನೆ ಮೊನ್ನೆ ಒಂದು ಊಟದ ಮನೆಯಲ್ಲಿ ಸಿಕ್ಕಿದ ಅಲ್ಲಿನವರೇ ಆದ ಕಂದೂರು ಐತಾಳರೂ ವೈದೇಹಿಯವರ ಈ ಮಾತುಗಳನ್ನು ತುಂಬ ಮೆಚ್ಚಿಕೊಳ್ಳುತ್ತಾ. "ನಾವು ಹೇಳಿದರೆ ಆದೀತ? ನಮಗೆ ಏನು ಶಕ್ತಿ ಇದೆ?" ಎಂದರು. ನಾನು ಸುಮ್ಮನಿದ್ದೆ.&lt;br /&gt;**********&lt;br /&gt;ಹನುಮಂತನಿಗೆ ತನ್ನ ಶಕ್ತಿ ಗೊತ್ತಿರಲಿಲ್ಲವಂತೆ. ಅದೇ ಅವನ ಸಮಸ್ಯೆ.&lt;br /&gt;**********&lt;br /&gt;ನಾನು ಮಂಗಳೂರಿಗೆ ಹೋಗುವುದು ಅಪರೂಪ. ಕಳೆದ ವರ್ಷದ ಪ್ರಾರಂಭದಲ್ಲಿ ಯಾತಕ್ಕೋ ಹೋಗಿದ್ದೆ. ಕಾರ್ನಾಡು ಸದಾಶಿವರಾವ್ ರಸ್ತೆಯಲ್ಲಿ ನಡೆದು ಹೋಗಬೇಕಾಯಿತು. ನೋಡಿದರೆ ಹಳತೆಲ್ಲ ಪೂರ್ತಿ ಹೋಗಿ, ಹೊಸ ವಿಶಾಲವಾದ ರಸ್ತೆ ಆಗಿದೆ. ಪೂರ್ತಿ ಕಾಂಕ್ರೀಟ್ ರಸ್ತೆ, ಬದಿಯ ಅಂಗಡಿಗಳ ಹೊಸ್ತಿಲವರೆಗೂ ಚಾಚಿಕೊಂಡಿದೆ. ಅರೆ! ಹಿಂದೆ ಹೀಗಿರಲಿಲ್ಲವಲ್ಲ ಎನಿಸಿತು. ನೆನಪು ಮಾಡಿಕೊಂಡೆ. ಹಿಂದೆ ಕಾಲ್ನಡಿಗೆಯಲ್ಲಿ ಹೋಗುವವರಿಗೆ ರಸ್ತೆಯ ಎರಡೂ ಬದಿಗಳಲ್ಲಿ ಅಂದಾಜು ಮೂರಡಿ ಅಗಲದ ಕಾಲುದಾರಿ ಇತ್ತು. ಕೆಲವು ಕಡೆ ಅದರ ಮೇಲೆ ವಾಹನಗಳು ನುಗ್ಗದಂತೆ ಪೈಪಿನ ಬೇಲಿ ಇತ್ತು. ಅದೀಗ ಕಾಣುತ್ತಿಲ್ಲ! ರಸ್ತೆಯ ತೀರ ಬದಿಯಲ್ಲಿ ವಾಹನಗಳು ಒಂದೋ ಪಾರ್ಕಿಂಗ್ ಮಾಡಿವೆ ಇಲ್ಲವೇ ಆಚೆ ಈಚೆ ಓಡುತ್ತಿವೆ. ನಡೆದು ಹೋಗುವವರ ಕತೆ ಕೈಲಾಸ! ಇದ್ದದ್ದರಲ್ಲೇ ದಾರಿ ಮಾಡಿಕೊಂಡು ಹೋಗಬೇಕು!&lt;br /&gt;ಬಿ.ಸಿ.ರೋಡಿಗೆ ಹಿಂದೆ ಬಂದವನೇ ಅಶೋಕವರ್ಧನರಿಗೆ ಫೋನಾಯಿಸಿದೆ: "ಹ್ವಾಯ್! ಕೆ.ಎಸ್. ರಾವ್ ರೋಡಿನಲ್ಲಿ ಮುಂಚೆ ಫುಟ್ ಪಾತ್ ಇರಲಿಲ್ಲವ?" ಅಂತ. ನನ್ನ ನೆನಪನ್ನು ನನಗೆ ಖಚಿತ ಮಾಡಿಕೊಳ್ಳಬೇಕಾಗಿತ್ತು. "ಇತ್ತಲ್ಲ. ಈಗ ಎಲ್ಲ ಹೋಗಿದೆ. ಅದರಿಂದಾಗಿ ಕೆಲವು ಆಕ್ಸಿಡೆಂಟ್ ಗಳೂ ಆಗಿಯಾಯಿತು" ಎಂದರು ಅಶೋಕರು.&lt;br /&gt;ಆಗಲಿ ನೋಡೋಣ ಎಂದುಕೊಂಡು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಒಂದು ಪತ್ರ ಬರೆದೆ: "ಮುಂಚೆ ಈ ರಸ್ತೆಯ ಬದಿಗೆ ಕಾಲುದಾರಿ ಇತ್ತು. ಹೊಸರಸ್ತೆ ಮಾಡುವಾಗ ಕಾಲುದಾರಿ ಇಲ್ಲವಾಗಿದೆ. ಇದು ಪಾದಚಾರಿಗಳಿಗೆ ಅನ್ಯಾಯ. ಕೂಡಲೇ ಕಾಲುದಾರಿ ಮಾಡಿಸಿಕೊಡಬೇಕಾಗಿ ಕೋರುತ್ತೇನೆ"&lt;br /&gt;ನಿರೀಕ್ಷಿಸಿದಂತೆ ಉತ್ತರ ಬರಲಿಲ್ಲ. ಆದರೆ ನನಗೆ ಇದು ಹೊಸತಲ್ಲ. ಮುಂಚೆಯೂ ಪತ್ರಗಳನ್ನು ಬರೆದ ಅನುಭವ ನನಗಿತ್ತು. ಕೆಲವು ದಿನ ಕಾದೆ. ನೆನಪೋಲೆ ಬರೆದೆ. ಉತ್ತರವಿಲ್ಲ. ಮೂರನೆಯ ಪತ್ರ ಬರೆದು "ಈಗಲೂ ನೀವು ಉತ್ತರ ಬರೆಯದಿದ್ದರೆ/ಕ್ರಮ ಕೈಗೊಳ್ಳದಿದ್ದರೆ ಈ ಬಗ್ಗೆ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸುತ್ತೇನೆ" ಎಂದೆ. ಆಗಲೂ ಉತ್ತರವಿಲ್ಲ. ಉಸ್ತುವಾರಿ ಸಚಿವರಿಗೆ (ಶ್ರೀ ಕೃಷ್ಣ ಪಾಲೆಮಾರ್) ಆಯುಕ್ತರಿಗೆ ಬರೆದ ಎಲ್ಲಾ ಪತ್ರಗಳ ಪ್ರತಿಗಳನ್ನಿಟ್ಟು ಒಂದು ದೂರು ಕೊಟ್ಟೆ. ಆಗ ನನ್ನ ಹತ್ತಿರ ಅವರ ವಿಳಾಸ ಇರಲಿಲ್ಲ. ಅದಕ್ಕೇನು? "ಶ್ರೀ ಕೃಷ್ಣ ಪಾಲೆಮಾರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಮಂಗಳೂರು" ಎಂದು ವಿಳಾಸ ಬರೆದು ಅಂಚೆಗೆ ಹಾಕಿದೆ. ಕೆಲವೇ ದಿನಗಳಲ್ಲಿ ಅವರ ಕಡೆಯಿಂದ ಒಂದು ಪತ್ರ ಬಂತು. ಆಯುಕ್ತರಿಗೆ ಒಂದು ಪತ್ರ ಬರೆದು ಅದರ ಪ್ರತಿ ನನಗೆ ಕಳಿಸಿದ್ದರು.".... ಸದ್ರಿಯವರ ಮನವಿಯನ್ನು ಪರಿಶೀಲಿಸಿ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಲು ಕೋರಲಾಗಿದೆ". ಸಚಿವರ ಪತ್ರದ ತಾರೀಕು ೧೩-೦೩-೦೯. ಅಂದಾಜು ೨೫-೦೩-೦೯ರ ಹೊತ್ತಿಗೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರು ಒಂದು "ಹಿಂಬರಹ"ವನ್ನು ನನಗೆ ಕಳಿಸಿಕೊಟ್ಟರು. ಈ ಹಿಂಬರಹದ ತಾರೀಕು ೧೨-೦೩-೦೯. ಎಂದರೆ ಸಚಿವರು ಸೂಚನೆ ಕೊಡುವ ಒಂದು ದಿನದ ಮೊದಲೇ ಹಿಂಬರಹ ತಯಾರಾಗಿತ್ತು! ಕೆಳಗಡೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸಹಿಯ ಕೆಳಗೆ ಮಾತ್ರ ೨೩-೩-೦೯ ಎಂದಿತ್ತು! ಇರಲಿ ಬಿಡಿ. ಅಂತೂ ಉತ್ತರ ಬಂದಿತ್ತು.&lt;br /&gt;ಅವರ ಹಿಂಬರಹದ ಈ ವಾಕ್ಯಗಳನ್ನು ನೋಡಿ: "......ಹಂಪನಕಟ್ಟದಿಂದ ಪ್ರಾರಂಭವಾಗಿ ನವಭಾರತ ವೃತ್ತದವರೆಗಿನ ಕೆ.ಎಸ್.ರಾವ್ ರಸ್ತೆಗಳಿಗೆ ೫೦೦ ಮೀ. ಉದ್ದಕ್ಕೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚತುಷ್ಪಥ ಕಾಂಕ್ರೀಟೀಕರಣ ರಸ್ತೆಯಾಗಿ ೧೪.೫೦ ಮೀ. ಅಗಲದಲ್ಲಿ ನಿರ್ಮಿಸಲಾಗಿದೆ.&lt;br /&gt;ಆದರೆ ಈ ರಸ್ತೆಯ ಅಕ್ಕಪಕ್ಕದಲ್ಲಿ ವಾಣಿಜ್ಯಸಂಸ್ಥೆಗಳ ವ್ಯಾಪಾರೋದ್ಯಮ ಮಳಿಗೆಗಳು ರಸ್ತೆ ಉದ್ದಕ್ಕೆ ಇರುತ್ತವೆ. ಈಗ ಮಾಡಿರುವ ರಸ್ತೆಯ ಎರಡು ಬದಿಗಳಲ್ಲಿ ೧.೦೦ಮೀಟರ್ ಅಗಲದಲ್ಲಿ ಚರಂಡಿ ಸಮೇತ ಫುಟ್ ಪಾತ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ಸ್ಥಳಗಳಲ್ಲಿ ಜಾಗದ ಅಡಚಣೆ ಇದ್ದು ಅದನ್ನು ಸರಿಪಡಿಸಿ ..........ಕೈಗೊಳ್ಳಲಾಗುವುದು. ಅಂದಾಜುಪಟ್ಟಿಯು ಅನುಮೋದನೆಗೊಂಡ ನಂತರ ಹಾಗೂ ಸ್ಥಳದ ಆ ಭಾಗ ಇತ್ಯರ್ಥಗೊಂಡ ನಂತರ ಎರಡು ಬದಿ ಫುಟ್ ಪಾತ್ ನಿರ್ಮಿಸಿ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಪ್ರತ್ಯೇಕ ಪಥ ನಿರ್ಮಿಸಲಾಗುವುದೆಂದು ತಿಳಿಸಿದೆ"&lt;br /&gt;ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ವಿಷಯಗಳಿವೆ. ಒಂದು, ರಸ್ತೆ ನಿರ್ಮಿಸುವಾಗ ಖಾಸಗಿಯವರ ಸಹಭಾಗಿತ್ವ ಇದೆ. ಎಂದರೆ ಅಷ್ಟರಮಟ್ಟಿಗೆ ಪಾಲಿಕೆಯ ಬಾಯಿ ಕಟ್ಟಿದೆ.&lt;br /&gt;ಎರಡು, ರಸ್ತೆ ಸಂಪೂರ್ಣ ರಚನೆ ಆದಮೇಲೆ, ಚರಂಡಿ ಮತ್ತು ಫುಟ್ ಪಾತ್ ರಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ! ಇದು ಎಂಜಿನಿಯರ್ ಆದವರು ಮಾಡುವ ಕೆಲಸವೆ? ಯಾವುದೇ ರಸ್ತೆ ರಚನೆಯಾಗುವುದಿದ್ದರೆ, ಬದಿಯಲ್ಲಿ ಚರಂಡಿ, ಕಾಲುದಾರಿ ಇದನ್ನೆಲ್ಲ ಸೇರಿಸದೆ ಯಾರಾದರೂ ಪ್ಲಾನ್ ತಯಾರಿಸುತ್ತಾರೆಯೆ? ಹಾಗಾದರೆ, ಫುಟ್ ಪಾತ್ ಹೋಗಲಿ ಚರಂಡಿ ಇಲ್ಲದ ರಸ್ತೆ ಇವರು ಮಾಡಿದ್ದು ಹೇಗೆ? ಇದು ಖಾಸಗಿ ಸಹಭಾಗಿತ್ವದ ಫಲ ಇರಬಹುದೆ?&lt;br /&gt;ಇದೆಲ್ಲ ನಡೆದು ಸ್ವಲ್ಪ ದಿನದ ನಂತರ ನಾನು ಆ ಕಡೆ ಹೋದಾಗ ಚರಂಡಿ ಮಾಡಲು ರಸ್ತೆ ಬದಿ ಅಗೆಯುತ್ತಿದ್ದುದನ್ನು ನೋಡಿದ್ದೆ. ಈಗ ಹೋಗದೆ ಸುಮಾರು ಸಮಯ ಆಯಿತು. ಫುಟ್ ಪಾತಿನ ಕಥೆ ಏನಾಗಿದೆ ಎಂದು ಗೊತ್ತಿಲ್ಲ. ಯಾರಾದರೂ ಆ ಕಡೆಯವರು ತಿಳಿಸಿದರೆ ಕೃತಜ್ಞ. ಒಂದು ವೇಳೆ ಫುಟ್ ಪಾತ್ ಆಗದಿದ್ದರೆ, ಮೇಲಿನ ಪತ್ರದ ಆಧಾರದಲ್ಲಿ ಅದಕ್ಕಾಗಿ ಪುನಃ ಪ್ರಯತ್ನಿಸುವುದು ಸಾಧ್ಯ. ಅಂಥ ಪ್ರಯತ್ನವನ್ನು ಯಾರು ಬೇಕಾದರೂ ಮಾಡಬಹುದು.&lt;br /&gt;ಇಲ್ಲಿ ಒಂದು ಮಾತು ನಾನು ಸೇರಿಸಬೇಕು. ನಾನು ಯಾವ ರಾಜಕೀಯ ಪಕ್ಷದ ಕಾರ್ಯಕರ್ತನೂ ಅಲ್ಲ. ಶ್ರೀ ಕೃಷ್ಣ ಪಾಲೆಮಾರ್ ಅವರು ನನ್ನ ಪರಿಚಯದವರೂ ಅಲ್ಲ. (ಇನ್ನೂ ಒಂದು ಪ್ರಕರಣದಲ್ಲಿ ಅವರು ನನ್ನ ಪತ್ರಕ್ಕೆ ಸ್ಪಂದಿಸಿದ್ದಾರೆ). ಪ್ರಕರಣವನ್ನು ನಾನು ಯಾವ ಮಾಧ್ಯಮಕ್ಕೂ ಕೊಂಡುಹೋಗಲಿಲ್ಲ. ಜನ ಸೇರಿಸಿ ಚಳುವಳಿ ಮಾಡುವ ಮಾತಂತೂ ದೂರವೇ ಉಳಿಯಿತಷ್ಟೆ. ಅಂಚೆಗಾಗಿ ಸ್ವಲ್ಪ ಹಣ ಖರ್ಚಾಗಿದೆ ಅಷ್ಟೆ.&lt;br /&gt;ನಮ್ಮ ದೇಶದಲ್ಲಿ ಪ್ರಜೆಗಳ ಅಭಿಪ್ರಾಯಕ್ಕೆ ಖಂಡಿತ ಬೆಲೆ ಇದೆ. ನಾವು ಸರಿಯಾದ ರೀತಿಯಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ಅಗತ್ಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-9115082659891818838?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/9115082659891818838/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=9115082659891818838&amp;isPopup=true' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/9115082659891818838'/><link rel='self' type='application/atom+xml' href='http://www.blogger.com/feeds/1105138094084974837/posts/default/9115082659891818838'/><link rel='alternate' type='text/html' href='http://sundararao.blogspot.com/2010/04/blog-post_22.html' title='ತನ್ನ ಶಕ್ತಿ ಗೊತ್ತಿರಲಿಲ್ಲವಂತೆ ಹನುಮಂತನಿಗೆ!'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>3</thr:total></entry><entry><id>tag:blogger.com,1999:blog-1105138094084974837.post-720101782602157809</id><published>2010-04-08T23:15:00.000-07:00</published><updated>2010-04-08T23:17:21.817-07:00</updated><title type='text'>ಅರಣ್ಯ ಇಲಾಖೆಯ ಉತ್ತರ ಬಂತು, ಆದರೆ......</title><content type='html'>ತಾ. ೧೬-೩-೧೦ರ ನನ್ನ ಪತ್ರಕ್ಕೆ ಮಂಗಳೂರು ಉ.ಅ.ಸಂ.ಯವರು ನನಗೆ ಉತ್ತರಿಸದಿದ್ದರೂ, ತಾ. ೨೦-೩-೧೦ರಂದೇ ಅದನ್ನು ಸುಬ್ರಹ್ಮಣ್ಯ ಉಪವಿಭಾಗದ ಸ.ಅ.ಸಂ.ಯವರಿಗೆ ಕಳಿಸಿಕೊಟ್ಟಿದ್ದಾರೆ. ಎಂದರೆ ನನ್ನ ಪತ್ರ ಅವರಿಗೆ ಮುಟ್ಟಿದ ಒಂದೆರಡು ದಿನಗಳಲ್ಲಿಯೇ ಅದರ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.&lt;br /&gt;ನನ್ನ ನೆನಪೋಲೆ ಹೋದಮೇಲೆ ಅವರು ಸುಳ್ಯದ ಉ.ಸ.ಅ.ಸಂ.ಯವರಿಗೆ ಮತ್ತೊಂದು ಅರೆಸರಕಾರಿ ಪತ್ರ ಬರೆದು ನನಗೆ ಅದರ ಯಥಾಪ್ರತಿಯನ್ನು ಕಳಿಸಿಕೊಟ್ಟಿದ್ದಾರೆ. ಆ ಪತ್ರ ಹೀಗಿದೆ:&lt;br /&gt;........."ಮೇಲಿನ ವಿಷಯಕ್ಕೆ ಸಂಬಂಧಿಸಿ ಉಲ್ಲೇಖ(೧)ರ ಈ ಕಾರ್ಯಾಲಯದ ಪತ್ರದ ಕಡೆಗೆ ನಿಮ್ಮ ಗಮನ ಸೆಳೆಯಲಾಗಿದೆ. ಸದ್ರಿ ಪತ್ರದಲ್ಲಿ ಉಲ್ಲೇಖ(೧)ರ ಅರ್ಜಿಯ ಕುರಿತು ಕೂಡಲೇ ತನಿಖೆ ನಡೆಸಿ ತನಿಖಾವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು.ಆದರೆ, ಸುಮಾರು ೧೫ ದಿನ ಕಳೆದರೂ, ನಿಮ್ಮಿಂದ ವರದಿ ಬಾರದೇ ಇರುವುದು ವಿಷಾದನೀಯ ಸಂಗತಿಯಾಗಿರುತ್ತದೆ. ಈ ಬಗ್ಗೆ ಅರ್ಜಿದಾರರು....ಉತ್ತರಕ್ಕೆ ಇನ್ನೂ ಹತ್ತು ದಿನ ಕಾಯಲು ಸಿದ್ಧನಿರುವುದಾಗಿ ತಿಳಿಸಿರುತ್ತಾರೆ.....ಪತ್ರದ ಕಡೆಗೆ ನಿಮ್ಮ ವೈಯಕ್ತಿಕ ಗಮನ ಹರಿಸಿ ತನಿಖಾವರದಿಯನ್ನು ಮರುಟಪ್ಪಾಲಿನಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಈ ಕುರಿತು ಇನ್ನು ಮುಂದೆ ಪತ್ರವ್ಯವಹಾರಕ್ಕೆ ಆಸ್ಪದ ಕೊಡಬಾರದಾಗಿ ತಿಳಿಸಲಾಗಿದೆ"&lt;br /&gt;&lt;span style="color:#ff6666;"&gt;&lt;span style="color:#3333ff;"&gt;ಕ್ರಮದ ವಿಶ್ಲೇಷಣೆ:&lt;/span&gt;&lt;br /&gt;&lt;/span&gt;ನನ್ನ ಪತ್ರವನ್ನು ಸುಬ್ರಹ್ಮಣ್ಯದ ಪ್ರಕರಣದ ಕುರಿತ ದೂರು ಎಂದು ಪರಿಗಣಿಸುವ ಮೂಲಕ ಮಂಗಳೂರಿನ ಉ.ಅ.ಸಂ.ಯವರು ಸಮಸ್ಯೆಯನ್ನು ತಮ್ಮ ಪಾಲಿಗೆ ಸುಲಭ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ವಿಶಿಷ್ಟವಾದ ರೀತಿಯಲ್ಲಿ ಹೊಣೆಯನ್ನು ಕೆಳ ಅಧಿಕಾರಿಗೆ ವರ್ಗಾಯಿಸಿದ್ದಾರೆ. ಆ ಅಧಿಕಾರಿಗಿಂತ ಕೆಳಗೆ ವಲಯ ಅರಣ್ಯಾಧಿಕಾರಿ ಮತ್ತು ವನಪಾಲಕರು ಇರುವುದರಿಂದ ಜವಾಬ್ದಾರಿ ಅವರಿಗೆ ವರ್ಗಾವಣೆಯಾದರೆ ಆಶ್ಚರ್ಯವಿಲ್ಲ!&lt;br /&gt;ಇಷ್ಟು ನೇರವಾಗಿ, ಸ್ಪಷ್ಟವಾಗಿ ಬರೆದದ್ದು ಸಹ ಉ.ಅ.ಸಂ.ಯವರಿಗೆ ಅರ್ಥವಾಗಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಅನಿವಾರ್ಯವಾಗಿ ಇದನ್ನು ಪುನಃ ಸ್ಪಷ್ಟ ಪಡಿಸಿ ಅವರಿಗೆ ಹೀಗೆ ಪತ್ರ ಬರೆದಿದ್ದೇನೆ.&lt;br /&gt;"..........ನಿಮ್ಮ ಪತ್ರದ ಯಥಾಪ್ರತಿಯನ್ನು ನನಗೆ ಕಳಿಸಿದ್ದೀರಿ. ಧನ್ಯವಾದಗಳು.&lt;br /&gt;ನಿಮ್ಮ ಪತ್ರಕ್ಕೆ ಸಂಬಂಧಿಸಿ ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿ ಕೋರುತ್ತೇನೆ.&lt;br /&gt;೧. ದಿ. ೧೮-೩-೨೦೧೦ರ ನನ್ನ ಪತ್ರದ ವಿಷಯ - ದ. ಕ. ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ - ಎಂಬುದಾಗಿತ್ತು. ಆದರೆ ನೀವು ಕೈಗೊಂಡ ಕ್ರಮ ಅದಕ್ಕೆ ಸಂಬಂಧಪಟ್ಟಿರುವುದಿಲ್ಲ.&lt;br /&gt;೨. ಮರಗಳ ರಕ್ಷಣೆಯ ಕಾನೂನು ಉಲ್ಲಂಘನೆಯಾಗುತ್ತಿರುವುದಕ್ಕೆ ನಿದರ್ಶನವಾಗಿ ಮಾತ್ರ ನಾನು ಸುಬ್ರಹ್ಮಣ್ಯದ ಪ್ರಕರಣವನ್ನು ನಿಮ್ಮ ಗಮನಕ್ಕೆ ತಂದಿದ್ದೆ. ಮರಗಳು ಸಂಪೂರ್ಣ ನಾಶವಾದ ಮೇಲೆ ಅದರ ಬಗ್ಗೆ ತನಿಖೆ ಮಾಡುವುದು, ಕಾನೂನು ಕ್ರಮ ತೆಗೆದುಕೊಳ್ಳುವುದು ಇತ್ಯಾದಿಗಳಲ್ಲಿ ನನಗೆ ಆಸಕ್ತಿ ಇಲ್ಲ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದೂ, ಬಿಡುವುದೂ ಇಲಾಖೆಗೆ ಬಿಟ್ಟ ವಿಷಯ. ನನ್ನ ಆಸಕ್ತಿ ಇರುವುದು ಇನ್ನು ಮುಂದಾದರೂ, ಇರುವ ಮರಗಳನ್ನು ಉಳಿಸಿಕೊಳ್ಳುವ ಬಗ್ಗೆ ಮಾತ್ರ.&lt;br /&gt;೩. ಸುಬ್ರಹ್ಮಣ್ಯದ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸುವುದು ನನ್ನ ಉದ್ದೇಶವಾಗಿದ್ದರೆ, ನಾನು ಅಲ್ಲಿನ ಸ.ಅ.ಸಂ.ಯವರಿಗೆ ಪತ್ರ ಬರೆಯುತ್ತಿದ್ದೆ. ಅವರು ಕ್ರಮ ಕೈಗೊಳ್ಳದಿದ್ದರೆ ಮಾತ್ರ ನಿಮಗೆ ದೂರು ಸಲ್ಲಿಸುತ್ತಿದ್ದೆ.&lt;br /&gt;೪. ನೀವು ಜಿಲ್ಲಾಮಟ್ಟದ ಅಧಿಕಾರಿಯಾಗಿರುವುದರಿಂದ ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳುವಂತೆ ನನ್ನ ಪತ್ರದಲ್ಲಿ ನಿಮ್ಮನ್ನು ಕೋರಿದ್ದೆ.&lt;br /&gt;೫. ಈ ನಿಟ್ಟಿನಲ್ಲಿ, ಮರಗಳ ಸಂರಕ್ಷಣೆಯ ಕಾನೂನು ಇದೆ ಎಂಬ ಅರಿವೇ ಇಲ್ಲದ ಹಾಗೆ, ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಗಳ ನಾಶವನ್ನು ತಡೆಗಟ್ಟಲು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕಾಗಿಯೂ, ಹಾಗೆ ತೆಗೆದುಕೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿಯೂ ಮತ್ತೊಮ್ಮೆ ನಿಮ್ಮನ್ನು ಕೋರುತ್ತೇನೆ."&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-720101782602157809?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/720101782602157809/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=720101782602157809&amp;isPopup=true' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/720101782602157809'/><link rel='self' type='application/atom+xml' href='http://www.blogger.com/feeds/1105138094084974837/posts/default/720101782602157809'/><link rel='alternate' type='text/html' href='http://sundararao.blogspot.com/2010/04/blog-post_08.html' title='ಅರಣ್ಯ ಇಲಾಖೆಯ ಉತ್ತರ ಬಂತು, ಆದರೆ......'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>1</thr:total></entry><entry><id>tag:blogger.com,1999:blog-1105138094084974837.post-2740555538400882459</id><published>2010-04-01T21:24:00.000-07:00</published><updated>2010-04-03T19:52:29.133-07:00</updated><title type='text'></title><content type='html'>ತಾ. ೨-೪-೧೦&lt;br /&gt;ಇವೊತ್ತಿನ ಉದಯವಾಣಿಯ ವಾರ್ತೆ:&lt;br /&gt;ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಂಸ್ಕೃತಿ: ಸುಬ್ರಹ್ಮಣ್ಯ ಶ್ರೀ&lt;br /&gt;ಪ್ರಕೃತಿಯಲ್ಲಿ ಭಗವಂತನ ಶಕ್ತಿ ಅಡಗಿದೆ. ಆದುದರಿಂದಾಗಿ ನಮ್ಮ ಹಿರಿಯರು ಪ್ರಕೃತಿಯನ್ನು ಆರಾಧನೆ ಮಾಡುವುದರೊಂದಿಗೆ ಪ್ರಕೃತಿಯ ಸೊಬಗಿನ ನಡುವೆ ಆರಾಧನಾಲಯಗಳನ್ನು ನಿರ್ಮಿಸಿದರು. ನಮ್ಮದು ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಂಸ್ಕೃತಿ ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. (ವಾರ್ತೆಯಲ್ಲಿ ಅವರ ಇನ್ನೂ ಕೆಲವು ಅಭಿಪ್ರಾಯಗಳಿವೆ)&lt;br /&gt;ಇದೇ ವಾರ್ತೆ ಹೀಗೆ ಮುಂದುವರಿದಿದೆ:&lt;br /&gt;.....ವಾಸ್ತು ತಜ್ಞ ಶ್ರೀಕೃಷ್ಣ ಮಹಾಲಿಂಗ ಪ್ರಸಾದ್ ಮುನಿಯಂಗಳ ಮಾತನಾಡಿ ನಮ್ಮ ಪ್ರದೇಶದಲ್ಲಿನ ಬಹುತೇಕ ಶ್ರದ್ಧಾಕೇಂದ್ರಗಳು ಅರಣ್ಯ ವ್ಯಾಪ್ತಿಯಲ್ಲಿರುವುದರಿಂದ ಜೀರ್ಣೋದ್ಧಾರದಂತಹ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗುತ್ತಿರುವುದು ಎಲ್ಲ ಕಡೆ ಕಂಡುಬರುತ್ತಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.&lt;br /&gt;*********&lt;br /&gt;ನಾನು ಬರೆದ ಪತ್ರಕ್ಕೆ ಉತ್ತರಿಸಲು ದ.ಕ. ಜಿಲ್ಲಾ ಅರಣ್ಯಾಧಿಕಾರಿಯವರಿಗೆ ಇನ್ನೂ ಪುರುಸೊತ್ತು ಸಿಕ್ಕಿಲ್ಲ ಎಂಬುದು ವಿಷಾದದ ಸಂಗತಿ. ಮೊನ್ನೆ ಅಂದರೆ ೩೧-೩-೧೦ಕ್ಕೆ ಒಂದು ನೆನಪೋಲೆ ಅವರಿಗೆ ಬರೆದಿದ್ದೇನೆ.&lt;br /&gt;*********&lt;br /&gt;ಅನೇಕ ಸ್ನೇಹಿತರು ಬ್ಲಾಗನ್ನು ಓದಿರುವುದಾಗಿ ಹೇಳಿದ್ದಾರೆ. ಆದರೆ ಪ್ರತಿಕ್ರಿಯೆಗಳು ಇಲ್ಲವಾಗಿದೆ. ಅಶೋಕರ ಹತ್ತಿರ ಇದನ್ನು ಹೇಳಿದ್ದಕ್ಕೆ, "ಜನ ಜಡ. ಚುಚ್ತಾ ಇರಬೇಕು" ಎಂದರು. ಇದೊಂದು ಸಣ್ಣ ಮಟ್ಟದ ಚಳುವಳಿ: ಪ್ರಜಾಪ್ರಭುತ್ವದ ಅನುಸಂಧಾನದ ಒಂದು ಸಣ್ಣ ಪ್ರಯತ್ನ. ನೀವೂ ಇದರಲ್ಲಿ ಸೇರಿಕೊಳ್ಳಿ ಎಂದು ನಾನು ಬಾಯಿಬಿಟ್ಟು ಹೇಳುವುದು ಸಭ್ಯತೆಯಲ್ಲ. ಇದು ನಮ್ಮೆಲ್ಲರ ದೇಶ.&lt;br /&gt;ನಾನು ಬರೆಯುತ್ತಿರುವುದು ಓದುಗರಿಗೆ ಮನರಂಜನೆ ನೀಡುವ ಉದ್ದೇಶದಿಂದ ಖಂಡಿತಾ ಅಲ್ಲ.&lt;br /&gt;ಅಶೋಕವರ್ಧನರ ಪ್ರತಿಕ್ರಿಯೆ:&lt;br /&gt;ಇಂದು ಆರಾಧನಾ ಸ್ಥಳಗಳ ವಿಪುಲತೆಯಲ್ಲಿ ಸ್ವಾಮಿಗಳು ಚರಿತ್ರೆಯನ್ನಷ್ಟೇ ಹೇಳಬಲ್ಲರು. ವರ್ತಮಾನದಲ್ಲಿ ಅದನ್ನು ರೂಢಿಸುವ ಧೈರ್ಯವಿದ್ದಿದ್ದರೆ, ತಳ ಇಲ್ಲದ ಮಾನದಲ್ಲಿ (ಸೇರಿನಲ್ಲಿ) ಭವಿಷ್ಯವನ್ನು ಅಳೆಯುವ ಶಾಸ್ತ್ರಕ್ಕೆ ಸುಮಾರು ಆರು ಎಕ್ರೆ ವ್ಯಾಪ್ತಿಯ ಪ್ರಾಕೃತಿಕ ಹಾನಿಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ.&lt;br /&gt;ನನ್ನ ತಿಳುವಳಿಕೆಯಂತೆ ಇಂದು ಆರಾಧನೀಯವಾಗಿರುವ ‘ವಾಸ್ತು’ ಸಂದ ಕಾಲದ ವಿಜ್ಞಾನ, ಸಿವಿಲ್ ಇಂಜಿನಿಯರಿಂಗ್. ಆದರೆ ನಾಗರಿಕತೆಯ ಬೆಳೆವಣಿಗೆಯಲ್ಲಿ ನಮ್ಮ ಪ್ರಾಕೃತಿಕ ತಿಳುವಳಿಕೆಗಳು ಮತ್ತದಕ್ಕೆ ಸಂವಾದಿಯಾಗಿ ಉತ್ಪನ್ನಗಳು ಸಾಕಷ್ಟು ಮುಂದುವರಿದ ಕಾಲದಲ್ಲಿ ವಾಸ್ತುತಜ್ಞರ ಅನುಸರಣೆ ಗಡಿರಕ್ಷಣೆಗೆ ಬಿಲ್ಲು ಭಾಲೆಗಳನ್ನು ಹಿಡಿದು ಹೊರಟಷ್ಟೇ ಅದ್ಭುತ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-2740555538400882459?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/2740555538400882459/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=2740555538400882459&amp;isPopup=true' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/2740555538400882459'/><link rel='self' type='application/atom+xml' href='http://www.blogger.com/feeds/1105138094084974837/posts/default/2740555538400882459'/><link rel='alternate' type='text/html' href='http://sundararao.blogspot.com/2010/04/blog-post.html' title=''/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>0</thr:total></entry><entry><id>tag:blogger.com,1999:blog-1105138094084974837.post-318283412681555495</id><published>2010-03-20T02:09:00.000-07:00</published><updated>2010-03-20T02:14:42.653-07:00</updated><title type='text'>ಜಾಗೆದು ಗುರ್ತೇ ಸಿಕ್ತಿಲ್ಲೆ - ಭಾಗ-೨</title><content type='html'>&lt;a href="http://1.bp.blogspot.com/_8556utxmbGA/S6SRGYTNrWI/AAAAAAAAAB4/cHt70DceXFU/s1600-h/subrahmanya.jpg"&gt;&lt;img id="BLOGGER_PHOTO_ID_5450640987813424482" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 101px" alt="" src="http://1.bp.blogspot.com/_8556utxmbGA/S6SRGYTNrWI/AAAAAAAAAB4/cHt70DceXFU/s320/subrahmanya.jpg" border="0" /&gt;&lt;/a&gt;&lt;br /&gt;&lt;div&gt;&lt;br /&gt;ಹಿಂದಿನ ಲೇಖನದಲ್ಲಿ ಮಾಹಿತಿ ಬಂದ ಕೂಡಲೇ ತಿಳಿಸುವುದಾಗಿ ಬರೆದಿದ್ದೆ. ದಿನಾಂಕ ೧೭-೩-೨೦೧೦ರಂದು ಸುಬ್ರಹ್ಮಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ನನಗೆ ಮಾಹಿತಿ ನೀಡಿದ್ದಾರೆ.&lt;br /&gt;ನಾನು ಕೇಳಿದ ಮಾಹಿತಿ ೧: ಗುಡ್ಡವನ್ನು ಸಮತಟ್ಟು ಮಾಡುವಾಗ ಅಲ್ಲಿದ್ದ ಹಲವಾರು ಮರಗಳು ನಾಶವಾಗಿರುವ ಸಾಧ್ಯತೆ ಇದೆ. ಹೀಗೆ ಮರಗಳನ್ನು ನಾಶ ಮಾಡಲು ನಿಮ್ಮ ಇಲಾಖೆ ಅನುಮತಿ ನೀಡಿದೆಯೆ?&lt;br /&gt;ಉತ್ತರ:ಸದ್ರಿ ಸ್ಥಳದಲ್ಲಿರುವ ಮರಮಟ್ಟುಗಳನ್ನು ಕಡಿಯಲು ಇಲಾಖಾವತಿಯಿಂದ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ.&lt;br /&gt;ನಾನು ಕೇಳಿದ ಮಾಹಿತಿ ೨: ನೀಡಿದ್ದರೆ ಅನುಮತಿಯ ಯಥಾಪ್ರತಿಯನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.&lt;br /&gt;ಉತ್ತರ: ಅನುಮತಿ ನೀಡದೇ ಇರುವುದರಿಂದ ಯಥಾಪ್ರತಿ ಇರುವುದಿಲ್ಲ.&lt;br /&gt;ಈ ಮಾಹಿತಿಯಲ್ಲದೆ ಸ.ಅ.ಸಂರಕ್ಷಣಾಧಿಕಾರಿಯವರು ಪ್ರಕರಣಕ್ಕೆ ಸಂಬಂಧಿಸಿ ಉಪಯುಕ್ತವಾದ ಇತರ ಕೆಲವು ಮಾಹಿತಿಗಳನ್ನೂ ನೀಡಿದ್ದಾರೆ:&lt;br /&gt;೧. ಸದ್ರಿ ಸ್ಥಳದಲ್ಲಿರುವ ಅಕೇಶಿಯಾ ಜಾತಿಯ ಗಿಡಗಳನ್ನು ಕಡಿಯುವರೇ ಅವಕಾಶ ಕೋರಿ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇವರು ಸುಬ್ರಹ್ಮಣ್ಯ ವಲಯ ಕಛೇರಿಗೆ ತಾ. ೭-೨-೨೦೧೦ರಂದು ಲಿಖಿತ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಯ ಯಥಾಪ್ರತಿ ಲಗತ್ತಿಸಿದೆ.&lt;br /&gt;೨.ಸದ್ರಿ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳದ ಹಾಗೂ ಸ್ಥಳದಲ್ಲಿರುವ ಮರಮಟ್ಟುಗಳ ಒಡೆತನ ದೃಢಪತ್ರ ಹಾಗೂ ಸ್ಥಳದ ಮೋಜಣಿ ನಕಾಶೆಯನ್ನು ಸಲ್ಲಿಸಿದಲ್ಲಿ ಅರ್ಜಿಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅರ್ಜಿ ಬರಕೊಂಡ ಸ್ವಾಮೀಜಿಯವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರು ಪತ್ರ ಸಂ...........................ರಂತೆ ತಿಳಿಸಿರುತ್ತಾರೆ. ಹಾಗೂ ನಂತರ ಇಲಾಖಾ ಅನುಮತಿ ಪಡೆದು ಮರಗಳನ್ನು ಕಡಿಯುವರೇ ಪತ್ರದಲ್ಲಿ ತಿಳಿಸಲಾಗಿದೆ.ಪತ್ರದ ಪ್ರತಿ ಲಗತ್ತಿಸಲಾಗಿದೆ.ಆದರೆ ಸದ್ರಿಯವರು ಯಾವುದೇ ದಾಖಲಾತಿಗಳನ್ನು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರಿಗೆ ಸಲ್ಲಿಸಿರುವುದಿಲ್ಲ.&lt;br /&gt;**************&lt;br /&gt;ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇವರು ಸುಬ್ರಹ್ಮಣ್ಯ ವಲಯ ಕಛೇರಿಗೆ ತಾ. ೭-೨-೨೦೧೦ರಂದು ಸಲ್ಲಿಸಿರುವ ಲಿಖಿತ ಅರ್ಜಿ (ಅರ್ಜಿ ಶ್ರೀ ಮಠದ ಲೆಟರ್ ಹೆಡ್ ನಲ್ಲಿದೆ):&lt;br /&gt;ನಮ್ಮ ಸಂಸ್ಥಾನದ ಮುಖ್ಯಾಭಿಮಾನಿಗಳಾದ ವಲಯ ಅರಣ್ಯಾಧಿಕಾರಿಗಳಿಗೆ ಸಪ್ರೇಮ ನಾರಾಯಣ ಸ್ಮರಣೆಗಳು.&lt;br /&gt;ವಿಷಯ: ವನದುರ್ಗಾದ ಎದುರು ಗುಡ್ಡೆಯಲ್ಲಿರುವ ಅಕೇಶಿಯಾ ಗಿಡಗಳನ್ನು (ಅರ್ಜಿಯಲ್ಲಿ ಒಟ್ಟು ಮೂರು ಕಡೆ "ಮರ" ಎಂದು ಬರೆದಿರುವುದನ್ನು ಹೊಡೆದು "ಗಿಡ" ಎಂದು ತಿದ್ದಲಾಗಿದೆ - ಎಚ್. ಸುಂದರರಾವ್). ಕಡಿಯಲು ಅವಕಾಶ ನೀಡುವ ಕುರಿತು.&lt;br /&gt;ಆತ್ಮೀಯರೇ, April 9-10-11 2010ರ ದಿನಗಳಲ್ಲಿ ವಿಶ್ವಜ್ಯೋತಿಷ್ಯ ಸಮ್ಮೇಳನ ವನದುರ್ಗಾದ ಎದುರಿರುವ ಗುಡ್ಡದಲ್ಲಿ ನಡೆಯಲಿದೆ. ರಾಷ್ಟ್ರದ ಗಣ್ಯಾತಿಗಣ್ಯ ವ್ಯಕ್ತಿಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಭದ್ರತೆಯ ದೃಷ್ಟಿಯಿಂದ ಗಿಡಗಳನ್ನು ತೆಗೆಯಬೇಕೆಂದು ಸರ್ಕಾರದ ಉನ್ನತಾಧಿಕಾರಿಗಳು ಸಲಹೆ ನೀಡಿದ್ದಾರೆ. ಅಲ್ಲದೆ ಅಕೇಶಿಯಾ ಗಿಡ ಪರಿಸರಕ್ಕೂ ಮಾರಕವಾಗಿದೆ. ಈ ಎಲ್ಲ ಕಾರಣಗಳಿಂದ ಆ ಅಕೇಶಿಯಾ ಗಿಡಗಳನ್ನು ತೆಗೆಯಲು ಅವಕಾಶ ಮಾಡಿಕೊಡಬೇಕಾಗಿ ಅಪೇಕ್ಷಿಸುತ್ತೇವೆ.&lt;br /&gt;ನಿರಂತರ ಅಭಿಮಾನವಿರಲಿ&lt;br /&gt;ಇತಿ ನಾರಾಯಣ ಸ್ಮರಣಪೂರ್ವಕ&lt;br /&gt;(ಸಹಿ)&lt;br /&gt;**************&lt;br /&gt;ಇಲ್ಲಿ ಗಮನಿಸಬೇಕಾದ್ದು: ಸ್ವಾಮೀಜಿಯವರು ಅರ್ಜಿ ಸಲ್ಲಿಸಿರುವುದು ೭-೨-೨೦೧೦ರಂದು.&lt;br /&gt;ಸುಬ್ರಮಣ್ಯದ ವಲಯ ಅರಣ್ಯಾಧಿಕಾರಿಯವರು ಉತ್ತರಿಸಿರುವುದು ತಾ. ೧೫-೨-೨೦೧೦ರಂದು&lt;br /&gt;ಸುಬ್ರಮಣ್ಯದಲ್ಲಿ ಜ್ಯೋತಿಷ್ಯ ಸಮ್ಮೇಳನಕ್ಕಾಗಿ ಗುಡ್ದ ಅಗೆದು ಸಮತಟ್ಟು ಮಾಡುತ್ತಿರುವ ಫೋಟೋಸಹಿತ ವರದಿ ಉದಯವಾಣಿಯಲ್ಲಿ ಪ್ರಕಟವಾಗಿರುವುದು ೧೬-೨-೨೦೧೦ರಂದು.&lt;br /&gt;**************&lt;br /&gt;ಈ ದಾಖಲೆಗಳನ್ನು ನಾನು ದ,ಕ.ಜಿಲ್ಲಾ ಅರಣ್ಯಾಧಿಕಾರಿಯವರಿಗೆ ಕಳಿಸಿಕೊಟ್ಟು ಹೀಗೆ ಪತ್ರ ಬರೆದಿದ್ದೇನೆ:&lt;br /&gt;"..... ಈ ಪ್ರಕರಣವನ್ನು ಗಮನಿಸಿದಾಗ ಮರಗಳ ಸಂರಕ್ಷಣೆಗಾಗಿ ಇರುವ ಕಾನೂನು ಉಲ್ಲಂಘನೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಒಂದು ಆತಂಕಕಾರಿ ಬೆಳವಣಿಗೆ.&lt;br /&gt;ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹೀಗೆ ಮರಗಳನ್ನು ನಾಶ ಮಾಡುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಪ್ರತಿದಿನವೂ ಸಾವಿರಾರು ಮರಗಳು ಬೇರು ಸಮೇತ ನೆಲಕ್ಕುರುಳುತ್ತಿವೆ. ಇದನ್ನು ತಡೆಗಟ್ಟಲು ಸಂಬಂಧಪಟ್ಟ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡುವುದು ಅಗತ್ಯ.&lt;br /&gt;ಇನ್ನು ಮುಂದೆ ಮರಗಳ ಸಂರಕ್ಷಣೆಯ ಕಾನೂನನ್ನು ಯಾರೂ ಉಲ್ಲಂಘಿಸದಂತೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ನಿಮ್ಮನ್ನು ಕೋರುತ್ತೇನೆ.&lt;br /&gt;ಇನ್ನು ಹತ್ತು ದಿನಗಳ ಒಳಗೆ ನೀವು ಕೈಗೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿ ಕೋರುತ್ತೇನೆ..."&lt;br /&gt;ಪತ್ರ ಅವರಿಗೆ ತಲುಪಿದೆ. ಉತ್ತರ ಬಂದನಂತರ ಮತ್ತೆ ಬರೆಯುತ್ತೇನೆ........&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-318283412681555495?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/318283412681555495/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=318283412681555495&amp;isPopup=true' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/318283412681555495'/><link rel='self' type='application/atom+xml' href='http://www.blogger.com/feeds/1105138094084974837/posts/default/318283412681555495'/><link rel='alternate' type='text/html' href='http://sundararao.blogspot.com/2010/03/blog-post_20.html' title='ಜಾಗೆದು ಗುರ್ತೇ ಸಿಕ್ತಿಲ್ಲೆ - ಭಾಗ-೨'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_8556utxmbGA/S6SRGYTNrWI/AAAAAAAAAB4/cHt70DceXFU/s72-c/subrahmanya.jpg' height='72' width='72'/><thr:total>2</thr:total></entry><entry><id>tag:blogger.com,1999:blog-1105138094084974837.post-2637683111228428268</id><published>2010-03-12T09:51:00.000-08:00</published><updated>2010-03-13T19:54:18.431-08:00</updated><title type='text'>ಜಾಗೆದು ಗುರ್ತೇ ಸಿಕ್ತಿಲ್ಲೆ!</title><content type='html'>ಕಳೆದ ವರ್ಷ ಪ್ರೇಮಕ್ಕ ಮಂಗಳೂರಿನಿಂದ ನಮ್ಮಲ್ಲಿಗೆ ಬಂದಾಗ ಇವಳ ಹತ್ತಿರ "ರಾತ್ರೆ ಬೆಳ್ಗಾತ ಹೊತ್ತಿಗೆ ಗುಡ್ಡೆನೇ ಇಲ್ಲ ಮಾಡಿಬಿಡ್ತ್ರ್ಯ. ಬೆಳ್ಗಾತ ಕಂಡ್ರೆ ಜಾಗೆದು ಗುರ್ತೇ ಸಿಕ್ತಿಲ್ಲೆ, ಹಂಗಾಗಿರ್ತ್" ಅಂದಿದ್ದರು. ಜೆಸಿಬಿಗೆ ಗುಡ್ಡ, ಕಣಿವೆಗಳನ್ನು ಕಂಡರಾಗುವುದಿಲ್ಲ. ಸಾವಿರಾರು ಜೆಸಿಬಿಗಳು ದಕ್ಷಿಣ ಕನ್ನಡವನ್ನು ಬಯಲು ಸೀಮೆ ಮಾಡಲು ಹಗಲೂ ರಾತ್ರಿ ಶ್ರಮಿಸುತ್ತಿವೆ. ಗುಡ್ಡೆ ತಟ್ಟು ಮಾಡುವುದು ಸೈಟು ಮಾಡಿ ಮಾರುವುದು, ಸೈಟು ಕೊಂಡವರು ನೀರಿಗೆಂದು ಬೋರು ಹಾಕುವುದು.&lt;br /&gt;ದಕ್ಷಿಣ ಕನ್ನಡದ ಜೀವ ಇರುವುದೇ ಇಲ್ಲಿನ ಗುಡ್ಡಬೆಟ್ಟಗಳಲ್ಲಿ, ಸುಂದರವಾದ ಕಣಿವೆಗಳಲ್ಲಿ, ಇದನ್ನು ಯಾವ ವಿವೇಚನೆಯೂ ಇಲ್ಲದೆ ತಟ್ಟು ಮಾಡುತ್ತಾ ಹೋಗುತ್ತಿದ್ದೇವೆ ನಾವು.&lt;br /&gt;ನಮ್ಮ ಬಿ.ಸಿ.ರೋಡಿನ ಸುತ್ತಮುತ್ತ ಗುಡ್ಡ ಬೆಟ್ಟಗಳು ಧಾರಾಳ. ನಮ್ಮ ಮನೆಯ ಹಿಂದೆಯೇ ಇರುವ ಬೆದ್ರಗುಡ್ಡೆ ನಮ್ಮಿಬ್ಬರ ಸಂಜೆ ತಿರುಗಾಟದ ಅತ್ಯಂತ ನೆಚ್ಚಿನ ಸ್ಥಳ. ಕೇಪಳ ಮಾತ್ರ ಅಲ್ಲ, ನೇರಳೆ, ಕಾಡುಮಾವು, ಅಬ್ಬಳಕ, ಜೀರ್ಕ ಹೀಗೆ ಹಲವು ಹಣ್ಣುಗಳು. ಉಪ್ಪಿನ ಕಾಯಿಗೆ ಕರಂಡೆ. ಅರಮಾರಲು. ಕೊಡಿಕಟ್ಟಕ್ಕೆ ಇಪ್ಪತ್ತೆಂಟು ಬಗೆಯ ಚಿಗುರು. ಯಾವುದೂ ಬೇಡವೆಂದರೆ ಉಸಿರಾಡಲು ವಾಸನೆ ಗೀಸನೆ ಇಲ್ಲದ ಧಾರಾಳ ಶುದ್ಧ ಗಾಳಿ. ಈಗ ನಾಲ್ಕೈದು ವರ್ಷದ ಹಿಂದಿನವರೆಗೂ ಗುಡ್ಡೆಯ ಕೆಳಭಾಗದಲ್ಲಿ ಅದರ ಪಕ್ಕದಲ್ಲೇ ಒಂದು ಕಾಲುದಾರಿ ಇತ್ತು. ಈಗೀಗ ಅದರ ಗುರುತು ಮಸಕಾಗುತ್ತಿದೆ. ಜನ ಕಾಲ್ನಡಿಗೆಯಲ್ಲಿ ಓಡಾಡುವುದು ಕಡಿಮೆಯಾಗುತ್ತಿದೆ. ನನಗೆ ಇನ್ನೂ ಆಶ್ಚರ್ಯವೆಂದರೆ ಮಳೆಗಾಲ ಕಳೆದಾಗ ಈ ಗುಡ್ಡೆಯಲ್ಲಿ ಧಾರಾಳವಾಗಿ ಬೆಳೆದು ನಿಲ್ಲುವ ಹಸಿರು ಹುಲ್ಲು. ಡಿಸೆಂಬರ್ ಜನವರಿ ಹೊತ್ತಿಗೆ ಒಣಗಿ ನಿಂತ ಈ ಹುಲ್ಲಿಗೆ ಬೆಂಕಿ ಹೊತ್ತಿ ಉರಿಯುತ್ತದೆ. ಯಾರು ಯಾಕೆ ಕೊಡುತ್ತಾರೋ?&lt;br /&gt;ನನ್ನ ಮೂಲ ಊರು ಕೊಪ್ಪವೂ ಗುಡ್ಡ ಬೆಟ್ಟಗಳ ಊರೇ. ಆದರೆ ಅಲ್ಲಿನ ಗುಡ್ಡಗಳಲ್ಲಿ ಮೊಣಕಾಲೆತ್ತರಕ್ಕೆ ಹಸಿ ಹುಲ್ಲು ಬೆಳೆಯುವುದಿಲ್ಲ. ನೆಲದಿಂದ ಹುಲ್ಲು ತಲೆ ಎತ್ತಲು ಪುರುಸೊತ್ತಿಲ್ಲ, ಯಾವುದೋ ದನವೋ ಎಮ್ಮೆಯೋ ಬಂದು ಅದನ್ನು ಮೆಂದಾಯಿತು. ಈಗ ದನಗಳನ್ನು ಗುಡ್ಡೆಗೆ ಎಬ್ಬುವ ಪದ್ಧತಿಯೂ ಕಡಿಮೆಯಾಗುತ್ತಿದೆ. ಏನಿದ್ದರೂ ಮನೆಯಲ್ಲಿ ಕಟ್ಟಿ, ಹಿಂಡಿ ಗಿಂಡಿ ಹಾಕಿ ಸಾಕುವುದು. ಅವುಗಳ ಸೆಗಣಿಗೆ ಹೇಲಿನ ವಾಸನೆ.&lt;br /&gt;ಬೆದ್ರಗುಡ್ಡೆಯ ನವಿಲುಗಳ ಸಂಗೀತ ದಿನನಿತ್ಯ ನಮ್ಮ ಮನೆಗೆ ಕೇಳುತ್ತದೆ. ತಿರುಗಾಡಲು ಸಂಜೆ ಹೋದರೆ ನವಿಲುಗಳು ನೋಡಲು ಸಿಗುತ್ತವೆ. ಒಂದಿಷ್ಟು ಗರಿ ಆರಿಸಿ ತಂದು ಮನೆಯಲ್ಲೂ ಇಟ್ಟುಕೊಂಡಿದ್ದೆವು. ಬೆಳಗ್ಗೆ ನಮ್ಮ ಮನೆಯ ಸ್ಲಾಬಿನ ಮೇಲೆ ಹೋಗಿ ನಿಂತು ದುರ್ಬೀನಿನಲ್ಲಿ ನೋಡಿದರೆ ಗುಡ್ಡದ ಚಿಕ್ಕ ಒಂದು ಮರದಲ್ಲಿ ಒಂದು ನವಿಲು ಊದ್ದಕ್ಕೆ ಗರಿ ಇಳಿಬಿಟ್ಟುಕೊಂಡು ಕೂತಿರುವುದು ಚಿತ್ರ ಬರೆದಂತೆ ಕಾಣುತ್ತಿತ್ತು. ಅದು ಆ ನವಿಲಿನ ಮೆಚ್ಚಿನ ಜಾಗ ಇರಬೇಕು. ನನಗೆ ನಿತ್ಯವೂ ಅದನ್ನು ನೋಡುವುದೇ ಒಂದು ಕೆಲಸವಾಗಿತ್ತು. ಮೊನ್ನೆ ಮೊನ್ನೆ ಹೋದಾಗ ಕಾಡುಕೋಳಿಯೊಂದು ತನ್ನ ಎರಡು ಮರಿಗಳೊಂದಿಗೆ ಮೇಯುತ್ತಿದ್ದುದನ್ನು ಕಂಡೆ. ಕಳೆದ ವರ್ಷ ಪೊದೆಯಿಂದ ಒಂದು ಮೊಲ ಓಡಿದ್ದನ್ನು ನೋಡಿದ ನೆನಪಿದೆ.&lt;br /&gt;ಇನ್ನೂ ಒಂದು ಆಶ್ಚರ್ಯವೆಂದರೆ ಇಷ್ಟು ಚೆಂದದ ಈ ಗುಡ್ಡೆ ಊರಿಗೆ ಇಷ್ಟು ಹತ್ತಿರವೇ ಇದ್ದರೂ ಅಲ್ಲಿಗೆ ತಿರುಗಾಡಲು ಬರುವವರು ಯಾರೂ ಇಲ್ಲ. ಗುಡ್ಡದ ಬೆನ್ನು ಮಲಗಿದ ಬಸವನ ಬೆನ್ನಿನಂತಿದೆ. ಅದರ ಬಾಲದ ಬದಿಯ ತುದಿಯಲ್ಲಿ ಬಂಡೆಗಳಿವೆ. ಆ ಬಂಡೆಯ ಮೇಲೆ ಆದಿತ್ಯವಾರದಂದು ಯಾರಾದರೂ ಹುಡುಗರು ಬಂದು ಕೂರುವುದಿದೆ. ಅವರು ಬಾಟ್ಲಿ ತಂದು ಅಲ್ಲಿ ಕೂರುವುದು ಎಂದು ಇವಳಿಗೆ ಅನುಮಾನ. ಅಲ್ಲಿಂದ ಮುಂದೆ ಅಡ್ಡ ಸಿಗುವ ಒಂದು ಮಣ್ಣಿನ ರಸ್ತೆ ದಾಟಿ ಸ್ವಲ್ಪ ಮುಂದೆ ಹೋದರೆ ಸಣ್ಣ ಸಣ್ಣ ಮರಗಳ ಒಂದು ಗಂಧರ್ವವನವೇ ಇದೆ. ಈ ಸ್ಥಳ ಲಕ್ಷ್ಮೀನಾರಾಯಣ ಆಳ್ವರಿಗೆ ಸೇರಿದ್ದಂತೆ. ಅದಂತೂ ನನ್ನ ಪಾಲಿಗೆ ಯಾವ ಲಾಲ್ ಬಾಗಿಗೂ ಕಡಿಮೆಯಲ್ಲ.&lt;br /&gt;ಈ ಸ್ಥಳದ ಸಮೀಪ ಎರಡು ವರ್ಷದಿಂದ ಕಪ್ಪುಕಲ್ಲು ತೆಗೆಯುತ್ತಿದ್ದಾರೆ. ಯಾರೋ ಹೇಳಿದರು ಹತ್ತು ವರ್ಷಕ್ಕೆ ಗುತ್ತಿಗೆ ಆಗಿದೆ ಅಂತ......&lt;br /&gt;.&lt;br /&gt;ಕಳೆದ ವರ್ಷ ನಮ್ಮ ಈ ಬೆದ್ರಗುಡ್ಡೆಯಲ್ಲಿ ಎ ಎಂ ಆರ್ ಕಂಪೆನಿ ಟವರ್ ಗಳನ್ನು ನಿರ್ಮಿಸಿ ಪವರ್ ಲೈನ್ ಎಳೆದಿದೆ. ಅಡ್ಡ ಬಂದ ಮರಗಳು ನೆಲಕ್ಕುರುಳಿವೆ. ಈಗ ನಮ್ಮ ಮನೆಯ ಸ್ಲಾಬಿನ ಮೇಲೆ ನಿಂತರೆ ಗುಡ್ಡಕ್ಕಿಂತ ಪ್ರಮುಖವಾಗಿ ಎರಡು ಟವರ್ ಗಳೇ ಕಾಣುತ್ತವೆ. ಅಥವಾ ನೋಡುವ ನನ್ನ ದೃಷ್ಟಿಯಲ್ಲೇ ಏನಾದರೂ ಐಬು ಇದೆಯೋ?.&lt;br /&gt;ಬೆದ್ರಗುಡ್ಡೆಯಲ್ಲೂ ಕಪ್ಪು ಕಲ್ಲು ಇದೆ. ಇಡೀ ಗುಡ್ಡ ಖಾಸಗಿ ಒಡೆತನದ್ದು. ಊರಿಗೆ ಹತ್ತಿರದಲ್ಲಿದೆ. ಜೆಸಿಬಿಗಳು ಅಲ್ಲೇ ಸುತ್ತ ಓಡಾಡುತ್ತಿವೆ..ವಾಹನಗಳು ಓಡಾಡುವ ಪೊಳಲಿ ರಸ್ತೆಯ ಬದಿಯಲ್ಲಿ ಜೆಸಿಬಿ ಬೋಣಿ ಮಾಡಿಯಾಗಿದೆ....&lt;br /&gt;ಕೋಟಿ ಕೋಟಿ ವರ್ಷಗಳಿಂದ ಇಲ್ಲಿ ನಿಂತಿರಬಹುದಾದ ಈ ಗುಡ್ಡದ ಆಯಸ್ಸು ಇನ್ನೆಷ್ಟು ತಿಂಗಳು ಅಥವಾ ಇನ್ನೆಷ್ಟು ವರ್ಷ?&lt;br /&gt;*******&lt;br /&gt;ಅಯ್ಯೋ ದೇವರೆ, ನಾನು ಹೇಳಲು ಹೊರಟ ವಿಷಯವೇ ಒಂದು, ಹೇಳಿದ್ದೇ ಒಂದು ಆಗಿಹೋಯಿತು. ಜೆಸಿಬಿಯ ಈ ರಾಪಾಟಿಕೆಯನ್ನು ಬಹಳ ದಿನದಿಂದಲೂ ವಿಷಾದದಿಂದ ನೋಡುತ್ತಲೇ ಇದ್ದೇನೆ. ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯೇ ಇಲ್ಲವೋ ಎಂಬ ರೀತಿಯಲ್ಲಿ ಜೆಸಿಬಿಯಿಂದ ಗುದ್ದಿಸಿ ಮರಗಳನ್ನು ಉರುಳಿಸುವುದು; ಹಾಗೆ ಬಿದ್ದ ಮರಗಳನ್ನು ಎಷ್ಟು ದಿನ ಬೇಕಾದರೂ ಯಾರ ಹೆದರಿಕೆಯೂ ಇಲ್ಲದೆ ಅಲ್ಲಿಯೇ ಬಿಟ್ಟುಬಿಡುವುದು ಕಂಡು ನನಗೆ ಭಾರೀ ಆಶ್ಚರ್ಯ. ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನೊಬ್ಬರು ಆತ್ಮೀಯರನ್ನು ವಿಚಾರಿಸಿದರೆ "ಕರ್ನಾಟಕದಲ್ಲಿ ಒಂದೇ ಒಂದು ಮರವನ್ನೂ ಕಡಿಯುವಂತಿಲ್ಲ. ಕಾನೂನು ತುಂಬಾ ಬಿಗಿಯಾಗಿದೆ" ಎನ್ನುತ್ತಾರೆ. ಇಲ್ಲಿ ನೋಡಿದರೆ ಪ್ರತಿನಿತ್ಯವೂ ಜೆಸಿಬಿ ಮರಗಳನ್ನು ಯಾವ ಎಗ್ಗೂ ಇಲ್ಲದೆ ದೂಡಿ ಬೀಳಿಸಿ ಮುಂದುವರಿಯುತ್ತಿದೆ! (ಕಳಲೆ (ಕಣಿಲೆ)ಯ ವಿಷಯವೂ ಹೀಗೆಯೇ. ನನಗೆ ತಿಳಿದ ಮಟ್ಟಿಗೆ ಕಳಲೆ/ಬಿದಿರು ಕಡಿಯುವುದು ದೊಡ್ಡ ಅಪರಾಧ. ಬಿದಿರು ಕಡಿದರೆಂಬ ಕಾರಣಕ್ಕೆ ಜೈಲಿಗೆ ಹೋದವರನ್ನೂ ನಾನು ಕಂಡಿದ್ದೇನೆ. ಆದರೆ ನಮ್ಮ ಬಿ.ಸಿ.ರೋಡಿನಲ್ಲಿ ನೋಡಿದರೆ ಜೂನ್ ಜುಲೈ ತಿಂಗಳುಗಳಲ್ಲಿ ಕಳಲೆಯನ್ನು ಹಾಡು ಹಗಲೇ ಅಂಗಡಿಗಳಲ್ಲಿ ಮಾರುತ್ತಿರುತ್ತಾರೆ!) ಬಹುಶಃ ಹೀಗಿರಬೇಕು: ಕಾನೂನು ಮರಗಳನ್ನು "ಕಡಿಯುವುದನ್ನು" ನಿಷೇಧಿಸುತ್ತದೆ ಆದರೆ ಜೆಸಿಬಿ ಮರಗಳನ್ನು ಬುಡ ಸಮೇತ ಉರುಳಿಸುವುದು ತಾನೆ, ಹಾಗಾಗಿ ಕಾನೂನು ಅದಕ್ಕೆ ಅನ್ವಯವಾಗುವುದಿಲ್ಲ.&lt;br /&gt;ನನ್ನ ಮಿತಿಯಲ್ಲೇ ಆದರೂ, ಏನು ಮದ್ದು ಮಾಡುವುದು ಇದಕ್ಕೆ? ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಸಾಮಾನ್ಯವಾಗಿ ಹೀಗೆ ಗುಡ್ಡ ಮಟ್ಟ ಮಾಡಿಸುವವರು ಖಾಸಗಿಯವರು. ಅಲ್ಲಿ ಮಧ್ಯೆ ಮೂಗು ತೂರಿಸುವಂತಿಲ್ಲ. ಯಾಕೆಂದರೆ ಇವರ ಪೈಕಿ ಒಬ್ಬ ನನ್ನ ಅಜ್ಜ, ಮತ್ತೊಬ್ಬ ವಿದ್ಯಾಗುರು, ಇನ್ನೊಬ್ಬ ಸೋದರಮಾವ, ಮತ್ತೊಬ್ಬ ಭಾವ. ನನ್ನ ಉದ್ದೇಶ ಎಷ್ಟೇ ಉದಾತ್ತವಾದರೂ, ಹೋರಾಟಕ್ಕಿಳಿಯುವುದು ವ್ಯಾವಹಾರಿಕ ಅಲ್ಲ.&lt;br /&gt;ಓ ಮೊನ್ನೆಯೊಂದು ದಿನ ನೋಡುತ್ತೇನೆ, ಉದಯವಾಣಿಯ ಪುರವಣಿಯೊಂದರಲ್ಲಿ ಸುಬ್ರಮಣ್ಯದಲ್ಲಿ ಜ್ಯೋತಿಷ ಸಮ್ಮೇಳನ ನಡೆಯಲಿದೆಯೆಂದೂ ಅದಕ್ಕಾಗಿ ಆರು ಎಕ್ರೆ ವಿಸ್ತಾರದ ಗುಡ್ಡೆಯನ್ನು ಸಪಾಟು ಮಾಡುವ ಕೆಲಸವನ್ನು ಅದೆಷ್ಟೋ ಸಂಖ್ಯೆಯ ಜೆಸಿಬಿಗಳು ಹಗಲಿರುಳೂ ಮಾಡುತ್ತಿವೆಯೆಂದೂ ವರದಿಯಾಗಿತ್ತು. ಈ ವರದಿಯ ಜೊತೆಗೆ ಜೆಸಿಬಿಯೊಂದು ತನ್ನ ಸೊಂಡಿಲಿನಿಂದ ಮರಗಳನ್ನು ದೂಡಿ ನೆಲಕ್ಕುರುಳಿಸುತ್ತಿರುವ ಫೋಟೋ ಮತ್ತು ಇತರ ಫೋಟೋಗಳೂ ಇದ್ದವು.&lt;br /&gt;ಕೂಡಲೇ ಸುಬ್ರಮಣ್ಯದ ಅರಣ್ಯ ವಲಯಾಧಿಕಾರಿಗಳಿಗೆ -ಮಾಹಿತಿ ಹಕ್ಕಿನ ಆಡಿಯಲ್ಲಿ- ಪತ್ರಿಕೆಯಲ್ಲಿ ಪ್ರಕಟವಾದ ಫೋಟೋಗಳ ಜೆರಾಕ್ಸ್ ಪ್ರತಿಗಳನ್ನೂ ಇಟ್ಟು, "ದೊಡ್ಡ ಸಂಖ್ಯೆಯಲ್ಲಿ ಮರಗಳು ನಾಶವಾದಂತೆ ಕಾಣುತ್ತಿದೆ. ಈ ಬಗ್ಗೆ ನೀವು ಅನುಮತಿ ಕೊಟ್ಟಿದ್ದೀರಾ, ಕೊಟ್ಟಿದ್ದರೆ ಅದರ ಒಂದು ಪ್ರತಿಯನ್ನು ಕಳಿಸಿಕೊಡಿ" ಎಂದು ಬರೆದೆ. ಅಧಿಕಾರಿ ಕೂಡಲೇ, ನಾನು ಕಳಿಸಿದ್ದ ಪೋಸ್ಟಲ್ ಆರ್ಡರನ್ನು ಹಿಂದೆ ಕಳಿಸಿ, ಉತ್ತರಿಸಿದರು: "ನೀವು ಈ ಮಾಹಿತಿಯನ್ನು ಸುಳ್ಯದಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು". ನಾನು ಮರು ಟಪಾಲು ಪುನಃ ನೋಂದಾಯಿತ ಅಂಚೆಯಲ್ಲಿಯೇ ಕಳಿಸಿ ಕಾನೂನು ಏನಿದೆಯೆಂದು ತಿಳಿಸಿದೆ. ಆ ಅಧಿಕಾರಿ ನೊಂದಾಯಿತ ಅಂಚೆಯಲ್ಲಿ ನಾನು ಕಳಿಸಿದ ಪತ್ರವನ್ನು ಸ್ವೀಕರಿಸಿದೆ ತಿರಸ್ಕರಿಸಿಬಿಟ್ಟರು!&lt;br /&gt;ನಾನು ಕೂಡಲೇ ಎಲ್ಲಾ ದಾಖಲೆಗಳನ್ನೂ ಇಟ್ಟು, ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಈ ದೂರಿನಲ್ಲಿ, ನನಗೆ ಖರ್ಚಾಗಿರುವ ಹಣವನ್ನು ಸದ್ರಿ ಅಧಿಕಾರಿಯಿಂದ ಕೊಡಿಸಿಕೊಡಬೇಕೆಂದು ಮನವಿ ಮಾಡಿದ್ದೇನೆ. ಜೊತೆಗೆ ಕಾನೂನನ್ನು ಕಲಿಸಿಕೊಟ್ಟಿರುವುದಕ್ಕಾಗಿ ನನಗೆ ಸೂಕ್ತ ಶುಲ್ಕವನ್ನೂ ಈ ಅಧಿಕಾರಿಯಿಂದ ಕೊಡಿಸಬೇಕೆಂದು ಕೇಳಿಕೊಂಡಿದ್ದೇನೆ. ನೋಡೋಣ ಪ್ರಕರಣ ಏನಾಗುತ್ತದೆ ಎಂದು.&lt;br /&gt;ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಿದ ನನ್ನ ಅಹವಾಲು ಮತ್ತು ದಾಖಲೆಗಳ ಯಥಾಪ್ರತಿಗಳನ್ನು ಸುಬ್ರಮಣ್ಯದ ವಲಯ ಅರಣ್ಯಾಧಿಕಾರಿಗೆ ಸಾಮಾನ್ಯ ಅಂಚೆಯಲ್ಲಿ ಕಳಿಸಿಕೊಟ್ಟಿದ್ದೆ. ಕೂಡಲೇ ಪ್ರತಿಕ್ರಿಯೆ ಬಂದಿದೆ: ಮಾಹಿತಿ ಕೇಳಿ ನಾನು ಸಲ್ಲಿಸಿದ ಅರ್ಜಿಯನ್ನು ಅವರೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಕಳಿಸಿಕೊಟ್ಟಿದ್ದಾರಂತೆ. ಪೋಸ್ಟಲ್ ಆರ್ಡರ್ ಗೆ ಏನು ವ್ಯವಸ್ಥೆ ಮಾಡಿದರೋ ತಿಳಿಯಲಿಲ್ಲ.&lt;br /&gt;ಅರಣ್ಯ ಇಲಾಖೆ ಮರಗಳನ್ನು ಉರುಳಿಸಲು ಅನುಮತಿ ಕೊಟ್ಟಿದೆಯೆ ಎಂಬುದು ಈ ಪ್ರಕರಣದ ಜೀವಾಳವಷ್ಟೆ. ಹಾಗಾಗಿ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮಾಹಿತಿ ಹಕ್ಕಿನಡಿಯಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದೇನೆ. ಪತ್ರ ಅವರಿಗೆ ಮುಟ್ಟಿದೆ. ಉತ್ತರ ಬಂದ ಕೂಡಲೇ ತಿಳಿಸುತ್ತೇನೆ.&lt;br /&gt;&lt;span class=""&gt;&lt;/span&gt;&lt;br /&gt;ಅಶೋಕವರ್ಧನರ ಪ್ರತಿಕ್ರಿಯೆ:&lt;br /&gt;&lt;span class=""&gt;&lt;/span&gt;&lt;br /&gt;ನಿಮ್ಮ ಹಿತ್ತಿಲ ಮದ್ದನ್ನು ಮುದ್ದಾಗಿ ತೋರುತ್ತಾ ಸುಬ್ರಹ್ಮಣ್ಯದಲ್ಲಿ ಜೋಯಿಸರುಗಳು ಪರಿಸರ ಭವಿಷ್ಯವನ್ನು ಹಾಳುಗೆಡಹುವ ಸಮಸ್ಯೆಯ ಸುಳಿಯೊಳಗೆ ಓದುಗರನ್ನು ಅನೌಪಚಾರಿಕವಾಗಿಯೇ ಆದರೆ ಖಚಿತವಾಗಿ ಸಿಕ್ಕಿಸಿದ್ದೀರಿ. ರಾಕ್ಷಸ ಸಾಮರ್ಥ್ಯಕ್ಕೂ ರಕ್ಕಸ ಕ್ರಿಯೆಗೂ ಮಧ್ಯೆ ಕಳೆದುಹೋದ ವಿವೇಚನೆಯನ್ನು ಭೂತಗನ್ನಡಿ ಇಟ್ಟು ತೋರಿದ್ದೀರಿ. ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯದ ಅನಾಮಧೇಯ ದೂರವಾಣಿ ಕರೆಯೊಂದು ಇದೇ ಸಮಸ್ಯೆಯ ಕುರಿತು ನನ್ನಲ್ಲಿನ ಪರಿಸರ ಪ್ರೇಮಿಯನ್ನು ಕ್ರಿಯಾಶೀಲವಾಗಿಸಲು ಪ್ರಯತ್ನಿಸಿತ್ತು. ನನಗಾ ಸ್ಥಳೀಯ ಬೇಜವಾಬ್ದಾರೀ ಶ್ರೀಸಾಮಾನ್ಯನ ಮಟ್ಟದಲ್ಲಿ ನಿಂತದ್ದಕ್ಕೆ ಅಸಮಾಧಾನವಿತ್ತು, ಊರಿನೆಲ್ಲಾ ದುಃಖಕ್ಕೆ ಪರಿಹಾರ ಹುಡುಕುವ ತಾಕತ್ತಿನವ ನಾನಲ್ಲ ಎನ್ನುವ ಬಗ್ಗೆ ಅರಿವೂ ಬೇಸರವೂ ಇತ್ತು. ನಿಮ್ಮ ಬರಹಕ್ಕೆ ಭೇಷ್, ಭಲೇ ಎನ್ನುವುದರೊಡನೆ ನಿಮ್ಮ ಕ್ರಿಯೆಯ ಭವಿಷ್ಯವೇನು ಎಂಬ ಕುತೂಹಲದಲ್ಲಿರುತ್ತೇನೆ.ಅಶೋಕವರ್ಧನ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-2637683111228428268?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/2637683111228428268/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=2637683111228428268&amp;isPopup=true' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/2637683111228428268'/><link rel='self' type='application/atom+xml' href='http://www.blogger.com/feeds/1105138094084974837/posts/default/2637683111228428268'/><link rel='alternate' type='text/html' href='http://sundararao.blogspot.com/2010/03/blog-post_12.html' title='ಜಾಗೆದು ಗುರ್ತೇ ಸಿಕ್ತಿಲ್ಲೆ!'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>2</thr:total></entry><entry><id>tag:blogger.com,1999:blog-1105138094084974837.post-4628670209161663050</id><published>2010-03-06T02:25:00.000-08:00</published><updated>2010-03-06T02:29:18.843-08:00</updated><title type='text'>ಕಸ ವಿಲೇವಾರಿಯ ಕಗ್ಗಂಟು</title><content type='html'>"ಆಧುನಿಕ"ವೆಂದು ಕರೆಸಿಕೊಳ್ಳುವ ಯಾವುದೇ ದೊಡ್ಡ ಊರಿಗೆ ನೀವು ಹೋಗಿ, ಇಡೀ ಊರಿನ ಗಾಳಿಯಲ್ಲಿ ಒಂದು ವಿಶಿಷ್ಟ ದುರ್ನಾತ ಹಾಸುಹೊಕ್ಕಾಗಿ ತುಂಬಿ ತುಳುಕುತ್ತಿರುತ್ತದೆ. ಈ ದುರ್ನಾತದ ಕಾಯಿಲೆ ಇತ್ತೀಚೆಗೆ ನಮ್ಮ ಬಿ.ಸಿ.ರೋಡಿನಂಥ ಸಣ್ಣ ಊರುಗಳಿಗೂ ಹಬ್ಬುತ್ತಿದೆ. ಮೊನ್ನೆ ಮೊನ್ನೆ ತಮಿಳುನಾಡಿನ ತಿರುಚ್ಚಿಗೆ ಹೋಗುವ ಪ್ರಸಂಗ ಬಂದಿತ್ತು. ಊರು ಶುರುವಾದಕೂಡಲೇ, ಇಡೀ ಊರಿನ ಎಲ್ಲರ ಮನೆಗಳಲ್ಲೂ ಏಕಕಾಲದಲ್ಲಿ ಮೂಲಂಗಿ ಹುಳಿ ಮಾಡುತ್ತಿದ್ದಾರೇನೋ ಎಂಬಂಥ ಉಸಿರು ಕಟ್ಟಿಸುವ ದುರ್ನಾತ. ಆದರೆ ಆ ಊರೊಳಗಿನ ಯಾರಿಗೂ ಈ ನಾತದ ಅರಿವೇ ಇದ್ದಂತೆ ಕಾಣಲಿಲ್ಲ! ಕಾಲೇಜುಗಳ ಕೆಮಿಸ್ಟ್ರಿ ಲ್ಯಾಬಿನಲ್ಲಿ ದಿನನಿತ್ಯ ಹೈಡ್ರೋಜನ್ ಸಲ್ಫೈಡಿನ ಹೊಲಸು ವಾಸನೆ ತಿಂದೂ ತಿಂದೂ, ಮೂಗು ಆ ವಾಸನೆಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿಬಿಟ್ಟಿರುತ್ತದೆ ಅದರೊಳಗೆ ಇರುವವರಿಗೆ. ಬಹುಶಃ ಇದೂ ಹಾಗೆಯೇ ಇರಬೇಕು. ಅಥವಾ ಆ ರೀತಿಯ ವಾಸನೆ ಇಲ್ಲದೆ ಹೋದರೆ ಅದು ತಮ್ಮ ಊರೇ ಅಲ್ಲ ಅನ್ನಿಸಿಬಿಡಬಹುದು ಅದು ಅಭ್ಯಾಸವಾದವರಿಗೆ.&lt;br /&gt;ನಮ್ಮ ಬಿ.ಸಿ.ರೋಡಿನ ಕೈಕಂಬವು ದುರ್ನಾತದ ಕೇಂದ್ರವಾಗಿದೆ ಎಂದೂ, ಅದಕ್ಕೆ ಏನಾದರೂ ಮಾಡಬೇಕೆಂದೂ ನನ್ನ ಹೈಕಮಾಂಡ್ ರಮಾದೇವಿ. ಪುರಾತನ ಕಾಲದಿಂದಲೂ ನನಗೆ ಹೇಳುತ್ತಲೇ ಇದ್ದಳು. "ಏನಾದರೂ ಮಾಡಬೇಕು" ಎಂದರೆ ನಾನು ಮುನಿಸಿಪಾಲಿಟಿಗೆ ದೂರು ಕೊಡಬೇಕು ಎಂಬುದು ಅವಳ ಪರೋಕ್ಷ ಸೂಚನೆ. ನಾನು ಮಾತ್ರ,&lt;br /&gt;"ನನಗೆ ಯಾವಾಗಲೂ ಶೀತ ಜಾಸ್ತಿ. ಹಾಗಾಗಿ ವಾಸನೆ ಬರುವುದು ಕಡಿಮೆ" ಎನ್ನುತ್ತಾ ಕಾಲಹರಣ ಮಾಡುತ್ತಲೇ ಇದ್ದೆ.&lt;br /&gt;"ಮೂಗಿಗೆ ಶೀತ ಆದರೇನು? ಕೊಳಕಿನ ರಾಶಿ ಕಣ್ಣಿಗೆ ಕಾಣುವುದಿಲ್ಲವೇ?"&lt;br /&gt;"ನಾನು ಸ್ಕೂಟರ್ ರೈಡ್ ಮಾಡುವಾಗ ಹಾಗೆಲ್ಲ ಆಚೆ ಈಚೆ ನೋಡುವುದಿಲ್ಲ, ರಸ್ತೆ ಮಾತ್ರ ನೋಡುವುದು!"&lt;br /&gt;ಇತ್ತೀಚೆಗೆ ಒಂದು ದಿನ ಅವಳಿಗೆ, ವಾಕಿಂಗ್ ಹೋದಲ್ಲಿ, ಅದೇ ಕೈಕಂಬದಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಡಾ. ಪ್ರತಿಭಾ ರೈ ಸಿಕ್ಕಿದ್ದರಂತೆ. ಈ ದುರ್ನಾತದ ಬಗ್ಗೆ ಅವರೂ ಸಾರ್ವಜನಿಕರ ಸಹಿ ಸಂಗ್ರಹಿಸಿ ಪುರಸಭೆಗೆ ದೂರು ಕೊಟ್ಟು ಹತಾಶರಾಗಿದ್ದರು. ಅವರ ಹತ್ತಿರವೂ ಈ ಬಗ್ಗೆ ವಿಚಾರ ವಿನಿಮಯವಾಯಿತು.&lt;br /&gt;ಅಂತೂ ಯಾವುದೋ ಒಂದು ಸುಮುಹೂರ್ತದಲ್ಲಿ ನನ್ನ ಹೆಂಡತಿ ಒಂದು ದೂರನ್ನು ಕಂಪ್ಯೂಟರಿನಲ್ಲಿ ಟೈಪಿಸಿಯೇ ಬಿಟ್ಟಳು. ಅದಕ್ಕೆ ವಿಳಾಸ ಬರೆದು ಪೋಸ್ಟಿಸುವ ಕೆಲಸವನ್ನು ಯಥಾಪ್ರಕಾರ ನನಗೆ ಅಂಟಿಸಿದಳು. "ಆಗಲಿ ಒಂದು ಹೆಜ್ಜೆಯಾದರೂ ಮುಂದೆ ಹೋಯಿತಲ್ಲ" ಎನ್ನುವ ಸಮಾಧಾನದಿಂದ ನಾನು ಕಾಗದವನ್ನು ಪೋಸ್ಟಿಗೆ ಹಾಕಿದೆ. ಕಾಗದ ಹೋಗಿ ಇಪ್ಪತ್ತು ದಿನವಾದರೂ ಉತ್ತರ ಬರಲಿಲ್ಲ. ವಾಸನೆಯೂ ಕಡಿಮೆಯಾಗಲಿಲ್ಲ.&lt;br /&gt;"ಈಗೇನು ಮಾಡುವುದು?" ಉತ್ತರ ಗೊತ್ತಿದ್ದ ಪ್ರಶ್ನೆ ಬಂತು.&lt;br /&gt;"ಇನ್ನೊಂದು ಪತ್ರ ಬರಿ". ಎರಡನೆಯ ಪತ್ರ ಹೋಯಿತು. ಆ ಪತ್ರಕ್ಕೂ ಅದೇ ಗತಿ! ಪುನಃ ಪ್ರಶ್ನೆ:&lt;br /&gt;"ಈಗೇನು ಮಾಡುವುದು?"&lt;br /&gt;"ಇನ್ನೂ ಒಂದು ಪತ್ರ ಬರಿ". ಮತ್ತೊಂದು ಪತ್ರ ಹೋಯಿತು. ಉತ್ತರದ ಸುದ್ದಿ ಇಲ್ಲ.&lt;br /&gt;"ಈಗೇನು ಮಾಡುವುದು?"&lt;br /&gt;"ಮೂರಕ್ಕೆ ಮುಕ್ತಾಯ. ಈವರೆಗೆ ಬರೆದ ಎಲ್ಲಾ ಪತ್ರಗಳ ಕಾಪಿ ಇಟ್ಟು ಡಿಸಿಗೆ ದೂರು ಕೊಡು. ಹಾಗೆ ದೂರು ಕೊಟ್ಟದ್ದನ್ನು ಪುರಸಭೆಗೆ ತಿಳಿಸು"&lt;br /&gt;ಅದೂ ಆಯಿತು. ಪತ್ರ ಹೋಗಿ ಒಂದೇ ವಾರದಲ್ಲಿ ರಿಜಿಸ್ಟರ್ ಅಂಚೆಯಲ್ಲಿ ಬಂಟ್ವಾಳ ಪುರಸಭೆಯ ಉತ್ತರ ಬಂತು: ಈ ಉತ್ತರ ಆಧುನಿಕ ಭಾರತದ ಕಸವಿಲೇವಾರಿಯ ಕಗ್ಗಂಟನ್ನು ಅತ್ಯಂತ ಸೊಗಸಾಗಿ ಮುಂದಿಟ್ಟಿದೆ ಎಂದು ನನಗನಿಸುತ್ತದೆ. ನೀವೂ ಒಂದು ಸಲ ಅದನ್ನು ಓದಿ ನೋಡಿ:&lt;br /&gt;&lt;span style="color:#ff0000;"&gt;"ಉಲ್ಲೇಖದಲ್ಲಿ ನಮೂದಿಸಿದ ಪತ್ರದ ಪ್ರಕಾರ ಬಿ. ಮೂಡ ಗ್ರಾಮದ ಕೈಕಂಬ ಪೊಳಲಿ ಕ್ರಾಸ್ ಬಸ್ ನಿಲ್ದಾಣದ ಬಳಿ ಕಸ ಸಂಗ್ರಹಿಸುವ ತೊಟ್ಟಿ ಇರುತ್ತದೆ. ಸದ್ರಿ ತೊಟ್ಟಿಗೆ ಸತ್ತ ಬೆಕ್ಕು ಅಪರೂಪಕ್ಕೆ ಸಾರ್ವಜನಿಕರು ಹಾಕುತ್ತಾರೆ. ಅಲ್ಲದೇ ಹಸಿ ಕೋಳಿಯ ತ್ಯಾಜ್ಯ ವಸ್ತುವನ್ನು ಸಹಾ ಹಾಕುತ್ತಿದ್ದು, ತೊಟ್ಟಿಯಿಂದ ಕಸವನ್ನು ಮತ್ತು ತ್ಯಾಜ್ಯವನ್ನು ವಿಲೇ ಮಾಡಲಾಗುತ್ತಿದೆ. ಫೆಬ್ರವರಿ ತಿಂಗಳಿಂದ ಡೋರ್ ಟು ಡೋರ್ ಕಸ ಸಂಗ್ರಹಿಸಲು ಆರಂಭಿಸಿದ್ದು, ಆರಂಭಿಕ ಹಂತದಲ್ಲಿದ್ದು ಜನರಿಗೆ ಮನವರಿಕೆ ಮಾಡಲಾಗಿದೆ. ಈ ಕಾರ್ಯ ಯಶಸ್ವಿಯಾದಲ್ಲಿ ತಕ್ಷಣ ಶೀಘ್ರದಲ್ಲಿ ಅಲ್ಲಿಯ ತೊಟ್ಟಿಯನ್ನು ತೆಗೆದು ಹಾಕಲಾಗುವುದು.&lt;br /&gt;ಘನತ್ಯಾಜ್ಯ ವಸ್ತು ವಿಲೇವಾರಿಗಾಗಿ ಪುರಸಭೆಗೆ ನಿವೇಶನವನ್ನು ಸಜಿಪನಡು ಗ್ರಾಮದಲ್ಲಿ ಗುರುತಿಸಿ, ಸಂಬಂಧಪಟ್ಟ ಇಲಾಖೆಯವರಿಂದ ಎನ್.ಓ.ಸಿ. ಪಡೆದು ಸ್ವಾಧೀನಪಡಿಸಲಾಗಿದೆ. ಸದ್ರಿ ನಿವೇಶನಕ್ಕೆ ಆವರಣ ಗೋಡೆ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಸ್ಥಳ ತಕರಾರು ಇಲ್ಲದಿದ್ದಲ್ಲಿ ಆ ನಿವೇಶನದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಮಾಡಲಾಗುವುದು. ಈ ಹಿಂದೆ ಬಿ. ಮೂಡ ಗ್ರಾಮದಲ್ಲಿ ಗುರುತಿಸಿದ ಸ್ಥಳದಲ್ಲಿ ಕಸ ವಿಲೇ ಮಾಡಲು ಸಾರ್ವಜನಿಕರು ಅಡ್ಡಿಪಡಿಸಿರುತ್ತಾರೆ. ಪ್ರಸ್ತುತ ಕಸವನ್ನು ಇಲ್ಲಿಂದ ಮಂಗಳೂರು ಮಹಾನಗರಪಾಲಿಕೆಗೆ ಒಳಪಟ್ಟ ಪಚ್ಚನಾಡಿಗೆ ಅನಧಿಕೃತವಾಗಿ ಸಾಗಿಸಲಾಗುತ್ತಿದೆ. ಇದು ಕಾನೂನುಬಾಹಿರವಾಗಿರುತ್ತದೆ. ಘನತ್ಯಾಜ್ಯ ವಸ್ತುವಿಲೇವಾರಿ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗಿದೆ. ಘನತ್ಯಾಜ್ಯ ವಸ್ತು ಸುಡುವುದರಿಂದ ಬಿಸಾಡುವುದರಿಂದ ಆಗುವ ತೊಂದರೆ ಬಗ್ಗೆ ಸಹಾ ತಿಳುವಳಿಕೆ ನೀಡಲಾಗಿದೆ. ಈ ಬಗ್ಗೆ ತಮ್ಮ ವತಿಯಿಂದ ಸಹಾ ಜನರಿಗೆ ಅರಿವು ಮೂಡಿಸಿದಲ್ಲಿ ಪುರಸಭೆಗೆ ತುಂಬಾ ಸಹಾಯವಾಗುತ್ತದೆ. ಪುರಸಭೆ ನಿರ್ಮಲ ಪರಿಸರದ ಬಗ್ಗೆ ಕಾಳಜಿ ಹೊಂದಿದೆ ಎಂದು ಈ ಮೂಲಕ ತಿಳಿಸಲಾಗಿದೆ"&lt;br /&gt;&lt;/span&gt;ಈ ಪತ್ರ ಎತ್ತಿರುವ ಬಹು ಮುಖ್ಯ ಸಮಸ್ಯೆ ತ್ಯಾಜ್ಯದ ವಿಲೇವಾರಿಗಾಗಿ ಸ್ಥಳ ಹುಡುಕಿಕೊಳ್ಳುವುದು. ನಮ್ಮ ಮನೆಯ ಎದುರಿಗೆ ಪುರಸಭೆ ಒಂದು ಕಸದ ತೊಟ್ಟಿ ತಂದಿಟ್ಟರೆ ನಾವು ತಕರಾರು ಮಾಡದೆ ಇರುತ್ತೇವೆಯೇ? ಮಾಡದೆ ಇರಲು ಸಾಧ್ಯವೆ? ನಮ್ಮ ಮನೆಗೆ ಸಮೀಪದ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಿದರೆ ನಾವು ಸುಮ್ಮನಿರುತ್ತೇವೆಯೇ? ನಾವೆಲ್ಲ ಕಸವನ್ನು ಎಷ್ಟು ಬೇಕಾದರೂ ಉತ್ಪತ್ತಿ ಮಾಡಿ ರಾಶಿ ಹಾಕುತ್ತೇವೆ. (ಅತ್ರಿ ಬುಕ್ ಸೆಂಟರ್ ಬಿಟ್ಟರೆ) ಎಲ್ಲಾ ಅಂಗಡಿಯವರೂ ಪೈಪೋಟಿಯಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸಾಮಾನು ತುಂಬಿಸಿಕೊಡುತ್ತಾರೆ. ಈ ತೊಟ್ಟೆಗಳು ತಮ್ಮ ಕೆಲಸ ಮುಗಿದ ಕೂಡಲೇ ಊರು ತುಂಬ ಹಾರಾಡತೊಡಗುತ್ತವೆ ಹೀಗೆ ಇಡೀ ನಮ್ಮ ಭಾರತ ದೇಶವನ್ನು ಒಂದು ಪ್ಲಾಸ್ಟಿಕ್ ತಿಪ್ಪೆ ಮಾಡಿಟ್ಟುಕೊಂಡಿದ್ದೇವೆ ನಾವು. ಈ ಸಮಸ್ಯೆಯನ್ನು ಪರಿಹಾರ ಮಾಡುವವರು ಯಾರು? ಹೇಗೆ?&lt;br /&gt;ಬಿ.ಮೂಡ ಗ್ರಾಮದಲ್ಲಿ ಬಂಟ್ವಾಳ ಪುರಸಭೆ ತ್ಯಾಜ್ಯವಿಲೇವಾರಿ ಘಟಕಕ್ಕಾಗಿ ಸ್ಥಳದ ವ್ಯವಸ್ಥೆಗೆ ಮುಂದಾದಾಗ ಸಹಜವಾಗಿ ಸ್ಥಳೀಯ ನಾಗರಿಕರು ವಿರೋಧಿಸಿದರು. ಆಗ ಕೆಲವರು ಬಳಕೆದಾರರ ವೇದಿಕೆಯನ್ನೂ ಸಂಪರ್ಕಿಸಿದ್ದರು. ವೇದಿಕೆಯ ನಾವು ಶಾನುಭಾಗರ ಹತ್ತಿರ ಸಲಹೆ ಕೇಳಿದೆವು. ಶಾನುಭಾಗರು "ನಾವು ಯಾರನ್ನೂ ಬೆಂಬಲಿಸುವುದು ಸಾಧ್ಯವಿಲ್ಲ. ತಜ್ಞರಿಗೆ ಸಮಸ್ಯೆಯನ್ನು ಬಿಡುವುದೇ ಇದಕ್ಕೆ ಪರಿಹಾರ" ಎಂದಿದ್ದರು.&lt;br /&gt;ಸಮಸ್ಯೆ ಹೀಗೆ ಬಿಡಿಸಲಾಗದ ಕಗ್ಗಂಟಾಗಿರುವುದನ್ನು ಈ ಅಧಿಕಾರಿ ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಯಾವುದೇ ಮುಲಾಜಿಲ್ಲದೆ "ಪ್ರಸ್ತುತ ಕಸವನ್ನು ಇಲ್ಲಿಂದ ಮಂಗಳೂರು ಮಹಾನಗರಪಾಲಿಕೆಗೆ ಒಳಪಟ್ಟ ಪಚ್ಚನಾಡಿಗೆ ಅನಧಿಕೃತವಾಗಿ ಸಾಗಿಸಲಾಗುತ್ತಿದೆ. ಇದು ಕಾನೂನುಬಾಹಿರವಾಗಿರುತ್ತದೆ" ಎಂದಿದ್ದಾರೆ. ಈಗ ಬಂಟ್ವಾಳದ ನಾಗರಿಕರ ಮುಂದೆ ಎರಡು ದಾರಿಗಳಿವೆ: ಒಂದೋ ಅವರು ತಮಗೂ ಹಂದಿಗಳಿಗೂ ವ್ಯತ್ಯಾಸವೇ ಇಲ್ಲದಂತೆ ಕಸದ ರಾಶಿಯ ನಡುವೆ, ಸತ್ತ ಬೆಕ್ಕು, ಹಸಿ ಕೋಳಿಯ ತ್ಯಾಜ್ಯದ ವಾಸನೆ ಇವುಗಳನ್ನು ಸಹಿಸಿಕೊಳ್ಳುತ್ತಾ ಬದುಕಬೇಕು; ಅಥವಾ ಕಾನೂನುಬಾಹಿರವಾಗಿ ಕಸ ಸಾಗಿಸುವುದನ್ನು ಒಪ್ಪಿಕೊಳ್ಳಬೇಕು. ಕಸ ಸಾಗಿಸುವ ಕಾನೂನುಬಾಹಿರ ಕಾರ್ಯವನ್ನು ಒಪ್ಪಿಕೊಂಡರೆ, ನಾಳೆ ಇದೇ ಅಧಿಕಾರಿ "ಲಂಚ ಕೊಡದೆ ಪುರಸಭೆಯಲ್ಲಿ ಕೆಲಸ ಮಾಡಿಕೊಡುವುದು ಸಾಧ್ಯವೇ ಇಲ್ಲ" ಎಂಬ ವಾದವನ್ನೂ ಇಷ್ಟೇ ತರ್ಕಬದ್ಧವಾಗಿ ನಿಮ್ಮೆದುರಿಗೆ ಮಂಡಿಸಿ, ಅದಕ್ಕೆ ಕಸ ಸಾಗಿಸುವ ಕಾನೂನುಬಾಹಿರ ಕಾರ್ಯದ ಉದಾಹರಣೆಯ ಬೆಂಬಲ ಕೊಟ್ಟು, ನ್ಯಾಯದ ಮಾತಾಡುವ ನಿಮ್ಮನ್ನು ಹಾಸ್ಯಾಸ್ಪದ ಮಾಡಿಬಿಡಬಹುದು. ಯಾವುದನ್ನು ಒಪ್ಪುವುದು? ಯಾವುದನ್ನು ಬಿಡುವುದು?&lt;br /&gt;ನಾವಂತೂ ಜಿಲ್ಲಾಧಿಕಾರಿಗಳಿಗೆ ಬರೆದು ಈ ಸಮಸ್ಯೆಗೆ ಕಾನೂನಿನ ಮಿತಿಯಲ್ಲೇ ಒಂದು ಪರಿಹಾರವನ್ನು ಕಂಡುಕೊಳ್ಳಬೇಕೆಂದು ಆಗ್ರಹಿಸಲಿದ್ದೇವೆ. ಆದರೆ ಎಲ್ಲಾ ಊರುಗಳಲ್ಲೂ "ಕಸವನ್ನು ಹಾಕಲು ಜಾಗ ಎಲ್ಲಿ?" ಎಂಬ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಾ ಹೋಗುವುದು ಖಂಡಿತ.&lt;br /&gt;ಕಸದ ತೊಟ್ಟಿಗೆ ಏನು ಹಾಕಬಹುದು, ಏನು ಹಾಕಬಾರದು ಎಂಬ ವಿವೇಚನೆಯೇ ಇಲ್ಲದೆ, ತಮಗೆ ಬೇಡದ್ದನ್ನೆಲ್ಲ ತಂದು ಹಾಕುವ ನಾಗರಿಕರ ಸಮಸ್ಯೆಯನ್ನೂ ಈ ಅಧಿಕಾರಿ ಪ್ರಸ್ತಾಪಿಸಿದ್ದಾರೆ. ಶಿಕ್ಷಣ ಹೆಚ್ಚಾದಂತೆ ಈ ಸಮಸ್ಯೆ ಕಡಿಮೆ ಆದೀತೆಂದು ಆಶಿಸಬಹುದು ಅಷ್ಟೇ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-4628670209161663050?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/4628670209161663050/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=4628670209161663050&amp;isPopup=true' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/4628670209161663050'/><link rel='self' type='application/atom+xml' href='http://www.blogger.com/feeds/1105138094084974837/posts/default/4628670209161663050'/><link rel='alternate' type='text/html' href='http://sundararao.blogspot.com/2010/03/blog-post.html' title='ಕಸ ವಿಲೇವಾರಿಯ ಕಗ್ಗಂಟು'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>0</thr:total></entry><entry><id>tag:blogger.com,1999:blog-1105138094084974837.post-1355883494879089733</id><published>2009-12-19T03:04:00.000-08:00</published><updated>2009-12-19T03:05:44.467-08:00</updated><title type='text'>ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ- ಭಾಗ ೨</title><content type='html'>ಕಾರ್ಪೋರೇಟ್ ಕಂಪೆನಿಗಳು ತಮ್ಮ ಕೆಲಸವನ್ನು ತುಂಬಾ ವ್ಯವಸ್ಥಿತವಾಗಿಯೂ, ನಿಖರವಾಗಿಯೂ ಮಾಡುತ್ತವೆ, ಖಚಿತವಾದ ಪೂರ್ವ ಲೆಕ್ಕಾಚಾರ ಇಲ್ಲದೆ ಯಾವ ವ್ಯವಹಾರಕ್ಕೂ ಮುಂದುವರಿಯುವುದಿಲ್ಲ ಎಂದೆಲ್ಲ ನಾನು ಭಾವಿಸಿದ್ದೆ. ಆದರೆ ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿಯು ನನ್ನ ನಂಬಿಕೆ ಬುಡಭದ್ರವಿಲ್ಲದ್ದು ಎಂದು ಸಾಧಿಸಿ ತೋರಿಸಿದೆ.&lt;br /&gt;ಹಿಂದಿನ ನನ್ನ ಲೇಖನದಲ್ಲಿ ಎಂ ಎಸ್ ಇ ಝಡ್ ವಿರುದ್ಧ ಮಾಹಿತಿ ಹಕ್ಕು ಆಯುಕ್ತರಿಗೆ ದೂರು ಸಲ್ಲಿಸಿದ ವಿಷಯ ಹೇಳಿದ್ದೆ. ತಾ. ೧೭-೧೨-೨೦೦೯ರಂದು ಕಂಪೆನಿ ನಾನು ಕೇಳಿದ ಮೂರು ಮಾಹಿತಿಗಳಲ್ಲಿ ಎರಡನ್ನು ಕೊಟ್ಟು, ಕೊಳಚೆ ನೀರು ಸಂಸ್ಕರಣದ ಕುರಿತ ಮಾಹಿತಿಯನ್ನು ಮಂಗಳೂರು ಮಹಾನಗರಪಾಲಿಕೆಯಿಂದ ಪಡೆಯಲು ನನಗೆ ಸೂಚಿಸಿದೆ. ಇದಕ್ಕೆ ನಾನು ಹೀಗೆ ಉತ್ತರ ಬರೆದಿದ್ದೇನೆ: "ಮಾಹಿತಿ ಹಕ್ಕು ೨೦೦೫ರ ಪ್ರಕಾರ ಒಂದು ವೇಳೆ ಮಾಹಿತಿ ನಿಮ್ಮಲ್ಲಿ ಇಲ್ಲದಿದ್ದರೆ ಅದು ಎಲ್ಲಿ ದೊರೆಯುತ್ತದೆಯೋ ಅಲ್ಲಿಗೆ ನನ್ನ ಅರ್ಜಿಯನ್ನು ಐದು ದಿನಗಳ ಒಳಗೆ ಕಳಿಸಿಕೊಟ್ಟು, ಹಾಗೆ ಮಾಡಿರುವುದನ್ನು ನನಗೆ ತಿಳಿಸುವುದು ನಿಮ್ಮದೇ ಕರ್ತವ್ಯವಾಗಿರುತ್ತದೆ. ಆದ್ದರಿಂದ ನನ್ನ ಅರ್ಜಿಯನ್ನು ನೀವೇ ಮಂಗಳೂರು ಮಹಾನಗರಪಾಲಿಕೆಗೆ ಕಳಿಸಿಕೊಡಬೇಕಾಗಿ ಕೋರುತ್ತೇನೆ.&lt;br /&gt;ನಿದರ್ಶನಕ್ಕಾಗಿ ಜಿಲ್ಲಾಧಿಕಾರಿಯ ಕಚೇರಿಯಿಂದ ನನಗೆ ಬಂದಿರುವ ಪತ್ರದ ಯಥಾಪ್ರತಿಯನ್ನು ಕಳಿಸಿದ್ದೇನೆ".&lt;br /&gt;ಅದಿರಲಿ. ಕಂಪೆನಿಯ ಹತ್ತಿರ ಈ ಮಾಹಿತಿ ಇಲ್ಲವೆಂಬುದು ಈ ಉತ್ತರದಿಂದ ಖಚಿತವಾಯ್ತಷ್ಟೆ. ಕೊಳಚೆ ನೀರು ಘಟಕಗಳಿಂದ ದೊರೆಯುವ ನೀರಿನ ಪ್ರಮಾಣದ ಬಗ್ಗೆ ಯಾರು ಏನೇ ಹೇಳಲಿ, ಜವಾಬ್ದಾರಿಯಿಂದ ವರ್ತಿಸುವ ಯಾವುದೇ ಕಂಪೆನಿ ಅದನ್ನು ಸ್ವತಃ ತಾನು ಅಧ್ಯಯನ ಮಾಡಿ ಖಚಿತ ಪಡಿಸಿಕೊಳ್ಳಲೇ ಬೇಕು. (ಈ ನಡುವೆ ಮಹಾನಗರಪಾಲಿಕೆಗೂ ವಿಶೇಷ ಆರ್ಥಿಕ ವಲಯ ಕಂಪೆನಿಗೂ ಈ ಬಗ್ಗೆ ಒಪ್ಪಂದವೇನಾದರೂ ಆಗಿದೆಯೆ, ಪಾಲಿಕೆ ಆ ನೀರನ್ನು ಕಂಪೆನಿಗೆ ಕೊಡಲು ಒಪ್ಪಿದೆಯೆ ಎಂಬ ಪ್ರಶ್ನೆಯೂ ಇದೆ. ಕೊಳಚೆ ನೀರು ಶುದ್ಧೀಕರಿಸಲು ಸಾಕಷ್ಟು ಖರ್ಚಿದೆ. ಪಾಲಿಕೆಯ ನೀರಿನ ರೇಟು ಕಂಪೆನಿಗೆ ಪೂರೈಸುತ್ತದೆಯೆ ಎಂಬ ಅಂಶವೂ ತೀರ್ಮಾನವಾಗಬೇಕಾಗುತ್ತದೆ. ಪೈಪ್ ಲೈನಿನ ಬಹು ಮುಖ್ಯ ಭಾಗ ಮಂಗಳೂರು ಪೇಟೆಯಲ್ಲಿಯೇ ಹಾದು ಹೋಗಬೇಕಾಗಿ ಬಂದರೆ ಅದನ್ನು ಅಳವಡಿಸಲು ಬೇಕಾದ ಜಮೀನಿನ ಏರ್ಪಾಟು ಖಂಡಿತಾ ಸುಲಭವಲ್ಲ.) ಹಾಗೆ ಖಚಿತಪಡಿಸಿಕೊಳ್ಳದೆ ಹೋದರೆ ಅಗತ್ಯ ಪ್ರಮಾಣದ ನೀರು ಸಿಗುತ್ತದೆ ಎಂದು ಯಾವ ಗ್ಯಾರಂಟಿ? ಮುಂದೆ ಮಳೆನೀರಿನ ಬಗ್ಗೆ ಕಂಪೆನಿ ಕೊಟ್ಟಿರುವ ಉತ್ತರ ನೋಡಿದರೆ, ಕೊಳಚೆ ನೀರನ್ನು ಶುದ್ಧೀಕರಿಸಿ ಒದಗಿಸಿಕೊಳ್ಳುವ ಮಾತು ಕೂಡ ಯಾವ ಅಧ್ಯಯನವನ್ನೂ ಆಧರಿಸದ ಕೇವಲ ಪೊಳ್ಳುಮಾತಾಗಿ ಕಾಣುತ್ತದೆ.&lt;br /&gt;ಮಳೆನೀರು ಸಂಗ್ರಹದ ಕುರಿತಂತೆ ಕಂಪೆನಿಯ ಉತ್ತರ ಹೀಗಿದೆ:&lt;br /&gt;"ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಯ ಕಾಮಗಾರಿಯು ಈಗಷ್ಟೇ ಆರಂಭವಾಗಿದ್ದು, ತತ್ ಕ್ಷಣಕ್ಕೆ ದಿನವಹಿ ೪೫ ಎಂ.ಜಿ.ಡಿ. ನೀರು ಅವಶ್ಯಕತೆ ಇರುವುದಿಲ್ಲ. ಬಹು ಉತ್ಪಾದನಾ ವಿಶೇಷ ಆರ್ಥಿಕ ವಲಯ (Multi Product SEZ) ಸ್ಥಾಪನೆಯಾಗುವ ಸಂದರ್ಭದಲ್ಲಿ ನೀರಿನ ಅವಶ್ಯಕತೆಗೆ ಅನುಗುಣವಾಗಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು".&lt;br /&gt;ಈ ಮಾತಿನ ಅರ್ಥ ಅತ್ಯಂತ ಸ್ಪಷ್ಟ: ಮಳೆ ನೀರು ಸಂಗ್ರಹದ ವಿಷಯದಲ್ಲಿ ಕಂಪೆನಿ ಈವರೆಗೂ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ! ಇದರ ಸಾಧ್ಯಾಸಾಧ್ಯತೆಯ ಬಗ್ಗೆ (ನಾನು ನನ್ನ ಲೇಖನದಲ್ಲಿ ತಲೆ ಕೆಡಿಸಿಕೊಂಡಷ್ಟು ಸಹ) ತಲೆ ಕೆಡಿಸಿಕೊಂಡಿಲ್ಲ. ವಾಸ್ತವವಾಗಿ ತನ್ನ ನೀರಿನ ಅಗತ್ಯ ಎಷ್ಟು ಎಂಬುದೂ ಅದಕ್ಕೆ ಸರಿಯಾಗಿ ತಿಳಿದಿಲ್ಲ. ಹಾಗಿದ್ದರೂ ಅದರ ಜಾಹೀರಾತು ಸ್ಪಷ್ಟವಾಗಿ ಹೇಳುತ್ತದೆ: "ಮಳೆನೀರನ್ನು ಸಂಗ್ರಹಿಸಿ ೧೨ ಎಂಜಿಡಿ ನೀರನ್ನು ಒದಗಿಸಿಕೊಳ್ಳಲಾಗುವುದು" ಎಂದು. ಈ ಮಾತಿನ ಉದ್ದೇಶ ಸಾಮಾನ್ಯ ಜನರನ್ನು ಮಂಗ ಮಾಡುವುದು ಬಿಟ್ಟು ಬೇರೇನು ಇರಲು ಸಾಧ್ಯ? ಜನಸಾಮಾನ್ಯರನ್ನು ಹಾದಿ ತಪ್ಪಿಸುವ ಈ ಜಾಹೀರಾತಿನ ಅಂತಿಮ ಒಳ ಉದ್ದೇಶ ಬೇರೇನೋ ಇರಬಹುದೇ? (ಇಲ್ಲಿ ಜಾಗ ತೆಗೆದುಕೊಂಡು ಕೈಗಾರಿಕೆ ಸ್ಥಾಪಿಸಬಯಸುವ ಯಾವುದೇ ಕಂಪೆನಿಯನ್ನು ಇಂಥ ಜಾಹೀರಾತಿನಿಂದ ಮರುಳು ಮಾಡುವುದು ಖಂಡಿತ ಸಾಧ್ಯವಿಲ್ಲ). ಹಾಗಾಗಿ ಈ ಜಾಹೀರಾತಿನ ಗುರಿ ಜನಸಾಮಾನ್ಯರೇ ಎಂದು ಭಾವಿಸಬೇಕಾಗುತ್ತದೆ.&lt;br /&gt;ನೇತ್ರಾವತಿ ಮತ್ತು ಗುರುಪುರ ನದಿಗಳಿಂದ ನೀರು ಸರಬರಾಜಿನ ಬಗ್ಗೆ:&lt;br /&gt;ಈ ಕುರಿತು ಕರ್ನಾಟಕ ಸರಕಾರವು ಅನುಮತಿ ನೀಡಿರುವುದರ ದಾಖಲೆಯನ್ನು ಕಂಪೆನಿ ನನಗೆ ನೀಡಿದೆ. ಜೊತೆಗೇ ಮತ್ತೊಂದು ಕುತೂಹಲಕರವಾದ ಮಾಹಿತಿಯನ್ನು ನೀಡಿದೆ: "ನೇತ್ರಾವತಿಯ ನೀರಿಗಾಗಿ ಎ. ಎಂ. ಆರ್. ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ಅದು ಹೇಳಿದೆ.&lt;br /&gt;ಎ. ಎಂ. ಆರ್. ಎಂಬುದು ಒಂದು ಖಾಸಗಿ ಕಂಪೆನಿ. ಅದು ಬಂಟ್ವಾಳ ತಾಲೂಕಿನ ಶಂಬೂರಿನ ಹತ್ತಿರ ನೇತ್ರಾವತಿ ನದಿಯಲ್ಲಿ ಒಂದು ಕಿರು ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದೆ. ಅಲ್ಲಿ ಈಗಾಗಲೇ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಿದೆ. ಈ ಬಗ್ಗೆ ಈಗ ಬರೆಯುವುದಿಲ್ಲ. ಅಧ್ಯಯನ ಮಾಡಿ ಮತ್ತೆ ಬರೆಯುತ್ತೇನೆ. ಈ ಒಪ್ಪಂದದ ಪ್ರತಿಯನ್ನು ಕಳಿಸಿಕೊಡುವಂತೆ ಪುನಃ ಮಾಹಿತಿ ಹಕ್ಕಿನಡಿ ಕಂಪೆನಿಗೆ ಅರ್ಜಿ ಸಲ್ಲಿಸಿದ್ದೇನೆ.&lt;br /&gt;ಗುರುಪುರ ನದಿಯಿಂದ ನೀರೆತ್ತುವ ಬಗ್ಗೆ ಕಂಪೆನಿ ಮೌನ ವಹಿಸಿದೆ. ಯಾವ ಮಾಹಿತಿಯನ್ನೂ ಕೊಟ್ಟಿಲ್ಲ.&lt;br /&gt;ಒಟ್ಟಿನ ಮೇಲೆ ಕಂಪೆನಿ ನನಗೆ ನೀಡಿರುವ ಉತ್ತರ ಮತ್ತು ಮಾಹಿತಿಯನ್ನು ಆಧರಿಸಿ ತೀರ್ಮಾನಿಸಬಹುದಾದ್ದು ಇಷ್ಟು: ಕಂಪೆನಿಯ ಕಣ್ಣು ಮುಖ್ಯವಾಗಿ ನೆಟ್ಟಿರುವುದು ನೇತ್ರಾವತಿ ನದಿಯ ನೀರಿನ ಮೇಲೆ ಮಾತ್ರ. ಕೊಳಚೆ ನೀರು ಸಂಸ್ಕರಣೆ, ಮಳೆ ನೀರು ಸಂಗ್ರಹ ಎಂದೆಲ್ಲ ಅದು ಹೇಳುತ್ತಿರುವುದು ಜನಸಾಮಾನ್ಯರಿಗೆ ಅರ್ಥವಾಗದ ಬೇರೆ ಯಾವುದೋ ಉದ್ದೇಶದಿಂದ.&lt;br /&gt;*************&lt;br /&gt;ಮಾಹಿತಿಗಾಗಿ ಅರ್ಜಿ ಸಲ್ಲಿಸುವವರನ್ನು ಸತಾಯಿಸುವ ಇನ್ನೊಂದು ವಿಧಾನವನ್ನು ನಮ್ಮ ಅಧಿಕಾರಿಗಳು ಅನುಸರಿಸುತ್ತಾರೆ. ಅದಕ್ಕೊಂದು ಉದಾಹರಣೆ:&lt;br /&gt;ಸಣ್ಣ ನೀರಾವರಿ ಇಲಾಖೆಯಿಂದ ನಾನು ಕೇಳಿದ ಒಂದು ಮಾಹಿತಿಗೆ ಇಲಾಖೆ "ಮಾಹಿತಿಗಾಗಿ ಒಂದು ರೂಪಾಯಿ ಕಳಿಸಿಕೊಡಿ" ಎಂದು ನನಗೆ ತಿಳಿಸಿತು. ಒಂದು ರೂಪಾಯಿ ಕಳಿಸುವುದರ ಕಷ್ಟ ಅನುಭವಿಸಿದವನಿಗೇ ಗೊತ್ತು. ಮನಿ ಆರ್ಡರನ್ನು ಇಲಾಖೆ ಸ್ವೀಕರಿಸುವುದಿಲ್ಲ. ನಮ್ಮ ಬಿ.ಸಿ.ರೋಡಿನ ಅಂಚೆ ಕಛೇರಿಯಲ್ಲಿ ಒಂದು ರೂಪಾಯಿಯ ಪೋಸ್ಟಲ್ ಆರ್ಡರ್ ಸಿಗುವುದಿಲ್ಲ. ಡಿಡಿ ತೆಗೆಯುವುದೆಂದರೆ ಕಮಿಷನ್ನೇ ಹದಿನೈದೋ ಇಪ್ಪತ್ತೋ ರೂಪಾಯಿ ಆಗುತ್ತದೆ. ಪುನಃ ಅದನ್ನು ನೊಂದಾಯಿತ ಅಂಚೆಯಲ್ಲಿ ಕಳಿಸಲು ಇಪ್ಪತ್ತು ರೂ. ಖರ್ಚು!&lt;br /&gt;ಆ ಅಧಿಕಾರಿ ನನಗೆ ಪತ್ರವನ್ನು ಸಾಧಾರಣ ಅಂಚೆಯಲ್ಲಿ ಕಳಿಸಿದ್ದರು. ಬೆಂಗಳೂರಿನಲ್ಲಿ "ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಇಲಾಖೆ" ಎಂಬುದೊಂದು ಇದೆ. ನಾನು ಆ ಇಲಾಖೆಗೆ ಒಂದು ಪತ್ರ ಬರೆದು ಸಮಸ್ಯೆಯನ್ನು ವಿವರಿಸಿ, ಜೊತೆಗೆ ಹೀಗೆ ಸೇರಿಸಿದೆ. "ಅವರು ಬರೆದ ಪತ್ರದಿಂದ ಸರಕಾರಕ್ಕೆ ಸಿಗುವುದು ಒಂದು ರೂಪಾಯಿ. ಆ ಒಂದು ರೂಪಾಯಿಗಾಗಿ ಅವರು ಸ್ಟ್ಯಾಂಪಿಗೆ ಐದು ರೂ., ಕವರಿಗೆ ಐವತ್ತು ಪೈಸೆ, ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಪ್ರಿಂಟ್ ತೆಗೆದ ಪತ್ರಕ್ಕೆ ಕಡಿಮೆ ಎಂದರೂ ಹದಿನೈದು ರೂಪಾಯಿ, ಉಳಿದ ಕೆಲಸಗಳಿಗೆ ಎರಡು ರೂಪಾಯಿ - ಹೀಗೆ ಒಟ್ಟು ಇಪ್ಪತ್ತೆರಡೂವರೆ ರೂ. ಖರ್ಚು ಮಾಡಿದ್ದಾರೆ. ಇದೇ ತಂತ್ರವನ್ನು ಇನ್ನೂ ಅನೇಕ ಅಧಿಕಾರಿಗಳು ಬಳಸುತ್ತಿರಬಹುದು. ಆದ್ದರಿಂದ ಎಲ್ಲರಿಗೂ ಅನ್ವಯವಾಗುವಂತೆ ಈ ಸಮಸ್ಯೆಗೆ ಒಂದು ಪರಿಹಾರ ಒದಗಿಸುವಂತೆ ಕೋರುತ್ತೇನೆ". (ಅವರಿಂದ ಇನ್ನೂ ಉತ್ತರ ಬಂದಿಲ್ಲ. ಆದರೆ ಬರುವ ಸಾಧ್ಯತೆ ಇದೆ. ಕಾಯೋಣ!)&lt;br /&gt;ಮೇಲಿನ ಪತ್ರದ ಯಥಾಪ್ರತಿಯನ್ನಿಟ್ಟು, ಐದು ರೂಪಾಯಿಯ ಒಂದು ಪೋಸ್ಟಲ್ ಆರ್ಡರ್ ಲಗತ್ತಿಸಿ, ಸಣ್ಣ ನೀರಾವರಿ ಇಲಾಖೆಗೆ ಒಂದು ಪತ್ರವನ್ನು ಸಾಧಾರಣ ಅಂಚೆಯಲ್ಲಿಯೇ ರವಾನಿಸಿದೆ: "ಈ ಪತ್ರದೊಂದಿಗೆ ಐದು ರೂಪಾಯಿಯ ಪೋಸ್ಟಲ್ ಆರ್ಡರನ್ನು ಇಟ್ಟಿದ್ದೇನೆ. ಈ ಪೈಕಿ ಒಂದು ರೂಪಾಯಿಯನ್ನು ಮಾಹಿತಿಗೆ ಮತ್ತು ಉಳಿದ ನಾಲ್ಕು ರೂಪಾಯಿಗಳನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿ/ ಮುಖ್ಯಮಂತ್ರಿಗಳ ಪರಿಹಾರ ನಿಧಿ/ ನೆರೆ ಪರಿಹಾರ ನಿಧಿಗೆ ಜಮಾ ಮಾಡಿಕೊಂಡು ನನಗೆ ಮಾಹಿತಿಯನ್ನು ಕಳಿಸಿಕೊಡಿರಿ"&lt;br /&gt;ಅಧಿಕಾರಿ ಮಾಹಿತಿಯನ್ನು ಕಳಿಸಿಕೊಟ್ಟರು. ಜೊತೆಗೆ ಮಾಹಿತಿಗೆ ಒಂದು ರೂಪಾಯಿಗೆ ರಶೀದಿ, ಪ್ರಕೃತಿ ವಿಕೋಪ ಪರಿಹಾರ ನಿಧಿಗೆ, ಟ್ರೆಶರಿಯಲ್ಲಿ ಚಲನ್ ತುಂಬಿಸಿ ನಾಲ್ಕು ರೂ. ಕಟ್ಟಿದ್ದರ ರಶೀದಿಯ ಯಥಾಪ್ರತಿ ಇವುಗಳೂ ಇದ್ದವು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-1355883494879089733?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/1355883494879089733/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=1355883494879089733&amp;isPopup=true' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/1355883494879089733'/><link rel='self' type='application/atom+xml' href='http://www.blogger.com/feeds/1105138094084974837/posts/default/1355883494879089733'/><link rel='alternate' type='text/html' href='http://sundararao.blogspot.com/2009/12/blog-post_19.html' title='ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ- ಭಾಗ ೨'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>1</thr:total></entry><entry><id>tag:blogger.com,1999:blog-1105138094084974837.post-5303129978282387789</id><published>2009-12-16T08:37:00.000-08:00</published><updated>2009-12-16T08:39:24.933-08:00</updated><title type='text'>ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ</title><content type='html'>ಈ ಕುರಿತಾದ ನನ್ನ ಮೊದಲಿನ ಲೇಖನಕ್ಕೆ ಎಂ ಎಸ್ ಇ ಝಡ್ ತಾ. ೬-೧೦-೦೯ರ ಉದಯವಾಣಿಯಲ್ಲಿ ಪ್ರಕಟಿಸಿದ ಜಾಹೀರಾತನ್ನು ಆಧಾರವಾಗಿ ಇಟ್ಟುಕೊಂಡಿದ್ದೆ. ನನ್ನ ವಿಶ್ಲೇಷಣೆಯ ದೋಷಗಳು ನನಗೆ ತಿಳಿಯುವುದಿಲ್ಲ. ಹಾಗಾಗಿ, ಕಂಪೆನಿ ಯಾವ ಅಧ್ಯಯನವನ್ನು ಆಧರಿಸಿ ಈ ಅಂಕಿ ಅಂಶಗಳನ್ನು, ಮಾಹಿತಿಯನ್ನು ಪ್ರಕಟಿಸಿದೆ ಎಂದು ತಿಳಿಯುವ ಕುತೂಹಲದಿಂದ, ಮಾಹಿತಿ ಹಕ್ಕನ್ನು ಬಳಸಿ ಎಂ ಎಸ್ ಇ ಝಡ್ ಗೆ ಅರ್ಜಿ ಹಾಕಿ ಈ ಮೂರು ಮಾಹಿತಿಗಳನ್ನು ಕೇಳಿದ್ದೆ:&lt;br /&gt;೧. ಮಂಗಳೂರು ಮಹಾನಗರ ಪಾಲಿಕೆಯ ಕೊಳಚೆ ನೀರು ಸಂಸ್ಕರಣಾ ಘಟಕಗಳಿಂದ ೧೮ ಎಂಜಿಡಿ ನೀರು ದೊರೆಯುವುದಕ್ಕೆ ಆಧಾರಗಳು, ಈ ತೀರ್ಮಾನಕ್ಕೆ ಬರಲು ನಡೆಸಿದ ಅಧ್ಯಯನದ ಸಂಪೂರ್ಣ ವಿವರ. ಹೀಗೆ ಪಡೆಯುವ ನೀರಿಗೆ ತಗಲಬಹುದಾದ ಖರ್ಚು ಎಷ್ಟು.&lt;br /&gt;೨. ನೈಸರ್ಗಿಕ ಅಣೆಕಟ್ಟುಗಳನ್ನು ನಿರ್ಮಿಸಿ ಮಳೆನೀರು ಸಂಗ್ರಹಿಸಿ ೧೨ ಎಂಜಿಡಿ ನೀರು ಪಡೆಯುವ ಹೇಳಿಕೆಗೆ ಆಧಾರ, ಈ ಬಗ್ಗೆ ನಡೆಸಿರುವ ಅಧ್ಯಯನದ ಸಂಪೂರ್ಣ ವಿವರ (ಸಂಗ್ರಹಾಗಾರದ ಸ್ವರೂಪ, ಅದು ಕೆರೆಯ ರೂಪದಲ್ಲಿರುತ್ತದೆಯೆ ಅಥವಾ ಕಾಂಕ್ರೀಟ್ ಇತ್ಯಾದಿ ಬಳಸಿ ಟ್ಯಾಂಕುಗಳನ್ನು ನಿರ್ಮಿಸಲಾಗುವುದೆ, ಒಟ್ಟು ಎಷ್ಟು ಎಕರೆ ಪ್ರದೇಶದಲ್ಲಿ ಇತ್ಯಾದಿ ವಿವರಗಳು)&lt;br /&gt;೩. ಗುರುಪುರ ಮತ್ತು ನೇತ್ರಾವತಿಗೆ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದೆ? ಹೀಗೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ನೀಡಿರುವ ಅನುಮತಿಯ (ಲೈಸೆನ್ಸ್) ಯಥಾಪ್ರತಿ.&lt;br /&gt;ಈ ಅರ್ಜಿಗೆ ಕಂಪೆನಿ ಅಮೋಘ ಒಂದು ಸಾಲಿನ ಉತ್ತರ ನೀಡಿತು: "ನೀವು ಕೋರಿದ ಮಾಹಿತಿಯಂತೆ ದಿನಾಂಕ ೬-೧೦-೨೦೦೯ರ ಉದಯವಾಣಿಯಲ್ಲಿ ನಾವು ಯಾವುದೇ ಜಾಹೀರಾತನ್ನು ನೀಡಲಿಲ್ಲವೆಂದು ಈ ಮೂಲಕ ತಿಳಿಸಬಯಸುತ್ತೇವೆ". "ಕೆಪ್ಪ ಅಂದರೆ ಕೊಪ್ಪದ ಕಡೆ" ಅಂತ ನಮ್ಮೂರು ಕೊಪ್ಪದ ಕಡೆ ಒಂದು ಗಾದೆ. ಇರಲಿ. ನಾನು ಪ್ರತಿ ಬಾಣ ಬಿಟ್ಟೆ:&lt;br /&gt;"೧. ದಿ. ೬-೧೦-೦೯ರ ಉದಯವಾಣಿ ಪತ್ರಿಕೆಯ ಪ್ರತಿ ನನ್ನಲ್ಲಿದೆ. ಅದರಲ್ಲಿ ನಿಮ್ಮ ಜಾಹೀರಾತೂ ಇದೆ.&lt;br /&gt;೨. ನಿಮ್ಮ ವೆಬ್ ಸೈಟಿನಲ್ಲೂ ನೀವು ನೀರನ್ನು ಎಲ್ಲಿಂದ ಒದಗಿಸಿಕೊಳ್ಳಲಾಗುವುದು ಎಂದು ವಿವರಿಸಿದ್ದೀರಿ. ಅದರ ಪ್ರಿಂಟ್ ಔಟ್ ಸಹ ನನ್ನಲ್ಲಿದೆ.&lt;br /&gt;೩. ನೀರಿನ ಲಭ್ಯತೆಯ ಬಗ್ಗೆ ನೀವು ಮಾಡಿರುವ ಅಧ್ಯಯನ ಇಲ್ಲಿ ಮುಖ್ಯವೇ ಹೊರತು ನೀವು ಜಾಹೀರಾತು ಕೊಟ್ಟಿದ್ದೀರೋ ಇಲ್ಲವೋ ಎನ್ನುವುದು ಅಲ್ಲ.&lt;br /&gt;ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ಮಾಹಿತಿ ಕೊಡತಕ್ಕದ್ದೆಂದು ಮಾಹಿತಿ ಹಕ್ಕು ಕಾಯಿದೆ ಹೇಳುತ್ತದೆ. ಅದರಂತೆ ತಾ. ೧೦-೧೧-೨೦೦೯ರ ನನ್ನ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ನೀವು ನನಗೆ ಕೊಡದಿದ್ದಲ್ಲಿ, ಮಾಹಿತಿ ಹಕ್ಕು ಆಯುಕ್ತರಿಗೆ ದೂರು ಸಲ್ಲಿಸುವುದು ನನಗೆ ಅನಿವಾರ್ಯವಾಗುತ್ತದೆ ಎಂಬುದನ್ನು ಗಮನಿಸಿರಿ."&lt;br /&gt;ಈವರೆಗೆ ಮಾಹಿತಿ ಬಂದಿಲ್ಲ.(ತಾ. ೧೪-೧೨-೨೦೦೯) ಅನಿವಾರ್ಯವಾಗಿ ನಾಳೆ ಮಾಹಿತಿ ಆಯುಕ್ತರಿಗೆ ದೂರು ಸಲ್ಲಿಸುತ್ತೇನೆ. ಏನಾಗುತ್ತದೋ ನೋಡೋಣ.&lt;br /&gt;**********&lt;br /&gt;ನಮಗೆ ಬೇಕಾದ ಮಾಹಿತಿ ಯಾವ ಇಲಾಖೆಯಲ್ಲಿ ದೊರೆಯುತ್ತದೆ ಎಂದು ತಿಳಿದುಕೊಳ್ಳುವುದೇ ಮೊದಲ ದೊಡ್ಡ ಸಮಸ್ಯೆ. ಆದರೆ ಮಾಹಿತಿ ಹಕ್ಕು ಕಾನೂನು ಇದನ್ನು ಸರಳವಾಗಿ ಪರಿಹರಿಸಿದೆ. ಎಂ ಆರ್ ಪಿ ಎಲ್ - ಕರ್ನಾಟಕ ಸರಕಾರಗಳ ನಡುವೆ ನೀರಿನ ಕುರಿತು ಆಗಿರುವ ಒಪ್ಪಂದದಲ್ಲಿ ಎಂ ಆರ್ ಪಿ ಎಲ್ ಗೆ ನೇತ್ರಾವತಿ ನದಿಯಿಂದ ದಿನಕ್ಕೆ ೨.೨೫ ಕೋಟಿ ಲೀಟರ್ ನೀರು ಎತ್ತಲು ಸರಕಾರ ಅನುಮತಿ ನೀಡಿದೆ. ಎಂ ಆರ್ ಪಿ ಎಲ್ ಈ ಮಿತಿಯೊಳಗೇ ನೀರು ಎತ್ತುತ್ತಿದೆಯೇ ಎಂದು ನೋಡಿಕೊಳ್ಳಲು ಒಂದು ಸರಕಾರಿ ಸಮಿತಿ ಇದೆ. ಈ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರು. ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಒಬ್ಬ ಸದಸ್ಯರು. ಇನ್ನೂ ಹಲವು ಸದಸ್ಯರಿದ್ದಾರೆ. ನಾನು ಜಿಲ್ಲಾಧಿಕಾರಿಯವರ ಕಛೇರಿಯ ಮಾಹಿತಿ ಅಧಿಕಾರಿಗೆ ಪತ್ರ ಬರೆದು, "ಈ ಸಮಿತಿ ಕಳೆದ ೫ ವರ್ಷಗಳಲ್ಲಿ ಎಷ್ಟು ಸಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ ಎಂಬ ಮಾಹಿತಿ ಮತ್ತು ತೀರ ಇತ್ತೀಚೆಗೆ ನೀಡಿದ ಭೇಟಿಯ ವರದಿಯ ಯಥಾಪ್ರತಿ"ಗಳನ್ನು ಕೊಡುವಂತೆ ಕೇಳಿದೆ. ಜಿಲ್ಲಾಧಿಕಾರಿ ಕಛೇರಿಯ ಮಾಹಿತಿ ಅಧಿಕಾರಿ ನನಗೆ ಪತ್ರ ಬರೆದು, "ಈ ಮಾಹಿತಿಯು ಸಣ್ಣ ನೀರಾವರಿ ಇಲಾಖೆಗೆ ಸಂಬಂಧ ಪಟ್ಟಿರುವುದರಿಂದ ನಿಮ್ಮ ಅರ್ಜಿಯನ್ನು ಅವರಿಗೆ ಕಳಿಸಿಕೊಟ್ಟಿದೆ" ಎಂದು ತಿಳಿಸಿ ನನ್ನ ಅರ್ಜಿಯನ್ನು ಅವರೇ ಸಣ್ಣ ನೀರಾವರಿ ಇಲಾಖೆಗೆ ಕಳಿಸಿಕೊಟ್ಟರು. ಇದೇ ಕಾನೂನು. ಅರ್ಜಿದಾರ ಕೇಳಿದ ಮಾಹಿತಿ ತನ್ನಲ್ಲಿ ಇಲ್ಲವೆಂದು ಯಾವ ಮಾಹಿತಿ ಅಧಿಕಾರಿಯೂ ಹೇಳುವಂತಿಲ್ಲ. ಆತ ಅರ್ಜಿಯನ್ನು ಮಾಹಿತಿ ಯಾರಲ್ಲಿದೆಯೋ ಅವರಿಗೆ ಕಳಿಸಿಕೊಟ್ಟು, ಹಾಗೆ ಕಳಿಸಿಕೊಟ್ಟಿರುವುದನ್ನು ಅರ್ಜಿದಾರನಿಗೆ ತಿಳಿಸಬೇಕು.&lt;br /&gt;ಸಣ್ಣ ನೀರಾವರಿ ಇಲಾಖೆ ನನಗೆ ಪೂರ್ಣ ಮಾಹಿತಿ ಕೊಡಲಿಲ್ಲ. ಆದರೆ ಕೊಟ್ಟ ಮಾಹಿತಿ ಕುತೂಹಲಕರವಾಗಿದೆ: ಸಮಿತಿ ಸ್ಥಳಕ್ಕೆ ಭೇಟಿ ನೀಡಿದ ದಿನ ಎಷ್ಟು ನೀರು ಎತ್ತಲಾಯಿತೆಂಬುದರ ಲೆಕ್ಖವನ್ನು ಎಂ ಆರ್ ಪಿ ಎಲ್ ಸಮಿತಿಗೆ ಕೊಟ್ಟಿದೆ. ಅದು ನಿಗದಿತ ಮಿತಿಯೊಳಗೇ ಇದೆ. ಆದರೆ ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಯಾವುದೇ ವ್ಯಾಪಾರದಲ್ಲೂ, ವಸ್ತುವನ್ನು ಕೊಡುವವನು ತಾನೇ ಅಳೆದು ಅಥವಾ ತೂಕ ಮಾಡಿ ವಸ್ತುವನ್ನು ಕೊಡುವುದು ರೂಢಿ. ಕರೆಂಟಿನ ಮೀಟರ್ ಇಲಾಖೆಯದು. ದೂರವಾಣಿ ಮೀಟರ್ ಸಹ ಹಾಗೆಯೇ. ಆದರೆ ಎಂ ಆರ್ ಪಿ ಎಲ್ ವಿಷಯದಲ್ಲಿ ಮಾತ್ರ ಇದು ಉಲ್ಟಾ. (ಒಪ್ಪಂದದಲ್ಲಿ ಹೀಗೆ ಹೇಳಿದೆ: MRPL has to make its own arrangement to draw the permitted quantity of 5 MGD of water from the river for providing calibrated gauge or any other mechanical or electronic devise for assessing the quantum of water lifted and permitted to inspect the same by the Deputy Commissioner of D.K.... ಈ ವಾಕ್ಯದಲ್ಲಿ ಕೊಮಾ, ಪೂರ್ಣವಿರಾಮ ಇತ್ಯಾದಿಗಳನ್ನು ಓದುವವರೇ ಸೇರಿಸಿಕೊಳ್ಳಬೇಕು. ಕಾಲಸೂಚಕ ಪ್ರತ್ಯಯಗಳಿಗೂ ಓದುಗರೇ ಜವಾಬ್ದಾರಿ!) ಕಂಪೆನಿಯು ತಾನು ಎತ್ತಿದ ನೀರಿನ ಪ್ರಮಾಣವನ್ನು ತಾನೇ ಅಳೆದು ಸಮಿತಿಗೆ ಲೆಕ್ಖ ಕೊಡುತ್ತದೆ. ಸಮಿತಿ "ಎಲ್ಲ ಸರಿ ಇದೆ" ಎಂದು ತಲೆಯಾಡಿಸುತ್ತದೆ! ಹೇಗೆ ವ್ಯಾಪಾರ? ( ಪೋಲಿಸ್ ಅಧಿಕಾರಿ ಶಂಕರ ಬಿದರಿಯವರಿಗೆ ಒಂದು ವಿಶಿಷ್ಟ ದೇಹಭಾಷೆ ಇದೆ. "ಹೇಗೆ ವ್ಯಾಪಾರ?" ಅಂತ ನಾನು ಕೇಳಿದೆನಲ್ಲ, ಅದನ್ನು ಅವರು ಶಬ್ದಗಳೇ ಇಲ್ಲದೆ, ಮುಖ ಮತ್ತು ಕಣ್ಣುಗಳಲ್ಲೇ ಕೇಳಿ, ಆ ವ್ಯಾಪಾರದ ಪರಮ ಮೂರ್ಖತನವನ್ನು ಹೊರಹಾಕಬಲ್ಲರು. ಆ ಮಾತು ಬರೆದಾಗ ನನಗೆ ಅವರ ನೆನಪಾಯಿತು).&lt;br /&gt;*******************&lt;br /&gt;ನೇತ್ರಾವತಿ ನದಿ ನೀರು ಎತ್ತುವ ಬಗ್ಗೆ ಎಂ ಆರ್ ಪಿ ಎಲ್ ಮತ್ತು ಕರ್ನಾಟಕ ಸರಕಾರದ ನಡುವೆ ಆಗಿರುವ ಒಪ್ಪಂದದ ಕುರಿತು:&lt;br /&gt;ಈ ಒಪ್ಪಂದದ ಪ್ರತಿಯನ್ನು ನಾನು ಮಾಹಿತಿ ಹಕ್ಕಿನಡಿ ಎಂ ಆರ್ ಪಿ ಎಲ್ ನಿಂದ ಪಡೆದುಕೊಂಡಿದ್ದೇನೆ.&lt;br /&gt;೧. ಎಂ ಆರ್ ಪಿ ಎಲ್ ಗೆ ಕರ್ನಾಟಕ ಸರಕಾರ ಕೊಡುವ ನೀರಿಗೆ ದರ ಈಗ ೪೫ ಲಕ್ಷ ಲೀಟರಿಗೆ ರೂ. ೨೮೮-೯೦! ಈ ದರ ಯಾವ ಆಧಾರದಲ್ಲಿ ಯಾರು ನಿಗದಿ ಮಾಡಿದರು ಎಂಬುದು ಆಶ್ಚರ್ಯದ ವಿಷಯ. ಮಾರುಕಟ್ಟೆಯಲ್ಲಿ ದೊರೆಯುವ ಕುಡಿಯುವ ನೀರಿಗೆ ಲೀಟರಿಗೆ ರೂ. ೧೨-೦೦ ಇದೆ. ಅದರ ವಿಷಯ ಬಿಡೋಣ. ಬಂಟ್ವಾಳ ಪಟ್ಟಣ ಪಂಚಾಯತ್ ತಾನು ಸರಬರಾಜು ಮಾಡುವ ಕುಡಿಯುವ ನೀರಿನ ದರ ಒಂದು ಸಾವಿರ ಲೀಟರಿಗೆ ಎರಡು ರೂ. ವಾಣಿಜ್ಯ ಬಳಕೆಗೆ ಒಂದು ಸಾವಿರ ಲೀಟರಿಗೆ ಐದು ರೂ. ಮತ್ತು ಕೈಗಾರಿಕಾ ಬಳಕೆಗೆ ಒಂದು ಸಾವಿರ ಲೀಟರಿಗೆ ಎಂಟು ರೂಪಾಯಿ ಮೂವತ್ತಮೂರು ದರ ವಿಧಿಸುತ್ತದೆ. ಹೀಗಿರುವಾಗ ಇಂಥ ಬಿಸಾಕುದರದಲ್ಲಿ ಸರಕಾರ ಎಂ ಆರ್ ಪಿ ಎಲ್ ಗೆ ನೀರನ್ನು ಕೊಡುತ್ತಿರುವುದರ ಗುಟ್ಟು ಅರ್ಥವಾಗುವುದಿಲ್ಲ. ಈ ದರವನ್ನು ನಿಗದಿ ಮಾಡಿದವರು ಯಾರು ಮತ್ತು ಅದಕ್ಕೆ ಆಧಾರವೇನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತೇನೆ. ಮಾಹಿತಿ ಸಿಕ್ಕಿದರೆ ಮುಂದೆ ತಿಳಿಸುತ್ತೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1105138094084974837-5303129978282387789?l=sundararao.blogspot.com' alt='' /&gt;&lt;/div&gt;</content><link rel='replies' type='application/atom+xml' href='http://sundararao.blogspot.com/feeds/5303129978282387789/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=1105138094084974837&amp;postID=5303129978282387789&amp;isPopup=true' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/1105138094084974837/posts/default/5303129978282387789'/><link rel='self' type='application/atom+xml' href='http://www.blogger.com/feeds/1105138094084974837/posts/default/5303129978282387789'/><link rel='alternate' type='text/html' href='http://sundararao.blogspot.com/2009/12/blog-post.html' title='ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ'/><author><name>sundararao.blogspot.com</name><uri>http://www.blogger.com/profile/12064316375556432214</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://2.bp.blogspot.com/_8556utxmbGA/SdiGJ-OE7GI/AAAAAAAAAAM/-ulhlxqgkj4/S220/DSC_0620.JPG'/></author><thr:total>7</thr:total></entry><entry><id>tag:blogger.com,1999:blog-1105138094084974837.post-4603047211557629142</id><published>2009-11-15T08:11:00.000-08:00</published><updated>2009-11-15T08:24:34.390-08:00</updated><title type='text'>ಮಂಗಳೂರು ವಿಶೇಷ ಆರ್ಥಿಕವಲಯಕ್ಕೆ ನೀರೆಲ್ಲಿಂದ?</title><content type='html'>&lt;a href="http://3.bp.blogspot.com/_8556utxmbGA/SwAqzZV3KtI/AAAAAAAAABY/q12qCLy007k/s1600-h/20012008706.jpg"&gt;&lt;img id="BLOGGER_PHOTO_ID_5404366615308872402" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 240px" alt="" src="http://3.bp.blogspot.com/_8556utxmbGA/SwAqzZV3KtI/AAAAAAAAABY/q12qCLy007k/s320/20012008706.jpg" border="0" /&gt;&lt;/a&gt;&lt;br /&gt;&lt;div&gt;&lt;br /&gt;&lt;div&gt;&lt;span class=""&gt;&lt;br /&gt;&lt;br /&gt;ಮಂಗಳೂರಿನಲ್ಲಿ ವಿಶೇಷ ಆರ್ಥಿಕವಲಯ ಸ್ಥಾಪನೆಯಾಗುತ್ತಿದೆ. ಈ ವಲಯದಲ್ಲಿ ಹಲವು ಕೈಗಾರಿಕೆಗಳು ಕಾರ್ಯಾರಂಭ ಮಾಡಲಿವೆಯಂತೆ; ಹಲವು ದೇಶೀ - ವಿದೇಶೀ ಕಂಪೆನಿಗಳು ತಳವೂರಲಿವೆಯಂತೆ; ಮಂಗಳೂರಿನ ಯುವಜನತೆಗೆ ಉದ್ಯೋಗ ನೀಡಲು ಈ ಕಂಪೆನಿಗಳು ಸ್ಪರ್ಧೆ ನಡೆಸಲಿವೆಯಂತೆ. ಇನ್ನೇನು ನಮ್ಮೂರಿನ ಯುವಜನತೆ ಯಾವ ಕೊಲ್ಲಿರಾಷ್ಟ್ರಕ್ಕೂ ಹೋಗಬೇಕಿಲ್ಲ, ಯಾವ ಅಮೆರಿಕಕ್ಕೂ ಹೋಗಬೇಕಿಲ್ಲ. ಅಷ್ಟೇಕೆ ಉದ್ಯೋಗ ಹುಡುಕಿ ಬೆಂಗಳೂರಿಗೂ ಹೋಗಬೇಕಿಲ್ಲ. ಕಾಲುಬುಡದಲ್ಲೇ ಕೇಳಿದ ಉದ್ಯೋಗ! ತಿಂಗಳಿಗೆ ಎಪ್ಪತ್ತು ಎಂಬತ್ತು ಸಾವಿರ ಸಂಬಳ ಲೆಕ್ಕಕ್ಕೇ ಅಲ್ಲವಂತೆ. ಅಷ್ಟು ಕೊಟ್ಟರೂ ಕೆಲಸಕ್ಕೆ ಜನ ಸಿಗದೆ ಹೋಗುವ ಕಾಲ ಬಂದರೂ ಆಶ್ಚರ್ಯವಿಲ್ಲವಂತೆ! ಸ್ವರ್ಗ ಧರೆಗಿಳಿಯಲು ಇನ್ನು ಹೆಚ್ಚು ದೂರವಿಲ್ಲ.ಬರೀ ಒಂದೆರಡು ವರ್ಷ ಸಾಕು ಅಷ್ಟೆ.&lt;br /&gt;ಇರಲಿ. ನಮ್ಮವರೇ ಆದ ಭಟ್ಟರುಗಳ, ಪೈಮಾಮರ ಈ ಮಾತುಬಲೂನಿಗೆ ಒಂದು ಸಣ್ಣ ಸೂಜಿ ಚುಚ್ಚೋಣ, ಛಿದ್ರಾನ್ವೇಷಕರೆಂಬ ಬಿರುದಿಗೆ ಹೆದರದೆ!&lt;br /&gt;ಈ ವಲಯಕ್ಕೆ ಬರಲಿರುವುದು ಯಾವ ಕೈಗಾರಿಕೆ, ಯಾವ ಕಂಪೆನಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಎಂ ಎಸ್ ಇ ಝಡ್ ಲಿ. ತನ್ನ ನೀರಿನ ಅಗತ್ಯ ೪೫ ಎಂಜಿಡಿ ಎಂದು ಘೋಷಿಸಿದೆ. ಈ ಲೇಖನಕ್ಕೆ ಕಂಪೆನಿಯ ಈ ಹೇಳಿಕೆಯೇ ಆಧಾರ.&lt;br /&gt;ಒಂದು ಎಂಜಿಡಿ ಅಂದರೆ ದಿನಕ್ಕೆ ಹತ್ತು ಲಕ್ಷ ಗ್ಯಾಲನ್ ಎಂದು ಅರ್ಥ. ಒಂದು ಗ್ಯಾಲನ್ ಎಂದರೆ ಸುಮಾರು ನಾಲ್ಕೂವರೆ ಲೀಟರ್. ಅಂದರೆ ಒಂದು ಎಂಜಿಡಿ ಅಂದರೆ ದಿನಕ್ಕೆ ೪೫ ಲಕ್ಷ ಲೀಟರ್ ಆಯಿತು. ಎಂ ಎಸ್ ಇ ಝಡ್ ಲಿ. ತನಗೆ ಬೇಕಾದ ೪೫ ಎಂಜಿಡಿ ನೀರಿನ ಪೈಕಿ ೧೮ ಎಂಜಿಡಿ ನೀರನ್ನು ಮಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸುವ ಮೂಲಕ, ೧೨ ಎಂಜಿಡಿ ನೀರನ್ನು ತಾನು ಸ್ವಾಧೀನ ಪಡಿಸಿಕೊಂಡ ಭೂಮಿಯ ತಗ್ಗುಪ್ರದೇಶದಲ್ಲಿ ಮಳೆನೀರನ್ನು ಸಂಗ್ರಹಿಸುವ ಮೂಲಕ ಮತ್ತುಳಿದ ೧೫ ಎಂಜಿಡಿ ನೀರನ್ನು ಫಲ್ಗುಣಿ ನದಿಗೆ ಎರಡು ಹಾಗೂ ನೇತ್ರಾವತಿ ನದಿಗೆ ಎರಡು ಅಣೆಕಟ್ಟುಗಳನ್ನು ಹಾಕುವ ಮೂಲಕ ಪಡೆದುಕೊಳ್ಳುವುದಾಗಿ ಹೇಳಿದೆ.&lt;br /&gt;ಕೊಳಚೆ ನೀರನ್ನು ಶುದ್ಧೀಕರಿಸಿ ಬಳಸುವ ಮತ್ತು ಮಳೆನೀರನ್ನು ಸಂಗ್ರಹಿಸಿ ಬಳಸುವ ಕಂಪೆನಿಯ ಯೋಜನೆ ಅತ್ಯಂತ ಆಕರ್ಷಕವಾಗಿದೆ. ಯಾರೂ ಶಹಭಾಸ್ ಎನ್ನುವಂತಿದೆ. ಆದರೂ ಈ ಯೋಜನೆಯನ್ನು ಕೊಂಚ ಹಿಂಜಿ ನೋಡೋಣ.&lt;br /&gt;ಮೊನ್ನೆ ಮೊನ್ನೆಯವರೆಗೆ ಮಂಗಳೂರಿಗೆ ತುಂಬೆಯಿಂದ ಸರಬರಾಜಾಗುತ್ತಿದ್ದದ್ದೇ ಸುಮಾರು ೧೮ ಎಂಜಿಡಿ ನೀರು.(ಮಂಗಳೂರು ಮಹಾನಗರ ಪಾಲಿಕೆಗೆ ನೀರು ಸರಬರಾಜಾಗುವುದು ಬಂಟ್ವಾಳ ತಾಲೂಕಿನ ತುಂಬೆ ಎಂಬಲ್ಲಿ ನೇತ್ರಾವತಿ ನದಿಗೆ ಹಾಕಿರುವ ಕಿಂಡಿ ಅಣೆಕಟ್ಟಿನಿಂದ). ಮಂಗಳೂರಿಗರು ತಮ್ಮದೇ ಸ್ವಂತದ ತೆರೆದ ಬಾವಿಗಳಿಂದ, ಕೊಳವೆ ಬಾವಿಗಳಿಂದ ನೀರು ತೆಗೆದು ಬಳಸುತ್ತಾರೆ ಎನ್ನುವುದು ನಿಜವೇ. ಆದರೂ ಒಂದೊಂದು ಮನೆಯ ಕೊಳಚೆ ನೀರೂ ಅದೇ ಮನೆಯ ಕಾಂಪೌಂಡಿನೊಳಗೇ ವಿಲೇವಾರಿಯಾಗಿಬಿಡುತ್ತದೆ. ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಒಳಚರಂಡಿಗಳನ್ನು ಹೊಸದಾಗಿ ವ್ಯಾಪಕವಾಗಿ ರಚಿಸಲಾಗಿದೆ. ಆದರೆ ಇದರ ಸಂಪರ್ಕಕ್ಕೆ ನಾಗರಿಕರು ಹತ್ತುಸಾವಿರ ರೂ. ಕೊಡಬೇಕಂತೆ. ಹಾಗಾಗಿ ಜನ ಒಳಚರಂಡಿ ಸಂಪರ್ಕ ಪಡೆಯಲು ಮುಂದೆ ಬರುತ್ತಿಲ್ಲವೆಂದೂ, ಹೀಗೇ ಆದರೆ ಒಳಚರಂಡಿ ಸಂಪರ್ಕ ಪಡೆಯುವುದನ್ನು ಕಡ್ಡಾಯ ಮಾಡಬೇಕಾದೀತೆಂದೂ "ಕುಛ್ ಪಾನಾ ತೋ ಕುಛ್ ಖೋನಾ" ಖ್ಯಾತಿಯ ಮೇಯರ್ ರವರು ಹೇಳಿದ್ದಾರಂತೆ. ಪಾಲಿಕೆ ಸದ್ಯದಲ್ಲಿಯೇ ತುಂಬೆಯಿಂದ ಎತ್ತುವ ನೀರಿನ ಪ್ರಮಾಣವನ್ನು ದ್ವಿಗುಣಗೊಳಿಸಲಿದೆ. ಏನಿದ್ದರೂ ಕುಡ್ಸೆಂಪ್ ಯೋಜನೆ ಸಂಪೂರ್ಣವಾಗಿ ಮುಗಿದು, ಊರಿನ ಕೊಳಚೆ ನೀರು ದೊಡ್ಡ ಪ್ರಮಾಣದಲ್ಲಿ ಲಭ್ಯವಾಗಲು ಇನ್ನೂ ಸಾಕಷ್ಟು ಕಾಲ ಬೇಕು. ಇದಕ್ಕಾಗಿ ೨೦೨೬ರವರೆಗೆ ಕಾಯಬೇಕಾದೀತು ಎಂದು ಒಂದು ಅಂದಾಜು.ಸದ್ಯಕ್ಕೆ ಸುಮಾರು ೧೦-೧೨ ಎಂಜಿಡಿ ನೀರು ಮಾತ್ರ ಲಭ್ಯವಾದೀತು. ಎಂದರೆ ಎಂ ಎಸ್ ಇ ಝಡ್ ಲಿ. ಹೇಳುವ ೧೮ ಎಂಜಿಡಿಯಲ್ಲಿ ೬-೮ ಎಂಜಿಡಿ ಖೋತಾ ಆದಂತೆ.&lt;br /&gt;ಕೊಳಚೆ ನೀರನ್ನು ಎಷ್ಟೇ ಶುದ್ಧಗೊಳಿಸಿದರೂ ಅದರ ಗುಣಮಟ್ಟ ಕಡಿಮೆಯೇ. ಈಗ ನೇತ್ರಾವತಿಯ, ಫಲ್ಗುಣಿಯ ನೀರನ್ನು ನಾವೆಲ್ಲ ಹೆಚ್ಚು ಕಡಿಮೆ ನೇರವಾಗಿಯೇ ಕುಡಿಯುತ್ತಿದ್ದೇವೆ. ಆಗಾಗ ಹೊಟ್ಟೆಹುಳಕ್ಕೆ ಮದ್ದು ಬೇಕಾಗುವುದು ಬಿಟ್ಟರೆ ಅಂಥಾ ದೊಡ್ಡ ದೋಷವೇನೂ ಅದರಲ್ಲಿ ಇದ್ದಂತಿಲ್ಲ! ನದಿಯ ನೀರು ಹೆಚ್ಚು ಕಡಿಮೆ ಧರ್ಮಕ್ಕೆ ಸಿಗುವಂಥದ್ದು. (ಎಂಆರ್ ಪಿಎಲ್ ಗೆ ನೀರು ನೇತ್ರಾವತಿ ನದಿಯಿಂದ. ೧೯೯೬ರಲ್ಲಿ ಆದ ಒಪ್ಪಂದದ ಪ್ರಕಾರ ಪ್ರತಿ ೪೫ ಲಕ್ಷ ಲೀ. ನೀರಿಗೆ ಎಂಆರ್ ಪಿಎಲ್ ಕೊಡಬೇಕಾದ ಹಣ ರೂ. ೫೬-೧೬!) ಕೊಳಚೆ ನೀರು ಶುದ್ಧೀಕರಿಸಲು ರಾಸ
